21/06/20 ಪ್ರಾತಃಮುರುಳಿ ಓಂಶಾಂತಿ "ಅವ್ಯಕ್ತ-ಬಾಪ್ದಾದಾ" ರಿವೈಜ್: 16/02/86


ಗೋಲ್ಡನ್ ಜುಬಿಲಿಯ ಗೋಲ್ಡನ್ ಸಂಕಲ್ಪ

ಇಂದು ಭಾಗ್ಯವಿದಾತಾ ತಂದೆಯು ತನ್ನ ನಾಲ್ಕೂ ಕಡೆಯಲ್ಲಿನ ಪದಮಾಪದಮ ಭಾಗ್ಯಶಾಲಿ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಂದು ಮಗುವಿನ ಮಸ್ತಕದಲ್ಲಿ ಭಾಗ್ಯದ ಹೊಳೆಯುತ್ತಿರುವ ನಕ್ಷತ್ರವನ್ನು ನೋಡುತ್ತಾ ಹರ್ಷಿತವಾಗುತ್ತಿದ್ದಾರೆ. ಇಡೀ ಕಲ್ಪದಲ್ಲಿ ಯಾರೂ ಸಹ ಇಂತಹ ತಂದೆಯಾಗಲು ಸಾಧ್ಯವಿಲ್ಲ, ಯಾರ ಇಷ್ಟೆಲ್ಲಾ ಮಕ್ಕಳು ಭಾಗ್ಯಶಾಲಿಯಾಗಿದ್ದಾರೆ. ನಂಬರ್ವಾರ್ ಭಾಗ್ಯಶಾಲಿಯಾಗಿದ್ದರೂ, ಪ್ರಪಂಚದ ವರ್ತಮಾನದ ಶ್ರೇಷ್ಠ ಭಾಗ್ಯದ ಮುಂದೆ ಅಂತ್ಯದ ನಂಬರಿನ ಭಾಗ್ಯಶಾಲಿ ಮಗುವೂ ಸಹ ಅತಿ ಶ್ರೇಷ್ಠವಾಗಿದೆ. ಆದ್ದರಿಂದ ಬೇಹದ್ದಿನ ಬಾಪ್ದಾದಾರವರಿಗೆ ಎಲ್ಲಾ ಮಕ್ಕಳ ಭಾಗ್ಯದ ಮೇಲೆ ಹೆಮ್ಮೆಯಿದೆ. ಬಾಪ್ದಾದಾರವರೂ ಸಹ ಸದಾ ವಾಹ್ ನನ್ನ ಭಾಗ್ಯಶಾಲಿ ಮಕ್ಕಳೇ ವಾಹ್! ವಾಹ್ ಒಂದೇ ಲಗನ್ನಿನಲ್ಲಿ ಮಗ್ನರಾಗಿರುವ ಮಕ್ಕಳೇ! ಇದೇ ಗೀತೆಯನ್ನು ಹಾಡುತ್ತಿರುತ್ತಾರೆ. ಬಾಪ್ದಾದಾರವರು ಇಂದು ವಿಶೇಷವಾಗಿ ಸರ್ವ ಮಕ್ಕಳ ಸ್ನೇಹ ಮತ್ತು ಸಾಹಸವೆರಡೂ ವಿಶೇಷತೆಗಳ ಶುಭಾಷಯಗಳನ್ನು ಕೊಡಲು ಬಂದಿದ್ದಾರೆ.

ಪ್ರತಿಯೊಬ್ಬರ ಯಥಾ ಯೋಗ್ಯ ಸ್ನೇಹದ ರಿಟರ್ನ್ ಸೇವೆಯಲ್ಲಿ ತೋರಿಸಿದ್ದಾರೆ. ಒಂದು ಲಗನ್ನಿನಿಂದ ಒಬ್ಬ ತಂದೆಯನ್ನು ಪ್ರತ್ಯಕ್ಷ ಮಾಡುವ ಸಾಹಸವನ್ನು ಪ್ರತ್ಯಕ್ಷ ರೂಪದಲ್ಲಿ ತೋರಿಸಿದರು. ತಮ್ಮ-ತಮ್ಮ ಕಾರ್ಯವನ್ನು ಉಮ್ಮಂಗ-ಉತ್ಸಾಹದಿಂದ ಸಂಪನ್ನಗೊಳಿಸಿದ್ದಾರೆ. ಈ ಕಾರ್ಯದ ಖುಷಿಯ ಶುಭಾಷಯಗಳನ್ನು ಬಾಪ್ದಾದಾರವರು ಕೊಡುತ್ತಿದ್ದಾರೆ. ದೇಶ-ವಿದೇಶದಿಂದ ಸಮ್ಮುಖ ಬಂದಿರುವವರು ಮತ್ತು ದೂರದಲ್ಲಿ ಕುಳಿತಿದ್ದರೂ ತಮ್ಮ ಹೃದಯದಲ್ಲಿ ಶ್ರೇಷ್ಠ ಸಂಕಲ್ಪದ ಮೂಲಕ ಅಥವಾ ಸೇವೆಯ ಮೂಲಕ ಸಹಯೋಗಿಯಾಗಿದ್ದಾರೆ. ಆದ್ದರಿಂದ ಎಲ್ಲಾ ಮಕ್ಕಳಿಗೆ ಬಾಪ್ದಾದಾರವರು ಸದಾ ಸಫಲತಾ ಭವ, ಸದಾ ಪ್ರತೀ ಕಾರ್ಯದಲ್ಲಿ ಸಂಪನ್ನ ಭವ, ಸದಾ ಪ್ರತ್ಯಕ್ಷ ಪ್ರಮಾಣ ಭವದ ವರದಾನವನ್ನು ಕೊಡುತ್ತಿದ್ದಾರೆ. ಎಲ್ಲರ ಸ್ವಪರಿವರ್ತನೆಯ, ಸೇವೆಯಲ್ಲಿ ಇನ್ನೂ ಮುಂದುವರೆಯುವ ಶುಭ ಉಮ್ಮಂಗ-ಉತ್ಸಾಹದ ಪ್ರತಿಜ್ಞೆಗಳನ್ನು ಬಾಪ್ದಾದಾರವರು ಕೇಳಿದರು. ತಿಳಿಸಿದ್ದೆವಲ್ಲವೆ - ಬಾಪ್ದಾದಾರವರ ಬಳಿ ತಮ್ಮ ಸಾಕಾರ ಪ್ರಪಂಚಕ್ಕಿಂತಲೂ ಭಿನ್ನವಾದ ಶಕ್ತಿಶಾಲಿ ಟಿ.ವಿ.ಯಿದೆ. ತಾವು ಕೇವಲ ಶರೀರದ ಪಾತ್ರವನ್ನು ನೋಡಬಹುದು. ಬಾಪ್ದಾದಾರವರು ಮನಸ್ಸಿನ ಸಂಕಲ್ಪಗಳನ್ನೂ ನೋಡಬಲ್ಲರು. ಪ್ರತಿಯೊಬ್ಬರೂ ಏನೆಲ್ಲಾ ಪಾತ್ರವನ್ನಭಿನಯಿಸಿದಿರಿ ಅದೆಲ್ಲವೂ ಸಂಕಲ್ಪ ಸಹಿತ, ಮನಸ್ಸಿನ ಗತಿ-ವಿಧಿ ಮತ್ತು ತನುವಿನ ಗತಿ-ವಿಧಿಯೆರಡನ್ನೂ ನೋಡಿದರು, ಕೇಳಿಸಿಕೊಂಡರು. ಏನನ್ನು ನೋಡಿರಬಹುದು? ಇಂದಂತು ಶುಭಾಷಯಗಳನ್ನು ಕೊಡುವುದಕ್ಕಾಗಿ ಬಂದಿದ್ದೇವೆ ಆದ್ದರಿಂದ ಬೇರೆ ಮಾತುಗಳನ್ನು ಇಂದು ತಿಳಿಸುವುದಿಲ್ಲ. ಬಾಪ್ದಾದಾ ಮತ್ತು ಜೊತೆಯಲ್ಲಿ ತಮ್ಮ ಸೇವೆಯ ಜೊತೆಗಾರ ಮಕ್ಕಳೆಲ್ಲರೂ ಒಂದು ಮಾತಿನಲ್ಲಿ ಬಹಳ ಖುಷಿಯ ಚಪ್ಪಾಳೆ ಹಾಕಿದರು, ಕೈನ ಚಪ್ಪಾಳೆಯಲ್ಲ, ಖುಷಿಯ ಚಪ್ಪಾಳೆಯನ್ನಾಕಿದರು. ಇಡೀ ಸಂಘಟನೆಯಲ್ಲಿ ಸೇವೆಯ ಮೂಲಕ ಈಗೀಗ ತಂದೆಯನ್ನು ಪ್ರತ್ಯಕ್ಷ ಮಾಡಿಬಿಡೋಣ, ಈಗೀಗ ವಿಶ್ವದಲ್ಲಿ ಧ್ವನಿ ಮೊಳಗಿಸೋಣ...... ಈ ಒಂದು ಉಮ್ಮಂಗ ಮತ್ತು ಉತ್ಸಾಹದ ಸಂಕಲ್ಪವು ಎಲ್ಲರಲ್ಲಿಯೂ ಒಂದೇ ಇತ್ತು. ಭಲೆ ಭಾಷಣೆ ಮಾಡುವವರಿರಬಹುದು, ಭಲೆ ಕೇಳುವವರು, ಭಲೆ ಯಾವುದೆ ಸ್ಥೂಲ ಕಾರ್ಯವನ್ನು ಮಾಡುವವರು, ಎಲ್ಲರಲ್ಲಿಯೂ ಈ ಸಂಕಲ್ಪವು ಖುಷಿಯ ರೂಪದಲ್ಲಿ ಬಹಳ ಚೆನ್ನಾಗಿತ್ತು. ಆದ್ದರಿಂದ ನಾಲ್ಕೂ ಕಡೆಯಲ್ಲಿ ಖುಷಿಯ ಶೋಭೆ, ಪ್ರತ್ಯಕ್ಷ ಮಾಡುವ ಉಮ್ಮಂಗ, ವಾತಾವರಣವನ್ನೂ ಖುಷಿಯ ಪ್ರಕಂಪನಗಳಲ್ಲಿ ತರುವಂತದ್ದಾಗಿತ್ತು. ಮೆಜಾರಿಟಿ ಖುಷಿ ಮತ್ತು ನಿಸ್ವಾರ್ಥ ಸ್ನೇಹ - ಈ ಅನುಭವದ ಪ್ರಸಾದವನ್ನು ತೆಗೆದುಕೊಂಡು ಹೋದರು. ಆದ್ದರಿಂದ ಬಾಪ್ದಾದಾರವರೂ ಸಹ ಮಕ್ಕಳ ಖುಷಿಯಲ್ಲಿ ಖುಷಿಯಾಗುತ್ತಿದ್ದರು. ತಿಳಿಯಿತೆ.

