13.06.20 Morning Kannada Murli Om Shanti
BapDada Madhuban
ಮಧುರ ಮಕ್ಕಳೇ - ತಂದೆಯ
ಪ್ರೀತಿಯನ್ನು ಪಡೆಯಬೇಕೆಂದರೆ ಆತ್ಮಾಭಿಮಾನಿಯಾಗಿ ಕುಳಿತುಕೊಳ್ಳಿ, ತಂದೆಯಿಂದ ನಾವು ಸ್ವರ್ಗದ
ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆಂಬ ಖುಷಿಯಲ್ಲಿರಿ.
ಪ್ರಶ್ನೆ:
ಸಂಗಮಯುಗದಲ್ಲಿ
ನೀವು ಬ್ರಾಹ್ಮಣರಿಂದ ಫರಿಶ್ತೆಗಳಾಗಲು ಯಾವ ಗುಪ್ತ ಪರಿಶ್ರಮ ಪಡುತ್ತೀರಿ?
ಉತ್ತರ:
ನೀವು ಬ್ರಾಹ್ಮಣರಿಗೆ ಪವಿತ್ರರಾಗುವ ಗುಪ್ತ ಪರಿಶ್ರಮವನ್ನು ಪಡಬೇಕಾಗುತ್ತದೆ. ನೀವು ಮಕ್ಕಳು
ಸಂಗಮಯುಗದಲ್ಲಿ ಸಹೋದರ-ಸಹೋದರರಾಗಿದ್ದೀರಿ. ಸಹೋದರ-ಸಹೋದರಿಯರ ನಡುವೆ ಕೆಟ್ಟ ದೃಷ್ಟಿಯಿರಲು
ಸಾಧ್ಯವಿಲ್ಲ. ಸ್ತ್ರೀ-ಪುರುಷರು ಜೊತೆಯಲ್ಲಿರುತ್ತಾ ಇಬ್ಬರೂ ತಮ್ಮನ್ನು
ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯರೆಂದು ತಿಳಿಯುತ್ತೀರಿ. ಈ ಸ್ಮೃತಿಯಿಂದ ಯಾವಾಗ ಸಂಪೂರ್ಣ
ಪವಿತ್ರರಾಗುವಿರೋ ಆಗ ಫರಿಶ್ತೆಗಳಾಗುವಿರಿ.
ಓಂ ಶಾಂತಿ.
ಮಧುರಾತಿ ಮಧುರ ಮಕ್ಕಳೇ, ತಮ್ಮನ್ನು ಆತ್ಮವೆಂದು ತಿಳಿದು ಇಲ್ಲಿ ಕುಳಿತುಕೊಳ್ಳಿ. ಈ ರಹಸ್ಯವನ್ನು
ನೀವು ಮಕ್ಕಳೂ ಸಹ ತಿಳಿಸಿಕೊಡಬೇಕಾಗಿದೆ. ಆತ್ಮಾಭಿಮಾನಿಯಾಗಿ ಕುಳಿತುಕೊಳ್ಳುತ್ತೀರೆಂದರೆ ತಂದೆಯ
ಜೊತೆ ಪ್ರೀತಿಯಿರುವುದು. ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಾರೆ ಅವರಿಂದ ನಾವು ಸ್ವರ್ಗದ
ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಇಡೀ ದಿನ ಈ ನೆನಪು ಬುದ್ಧಿಯಲ್ಲಿರಲಿ. ಇದರಲ್ಲಿಯೇ
ಪರಿಶ್ರಮವಿದೆ. ಇದನ್ನು ಮತ್ತೆ-ಮತ್ತೆ ಮರೆತು ಹೋಗುವ ಕಾರಣ ಖುಷಿಯೂ ಸಹ ಇಳಿದು ಹೋಗುತ್ತದೆ.
ತಂದೆಯು ಎಚ್ಚರಿಕೆ ಕೊಡುತ್ತಾರೆ - ಮಕ್ಕಳೇ, ದೇಹೀ-ಅಭಿಮಾನಿಯಾಗಿ ಕುಳಿತುಕೊಳ್ಳಿ, ತಮ್ಮನ್ನು
ಆತ್ಮನೆಂದು ತಿಳಿಯಿರಿ. ಈಗ ಆತ್ಮಗಳು ಮತ್ತು ಪರಮಾತ್ಮನ ಮೇಳವಾಗಿದೆಯಲ್ಲವೆ. ಹಿಂದೆಯೂ
ಮೇಳವಾಗಿತ್ತು, ಯಾವಾಗ ಆಗಿತ್ತು? ಅವಶ್ಯವಾಗಿ ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯ
ಸಂಗಮದಲ್ಲಿಯೇ ಆಗಿರಬೇಕು. ಇಂದು ಮಕ್ಕಳಿಗೆ ಒಂದು ವಿಷಯದ ಮೇಲೆ ತಿಳಿಸಿ ಕೊಡುತ್ತೇನೆ. ಶ್ರೇಷ್ಠಾತಿ
ಶ್ರೇಷ್ಠನು ಭಗವಂತನಾಗಿದ್ದಾರೆ ಮತ್ತೆ ಕೆಳಗೆ ಬಂದಾಗ ಬ್ರಹ್ಮಾ-ವಿಷ್ಣು-ಶಂಕರ. ತಂದೆ ಮತ್ತು
ದೇವತೆಗಳು. ಶಿವ ಮತ್ತು ತ್ರಿಮೂರ್ತಿಗಳ ನಡುವಿನ ಸಂಬಂಧವೇನೆಂದು ಮನುಷ್ಯರಿಗೆ ತಿಳಿದಿಲ್ಲ. ಯಾರಿಗೂ
ಅವರ ಜೀವನ ಕಥೆಯು ತಿಳಿದಿಲ್ಲ. ತ್ರಿಮೂರ್ತಿಗಳ ಚಿತ್ರವೂ ಹೆಸರುವಾಸಿಯಾಗಿದೆ. ಈ ಮೂವರು
