28.06.20 Avyakt Bapdada
Kannada
Murli
18.02.86 Om Shanti Madhuban
ನಿರಂತರ ಸೇವಾಧಾರಿ ಹಾಗೂ
ನಿರಂತರ ಯೋಗಿಯಾಗಿರಿ
ಇಂದು ಜ್ಞಾನ ಸಾಗರ
ತಂದೆಯು ತನ್ನ ಜ್ಞಾನ ಗಂಗೆಯರನ್ನು ನೋಡುತ್ತಿದ್ದಾರೆ. ಜ್ಞಾನ ಸಾಗರನಿಂದ ಹೊರಟಿರುವ ಜ್ಞಾನ
ಗಂಗೆಯರು ಹೇಗೆ ಮತ್ತು ಎಲ್ಲೆಲ್ಲಿ ಪಾವನ ಮಾಡುತ್ತಾ, ಈ ಸಮಯದಲ್ಲಿ ಸಾಗರ ಮತ್ತು ಗಂಗೆಯ
ಮಿಲನವಾಗುತ್ತಿದ್ದಾರೆ. ಇದು ಗಂಗಾ ಸಾಗರದ ಮಿಲನವಾಗಿದೆ, ಈ ಮೇಳದಲ್ಲಿ ನಾಲ್ಕೂ ಕಡೆಯ ಗಂಗೆಯರೂ
ತಲುಪಿದ್ದಾರೆ. ಬಾಪ್ದಾದಾರವರೂ ಸಹ ಜ್ಞಾನ ಗಂಗೆಯರನ್ನು ನೋಡುತ್ತಾ ಹರ್ಷಿತವಾಗುತ್ತಾರೆ.
ಪ್ರತಿಯೊಂದು ಗಂಗೆಯ ಆಂತರ್ಯದಲ್ಲಿ ಈ ಧೃಡನಿಶ್ಚಯ ಮತ್ತು ನಶೆಯಿದೆ- ಪತಿತ ಪ್ರಪಂಚವನ್ನು, ಪತಿಅ
ಆತ್ಮರನ್ನು ಪಾವನಗೊಳಿಸಲೇಬೇಕು. ಇದೇ ನಿಶ್ಚಯ ಮತ್ತು ನಶೆಯಿಂದ ಪ್ರತಿಯೊಬ್ಬರೂ ಸೇವಾಕ್ಷೇತ್ರದಲ್ಲಿ
ಮುಂದುವರೆಯುತ್ತಾ ಸಾಗುತ್ತಿದ್ದಾರೆ. ಮನಸ್ಸಿನಲ್ಲಿ ಇದೇ ಉಮ್ಮಂಗವಿದೆ- ಬಹಳಬೇಗನೆ ಪರಿವರ್ತನೆಯ
ಕಾರ್ಯವು ಸಂಪನ್ನವಾಗಲಿ. ಎಲ್ಲಾ ಜ್ಞಾನಗಂಗೆಯರು ಜ್ಞಾನಸಾಗರನ ಸಮಾನ ವಿಶ್ವಕಲ್ಯಾಣಿ, ವರದಾನಿ
ಮತ್ತು ಮಹಾದಾನಿ ದಯಾಹೃದಯಿ ಆತ್ಮರಾಗಿದ್ದಾರೆ ಆದ್ದರಿಂದ ಆತ್ಮರ ದುಃಖ, ಅಶಾಂತಿಯ ಧ್ವನಿಯನ್ನು
ಅನುಭವ ಮಾಡಿ ಆತ್ಮರ ದುಃಖ-ಅಶಾಂತಿಯನ್ನು ಪರಿವರ್ತನೆ ಮಾಡುವ ಸೇವೆಯನ್ನು ತೀವ್ರ ಗತಿಯಿಂದ ಮಾಡುವ
ಉಮ್ಮಂಗವು ಹೆಚ್ಚುತ್ತಿರುತ್ತದೆ. ದುಃಖಿ ಆತ್ಮರ ಹೃದಯದ ಕರೆಯನ್ನು ಕೇಳುತ್ತಾ ದಯೆ ಬರುತ್ತದೆ
ಅಲ್ಲವೆ. ಸ್ನೇಹವು ಉತ್ಪನ್ನವಾಗುತ್ತದೆ - ಎಲ್ಲರೂ ಸುಖಿಯಾಗಿ ಬಿಡಲಿ. ಸುಖದ ಕಿರಣಗಳು, ಶಾಂತಿಯ
ಕಿರಣಗಳು, ಶಕ್ತಿಯ ಕಿರಣಗಳನ್ನು ವಿಶ್ವಕ್ಕೆ ಕೊಡಲು ನಿಮಿತ್ತರಾಗಿದ್ದೀರಿ. ಇಂದು ಆದಿಯಿಂದ
ಈಗಿನವರೆಗೆ ಜ್ಞಾನ ಗಂಗೆಯ ಸೇವೆಯು ಎಲ್ಲಿಯವರೆಗೆ ಪರಿವರ್ತನೆ ಮಾಡಲು ನಿಮಿತ್ತರಾಗಿದ್ದಾರೆ,
ಇದನ್ನು ನೋಡುತ್ತಿದ್ದರು. ಈಗಲೂ ಸ್ವಲ್ಪ ಸಮಯದಲ್ಲಿ ಅನೇಕ ಆತ್ಮರ ಸೇವೆಯನ್ನು ಮಾಡಬೇಕು. 50
ವರ್ಷಗಳಲ್ಲಿ ದೇಶ-ವಿದೇಶದಲ್ಲಿ ಸೇವೆಯ ಬುನಾದಿಯನ್ನಂತು ಬಹಳ ಚೆನ್ನಾಗಿ ಹಾಕಿದ್ದಾರೆ.
ಸೇವಾಸ್ಥಾನಗಳನ್ನು ನಾಲ್ಕೂ ಕಡೆಗಳಲ್ಲಿ ಸ್ಥಾಪನೆ ಮಾಡಿದ್ದಾರೆ. ಧ್ವನಿಯನ್ನರಡಿಸುವ ಸಾಧನವನ್ನು
ಭಿನ್ನ-ಭಿನ್ನ ರೂಪಗಳಿಂದ ತಮ್ಮದನ್ನಾಗಿ ಮಾಡಿಕೊಂಡಿದ್ದಾರೆ. ಇದೂ ಸಹ ಸರಿಯಾಗಿಯೇ ಮಾಡಿದ್ದಾರೆ.
