07.06.20 Avyakt Bapdada
Kannada
Murli
20.01.86 Om Shanti Madhuban
ಪುರುಷಾರ್ಥ ಮತ್ತು
ಪರಿವರ್ತನೆಯ ಸುವರ್ಣಾವಕಾಶದ ವರ್ಷ
ಇಂದು ಸಮರ್ಥ ತಂದೆಯು
ತನ್ನ ಸಮರ್ಥ ಮಕ್ಕಳನ್ನು ನೋಡುತ್ತಿದ್ದಾರೆ. ಯಾವ ಸಮರ್ಥ ಆತ್ಮರು ಅತಿ ದೊಡ್ಡ ಸಮರ್ಥ ಕಾರ್ಯವಾದ -
ವಿಶ್ವವನ್ನು ನವ, ಶ್ರೇಷ್ಠ ವಿಶ್ವವನ್ನಾಗಿ ಮಾಡುವಂತಹ ಧೃಡ ಸಂಕಲ್ಪವನ್ನು ಮಾಡಿದ್ದಾರೆ.
ಪ್ರತಿಯೊಂದು ಆತ್ಮರಿಗೆ ಶಾಂತಿ ಹಾಗೂ ಸುಖಿಯನ್ನಾಗಿ ಮಾಡುವ ಸಮರ್ಥ ಕಾರ್ಯವನ್ನು ಮಾಡುವ
ಸಂಕಲ್ಪವನ್ನು ಮಾಡಿದ್ದಾರೆ ಮತ್ತು ಇದೇ ಶ್ರೇಷ್ಠ ಸಂಕಲ್ಪವನ್ನು ಮಾಡಿ, ಧೃಡ ನಿಶ್ಚಯ
ಬುದ್ಧಿಯವರಾಗಿ ಕಾರ್ಯವನ್ನು ಪ್ರತ್ಯಕ್ಷ ರೂಪದಲ್ಲಿ ತರುತ್ತಿದ್ದಾರೆ. ಎಲ್ಲಾ ಸಮರ್ಥ ಮಕ್ಕಳ ಒಂದೇ
ಶ್ರೇಷ್ಠ ಸಂಕಲ್ಪವಿದೆ - ಅದೇನೆಂದರೆ, ಈ ಶ್ರೇಷ್ಠ ಕಾರ್ಯವು ಆಗಲೇಬೇಕು. ಇದಕ್ಕಿಂತಲೂ ಹೆಚ್ಚಾಗಿ
ಈ ನಿಶ್ಚಿತವಿದೆ - ಈ ಕಾರ್ಯವು ಆಗಿಯೇ ಇದೆ. ಕೇವಲ ಕರ್ಮ ಮತ್ತು ಫಲದ ಪುರುಷಾರ್ಥ ಮತ್ತು
ಪ್ರಾಲಬ್ಧಕ್ಕೆ ನಿಮಿತ್ತ ಮತ್ತು ನಿರ್ಮಾಣದ ಕರ್ಮದ ಗುಹ್ಯಗತಿಯನುಸಾರ ನಿಮಿತ್ತನಾಗಿ, ಕಾರ್ಯವನ್ನು
ಮಾಡುತ್ತಿದ್ದಾರೆ. ಪೂರ್ವ ನಿಶ್ಚಿತವಿದೆ ಆದರೆ ಕೇವಲ ತಾವು ಶ್ರೇಷ್ಠ ಭಾವನೆಯ ಮೂಲಕ, ಭಾವನೆಯ ಫಲದ
ಅವಿನಾಶಿ ಪ್ರಾಪ್ತಿ ಮಾಡಿಕೊಳ್ಳಲು ನಿಮಿತ್ತರಾಗಿದ್ದೀರಿ. ಪ್ರಪಂಚದ ಅಜ್ಞಾನಿ ಆತ್ಮರು ಇದನ್ನೇ
ಯೋಚಿಸುತ್ತಾರೆ - ಶಾಂತಿಯಾಗುತ್ತದೆಯೇ, ಏನಾಗುತ್ತದೆಯೋ, ಹೇಗಾಗುತ್ತದೆಯೋ! ಯಾವುದೇ ಭರವಸೆಯೂ
ಕಾಣಿಸುವುದಿಲ್ಲ. ಏನು! ಸತ್ಯವಾಗಿಯೂ ಆಗುತ್ತದೆಯೇ! ಮತ್ತೆ ತಾವು ಹೇಳುತ್ತೀರಿ - ಆಗುವುದೇನು,
ಆದರೆ ಆಗಿಯೇ ಇದೆ ಏಕೆಂದರೆ ಹೊಸ ಮಾತಲ್ಲ. ಅನೇಕ ಬಾರಿ ಆಗಿದೆ ಮತ್ತು ಈಗಲೂ ಆಗಿಯೇ ಆಗುತ್ತದೆ.
ನಿಶ್ಚಯ ಬುದ್ಧಿ ನಿಶ್ಚಿತವಾದ ಪೂರ್ವ ನಿಶ್ಚಿತವನ್ನು ತಿಳಿದಿದ್ದೀರಿ. ಇಷ್ಟೂ ಅಟಲ ನಿಶ್ಚಯವೇಕೆ?
ಏಕೆಂದರೆ ಸ್ವ ಪರಿವರ್ತನೆಯ ಪ್ರತ್ಯಕ್ಷ ಪ್ರಮಾಣದಿಂದ ತಿಳಿದಿದ್ದೀರಿ – ಪ್ರತ್ಯಕ್ಷ ಪ್ರಮಾಣದ
ಮುಂದೆ ಮತ್ತ್ಯಾವುದೇ ಪ್ರಮಾಣದ ಅವಶ್ಯಕತೆಯೇ ಇರುವುದಿಲ್ಲ. ಜೊತೆ ಜೊತೆಗೆ ಪರಮಾತ್ಮನ ಕಾರ್ಯವು
ಸದಾಕಾಲವೂ ಇರುತ್ತದೆ. ಈ ಕಾರ್ಯವು ಆತ್ಮರ, ಮಹಾನ್ ಆತ್ಮರ ಅಥವಾ ಧರ್ಮಾತ್ಮರದಲ್ಲ. ಪರಮಾತ್ಮನ
ಕಾರ್ಯವು ಸಫಲವಾಗಿಯೇ ಇದೆ, ಇಂತಹ ನಿಶ್ಚಯ ಬುದ್ಧಿ, ನಿಶ್ಚಿತ ಭವಿಷ್ಯವನ್ನು ತಿಳಿದಿರುವ
ನಿಶ್ಚಿಂತ ಆತ್ಮರಾಗಿದ್ದೀರಿ. ಜನರು ಹೇಳುತ್ತಾರೆ ಅಥವಾ ಭಯ ಪಡುತ್ತಾರೆ - ವಿನಾಶವಾಗುತ್ತದೆ ಎಂದು.