ದೇವತೆಗಳಾಗಿದ್ದಾರೆ ಕೇವಲ ಮೂವರದಷ್ಟೇ ಧರ್ಮವಿರುತ್ತದೆಯೇ? ದೇವತಾ ಧರ್ಮವಂತೂ ದೊಡ್ಡದಾಗಿರುತ್ತದೆ,
ಇವರು ಸೂಕ್ಷ್ಮವತನವಾಸಿಗಳು, ಅವರಿಗಿಂತಲೂ ಮೇಲೆ ಶಿವ ತಂದೆಯಿದ್ದಾರೆ. ಬ್ರಹ್ಮಾ ಮತ್ತು ವಿಷ್ಣು
ಮುಖ್ಯವಾಗಿದ್ದಾರೆ ಅಂದಾಗ ಈಗ ತಂದೆಯು ತಿಳಿಸುತ್ತಾರೆ - ಬ್ರಹ್ಮಾ ಸೋ ವಿಷ್ಣು, ವಿಷ್ಣು ಸೋ
ಬ್ರಹ್ಮಾ ಹೇಗಾಗುತ್ತಾರೆ? ಎಂಬ ವಿಷಯವನ್ನು ನೀವು ಕೊಡಬೇಕಾಗಿದೆ. ಹೇಗೆ ನಾವು ಶೂದ್ರರಿಂದ
ಬ್ರಾಹ್ಮಣರು, ಬ್ರಾಹ್ಮಣರಿಂದ ದೇವತೆಗಳೆಂದು ನೀವು ಹೇಳುತ್ತೀರೋ ಹಾಗೆಯೇ ಇವರೂ ಸಹ ಬ್ರಹ್ಮನಿಂದ
ವಿಷ್ಣು, ವಿಷ್ಣುವಿನಿಂದ ಬ್ರಹ್ಮಾ, ಇದಕ್ಕೆ ಅವರು ಆತ್ಮವೇ ಪರಮಾತ್ಮ, ಪರಮಾತ್ಮನೇ ಆತ್ಮ ಎಂದು
ಹೇಳಿ ಬಿಡುತ್ತಾರೆ. ಇದು ತಪ್ಪಾಗಿದೆ. ಇದು ಸಾಧ್ಯವೇ ಇಲ್ಲ. ಆದ್ದರಿಂದ ಈ ವಿಷಯದ ಮೇಲೆ ಬಹಳ
ಚೆನ್ನಾಗಿ ತಿಳಿಸಿಕೊಡಬೇಕಾಗಿದೆ. ಪರಮಾತ್ಮನು ಕೃಷ್ಣನು ತನುವಿನಲ್ಲಿ ಬಂದಿದ್ದಾರೆಂದು ಕೆಲವರು
ಹೇಳುತ್ತಾರೆ. ಕೃಷ್ಣನಲ್ಲಿ ಒಂದುವೇಳೆ ಬಂದಿದ್ದರೆ ಬ್ರಹ್ಮನ ಪಾತ್ರವೇ ಅಲ್ಲಿ ಸಮಾಪ್ತಿಯಾಗಿ
ಬಿಡುತ್ತದೆ. ಕೃಷ್ಣನಂತೂ ಸತ್ಯಯುಗದ ಮೊದಲ ರಾಜಕುಮಾರನಾಗಿದ್ದಾನೆ. ತಂದೆಯು ಬಂದು ಪತಿತರನ್ನು
ಪಾವನ ಮಾಡಲು ಅಲ್ಲೇನು ಪತಿತರಿರುವರೇನು! ಇದು ಸಂಪೂರ್ಣ ತಪ್ಪಾಗಿದೆ. ಈ ಮಾತುಗಳನ್ನೂ ಸಹ ಮಹಾರಥಿ
ಸೇವಾಧಾರಿ ಮಕ್ಕಳೇ ಅರಿತುಕೊಳ್ಳುತ್ತಾರೆ, ಮತ್ತ್ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಈ
ವಿಷಯವು ಬಹಳ ಫಸ್ಟ್ಕ್ಲಾಸ್ ಆಗಿದೆ. ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮ ಹೇಗಾಗುತ್ತಾರೆ
- ಅವರ ಜೀವನ ಕಥೆಯನ್ನು ತಿಳಿಸುತ್ತೇವೆ, ಏಕೆಂದರೆ ಇವರ ನಡುವೆ ಸಂಬಂಧವಿದೆ. ನೀವು ಈ ವಿಷಯದಿಂದಲೇ
ಆರಂಭಿಸಬೇಕಾಗಿದೆ. ಒಂದು ಸೆಕೆಂಡಿನಲ್ಲಿ ಬ್ರಹ್ಮನಿಂದ ವಿಷ್ಣುವಾಗುವರು ಆದರೆ ವಿಷ್ಣುವಿನಿಂದ
ಬ್ರಹ್ಮನಾಗುವುದರಲ್ಲಿ 84 ಜನ್ಮಗಳು ಹಿಡಿಸುತ್ತವೆ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ.
ನೀವೀಗ ಬ್ರಾಹ್ಮಣ ಕುಲದವರಾಗಿದ್ದೀರಿ. ಪ್ರಜಾಪಿತ ಬ್ರಹ್ಮನ ಬ್ರಾಹ್ಮಣ ಕುಲವು ಎಲ್ಲಿಂದ ಬಂದಿತು?
ಪ್ರಜಪಿತ ಬ್ರಹ್ಮನಿಂದ ಹೊಸ ಪ್ರಪಂಚವಾಗಬೇಕಲ್ಲವೆ. ಸತ್ಯಯುಗವು ಹೊಸ ಪ್ರಪಂಚವಾಗಿದೆ, ಅಲ್ಲಿ
ಪ್ರಜಾಪಿತ ಬ್ರಹ್ಮನಿರುವುದಿಲ್ಲ ಮತ್ತು ಕಲಿಯುಗದಲ್ಲಿಯೂ ಇರುವುದಿಲ್ಲ. ಅವರು
ಸಂಗಮಯುಗದಲ್ಲಿರುತ್ತಾರೆ. ನೀವೀಗ ಸಂಗಮಯುಗದಲ್ಲಿದ್ದೀರಿ. ನೀವು ಶೂದ್ರರಿಂದ ಬ್ರಾಹ್ಮಣರಾಗಿದ್ದೀರಿ.