ದೇಶ-ವಿದೇಶದಲ್ಲಿ ಚದುರಿರುವ ಮಕ್ಕಳ ಸಂಘಟನೆಯನ್ನೂ ಮಾಡಿದ್ದಾರೆ ಮತ್ತು ಆಗುತ್ತಿರುತ್ತದೆ. ಈಗ
ಇನ್ನೇನು ಮಾಡಬೇಕು? ಏಕೆಂದರೆ ಈಗ ವಿಧಿಯನ್ನೂ ತಿಳಿದು ಬಿಟ್ಟಿದ್ದೀರಿ. ಸಾಧನವೂ ಸಹ ಅನೇಕ
ಪ್ರಕಾರದಲ್ಲಿ ಒಟ್ಟಿಗೆ ಸೇರಿಸುತ್ತಾ ಸಾಗುತ್ತಿದ್ದೀರಿ ಮತ್ತು ಮಾಡಿದ್ದೀರಿ. ಸ್ವ ಸ್ಥಿತಿ,
ಸ್ವ-ಉನ್ನತಿ, ಅದರ ಬಗ್ಗೆಯೂ ಗಮನ ಹರಿಸುತ್ತಿದ್ದಾರೆ ಹಾಗೂ ಗಮನ ತರಿಸುತ್ತಿದ್ದಾರೆ. ಈಗ ಇನ್ನೇನು
ಉಳಿದಿದೆ? ಹೇಗೆ ಆದಿಯಲ್ಲಿ ಎಲ್ಲಾ ಆದಿ ರತ್ನಗಳು ಉಮ್ಮಂಗ-ಉತ್ಸಾಹದಿಂದ ತನು-ಮನ-ಧನ, ಸಮಯ-ಸಂಬಂಧ,
ಹಗಲು-ರಾತ್ರಿ ತಂದೆಗೆ ಅರ್ಪಣೆ ಅರ್ಥಾತ್ ತಂದೆಯ ಮುಂದೆ ಸಮರ್ಪಣೆ ಮಾಡಿದರು, ಆ ಸಮರ್ಪಣೆಯ
ಉಮ್ಮಂಗ-ಉತ್ಸಾಹದ ಫಲ ಸ್ವರೂಪ ಸೇವೆಯಲ್ಲಿ ಶಕ್ತಿಶಾಲಿ ಸ್ಥಿತಿಯ ಪ್ರತ್ಯಕ್ಷ ರೂಪವನ್ನು ನೋಡಿದರು.
ಆದಿಯಲ್ಲಿ ಬ್ರಹ್ಮಾ ತಂದೆಯನ್ನು ನಡೆಯುತ್ತಾ-ಸುತ್ತಾಡುತ್ತಾ ಸಾಧಾರಣವಾಗಿ ನೋಡುತ್ತಿದ್ದಿರಾ ಅಥವಾ
ಕೃಷ್ಣನ ರೂಪದಲ್ಲಿ ನೋಡುತ್ತಿದ್ದಿರಾ? ಸಾಧಾರಣ ರೂಪದಲ್ಲಿ ನೋಡುತ್ತಿದ್ದರೂ ಕಾಣಿಸುತ್ತಿರಲಿಲ್ಲ,
ಈ ಅನುಭವವಿದೆಯಲ್ಲವೆ! ದಾದಾರವರೇನು ಎಂದು ಯೋಚಿಸುತ್ತಿದ್ದಿರಾ? ನಡೆಯುತ್ತಾ-ಸುತ್ತಾಡುತ್ತಾ
ಕೃಷ್ಣನೇ ಅನುಭವ ಮಾಡುತ್ತಿದ್ದಿರಿ. ಹಾಗೆಯೇ ಮಾಡಿದಿರಲ್ಲವೇ? ಆದಿಯಲ್ಲಿ ಬ್ರಹ್ಮಾ ತಂದೆಯಲ್ಲಿ ಈ
ವಿಶೇಷತೆಯನ್ನು ನೋಡಿದಿರಿ, ಅನುಭವ ಮಾಡಿದಿರಿ ಮತ್ತು ಸೇವೆಯ ಆದಿಯಲ್ಲಿ ಯಾವಾಗ ಎಲ್ಲಿಯೇ ಹೋದಿರಿ,
ಎಲ್ಲರೂ ದೇವತೆಗಳೆಂದೇ ಅನುಭವ ಮಾಡಿದರು. ದೇವಿಯರು ಬಂದಿದ್ದಾರೆ, ಇದೇ ಮಾತು ಎಲ್ಲರಿಂದ ಕೇಳುತ್ತಾ,
ಇದೇ ಎಲ್ಲರ ಮುಖದಿಂದ ಬರುತ್ತಿತ್ತು - ಇವರು ಅಲೌಕಿಕ ವ್ಯಕ್ತಿಗಳಾಗಿದ್ದಾರೆ. ಹೀಗೆಯೇ ಅನುಭವ
ಮಾಡಿದರಲ್ಲವೆ? ಈ ದೇವಿಯರ ಭಾವನೆಯು ಎಲ್ಲರನ್ನೂ ಆಕರ್ಷಣೆ ಮಾಡಿ ಸೇವೆಯ ವೃದ್ಧಿಗೆ ನಿಮಿತ್ತರಾದರು.