ಮತ್ತು ತಾವು ನಿಶ್ಚಿಂತವಾಗಿದ್ದೀರಿ - ಹೊಸ ಸ್ಥಾಪನೆಯಾಗುತ್ತದೆ ಎಂದು. ಅಸಂಭವ ಮತ್ತು ಸಂಭವದ
ಅಂತರವೆಷ್ಟೊಂದಿದೆ! ತಮ್ಮ ಮುಂದೆ ಸದಾ ಸ್ವರ್ಣೀಮ ಪ್ರಪಂಚದ, ಸ್ವರ್ಣೀಮ ಸೂರ್ಯೋದಯವಾಗಿ ಬಿಟ್ಟಿದೆ
ಮತ್ತು ಅವರ ಮುಂದೆ ವಿನಾಶದ ಕಪ್ಪು ಘಟ್ಟಗಳಿವೆ. ಈಗ ತಾವೆಲ್ಲರೂ ಸಮಯದ ಸಮೀಪತೆಯ ಕಾರಣದಿಂದ ಸದಾ
ಖುಷಿಯ ಗೆಜ್ಜೆಯನ್ನು ಕಟ್ಟಿಕೊಂಡು ನರ್ತಿಸುತ್ತಿರುತ್ತೀರಿ- ಇಂದು ಹಳೆಯ ಪ್ರಪಂಚವಿದೆ, ನಾಳೆ
ಸ್ವರ್ಣೀಮ ಪ್ರಪಂಚವಾಗುತ್ತದೆ. ಇಂದು ಮತ್ತು ನಾಳೆ - ಇಷ್ಟು ಸಮೀಪದಲ್ಲಿ ತಲುಪಿ ಬಿಟ್ಟಿದ್ದೀರಿ.
ಈಗ ಈ ವರ್ಷ "ಸಂಪೂರ್ಣತೆ
ಮತ್ತು ಸಮಾನತೆ"ಯ ಸಮೀಪದ ಅನುಭವ ಮಾಡಬೇಕು. ಸಂಪೂರ್ಣತೆಯು ತಾವೆಲ್ಲಾ ಫರಿಶ್ತೆಗಳ ವಿಜಯ ಮಾಲೆಯನ್ನು
ತೆಗೆದುಕೊಂಡು ಆಹ್ವಾನ ಮಾಡುತ್ತಿದೆ. ವಿಜಯ ಮಾಲೆಯ ಅಧಿಕಾರಿಯಂತು ಆಗಬೇಕಲ್ಲವೆ. ಸಂಪೂರ್ಣ ತಂದೆ
ಮತ್ತು ಸಂಪೂರ್ಣ ಸ್ಥಿತಿ - ಇವೆರಡೇ ತಾವು ಮಕ್ಕಳನ್ನು ಕರೆಯುತ್ತಿದೆ - ಬನ್ನಿ ಶ್ರೇಷ್ಠ ಆತ್ಮರೇ
ಬನ್ನಿ, ಸಮಾನ ಮಕ್ಕಳೇ ಬನ್ನಿ, ಸಮರ್ಥ ಮಕ್ಕಳೇ ಬನ್ನಿ, ಸಮಾನರಾಗಿ ತಮ್ಮ ಮಧುರ ಮನೆಯಲ್ಲಿ
ವಿಶ್ರಾಮಿಗಳಾಗಿರಿ. ಹೇಗೆ ಬಾಪ್ದಾದಾರವರು ವಿದಾತಾ ಆಗಿದ್ದಾರೆ, ವರದಾತಾ ಆಗಿದ್ದಾರೆ ಹಾಗೆಯೇ ತಾವೂ
ಸಹ ಈ ವರ್ಷದಲ್ಲಿ ವಿಶೇಷವಾಗಿ ಅಂದರೆ ಬ್ರಾಹ್ಮಣ ಆತ್ಮರ ಪ್ರತಿ ಅಥವಾ ಸರ್ವ ಆತ್ಮರ ಪ್ರತಿ ವಿದಾತಾ
ಆಗಿರಿ, ವರದಾತಾ ಆಗಿರಿ. ನಾಳೆ ದೇವತೆಯಾಗುವವರಿದ್ದೀರಿ, ಈಗ ಅಂತಿಮ ಫರಿಶ್ತಾ ಸ್ವರೂಪದವರಾಗಿರಿ.
ಫರಿಶ್ತಾ ಏನು ಮಾಡುತ್ತದೆ? ವರದಾತಾ ಆಗಿದ್ದು ವರದಾನವನ್ನು ಕೊಡುತ್ತದೆ. ದೇವತೆಯು ಸದಾ
ಕೊಡುತ್ತಾರೆ, ತೆಗೆದುಕೊಳ್ಳುವುದಿಲ್ಲ. ಲೇವತಾ ಎಂದು ಹೇಳುವುದಿಲ್ಲ. ಅಂದಾಗ ವರದಾತಾ ಮತ್ತು
ವಿದಾತಾ, ಫರಿಶ್ತಾ ಸೊ ದೇವತಾ.... ಈಗ ಈ ಮಹಾಮಂತ್ರ - ನಾವು ಫರಿಶ್ತೆಯಿಂದ ದೇವತಾ, ಈ ಮಂತ್ರವನ್ನು
ವಿಶೇಷವಾಗಿ ಸ್ಮೃತಿ ಸ್ವರೂಪವನ್ನಾಗಿ ಮಾಡಿಕೊಳ್ಳಿರಿ. ಮನ್ಮನಾಭವವಂತು ಆಗಿ ಬಿಟ್ಟಿದ್ದೀರಿ, ಇದು
ಆದಿಯ ಮಂತ್ರವಾಗಿತ್ತು. ಈಗ ಈ ಸಮರ್ಥ ಮಂತ್ರವನ್ನು ಅನುಭವದಲ್ಲಿ ತನ್ನಿರಿ. "ಇದಾಗಬೇಕು, ಇದು
ಸಿಗಬೇಕು" - ಇವೆರಡೇ ಮಾತುಗಳು ಲೇವತಾ ಮಾಡುತ್ತದೆ, ಲೇವತಾ-ತನದ ಸಂಸ್ಕಾರವು ದೇವತೆಯಾಗುವ
ಸಮಯದಲ್ಲಿ ಅಡ್ಡಿಯಾಕುತ್ತದೆ, ಆದ್ದರಿಂದ ಈ ಸಂಸ್ಕಾರಗಳನ್ನು ಸಮಾಪ್ತಿಗೊಳಿಸಿರಿ. ಮೊದಲ ಜನ್ಮದಲ್ಲಿ
ಬ್ರಹ್ಮನ ಮನೆಯಿಂದ ದೇವತೆಯಾಗಿ, ಹೊಸ ಜೀವನ, ಹೊಸ ಯುಗದ ವನ್ ನಂಬರಿನಲ್ಲಿ ಬನ್ನಿರಿ. ಸಂವತ್ಸರವೂ
ಸಹ ವನ್-ವನ್-ವನ್ ಆಗಿರಲಿ. ಪ್ರಕೃತಿಯೂ ಸತೋಪ್ರಧಾನ ನಂಬರ್ವನ್ ಆಗಿರಲಿ. ರಾಜ್ಯವೂ ನಂಬರ್ವನ್
ಆಗಿರಲಿ. ತಮ್ಮ ಗೋಲ್ಡನ್ ಸ್ಟೇಜ್ ಸಹ ನಂಬರ್ವನ್ ಆಗಿರಲಿ. ಒಂದು ದಿನದ ಅಂತರದಲ್ಲಿಯೂ ಸಹ
ವನ್-ವನ್-ವನ್ನಿಂದ ಬದಲಾಗಿ ಬಿಡುತ್ತದೆ. ಈಗಿನಿಂದ ಫರಿಶ್ತೆಯಿಂದ ದೇವತೆಯಾಗುವುದಕ್ಕಾಗಿ ಬಹಳ
ಕಾಲದ ಸಂಸ್ಕಾರವು ಪ್ರತ್ಯಕ್ಷ ಕರ್ಮದಲ್ಲಿ ಇಮರ್ಜ್ ಮಾಡಿಕೊಳ್ಳಿರಿ. ಏಕೆಂದರೆ ಬಹಳ ಕಾಲದ
ಗಾಯನವೇನಿದೆ, ಅದು ಬಹಳ ಕಾಲದ ಸಮಯವು ಈಗ ಸಮಾಪ್ತಿಯಾಗುತ್ತಿದೆ. ಅದರ ದಿನಾಂಕವನ್ನು ಲೆಕ್ಕ
ಮಾಡದಿರಿ.