ತಂದೆಯು ಬ್ರಹ್ಮಾರವರನ್ನು ದತ್ತು ಮಾಡಿಕೊಂಡಿದ್ದಾರೆ. ಶಿವ ತಂದೆಯು ಇವರನ್ನು ಹೇಗೆ
ರಚಿಸಿದರೆಂಬುದನ್ನು ಯಾರೂ ತಿಳಿದುಕೊಂಡಿಲ್ಲ. ತ್ರಿಮೂರ್ತಿಯಲ್ಲಿ ರಚಯಿತ ಶಿವನ ಚಿತ್ರವೇ ಇಲ್ಲ
ಅಂದಮೇಲೆ ಸರ್ವ ಶ್ರೇಷ್ಠ ಭಗವಂತನಾಗಿದ್ದಾರೆ ಉಳಿದೆಲ್ಲವೂ ಅವರ ರಚನೆಯಾಗಿದೆ ಎಂಬುದು ಹೇಗೆ
ತಿಳಿಯುತ್ತದೆ? ಇದು ಬ್ರಾಹ್ಮಣ ಸಂಪ್ರದಾಯವಾಗಿದೆ ಅಂದಾಗ ಅವಶ್ಯವಾಗಿ ಪ್ರಜಾಪಿತನು ಬೇಕು. ಅವರು
ಕಲಿಯುಗದಲ್ಲಿರಲು ಸಾಧ್ಯವಿಲ್ಲ, ಸತ್ಯಯುಗದಲ್ಲಿಯೂ ಇರುವುದಿಲ್ಲ. ಬ್ರಾಹ್ಮಣ ದೇವಿ-ದೇವತಾಯ ನಮಃ
ಎಂದು ಗಾಯನ ಮಾಡಲಾಗುತ್ತದೆ ಅಂದಾಗ ಬ್ರಾಹ್ಮಣರು ಎಲ್ಲಿಯವರು ಮತ್ತು ಪ್ರಜಾಪಿತ ಬ್ರಹ್ಮನು
ಎಲ್ಲಿಯವರಾಗಿದ್ದಾರೆ? ಅವಶ್ಯವಾಗಿ ಸಂಗಮಯುಗದವರೆಂದೇ ಹೇಳಲಾಗುತ್ತದೆ. ಇದು ಪುರುಷೋತ್ತಮ
ಸಂಗಮಯುಗವಾಗಿದೆ. ಈ ಸಂಗಮಯುಗದ ವರ್ಣವು ಯಾವುದೇ ಶಾಸ್ತ್ರಗಳಲ್ಲಿಲ್ಲ. ಕೌರವರು ಮತ್ತು ಪಾಂಡವರು
ಸಂಗಮಯುಗದಲ್ಲಿಯೇ ಇದ್ದಾರೆ, ನೀವು ಪಾಂಡವರು ಕಲಿಯುಗದಲ್ಲಿಲ್ಲ. ಕೌರವರು ಮತ್ತು ಪಾಂಡವರು
ಸಂಗಮಯುಗದಲ್ಲಿಯೇ ಇದ್ದಾರೆ, ನೀವು ಪಾಂಡವರು ಸಂಗಮಯುಗಿಗಳಾಗಿದ್ದೀರಿ ಮತ್ತು ಕೌರವರು
ಕಲಿಯುಗಿಗಳಾಗಿದ್ದಾರೆ. ಗೀತೆಯಲ್ಲಿಯೂ ಭಗವಾನುವಾಚವಿದೆಯಲ್ಲವೆ. ನೀವು ಪಾಂಡವರು ದೈವೀ
ಸಂಪ್ರದಾಯದವರಾಗಿದ್ದೀರಿ, ನೀವು ಆತ್ಮೀಯ ಮಾರ್ಗದರ್ಶಕರಾಗಿದ್ದೀರಿ. ನಿಮ್ಮದು ಆತ್ಮಿಕ
ಯಾತ್ರೆಯಾಗಿದೆ. ಇದನ್ನು ನೀವು ಬುದ್ಧಿಯಿಂದ ಮಾಡುತ್ತೀರಿ.
ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮವೆಂದು ತಿಳಿದು ನೆನಪಿನ ಯಾತ್ರೆಯಲ್ಲಿರಿ. ಸ್ಥೂಲ
ಯಾತ್ರೆಯಲ್ಲಿ ತೀರ್ಥ ಸ್ಥಾನಗಳಿಗೆ ಹೋಗಿ ಮತ್ತೆ ಹಿಂತಿರುಗಿ ಬರುತ್ತಾರೆ ಅದು ಅರ್ಧಕಲ್ಪ
ನಡೆಯುತ್ತದೆ. ಈ ಸಂಗಮಯುಗದ ಯಾತ್ರೆಯು ಒಂದೇ ಬಾರಿಯದಾಗಿದೆ. ನೀವು ಹೋಗಿ ಮತ್ತೆ ಮೃತ್ಯುಲೋಕಕ್ಕೆ
ಹಿಂತಿರುಗಿ ಬರುವುದಿಲ್ಲ. ಪವಿತ್ರರಾಗಿ ನೀವು ಪವಿತ್ರ ಪ್ರಪಂಚದಲ್ಲಿ ಬರಬೇಕಾಗಿದೆ. ಆದ್ದರಿಂದ
ನೀವು ಪವಿತ್ರರಾಗುತ್ತಿದ್ದೀರಿ. ನಾವೀಗ ಬ್ರಾಹ್ಮಣ ಸಂಪ್ರದಾಯದವರಾಗಿದ್ದೇವೆ ನಂತರ ದೈವೀ
ಸಂಪ್ರದಾಯ, ವಿಷ್ಣುವಿನ ಸಂಪ್ರದಾಯದವರಾಗುತ್ತೇವೆಂದು ನಿಮಗೆ ತಿಳಿದಿದೆ. ಸತ್ಯಯುಗದಲ್ಲಿ
ದೇವಿ-ದೇವತೆಗಳು ವಿಷ್ಣು ಸಂಪ್ರದಾಯದವರಾಗುತ್ತೇವೆಂದು ನಿಮಗೆ ತಿಳಿದಿದೆ. ಅಲ್ಲಿ ಚತುರ್ಭುಜ
ವಿಷ್ಣುವಿನ ಮಹಿಮೆಯಿರುತ್ತದೆ. ಇದರಿಂದಲೇ ಇವರು ವಿಷ್ಣುವಿನ ಸಂಪ್ರದಾಯದವರೆಂದು ತಿಳಿದು ಬರುತ್ತದೆ.
ಅಲ್ಲಿ ರಾವಣನ ಪ್ರತಿಮೆಯಿದೆ ಅಂದಮೇಲೆ ರಾವಣ ಸಂಪ್ರದಾಯದವರಾಗಿದ್ದಾರೆ. ಈ ವಿಷಯವನ್ನು ಕುರಿತು
ತಿಳಿಸುವುದರಿಂದ ಮನುಷ್ಯರು ಆಶ್ಚರ್ಯಚಕಿತರಾಗುತ್ತಾರೆ. ನಾವೀಗ ದೇವತೆಗಳಾಗಲು ರಾಜಯೋಗವನ್ನು
ಕಲಿಯುತ್ತಿದ್ದೀರಿ. ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರು, ನೀವು ಶೂದ್ರರಿಂದ ಬ್ರಾಹ್ಮಣರಾಗಿದ್ದೀರಿ.