ಅಂದಾಗ ಆದಿಯಲ್ಲಿಯೂ ಭಿನ್ನತನದ ವಿಶೇಷತೆಯಿತ್ತು. ಸೇವೆಯ ಆದಿಯಲ್ಲಿಯೂ ಭಿನ್ನತನದ, ದೈವತ್ವದ
ವಿಶೇಷತೆಯಿತ್ತು. ಈಗ ಅಂತ್ಯದಲ್ಲಿಯೂ ಅದೇ ಹೊಳಪು ಮತ್ತು ನಶೆಯು ಪ್ರತ್ಯಕ್ಷ ರೂಪದಲ್ಲಿ ಅನುಭವ
ಮಾಡುವರು, ಆಗಲೇ ಪ್ರತ್ಯಕ್ಷತೆಯ ನಗಾರಿಯು ಮೊಳಗುತ್ತದೆ. ಈಗ ಇರುವಂತಹ ಸ್ವಲ್ಪ ಸಮಯದಲ್ಲಿ ನಿರಂತರ
ಯೋಗಿ, ನಿರಂತರ ಸೇವಾಧಾರಿ, ನಿರಂತರ ಸಾಕ್ಷಾತ್ಕಾರ ಸ್ವರೂಪ, ನಿರಂತರ ಯೋಗಿ, ನಿರಂತರ ಸಾಕ್ಷಾತ್
ತಂದೆ ಈ ವಿಧಿಯಿಂದ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುವಿರಿ. ಗೋಲ್ಡನ್ ಜುಬಿಲಿಯನ್ನಾಚರಿಸುವುದು
ಅರ್ಥಾತ್ ಗೋಲ್ಡನ್ ಪ್ರಪಂಚದ ಸಾಕ್ಷಾತ್ಕಾರ ಸ್ವರೂಪದವರೆಗೆ ತಲುಪುವುದು. ಹೇಗೆ ಗೋಲ್ಡನ್
ಜುಬಿಲಿಯನ್ನು ಆಚರಿಸುವುದರ ದೃಶ್ಯದಲ್ಲಿ ಸಾಕ್ಷಾತ್ ದೇವಿಯರ ಅನುಭವ ಮಾಡಿದಿರಿ,
ಕುಳಿತುಕೊಳ್ಳುವವರೂ ಸಹ, ನೋಡುವವರೂ ಸಹ, ನಡೆಯುತ್ತಾ-ಸುತ್ತಾಡುತ್ತಾ ಈಗ ಇದೇ ಅನುಭವವನ್ನು
ಸೇವೆಯಲ್ಲಿ ಮಾಡಿಸುತ್ತಿರಬೇಕು. ಇದಾಯಿತು ಗೋಲ್ಡನ್ ಜುಬಿಲಿಯನ್ನಾಚರಿಸುವುದು. ಎಲ್ಲರೂ ಗೋಲ್ಡನ್
ಜುಬಿಲಿಯನ್ನು ಆಚರಿಸಿದಿರೇ ಅಥವಾ ನೋಡಿದಿರಾ? ಏನು ಹೇಳುವಿರಿ? ತಮ್ಮೆಲ್ಲರದೂ ಸಹ ಗೋಲ್ಡನ್
ಜುಬಿಲಿಯಾಯಿತಲ್ಲವೆ ಅಥವಾ ಕೆಲವರದು ಸಿಲ್ವರ್ ಆಯಿತು, ಕೆಲವರದು ತಾಮ್ರದ್ದಾಯಿತೇ? ಎಲ್ಲರದೂ
ಗೋಲ್ಡನ್ ಜುಬಿಲಿಯಾಯಿತು. ಗೋಲ್ಡನ್ ಜುಬಿಲಿಯನ್ನಾಚರಿಸುವುದು ಅರ್ಥಾತ್ ನಿರಂತರ ಗೋಲ್ಡನ್
ಸ್ಥಿತಿಯವರಾಗುವುದು. ಈಗ ನಡೆಯುತ್ತಾ-ಸುತ್ತಾಡುತ್ತಾ ಇದೇ ಅನುಭವದ ನಡೆಯಿರಿ - ನಾನು ಫರಿಶ್ತಾ ಸೋ
ದೇವತಾ ಆಗಿದ್ದೇನೆ. ಅನ್ಯರಿಗೂ ಸಹ ತಮ್ಮ ಈ ಸಮರ್ಥ ಸ್ಮೃತಿಯಿಂದ ತಮ್ಮ ಫರಿಶ್ತಾ ರೂಪ ಅಥವಾ
ದೇವಿ-ದೇವತಾ ರೂಪವೇ ಕಾಣಿಸುತ್ತದೆ. ಗೋಲ್ದನ್ ಜುಬಿಲಿಯನ್ನಾಚರಿಸುವುದು ಅರ್ಥಾತ್ ಈಗ ಸಮಯವನ್ನು,
ಸಂಕಲ್ಪವನ್ನು, ಸೇವೆಯಲ್ಲಿ ಅರ್ಪಣೆ ಮಾಡಿ. ಈಗ ಈ ಸಮರ್ಪಣಾ ಸಮಾರೋಹವನ್ನಾಚರಿಸಿರಿ. ಸ್ವಯಂನ
ಚಿಕ್ಕ ಪುಟ್ಟ ಮಾತುಗಳ ಹಿಂದೆ, ತನುವಿನ ಹಿಂದೆ, ಮನಸ್ಸಿನ ಹಿಂದೆ, ಸಾಧನಗಳ ಹಿಂದೆ, ಸಂಬಂಧಗಳನ್ನು
ನಿಭಾಯಿಸುವುದರ ಹಿಂದೆ ಸಮಯವನ್ನು ಉಪಯೋಗಿಸುವ ಸಮಯದ ಪರಿವರ್ತನೆ ಮಾಡಿ. ಸೇವೆಯಲ್ಲಿ ಉಪಯೋಗಿಸುವುದು
ಅರ್ಥಾತ್ ಸ್ವ-ಉನ್ನತಿಯ ಗಿಫ್ಟ್ ಸ್ವತಹವಾಗಿಯೇ ಪ್ರಾಪ್ತಿಯಾಗುವುದು. ಈಗ ತಮಗಾಗಿ ಸಮಯವನ್ನು
ಉಪಯೋಗಿಸುವ ಸಮಯವನ್ನು ಪರಿವರ್ತನೆ ಮಾಡಿರಿ. ಶ್ವಾಸವನ್ನು ಹೇಗೆ ಭಕ್ತಾತ್ಮರು ಶ್ವಾಸ-ಶ್ವಾಸದಲ್ಲಿ
ಹೆಸರನ್ನು ಜಪಿಸುವ ಪ್ರಯತ್ನ ಪಡುತ್ತಾರೆ. ಹಾಗೆಯೇ ಶ್ವಾಸ-ಶ್ವಾಸವೂ ಸೇವೆಯ ಲಗನ್ ಇರಲಿ.