ಗೋಲ್ಡನ್ ಜುಬಿಲಿಯನ್ನಾಚರಿಸಿದಿರಲ್ಲವೆ! ಇನ್ನು ಮುಂದೇನು ಆಚರಿಸುತ್ತೀರಿ? ಡೈಮಂಡ್ ಜುಬಿಲಿಯನ್ನು ಇಲ್ಲಿಯೇ ಆಚರಿಸುತ್ತೀರಾ ಅಥವಾ ತಮ್ಮ ರಾಜ್ಯದಲ್ಲಾಚರಿಸುತ್ತೀರಾ? ಗೋಲ್ಡನ್ ಜುಬಿಲಿಯನ್ನೇಕೆ ಆಚರಿಸಿದಿರಿ? ಗೋಲ್ಡನ್ ಪ್ರಪಂಚವನ್ನು ತರುವುದಕ್ಕಾಗಿ ಆಚರಿಸಿದಿರಲ್ಲವೆ. ಈ ಗೋಲ್ಡನ್ ಜುಬಿಲಿಯಿಂದ ಯಾವ ಶ್ರೇಷ್ಠ ಗೋಲ್ಡನ್ ಸಂಕಲ್ಪವನ್ನು ಮಾಡಿದಿರಿ? ಅನ್ಯರಿಗಂತು ಬಹಳಷ್ಟು ಗೋಲ್ಡನ್ ವಿಚಾರಗಳನ್ನು ತಿಳಿಸಿದಿರಿ. ಒಳ್ಳೊಳ್ಳೆಯದನ್ನು ತಿಳಿಸಿದಿರಿ. ತಮಗಾಗಿ ಯಾವ ವಿಶೇಷ ಗೋಲ್ಡನ್ ಸಂಕಲ್ಪ ಮಾಡಿದಿರಿ? ಅದರಿಂದ ಇಡೀ ವರ್ಷದಲ್ಲಿ ಪ್ರತೀ ಸಂಕಲ್ಪ, ಪ್ರತೀ ಗಳಿಗೆಯೂ ಗೋಲ್ಡನ್ ಆಗಿರಲಿ. ಜನರಂತು ಕೇವಲ ಗೋಲ್ಡನ್ ಮಾರ್ನಿಂಗ್ ಅಥವಾ ಗೋಲ್ಡನ್ ನೈಟ್ ಎಂದು ಹೇಳಿ ಬಿಡುತ್ತಾರೆ ಅಥವಾ ಗೋಲ್ಡನ್ ಈವಿನಿಂಗ್ ಹೇಳುತ್ತಾರೆ. ಆದರೆ ತಾವು ಸರ್ವ ಶ್ರೇಷ್ಠ ಆತ್ಮರ ಪ್ರತೀ ಸೆಕೆಂಡ್ ಗೋಲ್ಡನ್ ಆಗಿರಲಿ. ಗೋಲ್ಡನ್ ಸೆಕೆಂಡ್ ಆಗಲಿ, ಕೇವಲ ಗೋಲ್ಡನ್ ಮಾರ್ನಿಂಗ್ ಅಥವಾ ಗೋಲ್ಡನ್ ನೈಟ್ ಅಲ್ಲ. ಪ್ರತೀ ಸಮಯವೂ ತಮ್ಮ ಎರಡೂ ನಯನಗಳಲ್ಲಿ ಗೋಲ್ಡನ್ ಪ್ರಪಂಚ ಮತ್ತು ಗೋಲ್ಡನ್ ಲೈಟ್ನ ಸ್ವೀಟ್ ಹೋಮ್ (ಶಾಂತಿಧಾಮ) ಇರಲಿ. ಅದು ಗೋಲ್ಡನ್ ಲೈಟ್ ಆಗಿದೆ, ಅದು ಗೋಲ್ಡನ್ ಪ್ರಪಂಚವಾಗಿದೆ - ಅದೇರೀತಿ ಅನುಭವವಾಗಲಿ. ನೆನಪಿದೆಯಲ್ಲವೆ - ಪ್ರಾರಂಭದಲ್ಲಿ ಒಂದು ಚಿತ್ರವನ್ನು ಮಾಡುತ್ತಿದ್ದಿರಿ. ಒಂದು ಕಣ್ಣಲ್ಲಿ ಮುಕ್ತಿ, ಇನ್ನೊಂದು ಕಣ್ಣಲ್ಲಿ ಜೀವನ್ಮುಕ್ತಿ. ಈ ಅನುಭವ ಮಾಡಿಸುವುದು - ಇದೇ ಗೋಲ್ಡನ್ ಜುಬಿಲಿಯ ಗೋಲ್ಡನ್ ಸಂಕಲ್ಪವಾಗಿದೆ. ಇಂತಹ ಸಂಕಲ್ಪವನ್ನು ಎಲ್ಲರೂ ಮಾಡಿದಿರಾ ಅಥವಾ ಕೇವಲ ದೃಶ್ಯವನ್ನು ನೋಡಿ-ನೋಡಿ ಖುಷಿಯಾಗುತ್ತಿದ್ದೀರಾ. ಗೋಲ್ಡನ್ ಜುಬಿಲಿ ಈ ಶ್ರೇಷ್ಠ ಕಾರ್ಯವನ್ನು ಮಾಡಿದೆ. ಕಾರ್ಯಕ್ಕೆ ನಿಮಿತ್ತರಾಗಿರುವವರೆಲ್ಲರೂ ಸಹ ಕಾರ್ಯದ ಜೊತೆಗಾರರಾಗಿದ್ದೀರಿ. ಕೇವಲ ಸಾಕ್ಷಿಯಾಗಿ ನೋಡುವವರಲ್ಲ, ಜೊತೆಗಾರರಾಗಿದ್ದೀರಿ. ವಿಶ್ವ ವಿದ್ಯಾಲಯದ ಗೋಲ್ಡನ್ ಜುಬಿಲಿಯಾಗಿದೆ. ಭಲೆ ಒಂದು ದಿನದ ವಿದ್ಯಾರ್ಥಿಯೇ ಆಗಿರಲಿ, ಅವರದೂ ಗೋಲ್ಡನ್ ಜುಬಿಲಿಯಾಗಿದೆ. ಇನ್ನೂ ಮಾಡಿ-ಮಾಡಲ್ಪಟ್ಟಿರುವ ಜುಬಿಲಿಯಲ್ಲಿ ತಲುಪಿದ್ದೀರಿ. ಮಾಡಿರುವ ಪರಿಶ್ರಮವನ್ನು ಇವರು ಮಾಡಿದರು ಮತ್ತು ಆಚರಿಸುವ ಸಮಯದಲ್ಲಿ ತಾವೆಲ್ಲರೂ ತಲುಪಿ ಬಿಟ್ಟಿರಿ. ಅಂದಾಗ ಎಲ್ಲರಿಗೂ ಗೋಲ್ಡನ್ ಜುಬಿಲಿಯ ಪ್ರಯುಕ್ತವಾಗಿ ಬಾಪ್ದಾದಾರವರೂ ಸಹ ಶುಭಾಷಯಗಳನ್ನು ಕೊಡುತ್ತಾರೆ. ಎಲ್ಲರೂ ಹೀಗೆಯೇ ತಿಳಿಯುತ್ತೀರಲ್ಲವೆ! ಕೇವಲ ನೋಡುವವರಂತು ಆಗಿಲ್ಲ ಅಲ್ಲವೆ! ಆಗುವವರಾಗಿದ್ದೀರಾ ಅಥವಾ ನೋಡುವವರಾ! ನೋಡುವುದಂತು ಪ್ರಪಂಚದಲ್ಲಿ ಬಹಳಷ್ಟಿದೆ. ಆದರೆ ಇಲ್ಲಿ ನೋಡುವುದು ಅರ್ಥಾತ್ ಹಾಗೆಯೇ ಆಗುವುದು. ಕೇಳುವುದು ಅರ್ಥಾತ್ ಆಗುವುದು. ಅಂದಾಗ ಯಾವ ಸಂಕಲ್ಪವನ್ನು ಮಾಡಿದಿರಿ? ಪ್ರತೀ ಸೆಕೆಂಡ್ ಗೋಲ್ಡನ್ ಆಗಿರಲಿ. ಪ್ರತೀ ಸಂಕಲ್ಪವು ಗೋಲ್ಡನ್ ಆಗಿರಲಿ. ಸದಾ ಪ್ರತಿಯೊಂದು ಆತ್ಮನ ಬಗ್ಗೆ ಸ್ನೇಹದ ಖುಷಿಯ ಸುವರ್ಣ ಪುಷ್ಪಗಳ ಸುರಿಮಳೆ ಮಾಡುತ್ತಿರಿ. ಭಲೆ ಶತ್ರುವೇ ಆಗಿರಲಿ ಆದರೆ ಸ್ನೇಹದ ಪುಷ್ಪಗಳು ಶತ್ರುವನ್ನೂ ಮಿತ್ರನನ್ನಾಗಿ ಮಾಡಿ ಬಿಡುತ್ತದೆ. ಭಲೆ ಯಾರೇ ತಮಗೆ ಮಾನ್ಯತೆ ಕೊಡಲಿ ಅಥವಾ ಕೊಡದಿರಲಿ, ಆದರೆ ತಾವು ಸದಾ ಸ್ವಮಾನದಲ್ಲಿದ್ದು ಅನ್ಯರನ್ನೂ ಸ್ನೇಹಿ ದೃಷ್ಟಿಯಿಂದ, ಸ್ನೇಹಿ ವೃತ್ತಿಯಿಂದ ಆತ್ಮಿಕ ಮಾನ್ಯತೆಯನ್ನು ಕೊಡುತ್ತಾ ನಡೆಯಿರಿ. ಅವರು ತಮ್ಮನ್ನು ಒಪ್ಪಲಿ ಅಥವಾ ಒಪ್ಪದಿರಲಿ ಆದರೆ ತಾವು ಅವರನ್ನು ಮಧುರ ಸಹೋದರ, ಮಧುರ ಸಹೋದರಿಯೆಂದೇ ಒಪ್ಪಿಕೊಂಡು ನಡೆಯಿರಿ. ಅವರು ಒಪ್ಪಿಕೊಳ್ಳದಿರಬಹುದು, ತಾವಂತು ಒಪ್ಪಬಹುದಲ್ಲವೆ. ಅವರು ಕಲ್ಲನ್ನೆಸೆಯಲಿ ತಾವು ರತ್ನಗಳನ್ನು ಕೊಡಿ. ತಾವೂ ಸಹ ಕಲ್ಲೆಸೆಯದಿರಿ ಏಕೆಂದರೆ ತಾವು ರತ್ನಾಗರ ತಂದೆಯ ಮಕ್ಕಳಾಗಿದ್ದೀರಿ. ರತ್ನಗಳ ಖಜಾನೆಯ ಮಾಲೀಕರಾಗಿದ್ದೀರಿ. ಮಲ್ಟಿ-ಮಲ್ಟಿ-ಮಲ್ಟಿ ಮಿಲಿನಿಯರ್ ಆಗಿದ್ದೀರಿ. ಅವರು ಕೊಟ್ಟಾಗ ನಾನು ಕೊಡುತ್ತೇನೆ ಎಂದು ಯೋಚಿಸುವುದಕ್ಕೆ ತಾವು ಭಿಕಾರಿಯಲ್ಲ. ಇದು ಭಿಕಾರಿ ಸಂಸ್ಕಾರವಾಗಿದೆ. ದಾತನ ಮಕ್ಕಳೆಂದಿಗೂ ಸಹ ತೆಗೆದುಕೊಳ್ಳುವ ಕೈ ಚಾಚುವುದಿಲ್ಲ. ಬುದ್ಧಿಯಿಂದಲೂ ಸಹ ಈ ಸಂಕಲ್ಪ ಮಾಡುವುದು - ಇವರು ಮಾಡಿದರೆ ನಾನು ಮಾಡುವೆನು, ಇವರು ಸ್ನೇಹ ಕೊಟ್ಟರೆ ನಾನು ಕೊಡುವೆನು. ಇವರು ಮಾನ್ಯತೆ ಕೊಟ್ಟರೆ ನಾನು ಕೊಡುವೆನು. ಇದೂ ಸಹ ಕೈ ಚಾಚುವುದಾಗಿದೆ. ಇದೂ ಸಹ ರಾಯಲ್ ಭಿಕಾರಿತನವಾಗಿದೆ, ಇದರಲ್ಲಿ ನಿಷ್ಕಾಮ ಯೋಗಿಯಾಗಿರಿ, ಆಗಲೇ ಗೋಲ್ಡನ್ ಪ್ರಪಂಚದ ಖುಷಿಯ ಪ್ರಕಂಪನಗಳು ವಿಶ್ವದವರೆಗೂ ತಲುಪುತ್ತದೆ. ಹೇಗೆ ವೈಜ್ಞಾನಿಕ ಶಕ್ತಿಯುಳ್ಳವರು ಇಡೀ ವಿಶ್ವವನ್ನೇ ಸಮಾಪ್ತಿ ಮಾಡುವ ಸಾಮಗ್ರಿಗಳನ್ನು ಬಹಳ ಶಕ್ತಿಶಾಲಿಯಾದುದನ್ನೇ ಮಾಡಿಟ್ಟಿದ್ದಾರೆ, ಅದು ಸ್ವಲ್ಪ ಸಮಯದಲ್ಲಿಯೇ ಕಾರ್ಯವನ್ನು ಸಮಾಪ್ತಿ ಮಾಡಿ ಬಿಡಲಿ ಎಂದು. ವೈಜ್ಞಾನಿಕ ಶಕ್ತಿಯನ್ನು ಇಷ್ಟು ರಿಫೈನ್ ಆಗಿ ಮಾಡುತ್ತಿದ್ದಾರೆ. ತಾವು ಜ್ಞಾನದ ಶಕ್ತಿಯುಳ್ಳವರು ಇಂತಹ ಶಕ್ತಿಶಾಲಿ ವೃತ್ತಿ ಮತ್ತು ವಾಯುಮಂಡಲವನ್ನಾಗಿ ಮಾಡಿರಿ, ಅದರಿಂದ ಸ್ವಲ್ಪ ಸಮಯದಲ್ಲಿಯೇ ನಾಲ್ಕೂ ಕಡೆಯಲ್ಲಿ ಖುಷಿಯ ಪ್ರಕಂಪನ, ಸೃಷ್ಟಿಯ ಶ್ರೇಷ್ಠ ಭವಿಷ್ಯದ ಪ್ರಕಂಪನ, ಬಹಳ ಬೇಗನೆ ಹರಡಿ ಬಿಡಲಿ. ಅರ್ಧ ಪ್ರಪಂಚವೀಗ ಅರ್ಧ ಸತ್ತು ಹೋಗಿದೆ. ಭಯದ ಮೃತ್ಯುವಿನ ಶಯನದ ಮೇಲೆ ಮಲಗಿದೆ. ಅದಕ್ಕೆ ಖುಷಿಯ ಪ್ರಕಂಪನಗಳ ಆಮ್ಲಜನಕವನ್ನು ಕೊಡಿ - ಇದೇ ಗೋಲ್ಡನ್ ಜುಬಿಲಿಯ ಗೋಲ್ಡನ್ ಸಂಕಲ್ಪವು ಸದಾ ಇಮರ್ಜ್ ರೂಪದಲ್ಲಿರಲಿ. ಏನು ಮಾಡಬೇಕು- ತಿಳಿಯಿತೆ. ಈಗ ಇನ್ನೂ ಗತಿಯನ್ನು ತೀವ್ರಗೊಳಿಸಬೇಕಾಗಿದೆ. ಈಗಿನವರೆಗೆ ಏನು ಮಾಡಿದಿರಿ, ಅದೂ ಸಹ ಬಹಳಒಳ್ಳೆಯದನ್ನೇ ಮಾಡಿದಿರಿ. ಈಗ ಮುಂದೆ ಇನ್ನೂ ಒಳ್ಳೆಯದಕ್ಕಿಂತಲೂ ಒಳ್ಳೆಯದನ್ನು ಮಾಡುತ್ತಾ ಸಾಗಿರಿ. ಒಳ್ಳೆಯದು.