ವಿನಾಶವನ್ನು ಅಂತ್ಯ
ಕಾಲವೆಂದು ಹೇಳಲಾಗುತ್ತದೆ, ಆ ಸಮಯದಲ್ಲಿ ಬಹಳ ಕಾಲದ ಅವಕಾಶವಂತು ಸಮಾಪ್ತಿಯಾಗಿ ಬಿಟ್ಟಿದೆ, ಆದರೆ
ಸ್ವಲ್ಪ ಸಮಯದ ಈ ಸಮಯದ ಅವಕಾಶವೂ ಸಮಾಪ್ತಿಯಾಗಿ ಬಿಡುತ್ತದೆ. ಆದ್ದರಿಂದ ಬಾಪ್ದಾದಾರವರು ಬಹಳ ಕಾಲದ
ಸಮಾಪ್ತಿಯ ಸೂಚನೆಯನ್ನು ಕೊಡುತ್ತಿದ್ದಾರೆ. ನಂತರ ಬಹಳ ಕಾಲದ ಲೆಕ್ಕದ ಅವಕಾಶವು ಸಮಾಪ್ತಿಯಾಗಿ,
ಸ್ವಲ್ಪ ಸಮಯದ ಪುರುಷಾರ್ಥ, ಸ್ವಲ್ಪ ಸಮಯದ ಪ್ರಾಲಬ್ಧವೆಂದೇ ಹೇಳಲಾಗುತ್ತದೆ. ಕರ್ಮಗಳ ಖಾತೆಯಲ್ಲಿ
ಈಗ ಬಹಳ ಕಾಲವು ಸಮಾಪ್ತಿಯಾಗಿ ಸ್ವಲ್ಪ ಸಮಯ ಅಥವಾ ಅಲ್ಪಕಾಲವು ಆರಂಭವಾಗುತ್ತಿದೆ. ಆದ್ದರಿಂದ ಈ
ವರ್ಷವು ಪರಿವರ್ತನೆಯ ಕಾಲದ ವರ್ಷವಾಗಿದೆ. ಬಹಳ ಕಾಲದಿಂದ ಸ್ವಲ್ಪ ಸಮಯದಲ್ಲಿ
ಪರಿವರ್ತನೆಯಾಗುವುದಿದೆ, ಆದ್ದರಿಂದ ಈ ವರ್ಷದ ಪುರುಷಾರ್ಥದಲ್ಲಿ ಬಹಳ ಕಾಲದ ಲೆಕ್ಕವನ್ನೆಷ್ಟು ಜಮಾ
ಮಾಡಿಕೊಳ್ಳಬೇಕೆಂದು ಬಯಸುತ್ತೀರಿ ಅಷ್ಟೂ ಮಾಡಿಕೊಳ್ಳಿರಿ. ನಂತರದಲ್ಲಿ ದೂರನ್ನು ಕೊಡಬಾರದು -
ನಾವಂತು ಹುಡುಗಾಟಿಕೆಯವರಾಗಿ ನಡೆಯುತ್ತಿದ್ದೆವು. ಇಂದಿಲ್ಲದಿದ್ದರೆ ನಾಳೆ ಬದಲಾಗಿ ಬಿಡುತ್ತೇವೆ.