ಸೇವೆಯಲ್ಲಿ ಮಗ್ನರಾಗಿರಿ. ವಿದಾತಾ ಆಗಿರಿ, ವರದಾತಾ ಆಗಿರಿ. ನಿರಂತರ ಮಹಾದಾನಿ ಆಗಿರಿ. 4 ಗಂಟೆಯ,
6 ಗಂಟೆಗಳ ಸೇವಾಧಾರಿ ಅಲ್ಲ, ಈಗ ವಿಶ್ವ ಕಲ್ಯಾಣಕಾರಿ ಸ್ಥಿತಿಯಲ್ಲಿದ್ದೀರಿ. ಪ್ರತೀ ಗಳಿಗೆಯೂ
ವಿಶ್ವ ಕಲ್ಯಾಣಕ್ಕಾಗಿ ಸಮರ್ಪಣೆ ಮಾಡಿರಿ. ವಿಶ್ವ ಕಲ್ಯಾಣದಲ್ಲಿ ಸ್ವ ಕಲ್ಯಾಣವು ಸ್ವತಹವಾಗಿಯೇ
ಸಮಾವೇಶವಾಗಿದೆ. ಯಾವಾಗ ಸಂಕಲ್ಪ ಮತ್ತು ಸೆಕೆಂಡ್ ಸೇವೆಯಲ್ಲಿಯೇ ಬ್ಯುಸಿಯಾಗಿರುತ್ತೀರಿ,
ಬಿಡುವಿರುವುದಿಲ್ಲ, ಮಾಯೆಗೂ ಸಹ ತಮ್ಮ ಬಳಿ ಬರುವ ಬಿಡುವಿರುವುದಿಲ್ಲ. ಸಮಸ್ಯೆಗಳು ಸಮಾಧಾನ
ರೂಪದಲ್ಲಿ ಪರಿವರ್ತನೆಯಾಗಿ ಬಿಡುತ್ತದೆ. ಸಮಾಧಾನ ಸ್ವರೂಪ ಶ್ರೇಷ್ಠಾತ್ಮರ ಬಳಿ ಸಮಸ್ಯೆಗಳು ಬರುವ
ಸಾಹಸವನ್ನಿಡಲು ಸಾಧ್ಯವಿಲ್ಲ. ಹೇಗೆ ಪ್ರಾರಂಭದ ಸೇವೆಯಲ್ಲಿ ನೋಡಿದಿರಿ – ದೇವಿ ರೂಪ, ಶಕ್ತಿ ರೂಪದ
ಕಾರಣದಿಂದ ಬಂದಿರುವ ಪತಿತ ದೃಷ್ಟಿಯವರೂ ಸಹ ಪರಿವರ್ತನೆಯಾಗಿ, ಪಾವನರಾಗುವ ಜಿಜ್ಞಾಸುಗಳಾಗಿ
ಬಿಟ್ಟರು. ಹೇಗೆ ಪತಿತರು ಪರಿವರ್ತನೆಯಾಗಿ ತಮ್ಮ ಮುಂದೆ ಬಂದರು, ಹಾಗೆಯೇ ಸಮಸ್ಯೆಗಳು ತಮ್ಮಮುಂದೆ
ಬರುತ್ತಾ ಸಮಾಧಾನ ರೂಪದಲ್ಲಿ ಪರಿವರ್ತನೆಯಾಗಿ ಬಿಡಲಿ. ಈಗ ತಮ್ಮ ಸಂಸ್ಕಾರಗಳ ಪರಿವರ್ತನೆಯಲ್ಲಿ
ಸಮಯವನ್ನು ತೊಡಗಿಸದಿರಿ. ವಿಶ್ವ ಕಲ್ಯಾಣದ ಶ್ರೇಷ್ಠ ಭಾವನೆಯಿಂದ ಶ್ರೇಷ್ಠ ಕಾಮನೆಯ ಸಂಸ್ಕಾರಗಳನ್ನು
ಇಮರ್ಜ್ ಮಾಡಿಕೊಳ್ಳಿರಿ. ಈ ಶ್ರೇಷ್ಠ ಸಂಸ್ಕಾರದ ಪರಿವರ್ತನೆಯಲ್ಲಿ ಸಮಯವನ್ನು ಕಳೆಯದಿರಿ. ಈ
ಶ್ರೇಷ್ಠ ಸಂಸ್ಕಾರದ ಮುಂದೆ ಅಲ್ಪಕಾಲದ ಸಂಸ್ಕಾರವು ಸ್ವತಹವಾಗಿಯೇ ಸಮಾಪ್ತಿಯಾಗಿ ಬಿಡುತ್ತದೆ. ಈಗ
ಯುದ್ಧದಲ್ಲಿ ಸಮಯವನ್ನು ಕಳೆಯಬೇಡಿ. ವಿಜಿಯಯಾಗುವ ಸಂಸ್ಕಾರವನ್ನು ಇಮರ್ಜ್ ಮಾಡಿಕೊಳ್ಳಿರಿ.
ಶತ್ರುವು ವಿಜಯಿ ಸಂಸ್ಕಾರಗಳ ಮುಂದೆ ಸ್ವತಹವಾಗಿಯೇ ಭಸ್ಮವಾಗಿ ಬಿಡುತ್ತದೆ. ಆದ್ದರಿಂದ ಹೇಳಿದೆವು,
ತನು-ಮನ-ಧನವನ್ನು ನಿರಂತರ ಸೇವೆಯಲ್ಲಿ ಸಮರ್ಪಣೆ ಮಾಡಿರಿ. ಭಲೆ ಮನಸ್ಸಾ ಮಾಡಿರಿ, ಭಲೆ ವಾಚಾ
ಮಾಡಿರಿ, ಭಲೆ ಕರ್ಮಣಾ ಮಾಡಿರಿ ಆದರೆ ಸೇವೆಯಿಲ್ಲದೆ ಮತ್ತ್ಯಾವುದೇ ಸಮಸ್ಯೆಗಳಲ್ಲಿ ನಡೆಯದಿರಿ.
ದಾನ ಕೊಡಿ, ವರದಾನ ಕೊಡುತ್ತೀರೆಂದರೆ ಸ್ವಯಂ ಗ್ರಹಣವು ಸ್ವತಹವಾಗಿಯೇ ಸಮಾಪ್ತಿಯಾಗಿ ಬಿಡುತ್ತದೆ.
ಅವಿನಾಶಿ ಪ್ರತಿಜ್ಞೆಯನ್ನು ಮಾಡಿರಿ ಏಕೆಂದರೆ ಸಮಯ ಕಡಿಮೆಯಿದೆ ಮತ್ತು ಸೇವೆ ಆತ್ಮರ, ವಾಯುಮಂಡಲದ,
ಪ್ರಕೃತಿಯ, ಭೂತ-ಪ್ರೇತಾತ್ಮರ, ಎಲ್ಲರ ಸೇವೆಯನ್ನು ಮಾಡಬೇಕಿದೆ. ಅಲೆದಾಡುತ್ತಿರುವ ಆತ್ಮರುಗಳಿಗೂ
ನೆಲೆಯನ್ನು ಕೊಡಬೇಕಾಗಿದೆ. ಮುಕ್ತಿಧಾಮದಲ್ಲಂತು ಕಳುಹಿಸುತ್ತೀರಲ್ಲವೆ! ಅವರಿಗೆ ಮನೆಯಂತು
ಕೊಡುತ್ತೀರಲ್ಲವೆ! ಅಂದಾಗ ಈಗ ಎಷ್ಟೊಂದು ಸೇವೆಯನ್ನು ಮಾಡಬೇಕು. ಆತ್ಮರುಗಳ ಎಷ್ಟೊಂದು ಸಂಖ್ಯೆಯಿದೆ!