ಡಬಲ್ ವಿದೇಶಿಗಳಿಗೆ ಬಹಳ ಉಮ್ಮಂಗವಿದೆ. ಈಗಿರುವುದಂತು ಡಬಲ್ ವಿದೇಶಿಗಳ ಚಾನ್ಸ್. ಬಹಳಷ್ಟು ತಲುಪಿ ಬಿಟ್ಟಿದ್ದೀರಿ. ತಿಳಿಯಿತೆ! ಈಗ ಎಲ್ಲರಿಗೂ ಖುಷಿಯ ಟೋಲಿಯನ್ನು ತಿನ್ನಿಸಿರಿ. ದಿಲ್ಖುಷ್ ಮಿಠಾಯಿ ಇರುತ್ತದೆಯಲ್ಲವೆ! ಅದನ್ನು ಚೆನ್ನಾಗಿ ಹಂಚಿರಿ. ಒಳ್ಳೆಯದು - ಸೇವಾಧಾರಿಗಳೂ ಸಹ ಖುಷಿಯಲ್ಲಿ ನರ್ತಿಸುತ್ತಿದ್ದಾರೆ ಅಲ್ಲವೆ! ನರ್ತಿಸುವುದರಿಂದ ಸುಸ್ತು ಸಮಾಪ್ತಿಯಾಗಿ ಬಿಡುತ್ತದೆ. ಅಂದಾಗ ಸೇವೆಯ ಅಥವಾ ಖುಷಿಯ ನರ್ತನವನ್ನು ಎಲ್ಲರಿಗೂ ಮಾಡಿ ತೋರಿಸಿದಿರಾ? ಏನು ಮಾಡಿದಿರಿ? ನೃತ್ಯವನ್ನು ತೋರಿಸಿದಿರಲ್ಲವೆ! ಒಳ್ಳೆಯದು.