ತಂದೆಯಿಂದ ದತ್ತು ಮಾಡಲ್ಪಟ್ಟಿದ್ದೀರಿ. ಇಲ್ಲಿಯೇ ಬ್ರಾಹ್ಮಣರಾಗಿದ್ದಿರಿ ಮತ್ತು ಇಲ್ಲಿಯೇ
ದೇವತೆಗಳಾಗುತ್ತೀರಿ. ನಿಮ್ಮ ದೈವೀ ರಾಜಧಾನಿಯೂ ಸಹ ಇಲ್ಲಿಯೇ ಇರುತ್ತದೆ. ದೈವೀ ರಾಜಧಾನಿಗೆ
ವಿಷ್ಣುವಿನ ರಾಜಧಾನಿಯೆಂದು ಕರೆಯಲಾಗುತ್ತದೆ, ಬ್ರಾಹ್ಮಣರ ರಾಜಧಾನಿಯೆಂದು ಕರೆಯುವುದಿಲ್ಲ.
ರಾಜವಂಶದಲ್ಲಿ ರಾಜ್ಯ ನಡೆಯುತ್ತದೆ. ವಿಷ್ಣುವಿನ ರಾಜವಂಶ, ಬ್ರಾಹ್ಮಣರ ರಾಜವಂಶವಿರುವುದಿಲ್ಲ.
ರಾಜವಂಶದಿಂದ ರಾಜ್ಯಭಾರ ನಡೆಯುತ್ತದೆ. ಒಬ್ಬರ ನಂತರ ಮತ್ತೊಬ್ಬರು ನಂತರ ಮೂರನೆಯವರು.... ನಾವು
ಬ್ರಾಹ್ಮಣ ಕುಲ ಭೂಷಣರಾಗಿದ್ದೇವೆ. ನಂತರ ದೇವತೆಗಳಾಗುತ್ತೇವೆ. ಬ್ರಾಹ್ಮಣರೇ ವಿಷ್ಣು ಕುಲದಲ್ಲಿ
ಬರುತ್ತೇವೆ. ವಿಷ್ಣು ಕುಲದಿಂದ ಕ್ಷತ್ರಿಯ, ಚಂದ್ರವಂಶಿ ಕುಲದಲ್ಲಿ ಬರುತ್ತೇವೆ ನಂತರ ವೈಶ್ಯ ವಂಶ,
ಶೂದ್ರ ಕುಲದಲ್ಲಿ ಬರುತ್ತೇವೆ. ಮತ್ತೆ ಬ್ರಾಹ್ಮಣರಿಂದ ದೇವತೆಗಳಾಗುತ್ತೇವೆ ಅಂದಾಗ ಅರ್ಥ ಎಷ್ಟೊಂದು
ಸ್ಪಷ್ಟವಾಗಿದೆ. ಚಿತ್ರದಲ್ಲಿ ಏನೇನೋ ತೋರಿಸುತ್ತಾರೆ. ನಾವು ಬ್ರಾಹ್ಮಣರೇ ವಿಷ್ಣು ಪುರಿಗೆ
ಮಾಲೀಕರಾಗುತ್ತೇವೆ. ಇದರಲ್ಲಿ ತಬ್ಬಿಬ್ಬಾಗಬಾರದು. ತಂದೆಯು ಯಾವ ನಿಬಂಧನೆಯನ್ನು ಹಾಕುತ್ತಾರೆ ಅದರ
ಬಗ್ಗೆ ವಿಚಾರ ಸಾಗರ ಮಂಥನ ಮಾಡಬೇಕು - ಯಾರಿಗಾದರೂ ಇದನ್ನು ಹೇಗೆ ತಿಳಿಸಿ ಕೊಡುವುದು, ಇದರಿಂದ
ಮನುಷ್ಯರು ಆಶ್ಚರ್ಯಚಕಿತರಾಗಿ ಇವರು ತಿಳಿಸಿ ಕೊಡುವುದು ಬಹಳ ಚೆನ್ನಾಗಿದೆ. ಇದನ್ನು ಜ್ಞಾನ ಸಾಗರನ
ವಿನಃ ಮತ್ತ್ಯಾರೂ ತಿಳಿಸಿಕೊಡಲು ಸಾಧ್ಯವಿಲ್ಲ. ವಿಚಾರ ಸಾಗರ ಮಂಥನ ಮಾಡಿ ನಂತರ ಕುಳಿತು ಬರೆಯಬೇಕು.
ನಂತರ ಓದಿದಾಗ ಇಂತಿಂತಹ ಶಬ್ಧಗಳನ್ನೂ ಸೇರಿಸಬೇಕೆಂದು ವಿಚಾರದಲ್ಲಿ ಬರುತ್ತದೆ. ತಂದೆಯೂ ಸಹ ಮೊದಲು
ಮುರುಳಿಯನ್ನು ಬರೆದು ನಿಮ್ಮ ಕೈಗೆ ಕೊಡುತ್ತಿದ್ದರು ನಂತರ ತಿಳಿಸಿಕೊಡುತ್ತಿದ್ದರು. ಇಲ್ಲಂತೂ ನೀವು
ತಂದೆಯ ಜೊತೆಯೇ ಮನೆಯಲ್ಲಿರುತ್ತೀರಿ. ಈಗ ನೀವು ಹೊರಗಡೆ ಹೋಗಿ ತಿಳಿಸಿಕೊಡಬೇಕಾಗುತ್ತದೆ. ಈ ವಿಷಯವು
ಬಹಳ ಅದ್ಭುತವಾಗಿದೆ. ಬ್ರಹ್ಮಾ ಸೋ ವಿಷ್ಣು, ಇವರನ್ನು ಯಾರೂ ಸಹ ತಿಳಿದುಕೊಂಡಿಲ್ಲ. ವಿಷ್ಣುವಿನ
ನಾಭಿಯಿಂದ ಬ್ರಹ್ಮನನ್ನು ತೋರಿಸುತ್ತಾರೆ. ಹೇಗೆ ಗಾಂಧಿಯವರ ನಾಭಿಯಿಂದ ನೆಹರು, ಆದರೆ ರಾಜವಂಶವಂತೂ
ಬೇಕಲ್ಲವೆ. ಬ್ರಾಹ್ಮಣ ಕುಲದಲ್ಲಿ ರಾಜ್ಯಭಾರವಿರುವುದಿಲ್ಲ. ಬ್ರಾಹ್ಮಣ ಸಂಪ್ರದಾಯದವರೇ ದೇವತಾ
ಸಂಪ್ರದಾಯದವರಾಗಿ ಬಿಡುತ್ತಾರೆ. ನಂತರ ಚಂದ್ರವಂಶಿ ಮನೆತನದಲ್ಲಿ ನಂತರ ವೈಶ್ಯ ವಂಶದಲ್ಲಿ... ಹೀಗೆ
ಪ್ರತಿಯೊಂದು ವಂಶಗಳು ನಡೆಯುತ್ತದೆಯಲ್ಲವೆ. ಸತ್ಯಯುಗದಲ್ಲಿ ನಿರ್ವಿಕಾರಿ ಪ್ರಪಂಚ, ಕಲಿಯುಗದಲ್ಲಿ