ಪ್ರತಿಯೊಂದು ಆತ್ಮನಿಗೆ ಮುಕ್ತಿ ಆಥವಾ ಜೀವನ್ಮುಕ್ತಿಯನ್ನು ಕೊಡಲೇಬೇಕು. ಎಲ್ಲವನ್ನೂ ಸೇವೆಯಲ್ಲಿ
ತೊಡಗಿಸುತ್ತೀರೆಂದರೆ ಶ್ರೇಷ್ಠ ಫಲವನ್ನೂ ಚೆನ್ನಾಗಿ ಅನುಭವಿಸಿರಿ. ಪರಿಶ್ರಮದ ಫಲವನ್ನಲ್ಲ. ಸೇವೆಯ
ಫಲ, ಪರಿಶ್ರಮದಿಂದ ಮುಕ್ತಗೊಳಿಸುವಂತದ್ದಾಗಿದೆ.
ಬಾಪ್ದಾದಾರವರು
ಫಲಿತಾಂಶದಲ್ಲಿ ನೋಡಿದರು - ಬಹಳಷ್ಟು ಯಾರು ಪುರುಷಾರ್ಥದಲ್ಲಿ ತನ್ನ ಪ್ರತಿ ಸಂಸ್ಕಾರ ಪರಿವರ್ತನೆಯ
ಬಗ್ಗೆ ಸಮಯ ಕೊಡುತ್ತಾರೆ. ಭಲೆ 50 ವರ್ಷಗಳಾಗಿ ಬಿಟ್ಟಿದೆ, ಭಲೆ ಒಂದು ತಿಂಗಳಾಗಿರಬಹುದು ಆದರೆ
ಆದಿಯಿಂದ ಈಗಿನವರೆಗೆ ಪರಿವರ್ತನೆ ಮಾಡುವ ಸಂಸ್ಕಾರವು, ಮೂಲ ರೂಪದಲ್ಲಿ ಅದೇ ಆಗುತ್ತದೆ, ಒಂದೇ
ಆಗುರುತ್ತದೆ. ಮತ್ತು ಅದೇ ಮೂಲ ಸಂಸ್ಕಾರವು ಭಿನ್ನ-ಭಿನ್ನ ರೂಪದಲ್ಲಿ ಸಮಸ್ಯೆಯಾಗಿ ಬರುತ್ತದೆ.
ಉದಾಹರಣೆಗಾಗಿ: ಯಾರಲ್ಲಿಯೇ ಬುದ್ಧಿಯ ಅಭಿಮಾನದ ಸಂಸ್ಕಾರವಿದೆ, ಕೆಲವರ ತಿರಸ್ಕಾರ ಭಾವದ
ಸಂಸ್ಕಾರವಿದೆ ಅಥವಾ ಯಾರದೇ ಹೃದಯ ವಿಧೀರ್ಣನಾಗುವ ಸಂಸ್ಕಾರವಿದೆ. ಸಂಸ್ಕಾರವು ಅದೇ ಆದಿಯಿಂದ
ಈಗಿನವರೆಗೆ ಭಿನ್ನ-ಭಿನ್ನ ಸಮಯದಲ್ಲಿ ಇಮರ್ಜ್ ಆಗುತ್ತಿರುತ್ತದೆ. ಭಲೆ 50 ವರ್ಷಗಳಾಗಿರಲಿ,
ಅದರಲ್ಲಿ ಸಮಯವೂ ಬಹಳಷ್ಟು ಉಪಯೋಗಿಸಲಾಗಿದೆ. ಶಕ್ತಿಯನ್ನೂ ಬಹಳ ಉಪಯೋಗಿಸಲಾಗಿದೆ. ಈಗ ಶಕ್ತಿಶಾಲಿ
ಸಂಸ್ಕಾರ ದಾತಾ, ವಿದಾತಾ, ವರದಾತಾನ ಸಂಸ್ಕಾರವನ್ನು ಇಮರ್ಜ್ ಮಾಡಿಕೊಳ್ಳಿರಿ. ಅಂದಾಗ ಈ ಮಹಾ
ಸಂಸ್ಕಾರವು ಬಲಹೀನ ಸಂಸ್ಕಾರಗಳನ್ನು ಸ್ವತಹವಾಗಿಯೇ ಸಮಾಪ್ತಿಗೊಳಿಸಿ ಬಿಡುತ್ತದೆ. ಈಗ
ಸಂಸ್ಕಾರವನ್ನು ಸಮಾಪ್ತಿ ಮಾಡುವುದರಲ್ಲಿ ಸಮಯವನ್ನು ಉಪಯೋಗಿಸಬಾರದು. ಆದರೆ ಸೇವೆಯ ಫಲದಿಂದ, ಫಲದ
ಶಕ್ತಿಯಿಂದ ಸ್ವತಹವಾಗಿಯೇ ಸಮಾಪ್ತಿಯಾಗಿ ಬಿಡುತ್ತದೆ. ಹೇಗೆ ಅನುಭವವೂ ಇದೆ - ಒಳ್ಳೆಯ
ಸ್ಥಿತಿಯಿಂದ ಯಾವಾಗ ಸೇವೆಯಲ್ಲಿ ಬ್ಯುಸಿಯಾಗಿರುತ್ತೀರಿ, ಆಗ ಸೇವೆಯ ಖುಷಿಯಿಂದ ಆ ಸಮಯದವರೆಗೆ
ಸಮಸ್ಯೆಗಳು ಸ್ವತಹವಾಗಿಯೇ ಅದುಮಿಟ್ಟಿರುತ್ತದೆ ಏಕೆಂದರೆ ಸಮಸ್ಯೆಗಳ ಬಗ್ಗೆ ಯೋಚಿಸಲು ಸಮಯವೇ
ಇರುವುದಿಲ್ಲ. ಪ್ರತಿ ಸೆಕೆಂಡ್, ಪ್ರತಿ ಸಂಕಲ್ಪವು ಸೇವೆಯಲ್ಲಿಯೇ ಬ್ಯುಸಿಯಾಗಿರುತ್ತೀರೆಂದರೆ
ಸಮಸ್ಯೆಗಳ ಕಾಲನ್ನಿಡುವುದಿಲ್ಲ, ದೂರವಾಗಿ ಬಿಡುತ್ತದೆ. ತಾವು ಅನ್ಯರಿಗೆ ಮಾರ್ಗ ತೋರಿಸುವ, ತಂದೆಯ
ಖಜಾನೆಯನ್ನು ಕೊಡಲು ನಿಮಿತ್ತ ಆಶ್ರಯರಾಗಿರುತ್ತೀರೆಂದರೆ, ಬಲಹೀನತೆಗಳಿಂದ ಮುಕ್ತರು ಸ್ವತಹವಾಗಿಯೇ
ಆಗಿ ಬಿಡುತ್ತದೆ. ತಿಳಿಯಿತೆ - ಈಗೇನು ಮಾಡಬೇಕು? ಈಗ ಬೇಹದ್ದಿನದನ್ನು ಯೋಚಿಸಿರಿ, ಬೇಹದ್ದಿನ
ಕಾರ್ಯವನ್ನು ಯೋಚಿಸಿರಿ. ಭಲೆ ದೃಷ್ಟಿಯಿಂದ ಕೊಡಿ, ಭಲೆ ವೃತ್ತಿಯಿಂದ ಕೊಡಿ, ಭಲೆ ವಾಣಿಯಿಂದ ಕೊಡಿ,