ಸರ್ವಶ್ರೇಷ್ಠ ಭಾಗ್ಯಶಾಲಿ, ವಿಶೇಷ ಆತ್ಮರಿಗೆ, ಪ್ರತೀ ಸೆಕೆಂಡ್ ಪ್ರತೀ ಸಂಕಲ್ಪವನ್ನು ಸ್ವರ್ಣೀಮವನ್ನಾಗಿ ಮಾಡುವಂತಹ ಎಲ್ಲಾ ಆಜ್ಞಾಕಾರಿ ಮಕ್ಕಳಿಗೆ, ಸದಾ ದಾತನ ಮಕ್ಕಳಾಗಿ ಸರ್ವರ ಜೋಳಿಗೆಯನ್ನು ತುಂಬುವಂತಹ ಸಂಪನ್ನ ಮಕ್ಕಳಿಗೆ, ಸದಾ ವಿದಾತಾ ಮತ್ತು ವರದಾತನಾಗಿ ಸರ್ವರಿಗೂ ಮುಕ್ತಿ ಅಥವಾ ಜೀವನ್ಮುಕ್ತಿಯ ಪ್ರಾಪ್ತಿಯನ್ನು ಮಾಡಿಸುವಂತಹ ಸದಾ ಸಂಪನ್ನ ಮಕ್ಕಳಿಗೆ, ಬಾಪ್ದಾದಾರವರ ಸುವರ್ಣ ಸ್ನೇಹದ ಸುವರ್ಣ ಖುಷಿಯ ಪುಷ್ಪಗಳ ಸಹಿತವಾಗಿ ನೆನಪು-ಪ್ರೀತಿ ಶುಭಾಷಯಗಳು ಮತ್ತು ನಮಸ್ತೆ.