ಆದ್ದರಿಂದ ಕರ್ಮಗಳ ಗತಿಯನ್ನು ತಿಳಿದುಕೊಳ್ಳುವವರಾಗಿ. ಜ್ಞಾನ ಪೂರ್ಣರಾಗಿ ತೀವ್ರ ಗತಿಯಿಂದ
ಮುಂದುವರೆಯಿರಿ. ಅದು ಹೀಗಾಗಬಾರದು- ಕೇವಲ ಎರಡು ಸಾವಿರವನ್ನೇ ಲೆಕ್ಕ ಹಾಕುತ್ತಿರಿ. ಪುರುಷಾರ್ಥದ
ಲೆಕ್ಕವು ಬೇರೆಯಿದೆ ಮತ್ತು ಸೃಷ್ಟಿಯ ಪರಿವರ್ತನೆಯ ಲೆಕ್ಕವು ಬೇರೆಯಾಗಿದೆ. ಈ ರೀತಿ ಯೋಚಿಸಬಾರದು
- ಈಗ 15 ವರ್ಷಗಳಿದೆ, ಈಗ 18 ವರ್ಷಗಳಿದೆ. 99ರಲ್ಲಿ ಆಗುತ್ತದೆ....... ಇದನ್ನು
ಯೋಚಿಸುತ್ತಿರಬಾರದು. ಲೆಕ್ಕವನ್ನು ತಿಳಿದುಕೊಳ್ಳಿರಿ. ತಮ್ಮ ಪುರುಷಾರ್ಥ ಮತ್ತು ಪ್ರಾಲಬ್ಧದ
ಲೆಕ್ಕವನ್ನು ತಿಳಿದುಕೊಂಡು, ಆ ಗತಿಯಿಂದ ಮುಂದುವರೆಯಿರಿ. ಇಲ್ಲವೆಂದರೆ ಬಹಳ ಕಾಲದ ಹಳೆಯ
ಸಂಸ್ಕಾರವೇನಾದರೂ ಉಳಿದುಕೊಂಡರೆ, ಈ ಬಹಳಕಾಲದ ಲೆಕ್ಕವು ಧರ್ಮರಾಜ ಪುರಿಯ ಖಾತೆಯಲ್ಲಿ ಜಮಾ ಆಗಿ
ಬಿಡುತ್ತದೆ. ಕೆಲಕೆಲವರ ಬಹಳ ಕಾಲದ ವ್ಯರ್ಥ, ಆಯಥಾರ್ಥ ಕರ್ಮ-ವಿಕರ್ಮದ ಖಾತೆಯು ಈಗಲೂ ಇದೆ,
ಬಾಪ್ದಾದಾರವರಿಗೆ ಗೊತ್ತಿದೆ, ಆದರೆ ಅದನ್ನು ಕೇವಲ ಔಟ್ ಮಾಡಿಲ್ಲ. ಸ್ವಲ್ಪ ಪರದೆಯನ್ನು
ಹಾಕುತ್ತಾರೆ. ಆದರೆ ವ್ಯರ್ಥ ಮತ್ತು ಆಯಥಾರ್ಥ, ಈ ಖಾತೆಯು ಈಗಲೂ ಬಹಳಷ್ಟಿದೆ. ಆದ್ದರಿಂದ
ವಿಶೇಷವಾಗಿ ಸಾಹಸ ಮತ್ತು ಸಹಯೋಗದ ಈ ವಿಶೇಷ ವರದಾನದ ವರ್ಷವನ್ನು ಸಾಧಾರಣ 50 ವರ್ಷಗಳ ಸಮಾನ ಕಳೆದು
ಬಿಡಬಾರದು. ಈಗಿನವರೆಗೂ ತಂದೆಯು ಸ್ನೇಹದ ಸಾಗರನಾಗಿ ಸರ್ವ ಸಂಬಂಧದ ಸ್ನೇಹದಲ್ಲಿ, ಹುಡುಗಾಟಿಕೆ,
ಸಾಧಾರಣ ಪುರುಷಾರ್ಥ - ಇದನ್ನು ನೋಡುತ್ತಾ-ಕೇಳುತ್ತಿದ್ದರೂ ಕೇಳದಂತೆ, ನೋಡದೆ ಮಕ್ಕಳಿಗೆ ಸ್ನೇಹದ
ವಿಶೇಷ ಸಹಯೋಗದಿಂದ, ವಿಶೇಷ ಅಂಕಗಳನ್ನು ಕೊಟ್ಟು ಮುಂದುವರೆಸುತ್ತಿದ್ದಾರೆ. ಲಿಫ್ಟ್
ಕೊಡುತ್ತಿದ್ದಾರೆ ಆದರೆ ಈಗ ಸಮಯದ ಪರಿವರ್ತನೆಯಾಗುತ್ತಿದೆ. ಆದ್ದರಿಂದ ಈಗ ಕರ್ಮಗಳ ಗತಿಯನ್ನು ಬಹಳ
ಚೆನ್ನಾಗಿ ತಿಳಿದುಕೊಂಡು ಸಮಯದ ಲಾಭವನ್ನು ತೆಗೆದುಕೊಳ್ಳಿರಿ. ತಿಳಿಸಿದ್ದೆವಲ್ಲವೆ - 18ನೇ
ಅಧ್ಯಾಯವು ಆರಂಭವಾಗಿ ಬಿಟ್ಟಿದೆ. 18 ಅಧ್ಯಾಯದ ವಿಶೇಷತೆ - ಈಗ ಸ್ಮೃತಿ ಸ್ವರೂಪರಾಗಿರಿ. ಈಗ
ಸ್ಮೃತಿ, ಈಗ ವಿಸ್ಮೃತಿಯಿರಬಾರದು. ಸ್ಮೃತಿ ಸ್ವರೂಪ ಅರ್ಥಾತ್ ಬಹಳ ಕಾಲದ ಸ್ಮೃತಿಯು ಸ್ವತಹ ಮತ್ತು
ಬಹಳ ಕಾಲದ ಸಂಸ್ಕಾರವಾಗಿ ಅಂತ್ಯಮತಿ ಸೋ ಭವಿಷ್ಯ ಗತಿಯನ್ನು ಪ್ರಾಪ್ತಿ ಮಾಡಿಸಲು ನಿಮಿತ್ತವಾಗಿ
ಬಿಡುತ್ತದೆ. ತಿಳಿಸಿದ್ದೆವಲ್ಲವೆ - ಈಗ ಬಹಳ ಕಾಲದ ಪುರುಷಾರ್ಥದ ಸಮಯವು ಸಮಾಪ್ತಿಯಾಗುತ್ತಿದೆ
ಮತ್ತು ಬಹಳ ಕಾಲದ ಬಲಹೀನತೆಗಳ ಲೆಕ್ಕವು ಆರಂಭವಾಗುತ್ತಿದೆ. ಅರ್ಥವಾಯಿತೆ! ಆದ್ದರಿಂದ ಇದು
ವಿಶೇಷವಾಗಿ ಪರಿವರ್ತನೆಯ ಸಮಯವಾಗಿದೆ. ಈಗ ವರದಾತಾ ಇದ್ದಾರೆ ನಂತರ ಲೆಕ್ಕಚಾರ ಮಾಡುವವರಾಗಿ
ಬಿಡುತ್ತಾರೆ. ಈಗ ಕೇವಲ ಸ್ನೇಹದ ಲೆಕ್ಕವಿದೆ. ಹಾಗಾದರೆ ಏನು ಮಾಡಬೇಕು! ಸ್ಮೃತಿ ಸ್ವರೂಪರಾಗಿರಿ.