ಭಲೆ ಸಂಗದಿಂದ ಕೊಡಿ, ಭಲೆ ವೈಬ್ರೇಷನ್ನಿಂದ ಕೊಡಿ, ಆದರೆ ಕೊಡಲೇಬೇಕು. ಹಾಗೆ ನೋಡಿದರೆ ಭಕ್ತರಲ್ಲಿ
ಈ ನಿಯಮವಿರುತ್ತದೆ, ಯಾವುದೇ ವಸ್ತುವಿನ ಕೊರತೆಯಾಯಿತೆಂದರೆ ಹೇಳುತ್ತಾರೆ - ದಾನ ಮಾಡಿರಿ. ದಾನ
ಮಡುವುದರಿಂದ ಕೊಡುವುದು, ತೆಗೆದುಕೊಳ್ಳುವುದಾಗಿ ಬಿಡುತ್ತದೆ. ಗೋಲ್ಡನ್ ಜುಬಿಲಿ ಏನೆಂದು ತಿಳಿಯಿತೆ.
ಕೇವಲ ಆಚರಿಸಿ ಬಿಟ್ಟೆವು - ಇದನ್ನು ಯೋಚಿಸಬೇಡಿ. ಸೇವೆಯ 50 ವರ್ಷಗಳು ಪೂರ್ಣಗೊಂಡಿತು, ಈಗ ಹೊಸ
ತಿರುವನ್ನು ತೆಗೆದುಕೊಳ್ಳಿರಿ. ಹಿರಿಯ-ಕಿರಿಯ, ಒಂದು ದಿನದವರಾಗಿರಬಹುದು ಆಥವಾ 50 ವರ್ಷದವರು,
ಎಲ್ಲರೂ ಸಮಾಧಾನ ಸ್ವರೂಪರಾಗಿರಿ. ತಿಳಿಯಿತೆ - ಏನು ಮಾಡಬೇಕಾಗಿದೆ. ಹಾಗೆ ನೋಡಿದರೆ 50 ವರ್ಷಗಳ
ನಂತರ ಜೀವನವು ಪರಿವರ್ತನೆಯಾಗುತ್ತದೆ. ಗೋಲ್ಡನ್ ಜುಬಿಲಿ ಅರ್ಥಾತ್ ಪರಿವರ್ತನೆಯ ಜುಬಿಲಿ,
ಸಂಪನ್ನರಾಗುವ ಜುಬಿಲಿ. ಒಳ್ಳೆಯದು.
ಸದಾ ವಿಶ್ವ ಕಲ್ಯಾಣಕಾರಿ
ಸಮರ್ಥರಾಗುವಂತಹ, ಸದಾ ವರದಾನಿ, ಮಹಾದಾನಿ ಸ್ಥಿತಿಯಲ್ಲಿ ಸ್ಥಿತರಾಗಿರುವ, ಸದಾ ಸ್ವಯಂನ
ಸಮಸ್ಯೆಗಳನ್ನು ಅನ್ಯರ ಪ್ರತಿ ಸಮಾಧಾನ ಸ್ವರೂಪರಾಗಿ ಸಹಜವಾಗಿ ಸಮಾಪ್ತಿಗೊಳಿಸುವ, ಪ್ರತಿ ಸಮಯ
ಪ್ರತಿ ಸಂಕಲ್ಪವನ್ನು ಸೇವೆಯಲ್ಲಿ ಸಮರ್ಪಣೆ ಮಾಡುವಂತಹ ರಿಯಲ್ ಗೋಲ್ಡ್ ವಿಶೇಷ ಆತ್ಮರಿಗೆ, ತಂದೆಯ
ಸಮಾನ ಶ್ರೇಷ್ಠಾತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ಗೋಲ್ಡನ್ ಜುಬಿಲಿಯ ಆದಿ
ರತ್ನಗಳೊಂದಿಗೆ ಬಾಪ್ದಾದಾರವರ ವಾರ್ತಾಲಾಪ –
ಈ ವಿಶೇಷ ಖುಷಿಯು ಸದಾ
ಇರುತ್ತದೆಯೇ - ಆದಿಯಿಂದ ನಾವು ಆತ್ಮರು ಜೊತೆಯಿರುವ ಮತ್ತು ಜೊತೆಗಾರರಾಗಿರುವ ಎರಡೂ ವಿಶೇಷ
ಪಾತ್ರವಿದೆ. ಜೊತೆಯಲ್ಲಿಯೂ ಇದ್ದೆವು ಮತ್ತು ನಂತರ ಎಲ್ಲಿಯವರೆಗೆ ಬದುಕಿರುತ್ತೇವೆ ಅಲ್ಲಿಯವರೆಗೆ
ಸ್ಥಿತಿಯಲ್ಲಿಯೂ ತಂದೆಯ ಸಮಾನ ಜೊತೆಗಾರರಾಗಿರಬೇಕು. ಅಂದಾಗ ಜೊತೆಯಿರುವುದು ಮತ್ತು
ಜೊತೆಗಾರರಾಗುವುದು - ಈ ವಿಶೇಷ ವರದಾನವು ಆದಿಯಿಂದ ಅಂತ್ಯದವರೆಗೆ ಸಿಕ್ಕಿದೆ. ಸ್ನೇಹದಿಂದ
ಜನ್ಮವಾಯಿತು, ಜ್ಞಾನವಂತು ಮೊದಲಿರಲಿಲ್ಲ ಅಲ್ಲವೆ. ಸ್ನೇಹದಿಂದಲೇ ಜನ್ಮವಾಯಿತು, ಯಾವ ಸ್ನೇಹದಿಂದ
ಜನ್ಮವಾಯಿತು, ಅದೇ ಸ್ನೇಹವನ್ನು ಎಲ್ಲರಿಗೂ ಕೊಡುವುದಕ್ಕಾಗಿ ನಿಮಿತ್ತರಾಗಿದ್ದೀರಿ. ಯಾರೇ ಮುಂದೆ
ಬರುತ್ತಾರೆ ವಿಶೇಷವಾಗಿ ತಮ್ಮೆಲ್ಲರಿಂದ ತಂದೆಯ ಸ್ನೇಹದ ಅನುಭವ ಮಾಡಲಿ. ತಮ್ಮಲ್ಲಿ ತಂದೆಯ ಚಿತ್ರ
ಮತ್ತು ತಮ್ಮ ಚಲನೆಯಿಂದ ತಂದೆಯ ಚರಿತ್ರೆಯು ಕಾಣಿಸಲಿ. ಒಂದುವೇಳೆ ಯಾರೇ ಕೇಳುತ್ತಾರೆ - ತಂದೆಯ
ಚರಿತ್ರೆಯೇನು, ಆಗ ತಮ್ಮ ಚಲನೆಯಲ್ಲಿ ಚರಿತ್ರೆಯು ಕಾಣಿಸಲಿ. ಏಕೆಂದರೆ ಸ್ವಯಂ ತಂದೆಯ
ಚರಿತ್ರೆಯನ್ನು ನೋಡುವ ಮತ್ತು ಜೊತೆ ಜೊತೆಗೆ ಚರಿತ್ರೆಯಲ್ಲಿ ನಡೆಯುವಂತಹ ಆತ್ಮರಾಗಿದ್ದೀರಿ.