ಪಾರ್ಟಿಯೊಂದಿಗೆ:

ಸದಾ ತಂದೆ ಮತ್ತು ಅಸ್ತಿಯೆರಡರ ನೆನಪಿರುತ್ತದೆಯೇ? ತಂದೆಯ ನೆನಪು ಸ್ವತಹವಾಗಿಯೇ ಆಸ್ತಿಯದೂ ನೆನಪನ್ನು ತರಿಸುತ್ತದೆ ಮತ್ತು ಆಸ್ತಿಯು ನೆನಪಿದೆಯೆಂದರೆ ತಂದೆಯ ನೆನಪು ಸ್ವತಹವಾಗಿಯೇ ಇದೆ. ತಂದೆ ಮತ್ತು ಆಸ್ತಿ - ಎರಡು ಜೊತೆ ಜೊತೆಗಿದೆ. ತಂದೆಯನ್ನು ನೆನಪು ಮಾಡುತ್ತೀರಿ ಆಸ್ತಿಗಾಗಿ. ಒಂದುವೇಳೆ ಆಸ್ತಿಯ ಪ್ರಾಪ್ತಿಯಾಗಲಿಲ್ಲವೆಂದರೆ ತಂದೆಯ ನೆನಪನ್ನೇಕೆ ಮಾಡುವುದು! ಅಂದಾಗ ತಂದೆ ಮತ್ತು ಆಸ್ತಿ - ಇದೇ ನೆನಪು ಸದಾಕಾಲ ಸಂಪನ್ನರನ್ನಾಗಿ ಮಾಡುತ್ತದೆ. ಖಜಾನೆಗಳಿಂದ ಸಂಪನ್ನ ಮತ್ತು ದುಃಖ ನೋವುಗಳಿಂದ ದೂರ. ಎರಡೂ ಲಾಭವಿದೆ. ದುಃಖದಿಂದ ದೂರವಾಗಿ ಬಿಡುತ್ತೀರಿ ಮತ್ತು ಖಜಾನೆಗಳಿಂದ ಸಂಪನ್ನರಾಗಿ ಬಿಡುತ್ತೀರಿ. ಇಂತಹ ಸದಾಕಾಲದ ಪ್ರಾಪ್ತಿಯನ್ನು ತಂದೆಯಲ್ಲದೆ ಮತ್ತ್ಯಾರೂ ಮಾಡಿಸಲು ಸಾಧ್ಯವಿಲ್ಲ. ಇದೇ ಸ್ಮೃತಿಯು ಸದಾ ಸಂತುಷ್ಟ, ಸಂಪನ್ನರನ್ನಾಗಿ ಮಾಡಿಸುತ್ತದೆ. ಹೇಗೆ ತಂದೆಯು ಸಾಗರನಾಗಿದ್ದಾರೆ, ಸದಾ ಸಂಪನ್ನನಾಗಿದ್ದಾರೆ. ಸಾಗರವನ್ನೆಷ್ಟಾದರೂ ಒಣಗಿಸಲಿ, ಆದರೂ ಸಾಗರವು ಸಮಾಪ್ತಿಯಾಗುವುದಿಲ್ಲ. ಸಾಗರವು ಸಂಪನ್ನವಾಗಿದೆ. ಅಂದಾಗ ತಾವೆಲ್ಲರೂ ಸದಾ ಸಂಪನ್ನ ಆತ್ಮರಾಗಿದ್ದೀರಲ್ಲವೆ. ಖಾಲಿಯಾಗುತ್ತೀರೆಂದರೆ ಎಲ್ಲಿಯಾದರೂ ತೆಗೆದುಕೊಳ್ಳುವುದಕ್ಕಾಗಿ ಕೈ ಚಾಚಬೇಕಾಗುತ್ತದೆ. ಆದರೆ ಸಂಪನ್ನ ಆತ್ಮನು ಸದಾ ಖುಷಿಯ ಉಯ್ಯಾಲೆಯಲ್ಲಿ ತೂಗುತ್ತಿರುತ್ತಾನೆ. ಸುಖದ ಉಯ್ಯಾಲೆಯಲ್ಲಿ ತೂಗಾಡುತ್ತಿರುತ್ತಾನೆ. ಅಂದಮೇಲೆ ಇಂತಹ ಶ್ರೇಷ್ಠ ಆತ್ಮರಾಗಿ ಬಿಟ್ಟಿರಿ. ಸದಾ ಸಂಪನ್ನರಾಗಲೇಬೇಕು. ಪರಿಶೀಲನೆ ಮಾಡಿರಿ - ಸಿಕ್ಕಿರುವ ಶಕ್ತಿಗಳ ಖಜಾನೆಯನ್ನು ಎಲ್ಲಿಯವರೆಗೆ ಕಾರ್ಯದಲ್ಲಿ ಉಪಯೋಗಿಸಲಾಯಿತು?

ಸದಾ ಸಾಹಸ ಮತ್ತು ಉಮ್ಮಂಗದ ರೆಕ್ಕೆಗಳಿಂದ ಹಾರುತ್ತಿರಿ ಮತ್ತು ಅನ್ಯರನ್ನೂ ಹಾರಿಸುತ್ತಿರಿ. ಸಾಹಸವಿದೆ, ಉಮ್ಮಂಗ-ಉತ್ಸಾಹವಿಲ್ಲವೆಂದರೆ ಸಫಲತೆಯೂ ಸಹ ಇಲ್ಲ. ಉಮ್ಮಂಗವಿದೆ, ಸಾಹಸವಿಲ್ಲವೆಂದರೂ ಸಫಲತೆಯಿಲ್ಲ. ಎರಡೂ ಜೊತೆಯಿರುತ್ತದೆಯೆಂದರೆ ಹಾರುವ ಕಲೆಯಿದೆ. ಆದ್ದರಿಂದ ಸದಾ ಸಾಹಸ ಮತ್ತು ಉಮ್ಮಂಗದ ರೆಕ್ಕೆಗಳಿಂದ ಹಾರುತ್ತಿರಿ. ಒಳ್ಳೆಯದು.

ಅವ್ಯಕ್ತ ಮುರುಳಿಗಳಿಂದ ಆಯ್ಕೆಯಾಗಿರುವ ಅಮೂಲ್ಯ ಮಹಾವಾಕ್ಯಗಳು :

108 ರತ್ನಗಳ ವೈಜಯಂತಿ ಮಾಲೆಯಲ್ಲಿ ಬರುವುದಕ್ಕಾಗಿ ಸಂಸ್ಕಾರ ಮಿಲನದ ರಾಸ್ ಮಾಡಿರಿ –

1. ಯಾವುದೇ ಮಾಲೆಯನ್ನಾದರೂ ಯಾವಾಗ ಮಾಡುತ್ತೀರೆಂದರೆ ಒಂದು ಮಣಿಯು ಇನ್ನೊಂದು ಮಣಿಯೊಂದಿಗೆ ಜೊತೆಯಿರುತ್ತದೆ. ವೈ ಜಯಂತಿ ಮಾಲೆಯಲ್ಲಿಯೂ ಸಹ ಭಲೆ ಕೆಲವು 108ನೇ ನಂಬರ್ ಆಗಿರಲಿ ಆದರೆ ಮಣಿಯು ಮಣಿಯೊಂದಿಗೆ ಸೇರಿರುತ್ತದೆ. ಅಂದಾಗ ಎಲ್ಲರಿಗೂ ಈ ಅನುಭೂತಿಯಾಗಲಿ - ಇವರಂತು ಮಾಲೆಯ ಸಮಾನ ಪೋಣಿಸಲ್ಪಟ್ಟಂತಹ ಮಣಿಗಳಾಗಿದ್ದಾರೆ. ವಿವಿಧ ಸಂಸ್ಕಾರಗಳಿದ್ದರೂ ಸಹ ಸಮೀಪ ಕಾಣಿಸುತ್ತಿರಲಿ.