ಸೃತಿ ಸ್ವರೂಪರು ಸ್ವತಹವಾಗಿಯೇ ನಷ್ಟಮೋಹಿಯನ್ನಾಗಿ ಮಾಡಿ ಬಿಡುತ್ತದೆ. ಈಗಂತು ಮೋಹದ ಲಿಫ್ಟ್ ಬಹಳ
ಉದ್ದವಾಗಿ ಬಿಟ್ಟಿದೆ. ಒಂದು ಸ್ವಯಂನ ಪ್ರವೃತ್ತಿ, ಒಂದು ದೈವೀ ಪರಿವಾರದ ಪ್ರವೃತ್ತಿ, ಸೇವೆಯ
ಪ್ರವೃತ್ತಿ, ಅಲ್ಪಕಾಲದ ಪ್ರಾಪ್ತಿಯ ಪ್ರವೃತ್ತಿ - ಇವೆಲ್ಲದರಿಂದ ನಷ್ಟಮೋಹ ಅರ್ಥಾತ್ ಭಿನ್ನವಾಗಿ
ಪ್ರಿಯರಾಗಿರಿ. ನಾನು ಅರ್ಥಾತ್ ಮೋಹ, ಇದರಿಂದ ನಷ್ಟಮೋಹಿಯಾಗಿರಿ ಆಗಲೇ ಬಹಳ ಕಾಲದ ಪುರುಷಾರ್ಥದಿಂದ
ಬಹಳ ಕಾಲದ ಪ್ರಾಲಬ್ಧದ ಪ್ರಾಪ್ತಿಯ ಅಧಿಕಾರಿಯಾಗಿ ಬಿಡುತ್ತೀರಿ. ಬಹಳ ಕಾಲ ಅರ್ಥಾತ್ ಆದಿಯಿಂದ
ಅಂತ್ಯದವರೆಗೆ ಪ್ರಾಲಬ್ಧದ ಫಲ. ಹಾಗೆ ನೋಡಿದರೆ ಒಂದೊಂದು ಪ್ರವೃತ್ತಿಯಿಂದ ನಿವೃತ್ತರಾಗುವ
ರಹಸ್ಯವನ್ನೂ ಬಹಳ ಚೆನ್ನಾಗಿ ತಿಳಿದಿದ್ದೀರಿ ಮತ್ತು ಭಾಷಣವನ್ನೂ ಬಹಳ ಚೆನ್ನಾಗಿ ಮಾಡಬಹುದು. ಆದರೆ
ನಿವೃತ್ತರಾಗುವುದು ಅರ್ಥಾತ್ ನಷ್ಟಮೋಹಿಯಾಗುವುದು. ತಿಳಿಯಿತೆ! ಪಾಯಿಂಟುಗಳಂತು ತಮ್ಮ ಬಳಿ
ಬಾಪ್ದಾದಾರವರಿಗಿಂತಲೂ ಹೆಚ್ಚಾಗಿ ಇದೆ. ಆದ್ದರಿಂದ ಪಾಯಿಂಟುಗಳನ್ನೇನು ತಿಳಿಸುವುದು, ಪಾಯಿಂಟ್ಸ್
ಇದೆ, ಈಗ ಪಾಯಿಂಟ್ (ಬಿಂದು) ಆಗಿರಿ. ಒಳ್ಳೆಯದು!
ಸದಾ ಶ್ರೇಷ್ಠ ಕರ್ಮದ
ಪ್ರಾಪ್ತಿಯ ಗತಿಯನ್ನು ತಿಳಿದುಕೊಳ್ಳುವ, ಸದಾ ಬಹಳ ಕಾಲದ ತೀವ್ರ ಪುರುಷಾರ್ಥದ, ಶ್ರೇಷ್ಠ
ಪುರುಷಾರ್ಥದ ಶ್ರೇಷ್ಠ ಸಂಸ್ಕಾರದವರು, ಸದಾ ಸ್ವರ್ಣೀಮ ಯುಗದ ಆದಿ ರತ್ನ, ಸಂಗಮಯುಗಕ್ಕೂ ಆದಿ ರತ್ನ,
ಸ್ವರ್ಣೀಮ ಯುಗಕ್ಕೂ ಆದಿ ರತ್ನ, ಇಂತಹ ಆದಿ ದೇವನ ಸಮಾನ ಮಕ್ಕಳಿಗೆ, ಆದಿ ತಂದೆ, ಅನಾದಿ
ತಂದೆಯವರಿಂದ ಸದಾ ಆದಿಯಾಗುವ ಶ್ರೇಷ್ಠ ವರದಾನಿ ನೆನಪು-ಪ್ರೀತಿ ಹಾಗೂ ಜೊತೆ ಜೊತೆಗೆ ಸೇವಾಧಾರಿ
ತಂದೆಯ ನಮಸ್ತೆ.
ದಾದಿಯವರೊಂದಿಗೆ:-
ಮನೆಯ ದ್ವಾರವನ್ನು
ತೆರೆಯುವವರು ಯಾರು? ಗೋಲ್ಡನ್ ಜುಬಿಲಿಯವರೇ ಅಥವಾ ಸಿಲ್ವರ್ ಜುಬಿಲಿಯವರೆ, ಬ್ರಹ್ಮಾನ ಜೊತೆ
ದ್ವಾರವನ್ನು ತೆರೆಯುತ್ತೀರಲ್ಲವೆ. ಅಥವಾ ಹಿಂದೆ ಬರುತ್ತೀರಾ? ಜೊತೆಯಲ್ಲಿ ಹೋಗುತ್ತೀರೆಂದರೆ
ಪ್ರಿಯತಮೆಯಾಗಿ ಹೋಗುತ್ತೀರಿ ಮತ್ತು ಹಿಂದೆ ಹೋಗುತ್ತೀರೆಂದರೆ ದಿಬ್ಬಣದಲ್ಲಿರುವವರಾಗಿ ಹೋಗುತ್ತೀರಿ.
ಸಂಬಂಧಿಯನ್ನಂತು ದಿಬ್ಬಣದವರೆಂದು ಹೇಳಲಾಗುತ್ತದೆ. ಸಮೀಪದಲ್ಲಂತು ಇದ್ದಾರೆ ಆದರೆ ಹೇಳಲಾಗುತ್ತದೆ
- ದಿಬ್ಬಣ ಬಂದಿದೆ ಎಂದು. ಅಂದಾಗ ದ್ವಾರವನ್ನು ಯಾರು ತೆರೆಯುವರು? ಗೋಲ್ಡನ್ ಜುಬಿಲಿಯವರೆ ಅಥವಾ
ಸಿಲ್ವರ್ ಜುಬಿಲಿಯವರೆ? ಯಾರು ಮನೆಯ ದ್ವಾರವನ್ನು ತೆರೆಯುತ್ತಾರೆಯೋ ಅವರೇ ಸ್ವರ್ಗದ ದ್ವಾರವನ್ನೂ
ತೆರೆಯುತ್ತಾರೆ. ಈಗ ವತನದಲ್ಲಿ ಬರಲು ಯಾರದೂ ಅಡ್ಡಿಯಿಲ್ಲ. ಸಾಕಾರದಲ್ಲಾದರೂ ಬಂಧನವಿದೆ, ಸಮಯದ
ಸಂದರ್ಭದನುಸಾರವಾಗಿ. ವತನದಲ್ಲಿ ಬರುವುದಕ್ಕಾಗಿ ಯಾವುದೇ ಬಂಧನವಿಲ್ಲ. ಯಾರೂ ತಡೆಯುವುದಿಲ್ಲ,
ಟರ್ನ್ ಕಾಯುವ ಅವಶ್ಯಕತೆಯೂ ಇಲ್ಲ. ಅಭ್ಯಾಸದಿಂದ ಇಂತಹ ಅನುಭವ ಮಾಡುವಿರಿ, ಹೇಗೆ ಇಲ್ಲಿ
ಶರೀರದಲ್ಲಿದ್ದರೂ ಒಂದು ಸೆಕೆಂಡಿನಲ್ಲಿ ಪರಿಕ್ರಮಣ ಮಾಡಿ ಹಿಂತಿರುಗಿ ಬಂದು ಬಿಟ್ಟೆವು ಎಂಬಂತೆ.