ವಿಕಾರಿ ಪ್ರಪಂಚ - ಇವೆರಡೂ ಅಕ್ಷರವೂ ಸಹ ಯಾರ ಬುದ್ಧಿಯಲ್ಲಿಯೂ ಇಲ್ಲ. ಇಲ್ಲದಿದ್ದರೆ ಅವಶ್ಯವಾಗಿ
ವಿಕಾರಿಗಳಿಂದ ನಿರ್ವಿಕಾರಿಗಳು ಹೇಗಾಗುತ್ತೇವೆ ಎಂಬುದು ಬುದ್ಧಿಯಲ್ಲಿರಬೇಕಾಗಿತ್ತು. ಮನುಷ್ಯರು
ನಿರ್ವಿಕಾರಿಗಳನ್ನೂ ತಿಳಿದಿಲ್ಲ, ವಿಕಾರಿಗಳನ್ನೂ ತಿಳಿದಿಲ್ಲ. ದೇವತೆಗಳಿಗೆ ನಿರ್ವಿಕಾರಿಗಳೆಂದು
ಹೇಳಲಾಗುತದೆ. ಬ್ರಾಹ್ಮಣರು ನಿರ್ವಿಕಾರಿಗಳೆಂದು ಎಂದೂ ಸಹ ಕೇಳಿಲ್ಲ. ಹೊಸ ಪ್ರಪಂಚದಲ್ಲಿ
ನಿರ್ವಿಕಾರಿಗಳು, ಹಳೆಯ ಪ್ರಪಂಚದಲ್ಲಿ ವಿಕಾರಿಗಳು. ಇದನ್ನು ಅವಶ್ಯವಾಗಿ ಸಂಗಮಯುಗದಲ್ಲಿ
ತೋರಿಸಬೇಕು. ಇದರ ಬಗ್ಗೆ ಯಾರಿಗೂ ಸಹ ತಿಳಿದಿಲ್ಲ. ಪುರುಷೋತ್ತಮ ಮಾಸವನ್ನು ಆಚರಿಸುತ್ತಾರಲ್ಲವೆ.
ಅದು ಮೂರು ವರ್ಷದ ನಂತರ ಒಂದು ತಿಂಗಳು ಆಚರಿಸುತ್ತಾರೆ. ನಿಮ್ಮದು 5000 ವರ್ಷಗಳ ನಂತರ ಒಂದು
ಸಂಗಮಯುಗ ಬರುತ್ತದೆ. ಮನುಷ್ಯಾತ್ಮ ಮತ್ತು ಪರಮಾತ್ಮನನ್ನು ಯಥಾರ್ಥವಾಗಿ ತಿಳಿದುಕೊಂಡಿಲ್ಲ. ಕೇವಲ
ಪ್ರಕಾಶಮಾನವಾಗಿ ಹೊಳೆಯುತ್ತಿರುವ ನಕ್ಷತ್ರವಾಗಿದೆ ಎಂದು ಹೇಳುತಾರೆ. ರಾಮಕೃಷ್ಣ ಪರಮಹಂಸರ ಶಿಷ್ಯ
ವಿವೇಕಾನಂತ ಹೇಳುತ್ತಿದ್ದರು - ನಾನು ಗುರುವಿನ ಮುಂದೆ ಕುಳಿತಿದ್ದೆನು, ಗುರುವಿನ ಧ್ಯಾನವನ್ನು
ಮಾಡುತ್ತಾರಲ್ಲವೆ. ಅವನಿಗೆ ಜ್ಯೋತಿಯ ಸಾಕ್ಷಾತ್ಕಾರವಾಯಿತೆಂದು ತೋರಿಸುತ್ತಾರೆ. ಈಗ ತಂದೆಯು
ಹೇಳುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿ, ಧ್ಯಾನದ ಮಾತೇನಿಲ್ಲ. ಗುರುವಿನ ನೆನಪು ಇದ್ದೇ
ಇರುತ್ತದೆ. ನೆನಪನ್ನು ಮಾಡುವ ಸಲುವಾಗಿ ಕುಳಿತುಕೊಳ್ಳುವುದರಿಂದ ನೆನಪು ಬರುತ್ತದೆಯೇನು! ಇವರು
ಭಗವಂತನಾಗಿದ್ದಾರೆ ಎಂಬುದು ಅವರಿಗೆ ಗುರುವಿನಲ್ಲಿ ಭಾವನೆಯಿತ್ತು. ಅವರ ಆತ್ಮವು ಹೊರಬಂದು
ನನ್ನಲ್ಲಿ ಸೇರಿಕೊಂಡಿತು ಎಂಬುದನ್ನು ನೋಡಿದರು. ಅವರ ಆತ್ಮವು ಎಲ್ಲಿ ಹೋಗಿ ಕುಳಿತುಕೊಂಡಿತು ನಂತರ
ಏನಾಯಿತು, ಎಲ್ಲಿಯೂ ಸಹ ವರ್ಣನೆಯಿಲ್ಲ. ಕೇವಲ ನನಗೆ ಭಗವಂತನ ಸಾಕ್ಷಾತ್ಕಾರವಾಯಿತೆಂದು ಖುಷಿಯಾಯಿತು.
ಭಗವಂತ ಯಾರಾಗಿದ್ದಾರೆ ಎಂಬುದನ್ನು ತಿಳಿದುಕೊಂಡಿಲ್ಲ. ಏಣಿ ಚಿತ್ರದ ಬಗ್ಗೆ ತಿಳಿಸಿಕೊಡಿ ಎಂದು
ತಂದೆಯು ತಿಳಿಸುತ್ತಾರೆ. ಇದು ಭಕ್ತಿಮಾರ್ಗವಾಗಿದೆ, ಒಂದು ಭಕ್ತಿಯ ದೋಣಿ ಮತ್ತೊಂದು ಜ್ಞಾನದ ದೋಣಿ
ಎಂಬುದು ನಿಮಗೆ ತಿಳಿದಿದೆ. ಜ್ಞಾನವೇ ಬೇರೆ, ಭಕ್ತಿಯೇ ಬೇರೆಯಾಗಿದೆ. ನಾನು ನಿಮಗೆ ಕಲ್ಪದ ಹಿಂದೆ
ಜ್ಞಾನವನ್ನು ಕೊಟ್ಟಿದ್ದೆನು, ವಿಶ್ವದ ಮಾಲೀಕರನ್ನಾಗಿ ಮಾಡಿದ್ದೆನು ಎಂದು ತಂದೆಯು ಹೇಳುತ್ತಾರೆ.