2. ಒಬ್ಬರಿನ್ನೊಬ್ಬರ ಸಂಸ್ಕಾರಗಳನ್ನು ತಿಳಿದುಕೊಂಡು, ಒಬ್ಬರಿನ್ನೊಬ್ಬರ ಸ್ನೇಹದಲ್ಲಿ ಒಬ್ಬರಿನ್ನೊಬ್ಬರೊಂದಿಗೆ ಸಂಸ್ಕಾರ ಮಿಲನ ಮಾಡಿಕೊಂಡಿರುವುದು - ಇದು ಮಾಲೆಯ ಮಣಿಗಳ ವಿಶೇಷತೆಯಾಗಿದೆ. ಆದರೆ ಒಬ್ಬರಿನ್ನೊಬ್ಬರ ಸ್ನೇಹಿಯು ಆಗಾಗುತ್ತಾರೆ, ಯಾವಾಗ ಸಂಸ್ಕಾರ ಮತ್ತು ಸಂಕಲ್ಪಗಳನ್ನು ಒಬ್ಬರಿನ್ನೊಬ್ಬರೊಂದಿಗೆ ಮಿಲನ ಮಾಡಿಸುತ್ತಾರೆ, ಇದಕ್ಕಾಗಿ ಸರಳತೆಯ ಗುಣವನ್ನು ಧಾರಣೆ ಮಾಡಿಕೊಳ್ಳಿರಿ.

3. ಈಗಿನವರೆಗೆ ಸ್ತುತಿಯ ಆಧಾರದ ಮೇಲೆ ಸ್ಥಿತಿಯಿದೆ, ಯಾವ ಕರ್ಮವನ್ನು ಮಾಡುತ್ತೀರಿ, ಅದರ ಫಲದ ಇಚ್ಛೆಯಿರುತ್ತದೆ. ಸ್ತುತಿಯಾಗುವುದಿಲ್ಲವೆಂದರೆ ಸ್ಥಿತಿಯಿರುವುದಿಲ್ಲ. ನಿಂದನೆಯಾಗುತ್ತದೆಯೆಂದರೆ ಧನಿಯನ್ನೂ(ತಂದೆ) ಮರೆತು ನಿರ್ಧನಿಕರಾಗಿ ಬಿಡುತ್ತೀರಿ. ನಂತರ ಸಂಸ್ಕಾರಗಳ ಘರ್ಷಣೆಯೂ ಪ್ರಾರಂಭವಾಗಿ ಬಿಡುತ್ತದೆ. ಇವೆರಡೇ ಮಾತುಗಳು ಮಾಲೆಯಿಂದ ಹೊರಕ್ಕೆ ಕಳುಹಿಸಿ ಬಿಡುತ್ತದೆ. ಆದ್ದರಿಂದ ಸ್ತುತಿ ಮತ್ತು ನಿಂದನೆ ಎರಡರಲ್ಲಿ ಸಮಾನ ಸ್ಥಿತಿಯನ್ನಾಗಿ ಮಾಡಿಕೊಳ್ಳಿರಿ.

4. ಸಂಸ್ಕಾರ ಮಿಲನವಾಗಲು ಎಲ್ಲಿ ಮಾಲೀಕರಾಗಿ ನಡೆಯಬೇಕು ಅಲ್ಲಿ ಬಾಲಕರಾಗಬಾರದು ಮತ್ತು ಎಲ್ಲಿ ಬಾಲಕರಾಗಬೇಕು ಅಲ್ಲಿ ಮಾಲೀಕರಾಗಬಾರದು. ಬಾಲಕತನ ಅರ್ಥಾತ್ ನಿಸ್ಸಂಕಲ್ಪ. ಯಾವುದೇ ಆಜ್ಞೆಯು ಸಿಗಲಿ, ಡೈರೆಕ್ಷನ್ ಸಿಗಲಿ, ಅದರಂತೆ ನಡೆಯಬೇಕು. ಮಾಲೀಕರಾಗಿ ತಮ್ಮ ಸಲಹೆಯನ್ನು ಕೊಡಿ ನಂತರ ಬಾಲಕರಾಗಿ ಬಿಡುತ್ತೀರೆಂದರೆ ಘರ್ಷಣೆಯಿಂದ ಪಾರಾಗಿ ಬಿಡುತ್ತೀರಿ.

5. ಸರ್ವೀಸಿನಲ್ಲಿ ಸಫಲತೆಗೆ ಆಧಾರವಾಗಿದೆ - ನಮ್ರತೆ. ಎಷ್ಟು ನಮ್ರತೆಯೋ ಅಷ್ಟು ಸಫಲತೆ. ನಮ್ರತೆಯು ಬರುತ್ತದೆ ನಿಮಿತ್ತನೆಂದು ತಿಳಿಯುವುದರಿಂದ. ನಮ್ರತೆಯ ಗುಣದಿಂದ ಎಲ್ಲರೂ ನಮಸ್ಕಾರ ಮಾಡುತ್ತಾರೆ. ಯಾರು ಸ್ವಯಂ ಬಾಗುತ್ತಾರೆ, ಅವರ ಮುಂದೆ ಎಲ್ಲರೂ ಬಾಗುತ್ತಾರೆ. ಆದ್ದರಿಂದ ಶರೀರವನ್ನು ನಿಮಿತ್ತವಷ್ಟೇ ಎಂದು ತಿಳಿದುಕೊಂಡು ನಡೆಯಿರಿ ಮತ್ತು ಸರ್ವೀಸಿನಲ್ಲಿ ತಮ್ಮನ್ನು ನಿಮಿತ್ತನೆಂದು ತಿಳಿದುನಡೆದಾಗ ನಮ್ರತೆಯು ಬರುತ್ತದೆ. ಎಲ್ಲಿ ನಮ್ರತೆಯಿದೆ ಅಲ್ಲಿ ಘರ್ಷಣೆಯಾಗಲು ಸಾಧ್ಯವಿಲ್ಲ. ಸ್ವತಹವಾಗಿ ಸಂಸ್ಕಾರ ಮಿಲನವಾಗಿ ಬಿಡುತ್ತದೆ.

6. ಮನಸ್ಸಿನಲ್ಲಿ ಏನೆಲ್ಲಾ ಸಂಕಲ್ಪಗಳು ಉತ್ಪನ್ನವಾಗುತ್ತದೆ, ಅದರಲ್ಲಿ ಸತ್ಯತೆ ಮತ್ತು ಸ್ವಚ್ಛತೆಯಿರಬೇಕು. ಒಳಗೆ ಯಾವುದೇ ವಿಕರ್ಮದ ಕೊಳಕಿರಬಾರದು. ಯಾವುದೇ ಭಾವ-ಸ್ವಭಾವ, ಹಳೆಯ ಸಂಸ್ಕಾರಗಳ ಕೊಳಕೂ ಸಹ ಇರಬಾರದು. ಯಾರು ಹೀಗೆ ಸ್ವಚ್ಛವಾಗಿರುತ್ತಾರೆಯೋ ಅವರು ಸತ್ಯವಾಗಿರುತ್ತಾರೆ ಮತ್ತು ಯಾರು ಸತ್ಯವಾಗಿರುತ್ತಾರೆ ಅವರು ಎಲ್ಲರಿಗೂ ಪ್ರಿಯವಾಗುತ್ತಾರೆ. ಎಲ್ಲರ ಪ್ರಿಯರಾಗಿ ಬಿಡುತ್ತೀರೆಂದರೆ, ಸಂಸ್ಕಾರ ಮಿಲನದ ರಾಸ್ ಆಗಿ ಬಿಡುತ್ತದೆ. ಸತ್ಯವಾಗಿರುವವರ ಮೇಲೆ ಪ್ರಭು ಪ್ರಸನ್ನನಾಗಿ ಬಿಡುತ್ತಾರೆ.