ಚರಿತ್ರೆಯೆನೆಲ್ಲಾ ನಡೆಯಿತು, ಅದು ಒಬ್ಬ ತಂದೆಯ ಚರಿತ್ರೆಯಲ್ಲ. ಗೋಪಿ ವಲ್ಲಭ ಮತ್ತು ಗೋಪಿಕೆಯರದೇ
ಚರಿತ್ರೆಯಾಗಿದೆ. ತಂದೆಯು ಮಕ್ಕಳ ಜೊತೆಯೇ ಪ್ರತಿಯೊಂದು ಕರ್ಮವನ್ನು ಮಾಡಿದರು, ಒಬ್ಬರೇ ಮಾಡಲಿಲ್ಲ.
ಸದಾ ಮುಂದೆ ಮಕ್ಕಳನ್ನಿಟ್ಟರು. ಅಂದಾಗ ಮುಂದಿಡುವುದು ಚರಿತ್ರೆಯಾಯಿತು. ಅಂತಹ ಚರಿತ್ರೆಯು ತಾವು
ವಿಶೇಷ ಆತ್ಮರ ಮೂಲಕ ಕಾಣಿಸಲಿ. ಎಂದಿಗೂ ಸಹ "ನಾನು ಮುಂದಿರಬೇಕು" ಈ ಸಂಕಲ್ಪವನ್ನು ತಂದೆಯು (ಬ್ರಹ್ಮಾ)
ಮಾಡಲಿಲ್ಲ. ಇದರಲ್ಲಿಯೂ ಸದಾ ತ್ಯಾಗಿಯಾಗಿದ್ದರು ಮತ್ತು ಇದೇ ತ್ಯಾಗದ ಫಲದಲ್ಲಿ ಎಲ್ಲರನ್ನೂ
ಮುಂದಿಟ್ಟರು. ಆದ್ದರಿಂದ ಮೊದಲಿನ ಫಲವು ಸಿಕ್ಕಿತು. ನಂಬರ್ವನ್ ಪ್ರತೀ ಮಾತಿನಲ್ಲಿಯೂ ಬ್ರಹ್ಮಾ
ತಂದೆಯೇ ಆದರು. ಏಕಾದರು? ಮುಂದಿಡುವುದು ಮುಂದೆ ಹೋಗುವುದು, ಈ ತ್ಯಾಗದ ಭಾವದಿಂದ. ಸಂಬಂಧದ ತ್ಯಾಗ,
ವೈಭವಗಳ ತ್ಯಾಗವೇನೂ ದೊಡ್ಡ ಮಾತಲ್ಲ. ಆದರೆ ಪ್ರತೀ ಕಾರ್ಯದಲ್ಲಿ, ಸಂಕಲ್ಪದಲ್ಲಿಯೂ ಅನ್ಯರನ್ನು
ಮುಂದಿಡುವ ಭಾವನೆ. ಈ ತ್ಯಾಗವು ಶ್ರೇಷ್ಠ ತ್ಯಾಗವಾಗಿತ್ತು. ಇದಕ್ಕೆ ಸ್ವಯಂನ ಪರಿವೆಯನ್ನು ಸಮಾಪ್ತಿ
ಮಾಡುವುದೆಂದು ಹೇಳಲಾಗುತ್ತದೆ. ನಾನು ಎನ್ನುವುದು ಸಮಾಪ್ತಿ ಮಾಡಿಬಿಡುವುದಾಗಿದೆ. ಅದರಿಂದ
ಡೈರೆಕ್ಟ್ ಪಾಲನೆಯನ್ನು ತೆಗೆದುಕೊಳ್ಳುವುದರಲ್ಲಿ ವಿಶೇಷ ಶಕ್ತಿಗಳಿವೆ. ಡೈರೆಕ್ಟ್ ಪಾಲನೆಯ
ಶಕ್ತಿಗಳು ಕಡಿಮೆಯಿಲ್ಲ. ಅದೇ ಪಾಲನೆಯೀಗ ಅನ್ಯರ ಪಾಲನೆಯಲ್ಲಿ ಪ್ರತ್ಯಕ್ಷ ಮಾಡುತ್ತಾ ಸಾಗಿರಿ.