ಈಗ ನೀವು ಎಲ್ಲಿದ್ದೀರಿ, ಹೇಗೆ ಅನ್ಯವಂಶಗಳು, ವೃಕ್ಶವು ಹೇಗೆ ವೃದ್ಧಿಯಾಯಿತು ಎಂಬುದು ನೀವು
ಮಕ್ಕಳ ಬುದ್ಧಿಯಲ್ಲಿ ಎಲ್ಲದರ ಜ್ಞಾನವಿದೆ. ಹೇಗೆ ಹೂ ಗುಚ್ಛವಿರುತ್ತದೆಯಲ್ಲವೆ. ಈ ಸೃಷ್ಟಿರೂಪಿ
ವೃಕ್ಷವೂ ಸಹ ಹೂ ಗುಚ್ಛವಾಗಿದೆ. ಮಧ್ಯದಲ್ಲಿ ನಿಮ್ಮ ಧರ್ಮ, ಇದರ ನಂತರ ಮೂರು ಧರ್ಮಗಳು
ಹುಟ್ಟಿಕೊಳ್ಳುತ್ತವೆ ನಂತರ ಇದರಿಂದ ವೃದ್ಧಿಯಾಗುತ್ತದೆ. ಈ ವೃಕ್ಷವನ್ನೂ ಸಹ ನೆನಪು ಮಾಡಬೇಕು.
ಎಷ್ಟೊಂದು ರೆಂಬೆ-ಕೊಂಬೆಗಳು ಮುಂತಾದವು ಹೊರಬರುತ್ತವೆ! ಕೊನೆಯಲ್ಲಿ ಬರುವವರ ಮಾನ್ಯತೆ
ಹೆಚ್ಚಾಗಿರುತ್ತದೆ. ಆಲದ ಮರಕ್ಕೆ ಮೂಲ ಬೇರು ಇರುವುದಿಲ್ಲ, ಉಳಿದೆಲ್ಲದರ ಮೇಲೆ ವೃಕ್ಷವು
ನಿಂತಿರುತ್ತದೆ. ದೇವಿ-ದೇವತಾ ಧರ್ಮವು ಸಮಾಪ್ತಿಯಾಗಿ ಬಿಟ್ಟಿದೆ. ಸಂಪೂರ್ಣವಾಗಿ ಕಾಣೆಯಾಗಿದೆ,
ಭಾರತವಾಸಿಗಳು ತಮ್ಮ ಧರ್ಮವನ್ನು ತಿಳಿದುಕೊಂಡಿಲ್ಲ. ಮತ್ತೆಲ್ಲಾ ಧರ್ಮದವರು ತಮ್ಮ-ತಮ್ಮ ಧರ್ಮವನ್ನು
ತಿಳಿದಿದ್ದಾರೆ, ತಮ್ಮ ಧರ್ಮವನ್ನು ಒಪ್ಪುವುದಿಲ್ಲವೆಂದು ಹೇಳುತ್ತಾರೆ. ಮುಖ್ಯವಾಗಿ 4 ಧರ್ಮಗಳಿವೆ,
ಉಳಿದೆಲ್ಲವೂ ಚಿಕ್ಕ-ಚಿಕ್ಕದಾದ ಅನೇಕ ಧರ್ಮಗಳಿವೆ. ಈ ವೃಕ್ಷ ಮತ್ತು ಸೃಷ್ಟಿಚಕ್ರವನ್ನು ಈಗ ನೀವು
ತಿಳಿದುಕೊಂಡಿದ್ದೀರಿ. ದೇವಿ-ದೇವತಾ ಧರ್ಮದ ಹೆಸರನ್ನೇ ಇಲ್ಲದಂತೆ ಮಾಡಿ ಬಿಟ್ಟಿದ್ದಾರೆ. ನಂತರ
ತಂದೆಯು ಇದರ ಸ್ಥಾಪನೆಯನ್ನು ಮಾಡಿ ಉಳಿದೆಲ್ಲಾ ಧರ್ಮಗಳ ವಿನಾಶವನ್ನು ಮಾಡಿಸುತ್ತಾರೆ. ಗೋಲದ
ಚಿತ್ರದ ಬಳಿ ಅವಶ್ಯವಾಗಿ ಕರೆದುಕೊಂಡು ಹೋಗಿ. ಇದು ಸತ್ಯಯುಗ, ಇದು ಕಲಿಯುಗ. ಕಲಿಯುಗದಲ್ಲಿ ಇಷ್ಟು
ಧರ್ಮಗಳಿವೆ, ಸತ್ಯಯುಗದಲ್ಲಿ ಒಂದು ಧರ್ಮವಿದೆ. ಒಂದು ಧರ್ಮದ ಸ್ಥಾಪನೆ, ಅನೇಕ ಧರ್ಮಗಳ ವಿನಾಶವನ್ನು
ಯಾರು ಮಾಡಿಸುತ್ತಾರೆ? ಭಗವಂತನೇ ಅವಶ್ಯವಾಗಿ ಯಾರ ಮೂಲಕವಾದರೂ ಮಾಡಿಸುತ್ತಾರಲ್ಲವೆ. ಬ್ರಹ್ಮಾರವರ
ಮೂಲಕ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯನ್ನೂ ಮಾಡಿಸುತ್ತೇನೆಂದು ತಂದೆಯು ಹೇಳುತ್ತಾರೆ.
ಬ್ರಾಹ್ಮಣರಿಂದ ವಿಷ್ಣು ಪುರಿಯ ದೇವತೆಗಳಾಗುತ್ತಾರೆ.
ಸಂಗಮದಲ್ಲಿ ಬ್ರಾಹ್ಮಣರು ಪವಿತ್ರರಾಗುವ ಗುಪ್ತ ಪರಿಶ್ರಮವನ್ನು ಮಾಡಬೇಕಾಗುತ್ತದೆ. ನೀವು ಬ್ರಹ್ಮನ
ಮಕ್ಕಳು ಸಂಗಮದಲ್ಲಿ ಸಹೋದರ-ಸಹೋದರಿಯಾಗಿದ್ದೀರಿ, ಸಹೋದರ-ಸಹೋದರಿಯರಲ್ಲಿ ಕೆಟ್ಟ ದೃಷ್ಟಿಯಿರಲು
ಸಾಧ್ಯವಿಲ್ಲ. ಸ್ತ್ರೀ-ಪುರುಷರಿಬ್ಬರು ತನ್ನನ್ನು ಬಿ.ಕೆ. ಎಂದು ತಿಳಿದುಕೊಳ್ಳುತ್ತಾರೆ.