7. ಸಂಸ್ಕಾರ ಮಿಲನದ ರಾಸ್ ಮಾಡುವುದಕ್ಕಾಗಿ ತಮ್ಮ ಸ್ವಭಾವವನ್ನು ಸರಳ ಮತ್ತು ಆಕ್ಟೀವ್ ಮಾಡಿಕೊಳ್ಳಿರಿ. ಸರಳ ಅರ್ಥಾತ್ ತಮ್ಮ ಪುರುಷಾರ್ಥದಲ್ಲಿ, ಸಂಸ್ಕಾರಗಳಲ್ಲಿ ಹೊರೆಯಿರುವಂತಿರಬಾರದು. ಸರಳವಾಗಿರುತ್ತೀರೆಂದರೆ ಆಕ್ಟೀವ್ ಇದ್ದೀರಿ. ಸರಳವಾಗಿರುವುದರಿಂದ ಎಲ್ಲಾ ಕಾರ್ಯಗಳೂ ಸಹಜ, ಪುರುಷಾರ್ಥವೂ ಸಹಜವಾಗಿ ಬಿಡುತ್ತದೆ. ಸ್ವಯಂ ಸರಳವಾಗಿರುವುದಿಲ್ಲವೆಂದರೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನಂತರ ತಮ್ಮ ಸಂಸ್ಕಾರ, ತಮ್ಮ ಬಲಹೀನತೆಗಳು ಕಷ್ಟದ ರೂಪದಲ್ಲಿ ಕಾಣಿಸುತ್ತದೆ.

8. ಸಂಸ್ಕಾರ ಮಿಲನದ ರಾಸ್ ಆಗಾಗುತ್ತದೆ, ಯಾವಾಗ ಪ್ರತಿಯೊಬ್ಬರ ವಿಶೇಷತೆಯನ್ನು ನೋಡುತ್ತೀರಿ ಮತ್ತು ಸ್ವಯಂನ್ನು ವಿಶೇಷ ಆತ್ಮನೆಂದು ತಿಳಿದು ವಿಶೇಷತೆಗಳಿಂದ ಸಂಪನ್ನರಾಗಿರಿ. ಇದು ನನ್ನ ಸಂಸ್ಕಾರವಾಗಿದೆ, ಇದು ನನ್ನ ಸಂಸ್ಕಾರವೆನ್ನುವ ಶಬ್ಧವೂ ಸಮಾಪ್ತಿಯಾಗಿ ಬಿಡಲಿ. ಇಲ್ಲಿಯವರೆಗೆ ಸಮಾಪ್ತಿಯಾಗಬೇಕು, ಅದರಿಂದ ಸ್ವಭಾವವೂ ಬದಲಾಗಿ ಬಿಡಲಿ. ಯಾವಾಗ ಪ್ರತಿಯೊಬ್ಬರ ಸ್ವಭಾವವು ಬದಲಾಗುತ್ತದೆ, ಆಗ ತಮ್ಮ ಅವ್ಯಕ್ತ ಲಕ್ಷಣಗಳಾಗುತ್ತದೆ.

9. ಬಾಪ್ದಾದಾರವರು ಮಕ್ಕಳನ್ನು ವಿಶ್ವ ಮಹಾರಾಜನನ್ನಾಗಿ ಮಾಡುವುದಕ್ಕಾಗಿ ವಿದ್ಯೆಯನ್ನು ಓದಿಸುತ್ತಾರೆ. ವಿಶ್ವ ಮಹಾರಾಜನಾಗುವವರು ಸರ್ವರ ಸ್ನೇಹಿಯಾಗುತ್ತಾರೆ. ಹೇಗೆ ತಂದೆಯು ಸರ್ವರ ಸ್ನೇಹಿ ಮತ್ತು ಸರ್ವರು ಅವರ ಸ್ನೇಹಿಯಾಗುತ್ತಾರೆ, ಹಾಗೆಯೇ ಒಬ್ಬೊಬ್ಬರ ಆಂತರ್ಯದಿಂದ ಅವರ ಪ್ರತಿ ಸ್ನೇಹದ ಪುಷ್ಫಗಳನ್ನು ಹಾಕುತ್ತಾರೆ. ಯಾವಾಗ ಸ್ನೇಹದ ಹೂಗಳನ್ನು ಇಲ್ಲಿ ಹಾಕುತ್ತಾರೆ, ಆಗ ಜಡ ಚಿತ್ರಗಳ ಮೇಲೂ ಹೂಗಳನ್ನು ಹಾಕುತ್ತಾರೆ. ಅಂದಾಗ ಲಕ್ಷ್ಯವನ್ನಿಡಿ- ಸರ್ವರ ಸ್ನೇಹ ಪುಷ್ಪಗಳ ಪಾತ್ರರಾಗಿರಿ. ಸ್ನೇಹವು ಸಹಯೋಗ ಕೊಡುವುದರಿಂದ ಸಿಗುತ್ತದೆ.

10. ಸದಾ ಇದೇ ಲಕ್ಷ್ಯವನ್ನಿಡಿ - ನಮ್ಮ ಚಲನೆಯ ಮೂಲಕ ಯಾರಿಗೂ ದುಃಖವಾಗಬಾರದು. ನನ್ನ ಚಲನೆ, ಸಂಕಲ್ಪ, ವಾಣಿ ಮತ್ತು ಪ್ರತೀ ಕರ್ಮವು ಸುಖ ಕೊಡುವುದಾಗಿರಲಿ. ಇದು ಬ್ರಾಹ್ಮಣ ಕುಲದ ರೀತಿ, ಇದೇ ರೀತಿಯನ್ನು ತಮ್ಮದಾಗಿಸಿಕೊಳ್ಳುತ್ತೀರೆಂದರೆ ಸಂಸ್ಕಾರ ಮಿಲನದ ರಾಸ್ ಆಗಿ ಬಿಡುತ್ತದೆ.

ವರದಾನ:

ವರದಾನ: ಈಶ್ವರೀಯ ರಾಯಲ್ಟಿಯ ಸಂಸ್ಕಾರದ ಮೂಲಕ ಪ್ರತಿಯೊಬ್ಬರ ವಿಶೇಷತೆಗಳ ವರ್ಣನೆ ಮಾಡುವಂತಹ ಪುಣ್ಯಾತ್ಮ ಭವ.