ಅಂತಃವಾಹಕ ಶರೀರದಿಂದ ಪರಿಕ್ರಮಣ ಹಾಕುವ ಗಾಯನವೇನಿದೆ, ಈ ಆಂತರ್ಯದ ಆತ್ಮವು ವಾಹನವಾಗಿ ಬಿಡುತ್ತದೆ.
ಅಂದಮೇಲೆ ಇಂತಹ ಅನುಭವ ಮಾಡುವರು ಹೇಗೆಂದರೆ ಬಟನ್ ಒತ್ತಲಾಯಿತು, ವಿಮಾನವು ಹಾರಿತು, ಪರಿಕ್ರಮಣ
ಮಾಡಿಕೊಂಡು ಬಂದು ಬಿಟ್ಟೆವು ಮತ್ತು ಅನ್ಯರೂ ಅನುಭವ ಮಾಡುವರು - ಇವರು ಇಲ್ಲಿದ್ದರೂ ಸಹ ಇಲ್ಲಿಲ್ಲ
ಎಂಬಂತೆ. ಈ ಅನುಭವವನ್ನು ಮಾಡಿದ್ದೀರಲ್ಲವೆ - ಮಾತನಾಡುತ್ತಾ-ಮಾತನಾಡುತ್ತಲೂ ಸೆಕೆಂಡಿನಲ್ಲಿ
ಇದ್ದಾರೆ ಮತ್ತು ಈಗಿಲ್ಲ. ಈಗೀಗ ಇದ್ದಾರೆ, ಈಗೀಗ ಇಲ್ಲ. ಈ ಅನುಭವ ಮಾಡಿದಿರಲ್ಲವೆ. ಅಂತಹ ಅನುಭವ
ಮಾಡಿದಿರಲ್ಲವೆ. ಇದರಲ್ಲಿ ಕೇವಲ ಸ್ಥೂಲ ವಿಸ್ತಾರವನ್ನು ಸಂಕ್ಷಿಪ್ತಗೊಳಿಸುವ ಅವಶ್ಯಕತೆಯಿದೆ. ಹೇಗೆ
ಸಾಕಾರದಲ್ಲಿ ನೋಡಿದಿರಿ - ಇಷ್ಟು ವಿಸ್ತಾರವಾಗುತ್ತಿದ್ದರೂ ಅಂತಿಮ ಸ್ಥಿತಿಯೇನಾಗಿತ್ತು?
ವಿಸ್ತಾರವನ್ನು ಸಂಕ್ಷಿಪ್ತಗೊಳಿಸುವ, ಉಪರಾಂ ಆಗಿರುವ ಸ್ಥಿತಿ. ಈಗೀಗ ಸ್ಥೂಲ ಡೈರೆಕ್ಷನ್
ಕೊಡುತ್ತಿದ್ದಾರೆ ಮತ್ತು ಈಗೀಗ ಅಶರೀರಿ ಸ್ಥಿತಿಯ ಅನುಭವವನ್ನು ಮಾಡಿಸುತ್ತಿದ್ದಾರೆ. ಅಂದಾಗ
ಸಂಕ್ಷಿಪ್ತಗೊಳಿಸುವ ಈ ಶಕ್ತಿಯ ಪ್ರತ್ಯಕ್ಷತೆಯನ್ನು ನೋಡಲಾಯಿತು. ಏನನ್ನು ತಾವುಗಳೂ
ಹೇಳುತ್ತಿದ್ದಿರಿ - ಬಾಬಾ ಇಲ್ಲಿದ್ದಾರೆ ಅಥವಾ ಇಲ್ಲ. ಕೇಳುತ್ತಿದ್ದಾರೆ ಅಥವಾ ಕೇಳುತ್ತಿಲ್ಲ.
ಆದರೆ ಆ ತೀವ್ರ ಗತಿಯು ಹೀಗಿರುತ್ತದೆ, ಯಾವುದೇ ಕಾರ್ಯವನ್ನು ಮಿಸ್ ಮಾಡುವುದಿಲ್ಲ. ತಾವು ಮಾತನ್ನು
ತಿಳಿಸುತ್ತಿದ್ದೀರೆಂದರೆ, ಮಾತನ್ನು ಮಿಸ್ ಮಾಡುವುದಿಲ್ಲ. ಆದರೆ ಗತಿಯು ಇಷ್ಟೂ ತೀವ್ರವಿದೆ, ಆ
ಎರಡೂ ಕಾರ್ಯಗಳನ್ನು ಒಂದು ನಿಮಿಷದಲ್ಲಿ ಮಾಡಬಹುದು. ಸಾರವನ್ನೂ ಕ್ಯಾಚ್ ಮಾಡಿ ಬಿಡುತ್ತೀರಿ ಮತ್ತು
ಪರಿಕ್ರಮಣವನ್ನೂ ಹಾಕಿ ಬಿಡುತ್ತೀರಿ. ಯಾರೇ ಮಾತನಾಡುತ್ತಿದ್ದಾರೆಂದರೆ ತಾವು ಹೇಳಿ -
ಕೇಳಿಸಿಕೊಳ್ಳಲೇ ಇಲ್ಲ ಎಂಬಂತೆ, ಹಾಗೆ ಅಶರೀರಿಯಾಗುವುದಿಲ್ಲ. ಗತಿಯು ತೀವ್ರವಾಗಿ ಬಿಡುತ್ತದೆ.
ಬುದ್ಧಿಯು ಇಷ್ಟು ವಿಶಾಲವಾಗಿ ಬಿಡುತ್ತದೆ, ಒಂದೇ ಸಮಯದಲ್ಲಿ ಎರಡು ಕಾರ್ಯಗಳನ್ನು ಮಾಡುತ್ತೀರಿ.