ಇದರಲ್ಲಿಯೇ ಬಹಳ ಪರಿಶ್ರಮವಿದೆ. ಸ್ತ್ರೀ-ಪುರುಷರಲ್ಲಿ ಇಷ್ಟೊಂದು ಸೆಳೆತವಿರುತ್ತದೆಯೇ!
ಪರಸ್ಪರದಲ್ಲಿ ಸ್ಪರ್ಶ ಮಾಡದೇ ಇರಲು ಸಾಧ್ಯವೇ ಇಲ್ಲ, ಇಲ್ಲಿ ಸಹೋದರ-ಸಹೋದರಿಯರು ಸ್ಪರ್ಶ ಮಾಡಬಾರದು.
ಇಲ್ಲವೆಂದರೆ ಪಾಪದ ಅನುಭವವಾಗುತ್ತದೆ. ನಾವು ಬಿ.ಕೆ. ಆಗಿದ್ದೇವೆ ಎಂಬುದು ಮರೆತು
ಹೋಗುತ್ತದೆಯೆಂದರೆ ನಾಶವಾಗಿ ಬಿಡುತ್ತಾರೆ. ಇದರಲ್ಲಿ ಬಹಳ ಗುಪ್ತ ಪರಿಶ್ರಮವಿದೆ. ಭಲೆ
ಪತಿ-ಪತ್ನಿಯಿರುತ್ತಾರೆ ಅವರು ಹೇಗಿರುತ್ತಾರೆಂಬುದು ಯಾರಿಗೆ ಗೊತ್ತು! ಅವರಿಗೇ ಗೊತ್ತು. ನಾವು
ಬಿ.ಕೆ. ಆಗಿದ್ದೇವೆ, ಫರಿಶ್ತೆಗಳಾಗಿದ್ದೇವೆ, ಪರಸ್ಪರ ಸ್ಪರ್ಷಿಸಬಾರದು. ಈ ರೀತಿ
ಮಾಡುತ್ತಾ-ಮಾಡುತ್ತಾ ಸೂಕ್ಷ್ಮವತನವಾಸಿ ಫರಿಶ್ತೆಗಳಾಗಿ ಬಿಡುತ್ತಾರೆ. ಇಲ್ಲವೆಂದರೆ ಫರಿಗಳಾಗಲು
ಹೇಗೆ ಸಾಧ್ಯ! ಫರಿಶ್ತೆಗಳಾಗಬೇಕೆಂದರೆ ಪವಿತ್ರರಾಗಿರಬೇಕು. ಇಂತಹ ಜೋಡಿ ಇತ್ತೆಂದರೆ ಅವರು
ನಂಬರ್ವನ್ ಆಗಿ ಬಿಡುತ್ತಾರೆ. ಈ ದಾದಾರವರು ಎಲ್ಲವನ್ನೂ ಅನುಭವ ಮಾಡಿದ್ದಾರೆ. ಕೊನೆಯಲ್ಲಿ ಸನ್ಯಾಸ
ಮಾಡಿದ್ದಾರೆ ಎಂದು ಹೇಳುತ್ತಾರೆ. ಯಾರು ಜೊತೆಯಲ್ಲಿದ್ದಾರೆ ಅವರಿಗೆ ಬಹಳ ಪರಿಶ್ರಮವಿದೆ. ಮತ್ತೆ
ಅವರಲ್ಲಿ ಜ್ಞಾನ ಮತ್ತು ಯೋಗವೂ ಸಹ ಇರಬೇಕು. ಅನೇಕರನ್ನು ತನ್ನ ಸಮಾನ ಮಾಡಿಕೊಂಡಾಗ ದೊಡ್ಡ
ರಾಜರಾಗುತ್ತಾರೆ. ಕೇವಲ ಒಂದು ಮಾತಲ್ಲ ಅಲ್ಲವೆ. ತಂದೆಯು ತಿಳಿಸುತ್ತಾರೆ - ನೀವು ಶಿವ ತಂದೆಯನ್ನು
ನೆನಪು ಮಾಡಿ, ಇವರು ಪ್ರಜಾಪಿತನಾಗಿದ್ದಾರೆ. ನಮ್ಮ ಕೆಲಸ ಶಿವ ತಂದೆಯ ಜೊತೆಗಿದೆ ಎಂದು ಹೇಳುತ್ತಾರೆ.
ಈ ಬ್ರಹ್ಮಾರವರನ್ನೇಕೆ ನೆನಪು ಮಾಡಬೇಕು, ಇವರಿಗೇಕೆ ಪತ್ರವನ್ನು ಬರೆಯಬೇಕು! ಈ ರೀತಿಯೂ ಸಹ
ಇದ್ದಾರೆ. ನೀವು ಶಿವ ತಂದೆಯನ್ನು ನೆನಪು ಮಾಡಬೇಕು. ಆದ್ದರಿಂದ ಬಾಬಾರವರ ಫೋಟೋ ಮುಂತಾದವನ್ನು
ಕೊಡುವುದಿಲ್ಲ. ಇದರಲ್ಲಿ (ಬ್ರಹ್ಮಾ) ಶಿವ ತಂದೆಯು ಬರುತ್ತಾರೆ. ಇವರಾದರೂ
ದೇಹಧಾರಿಯಾಗಿದ್ದಾರಲ್ಲವೆ. ನೀವು ಮಕ್ಕಳಿಗೆ ಈಗ ತಂದೆಯಿಂದ ಆಸ್ತಿಯು ಸಿಗುತ್ತದೆ. ಅವರು (ಸನ್ಯಾಸಿಗಳು)
ತಮ್ಮನ್ನು ಈಶ್ವರನೆಂದು ಹೇಳುತ್ತಾರೆ ಮತ್ತೆ ಅವರಿಂದ ಏನು ಸಿಗುತ್ತದೆ. ಭಾರತವಾಸಿಗಳಿಗೆ ಎಷ್ಟೊಂದು
ಹಾನಿಯಾಗಿದೆ! ಸಂಪೂರ್ಣವಾಗಿ ಭಾರತವಾಸಿಗಳು ದಿವಾಳಿಯಾಗಿ ಬಿಟ್ಟಿದ್ದಾರೆ. ಪ್ರಜೆಗಳಿಂದ ಭಿಕ್ಷೆ
ಬೇಡುತ್ತಾರೆ. 10-20 ವರ್ಷಗಳವರೆಗೆ ಸಾಲವನ್ನು ತೆಗೆದುಕೊಳ್ಳುತ್ತಾರೆ ಮತ್ತೆ ಕೊಡುತ್ತಾರೆಯೇ!