ಸದಾ ಸ್ವಯಂನ್ನು ವಿಶೇಷ ಆತ್ಮನೆಂದು ತಿಳಿದುಕೊಂಡು ಪ್ರತೀ ಸಂಕಲ್ಪ ಹಾಗೂ ಕರ್ಮವನ್ನು ಮಾಡುವುದು ಮತ್ತು ಪ್ರತಿಯೊಬ್ಬರಲ್ಲಿ ವಿಶೇಷತೆಯನ್ನು ನೋಡುವುದು, ವರ್ಣನೆ ಮಾಡುವುದು, ಸರ್ವರ ಪ್ರತಿ ವಿಶೇಷ ಆತ್ಮನನ್ನಾಗಿ ಮಾಡುವ ಶುಭ ಕಲ್ಯಾಣದ ಕಾಮನೆಯನ್ನಿಡುವುದು - ಇದೇ ಈಶ್ವರೀಯ ರಾಯಲ್ಟಿಯಾಗಿದೆ. ರಾಯಲ್ ಆತ್ಮರು ಅನ್ಯರ ಮೂಲಕ ಬಿಡುವಂತಹ ವಸ್ತುವನ್ನು ತನ್ನಲ್ಲಿ ಧಾರಣೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಸದಾ ಗಮನವಿರಲಿ - ಯಾರದೇ ಬಲಹೀನತೆ ಅಥವಾ ಅವಗುಣವನ್ನು ನೋಡುವ ಕಣ್ಣು ಸದಾ ಬಂಧ್ ಆಗಿರಲಿ. ಒಬ್ಬರಿನ್ನೊಬ್ಬರ ಗುಣಗಾನ ಮಾಡಿರಿ, ಸ್ನೇಹ-ಸಹಯೋಗದ ಪುಷ್ಫಗಳ ಲೇವಾದೇವಿ ಮಾಡಿರಿ - ಆಗ ಪುಣ್ಯಾತ್ಮರಾಗಿ ಬಿಡುತ್ತೀರಿ.

ಸ್ಲೋಗನ್:

ಸ್ಲೋಗನ್: ವರದಾನದ ಶಕ್ತಿಯು ಪರಿಸ್ಥಿತಿಯೆಂಬ ಅಗ್ನಿಯನ್ನೂ ನೀರನ್ನಾಗಿ ಮಾಡಿ ಬಿಡುತ್ತದೆ.

 

ಸೂಚನೆ:

ಇಂದು ಅಂತರಾಷ್ಟ್ರೀಯ ಯೋಗ ದಿನ, ಮೂರನೇ ಭಾನುವಾರವಾಗಿದೆ. ಸಂಜೆ 6.30 ರಿಂದ 7.30ರವರೆಗೆ ಎಲ್ಲಾ ಸಹೋದರ-ಸಹೋದರಿಯರು ಸಂಘಟಿತ ರೂಪದಲ್ಲಿ ಒಂದು ಕಡೆ ಸೇರಿ, ಯೋಗಾಭ್ಯಾಸದಲ್ಲಿ ಅನುಭವ ಮಾಡಿ - ನಾನು ಭೃಕುಟಿಯ ಆಸನದ ಮೇಲೆ ಕುಳಿತು ಪರಮಾತ್ಮನ ಶಕ್ತಿಗಳಿಂದ ಸಂಪನ್ನ, ಸರ್ವ ಶ್ರೇಷ್ಠ ರಾಜಯೋಗಿ ಆತ್ಮನು ಕರ್ಮೇಂದ್ರಿಯಾಜೀತ, ವಿಕರ್ಮಾಜೀತ ಆಗಿದ್ದೇನೆ. ಇಡೀ ದಿನದಲ್ಲಿ ಇದೇ ಸ್ವಮಾನದಲ್ಲಿರಿ - ಇಡೀ ಕಲ್ಪದಲ್ಲಿ ಹೀರೋ ಪಾತ್ರವನ್ನಭಿನಯಿಸುವ ನಾನು ಸರ್ವ ಶ್ರೇಷ್ಠ ಮಹಾನ್ ಆತ್ಮನಾಗಿದ್ದೇನೆ.

ಮುರಳಿ ಪ್ರಶ್ನೆಗಳು -

1. ತಂದೆಗೆ ಎಲ್ಲ ಮಕ್ಕಳ ಭಾಗ್ಯದ ಮೇಲೆ ಏಕೆ ಹೆಮ್ಮೆವಿದೆ?

2. ಇವತ್ತು ಬಾಬಾರವರು ಯಾವ ವರದಾನಗಳನ್ನು ಕೊಟ್ಟಿದ್ದಾರೆ?

3. ಬಾಬಾರವರ ಹತ್ತಿರ ಎಂತಹ ಟಿ.ವಿ. ಇದೆ?

4. ಜ್ಞಾನದ ಶಕ್ತಿಶಾಲಿಯುಳ್ಳ ಆತ್ಮರು ಏನು ಮಾಡಬಹುದು?

5. ಪ್ರತಿ ಸೆಕೆಂಡ್, ಪ್ರತಿ ಸಂಕಲ್ಪ ಗೋಲ್ಡನ್ ಜುಬಿಲೀಯಾಗುವುದು ಹೇಗೆ?

6. ಬಾಬಾರವರು ಯಾವ ಏರಡು ವಿಶೇಷತೆಯ ಶುಭಾಶಯ ತಿಳಿಸಿದರು?

ಅ. ಉಮ್ಮಂಗ ಮತ್ತು ಉತ್ಸಾಹ

ಆ. ಸ್ನೇಹ ಮತ್ತು ಸಾಹಸ

ಇ. ಏಕರಸ ಮತ್ತು ಏಕಾಗ್ರತೆ

7. ಅಧಿಕ ಮಕ್ಕಳು ________ ಮತ್ತು ________ ಅನುಭವದ ಪ್ರಸಾದ ತೆಗೆದುಕೊಂಡರು.

ಅ. ಖುಷಿ ಮತ್ತು ನಿಸ್ವಾರ್ಥ

ಆ. ಸುಖ ಮತ್ತು ಶಾಂತಿ

ಇ. ಪವಿತ್ರ ಮತ್ತು ಆನಂದ

8. ಗೋಲ್ಡನ್ ಜುಬಲಿಯ ಗೋಲ್ಡನ್ ಸಂಕಲ್ಪ ಯಾವುದು?

ಅ. ಒಂದು ಕಣ್ಣಲ್ಲಿ ಆಕಾರಿ ರೂಪ ಮತ್ತು ಇನ್ನೊಂದರಲ್ಲಿ ನಿರಾಕಾರಿ ರೂಪವನ್ನು ಅನುಭವ ಮಾಡುವುದು.

ಆ. ಒಂದು ಕಣ್ಣಲ್ಲಿ ಮುಕ್ತಿ ಮತ್ತು ಇನ್ನೊಂದರಲ್ಲಿ ಜೀವನ್ಮುಕ್ತಿವನ್ನು ಅನುಭವ ಮಾಡುವುದು.

ಇ. ಒಂದು ಕಣ್ಣಲ್ಲಿ ಶಾಂತಿಧಾಮ ಮತ್ತು ಇನ್ನೊಂದರಲ್ಲಿ ಸುಖಧಾಮವನ್ನು ಅನುಭವ ಮಾಡುವುದು.

9. ಪ್ರತಿಯೊಂದು ಆತ್ಮನ ಪ್ರತಿ ಎಂತಹ ಮಳೆ ಸುರಿಸಬೇಕು?

ಅ. ಉಮ್ಮಂಗ-ಉತ್ಸಾಹದ ಹೂ ಮಳೆ

ಆ. ಸ್ನೇಹ ಖುಷಿಯ ಹೂ ಮಳೆ

ಇ. ಪ್ರೇಮದ ಹೂ ಮಳೆ

10. ನೀವು ಎಂತಹ ತಂದೆಯ ಮಕ್ಕಳು?

ಅ. ಸರ್ವಶಕ್ತಿವಂತ ತಂದೆ

ಆ. ರತ್ನಾಗರ ತಂದೆ

ಇ. ವ್ಯಾಪಾರಸ್ಥ ತಂದೆ