ಇದು ಆಗ ಆಗುತ್ತದೆ ಯಾವಾಗ ಸಂಕ್ಷಿಪ್ತಗೊಳಿಸುವ ಶಕ್ತಿಯನ್ನು ಉಪಯೋಗಿಸುತ್ತೀರಿ. ಈಗ ಪ್ರವೃತ್ತಿಯ
ವಿಸ್ತಾರವಾಗಿ ಬಿಟ್ಟಿದೆ. ಅದರಲ್ಲಿತ್ತು ಇದೇ ಅಭ್ಯಾಸವು ಫರಿಶ್ತೆಯಾಗುವ ಸಾಕ್ಷಾತ್ಕಾರವನ್ನು
ಮಾಡಿಸುತ್ತದೆ! ಈಗ ಒಂದೊಂದು ಚಿಕ್ಕ ಪುಟ್ಟ ಮಾತುಗಳ ಹಿಂದೆ, ಯಾವ ಪರಿಶ್ರಮವನ್ನು ಪಡಬೇಕಾಗುತ್ತದೆ,
ಶ್ರೇಷ್ಠದಲ್ಲಿ ಹೋಗುವುದರಿಂದ ಅದು ಸ್ವತಹವಾಗಿಯೇ ಚಿಕ್ಕ ಮಾತುಗಳು ವ್ಯಕ್ತ ಭಾವದ ಅನುಭವವಾಗುತ್ತದೆ.
ಶ್ರೇಷ್ಠವಾಗುವುದರಿಂದ ಕನಿಷ್ಟತೆಯು ತನಗೆ ತಾನು ಬಿಟ್ಟು ಹೋಗುತ್ತದೆ. ಪರಿಶ್ರಮದಿಂದ ಪಾರಾಗಿ
ಬಿಡುತ್ತೀರಿ. ಸಮಯವೂ ಉಳಿಯುತ್ತದೆ ಮತ್ತು ಸೇವೆಯೂ ತೀವ್ರವಾಗುತ್ತದೆ, ಇಲ್ಲವೆಂದರೆ ಎಷ್ಟೊಂದು
ಸಮಯ ಕೊಡಬೇಕಾಗುತ್ತದೆ. ಒಳ್ಳೆಯದು.
ಸಿಲ್ವರ್ ಜುಬಿಲಿಯಲ್ಲಿ
ಬಂದಿರುವಂತಹ ಸಹೋದರ-ಸಹೋದರಿಯರ ಪ್ರತಿ ಅವ್ಯಕ್ತ-ಬಾಪ್ದಾದಾರವರ ಮಧುರ ಸಂದೇಶ - ರಜತ ಜಯಂತಿಯ
ಶುಭಾರಂಭದಲ್ಲಿ ಆತ್ಮಿಕ ಮಕ್ಕಳ ಪ್ರತಿ ಸ್ನೇಹದ ಸುವರ್ಣ ಪುಷ್ಪಗಳು.
ಇಡೀ ವಿಶ್ವದಲ್ಲಿ ಸರ್ವ
ಶ್ರೇಷ್ಠ ಮಹಾಯುಗದ ಮಹಾನ್ ಪಾತ್ರಧಾರಿಗಳು, ಯುಗ ಪರಿವರ್ತಕ ಮಕ್ಕಳಿಗೆ ಶ್ರೇಷ್ಠ ಸೌಭಾಗ್ಯ ಜೀವನದ
ಶುಭಾಷಯಗಳು. ಸೇವೆಯಲ್ಲಿ ವೃದ್ಧಿಯ ನಿಮಿತ್ತರಾಗಿರುವುದಕ್ಕೆ ವಿಶೇಷ ಭಾಗ್ಯದ ಶುಭಾಷಯಗಳು.
ಆದಿಯಿಂದ ಪರಮಾತ್ಮ ಸ್ನೇಹಿ ಮತ್ತು ಸಹಯೋಗಿಯಾಗುವ, ಉದಾಹರಣೆಯಾಗುವ ಶುಭಾಷಯಗಳು. ಸಮಯದ ಸಮಸ್ಯೆಗಳ
ಬಿರುಗಾಳಿಗಳನ್ನು ಬಳುವಳಿಯೆಂದು ತಿಳಿದು, ಸದಾ ವಿಘ್ನ ವಿನಾಶಕರಾಗುವ ಶುಭಾಷಯಗಳು.
ಬಾಪ್ದಾದಾರವರು ಸದಾ
ತಮ್ಮ ಇಂತಹ ಅನುಭವಗಳ ಖಜಾನೆಗಳಿಂದ ಸಂಪನ್ನ ಸೇವೆಯ ಬುನಾದಿಯಾಗಿರುವ ಮಕ್ಕಳನ್ನು ನೋಡಿ
ಹರ್ಷಿತವಾಗುತ್ತಾರೆ ಮತ್ತು ಮಕ್ಕಳ ಸಾಹಸದ ಗುಣದ ಮಾಲೆಯನ್ನು ಸ್ಮರಣೆ ಮಾಡುತ್ತಾರೆ. ಇಂತಹ ಲಕ್ಕಿ
ಮತ್ತು ಲವ್ಲೀ ಅವಕಾಶದಲ್ಲಿ ವಿಶೇಷವಾಗಿ ಸುವರ್ಣ ವರದಾನವನ್ನು ಕೊಡುತ್ತಾ ಸದಾ ಒಂದಾಗಿದ್ದು,
ಒಬ್ಬರನ್ನು ಪ್ರತ್ಯಕ್ಷಗೊಳಿಸುವ ಕಾರ್ಯದಲ್ಲಿ ಸಫಲ ಭವ. ಆತ್ಮಿಕ ಜೀವನದಲ್ಲಿ ಅಮರ ಭವ.
ಪ್ರತ್ಯಕ್ಷಫಲ ಮತ್ತು ಅಮರ ಫಲವನ್ನು ಸೇವಿಸುವ ಪದಮಾಪದಮ ಭಾಗ್ಯಶಾಲಿ ಭವ.
ವರದಾನ:
ವಾಹ್ ಡ್ರಾಮಾ ವಾಹ್ನ ಸ್ಮೃತಿಯಿಂದ ಅನೇಕರ ಸೇವೆ ಮಾಡುವಂತಹ ಸದಾ ಖುಷ್ನುಮಃ ಭವ.
ಈ ಡ್ರಾಮಾದ ಯಾವುದೇ
ದೃಶ್ಯವನ್ನು ನೋಡುತ್ತಾ ವಾಹ್ ಡ್ರಾಮಾ ವಾಹ್ನ ಸ್ಮೃತಿಯಲ್ಲಿರುತ್ತೀರೆಂದರೆ ಎಂದಿಗೂ
ಗಾಬರಿಯಾಗುವುದಿಲ್ಲ ಏಕೆಂದರೆ ಡ್ರಾಮಾದ ಜ್ಞಾನವು ಸಿಕ್ಕಿದೆ - ವರ್ತಮಾನ ಸಮಯವು ಕಲ್ಯಾಣಕಾರಿ
ಯುಗವಾಗಿದೆ, ಇದರಲ್ಲಿ ಏನೆಲ್ಲಾ ದೃಶ್ಯಗಳು ಮುಂದೆ ಬರುತ್ತವೆ, ಅದರಲ್ಲಿ ಕಲ್ಯಾಣವು ಅಡಗಿದೆ.