ತೆಗೆದುಕೊಳ್ಳುವವರು, ಕೊಡುವವರು ಇಬ್ಬರೂ ಇಲ್ಲದಂತಾಗುತ್ತಾರೆ. ಆಟವೇ ಸಮಾಪ್ತಿಯಾಗುವುದಿದೆ. ಅನೇಕ
ಆಪತ್ತುಗಳು ಬರಲಿವೆ, ದಿವಾಳಿಯಾಗುವುದು, ಖಾಯಿಲೆಗಳು ಬಹಳಷ್ಟು ಬರುತ್ತವೆ. ಕೆಲವರು ಸಾಹುಕಾರರ ಬಳಿ
ಇಡುತ್ತಾರೆ ನಂತರ ಅವರು ದಿವಳಿಯಾಗಿ ಬಿಡುತ್ತಾರೆಂದರೆ ಬಡವರಿಗೆ ಎಷ್ಟೊಂದು ದುಃಖವಾಗುತ್ತದೆ.
ಹೆಜ್ಜೆ-ಹೆಜ್ಜೆಯಲ್ಲಿ ದುಃಖವಿರುತ್ತದೆ. ಆಕಸ್ಮಿಕವಾಗಿ ಕುಳಿತು-ಕುಳಿತಿದ್ದಂತೆಯೇ ಸಾಯುತ್ತಾರೆ.
ಇದು ಮೃತ್ಯುಲೋಕವಾಗಿದೆ, ನೀವು ಪಾರ್ವತಿಯರಿಗೆ ಸತ್ಯ-ಸತ್ಯವಾದ ಅಮರ ಕಥೆಯನ್ನು ತಿಳಿಸುತ್ತಾರೆ.
ಅಮರ ತಂದೆಯಿಂದ ನಾವು ಅಮರ ಕಥೆಯನ್ನು ಕೇಳುತ್ತಾ ಇದ್ದೇವೆಂಬುದು ನಿಮಗೆ ತಿಳಿದಿದೆ. ಈಗ ನಾವು
ಅಮರಲೋಕಕ್ಕೆ ಹೋಗಬೇಕಾಗಿದೆ. ಈ ಸಮಯದಲ್ಲಿ ನೀವು ಸಂಗಮಯುಗದಲ್ಲಿದ್ದೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1) ವಿಚಾರ ಸಾಗರ
ಮಂಥನ ಮಾಡಿ ಬ್ರಹ್ಮನಿಂದ ವಿಷ್ಣು ಹೇಗಾಗುತ್ತಾರೆ - ಈ ವಿಷಯದ ಬಗ್ಗೆ ತಿಳಿಸಿ ಕೊಡಬೇಕು.
ಬುದ್ಧಿಯನ್ನು ಜ್ಞಾನದ ಮಂಥನದಲ್ಲಿ ಬ್ಯುಜಿಯಾಗಿಟ್ಟುಕೊಳ್ಳಬೇಕು.
2) ರಾಜ್ಯ ಪದವಿಯನ್ನು
ಪ್ರಾಪ್ತಿ ಮಾಡಿಕೊಳ್ಳಲು ಜ್ಞಾನ ಮತ್ತು ಯೋಗದ ಜೊತೆ ಜೊತೆ ತನ್ನ ಸಮಾನ ಮಾಡಿಕೊಳ್ಳುವ ಸೇವೆಯನ್ನೂ
ಸಹ ಮಾಡಬೇಕು. ತನ್ನ ದೃಷ್ಟಿಯನ್ನು ಬಹಳ ಶುದ್ಧವಾಗಿಟ್ಟುಕೊಳ್ಳಬೇಕು.
ವರದಾನ:
ಹೆಸರು ಮತ್ತು
ಮಾನ ತ್ಯಾಗದ ಮುಖಾಂತರ ಸರ್ವರಿಂದ ಪ್ರೀತಿಯನ್ನು ಗಳಿಸುವಂತಹ ವಿಶ್ವದ ಭಾಗ್ಯವಿಧಾತ ಭವ.
ಹೇಗೆ ತಂದೆಯನ್ನು ನಾಮ
ರೂಪದಿಂದ ನ್ಯಾರಾ ಎಂದು ಹೇಳುವಿರಿ ಆದರೆ ಎಲ್ಲರಿಗಿಂತಲೂ ಅಧಿಕ ಹೆಸರಿನ ಗಾಯನ ತಂದೆಯದಿದೆ, ಅದೇ
ರೀತಿ ನೀವೂ ಸಹ ಅಲ್ಪಕಾಲದ ನಾಮ ಮತ್ತು ಮಾನದಿಂದ ನ್ಯಾರಾ ಆಗಿ ಆಗ ಸದಾಕಾಲಕ್ಕಾಗಿ ಸರ್ವರಿಗೆ
ಪ್ರಿಯ ಸ್ವತಃವಾಗಿ ಆಗಿ ಬಿಡುವಿರಿ. ಯಾರು ನಾಮ-ಮಾನದ ಭಿಕಾರಿತನದ ತ್ಯಾಗ ಮಾಡುತ್ತಾರೆ ಅವರು
ವಿಶ್ವದ ಭಾಗ್ಯವಿಧಾತ ಆಗಿ ಬಿಡುತ್ತಾರೆ. ಕರ್ಮದ ಫಲವಂತೂ ಸ್ವತಃ ನಿಮ್ಮ ಮುಂದೆ ಸಂಪನ್ನ
ಸ್ವರೂಪದಲ್ಲಿ ಬರುತ್ತದೆ. ಆದ್ದರಿಂದ ಅಲ್ಪಕಾಲದ ಇಚ್ಛಾ ಮಾತ್ರಂ ಅವಿದ್ಯೆ ಆಗಿ. ಕಚ್ಚಾ ಫಲ ತಿನ್ನ
ಬೇಡಿ, ಅದರ ತ್ಯಾಗ ಮಾಡಿದ್ದೇ ಆದರೆ ಭಾಗ್ಯ ನಿಮ್ಮ ಹಿಂದೆ ಬರುತ್ತದೆ.
ಸ್ಲೋಗನ್:
ಪರಮಾತ್ಮ ತಂದೆಯ
ಮಕ್ಕಳಾಗಿರುವಿರಿ ಅಂದಾಗ ಬುದ್ಧಿರೂಪಿ ಕಾಲು ಸದಾ ಸಿಂಹಾಸನಾಧಿಕಾರಿಯಾಗಿರುತ್ತದೆ.