ವರ್ತಮಾನದಲ್ಲಿ ಕಲ್ಯಾಣ ಕಾಣಿಸದಿರಬಹುದು ಆದರೆ ಭವಿಷ್ಯದಲ್ಲಿ ಸಮಾವೇಶವಾಗಿ ಕಲ್ಯಾಣವು
ಪ್ರತ್ಯಕ್ಷವಾಗಿ ಬಿಡುತ್ತದೆ - ಅದರಿಂದ ವಾಹ್ ಡ್ರಾಮಾ ವಾಹ್ನ ಸ್ಮೃತಿಯಿಂದ ಸದಾ ಖುಷ್ನುಮಃ
ಆಗಿರುತ್ತೀರಿ, ಪುರುಷಾರ್ಥದಲ್ಲಿ ಎಂದಿಗೂ ಆಲಸ್ಯವು ಬರುವುದಿಲ್ಲ. ಸ್ವತಹವಾಗಿಯೇ ತಮ್ಮ ಮೂಲಕ
ಅನೇಕರ ಸೇವೆಯಾಗುತ್ತಿರುತ್ತದೆ.
ಸ್ಲೋಗನ್:
ಶಾಂತಿಯ ಶಕ್ತಿಯೇ
ಮನಸಾ ಸೇವೆಯ ಸಹಜ ಸಾಧನವಾಗಿದೆ, ಎಲ್ಲಿ ಶಾಂತಿಯ ಶಕ್ತಿಯಿದೆ ಅಲ್ಲಿ ಸಂತುಷ್ಟತೆಯಿದೆ.
ಮುರಳಿ ಪ್ರಶ್ನೆಗಳು :
1. ಇವತ್ತು ಬಾಬಾರವರು
ಎಂತಹ ಸಮರ್ಥ ಆತ್ಮರನ್ನು ನೋಡುತ್ತಿದ್ದಾರೆ?
2. ಪ್ರಪಂಚದಲ್ಲಿನ ಜನ
ಏಕೆ ಭಯ ಪಡುತ್ತಾರೆ ಮತ್ತು ನೀವು ಏಕೆ ನಿಶ್ಚಿಂತವಾಗಿದ್ದೀರಾ?
3. ನೀವು ಮಕ್ಕಳ ಮುಂದೆ
ಏನಿದೆ ಮತ್ತು ಜನರ ಮುಂದೆ ಏನಿದೆ?
4. ಈ ವರ್ಷ ಪರಿವರ್ತನೆಯ
ವರ್ಷವಾಗಿ ಏಕೆ ಆಚರಿಸಬೇಕು?
5. ಬಾಬಾರವರು
ಯಾವು-ಯಾವ್ಯದರಿಂದ ನಷ್ಟೋಮೋಹಿಗಳಾಗುವುದಕ್ಕೆ ತಿಳಿಸಿದ್ದಾರೆ?
6. ಮಕ್ಕಳು ಯಾವ ಸಮರ್ಥ
ಕಾರ್ಯವನ್ನು ಸಂಕಲ್ಪ ಮಾಡಿ ದೃಢ ನಿಶ್ಚಯ ಬುದ್ಧಿಯವರಾಗಿ ಕಾರ್ಯವನ್ನು ಪ್ರತ್ಯಕ್ಷ ರೂಪದಲ್ಲಿ
ತರುತ್ತಿದ್ದಾರೆ?
ಅ. ಪ್ರತಿ ಆತ್ಮದಲ್ಲಿ ಸಹನೆಯನ್ನು ತರುವ
ಆ. ಪ್ರತಿ ಆತ್ಮಕ್ಕೆ ಸುಖ-ಶಾಂತಿಯನ್ನು ಕೊಡುವ
ಇ. ಪ್ರತಿ ಆತ್ಮವನ್ನು ಮಾಯೆಯಿಂದ ವಿಜಯಿಯನ್ನಾಗಿ ಮಾಡುವ
7. ಯಾರು ನಿಶ್ಚಿಂತ
ಆತ್ಮಗಳಾಗಿದ್ದಾರೆ?
ಅ. ಪರಮಾತ್ಮನ ಕಾರ್ಯ ಸಫಲ ಆಗಿಯೇ ಇದೆ. ನಿಶ್ಚಯ ಬುದ್ಧಿ, ನಿಶ್ಚಯ ಭವಿಷ್ಯ ತಿಳಿದುಕೊಂಡಿರುವವರು
ಆ. ಮಾಯೆಯ ಭಿನ್ನ ಭಿನ್ನ ರೂಪಗಳನ್ನು ತಿಳಿದುಕೊಂಡಿರುವವರು
ಇ. ಮಧುರತೆಯನ್ನು ತಿಳಿದುಕೊಂಡಿರುವವರು
8. ಈ ವರ್ಷ _________
ಮತ್ತು ________ ಸಮೀಪತೆಯ ಅನುಭವ ಮಾಡಬೇಕು.
ಅ. ಸಹಯೋಗ ಮತ್ತು ಸಫಲತೆಯ
ಆ. ಮಾಯೆಯ ಮೇಲೆ ವಿಜಯಿ ಮತ್ತು ಜಗತ್ತಜೀತ್ ಆಗುವ
ಇ. ಸಂಪೂರ್ಣತೆ ಮತ್ತು ಸಮಾನತೆಯ
9. ಫರಿಶ್ತೆಗಳು ಏನು
ಮಾಡುತ್ತಾರೆ?
ಅ. ವರದಾತನಾಗಿ ವರದಾನವನ್ನು ಕೊಡುತ್ತಾರೆ
ಆ. ವಾಯುಮಂಡಲದಲ್ಲಿ ಪ್ರಕಂಪನಗಳನ್ನು ಹರಡಿಸುತ್ತಾರೆ
ಇ. ಶಾಂತಿದೂತರಾಗಿ ಶಾಂತಿಯ ಅನುಭವ ಮಾಡಿಸುತ್ತಾರೆ
10. 18ನೇ ಅಧ್ಯಾಯದ
ವಿಶೇಷತೆ ಏನು?
ಅ. ನಿರಾಕಾರಿ-ನಿರ್ವಿಕಾರಿ ಸ್ವರೂಪರಾಗುವುದು
ಆ. ನಿಮಿತ್ತ ಮತ್ತು ನಿರ್ಮಾಣ
ಇ. ಸ್ಮೃತಿ ಸ್ವರೂಪರಾಗುವುದು