ಹಾಗೆ ನೋಡಿದರೆ ವಿಶೇಷವಂತು ಇದ್ದೀರಿ. ಅನೇಕ ಮಾತುಗಳಲ್ಲಿ ವಿಶೇಷವಾಗಿದ್ದೀರಿ. ಆದಿಯಿಂದ ತಂದೆಯ
ಜೊತೆ ಪಾತ್ರವನ್ನಭಿನಯಿಸುವುದು, ಇದೇನೂ ಕಡಿಮೆ ವಿಶೇಷತೆಯಲ್ಲ. ವಿಶೇಷತೆಗಳು ಬಹಳಷ್ಟಿವೆ ಆದರೆ ಈಗ
ತಾವು ವಿಶೇಷ ಆತ್ಮರು ದಾನವನ್ನೂ ವಿಶೇಷವಾಗಿ ಮಾಡಬೇಕು. ಜ್ಞಾನ ದಾನವಂತು ಎಲ್ಲರೂ ಮಾಡುತ್ತಾರೆ,
ಆದರೆ ತಾವು ತಮ್ಮ ವಿಶೇಷತೆಗಳನ್ನು ದಾನ ಮಾಡಬೇಕು. ತಂದೆಯ ವಿಶೇಷತೆಗಳು ಸೋ ತಮ್ಮ ವಿಶೇಷತೆಗಳು.
ಅಂದಾಗ ಆ ವಿಶೇಷತೆಗಳನ್ನು ದಾನ ಮಾಡಿರಿ. ಯಾರು ವಿಶೇಷತೆಗಳ ಮಹಾದಾನಿಯಾಗಿದ್ದಾರೆ, ಅವರು
ಸದಾಕಾಲಕ್ಕಾಗಿ ಮಹಾನರಾಗುತ್ತಾರೆ. ಭಲೆ ಪೂಜ್ಯನಾಗುವುದರಲ್ಲಿ, ಭಲೆ ಪೂಜಾರಿಯಾಗುವುದರಲ್ಲಿ, ಇಡೀ
ಕಲ್ಪದಲ್ಲಿ ಮಹಾನರಾಗಿರುತ್ತಾರೆ. ಹೇಗೆ ಬ್ರಹ್ಮಾ ತಂದೆಯನ್ನು ನೋಡಿದಿರಿ - ಅಂತ್ಯದಲ್ಲಿಯೂ ಸಹ
ಕಲಿಯುಗೀ ಪ್ರಪಂಚದ ಲೆಕ್ಕದಿಂದಲೂ ಮಹಾನರಾಗಿದ್ದರಲ್ಲವೆ. ಹಾಗಾದರೆ ಆದಿಯಿಂದ ಅಂತ್ಯದವರೆಗೆ ಇಂತಹ
ಮಹಾದಾನಿ, ಮಹಾನರಾಗಿರುತ್ತಾರೆ. ಒಳ್ಳೆಯದು - ತಮ್ಮನ್ನು ನೋಡಿ ಎಲ್ಲರೂ ಖುಷಿಯಾದರು, ಅಂದಾಗ
ಖುಷಿಯನ್ನು ಹಂಚಿದಿರಲ್ಲವೆ. ಬಹಳ ಚೆನ್ನಾಗಿ ಆಚರಿಸಿದಿರಿ, ಎಲ್ಲರನ್ನೂ ಖುಷಿ ಪಡಿಸಿದಿರಿ ಮತ್ತು
ಖುಷಿಯಾದಿರಿ. ಬಾಪ್ದಾದಾರವರು ವಿಶೇಷ ಆತ್ಮರ ವಿಶೇಷ ಕಾರ್ಯದಲ್ಲಿ ಹರ್ಷಿತರಾಗುತ್ತಾರೆ. ಸ್ನೇಹದ
ಮಾಲೆಯಂತು ತಯಾರಾಗಿದೆಯಲ್ಲವೆ. ಪುರುಷಾರ್ಥದ ಮಾಲೆ, ಸಂಪೂರ್ಣರಾಗುವ ಮಾಲೆ - ಅದಂತು ಸಮಯ - ಪ್ರತಿ
ಸಮಯ ಪ್ರತ್ಯಕ್ಷವಾಗುತ್ತಿದೆ.
ಯಾರೆಷ್ಟು ಫರಿಶ್ತೆಯ
ಸಂಪೂರ್ಣ ಅನುಭವವಾಗುತ್ತದೆ, ಅದನ್ನು ತಿಳಿಯಿರಿ - ಮಣಿಯು ಮಾಲೆಯಲ್ಲಿ ಪೋಣಿಸಲ್ಪಡುತ್ತಿದೆ.
ಅಂದಾಗ ಅದು ಸಮಯ-ಪ್ರತಿ ಸಮಯದಲ್ಲಿ ಪ್ರತ್ಯಕ್ಷವಾಗುತ್ತಿರುತ್ತದೆ. ಆದರೆ ಸ್ನೇಹದ ಮಾಲೆಯಂತು
ಪರಿಪಕ್ವವಾಗಿದೆಯಲ್ಲವೆ. ಸ್ನೇಹದ ಮಾಲೆಯ ಮುತ್ತು ರತ್ನಗಳು ಸದಾ ಅಮರವಾಗಿದೆ, ಅವಿನಾಶಿಯಾಗಿದೆ.
ಸ್ನೇಹದಲ್ಲಂತು ಎಲ್ಲರೂ ಪಾಸ್ ಮಾರ್ಕ್ಸ್ ತೆಗೆದುಕೊಳ್ಳುವವರಾಗಿದ್ದಾರೆ. ಉಳಿದಂತೆ ಸಮಾಧಾನ
ಸ್ವರೂಪದ ಮಾಲೆಯು ತಯಾರಾಗಬೇಕಿದೆ. ಸಂಪೂರ್ಣ ಅರ್ಥಾತ್ ಸಮಾಧಾನ ಸ್ವರೂಪ. ಹೇಗೆ ಬ್ರಹ್ಮಾ
ತಂದೆಯನ್ನು ನೋಡಿದಿರಿ - ಸಮಸ್ಯೆಯನ್ನು ತೆಗೆದುಕೊಂಡು ಹೋಗುವವರೂ ಸಹ ಸಮಸ್ಯೆಯನ್ನು ಮರೆತು
ಹೋಗುತ್ತಿದ್ದರು. ಏನು ತೆಗೆದುಕೊಂಡು ಬಂದೆವು ಮತ್ತು ಏನು ತೆಗೆದುಕೊಂದು ಹೋದೆವು! ಈ ಅನುಭವ
ಮಾಡಿದಿರಲ್ಲವೆ! ಸಮಸ್ಯೆಯ ಮಾತುಗಳನ್ನು ಮಾತನಾಡುವ ಸಾಹಸವೇ ಇರಲಿಲ್ಲ. ಏಕೆಂದರೆ ಸಂಪೂರ್ಣ
ಸ್ಥಿತಿಯ ಮುಂದೆ ಸಮಸ್ಯೆಯು ಹೇಗೆಂದರೆ - ಬಾಲ್ಯದ ಆಟದ ಅನುಭವ ಮಾಡುತ್ತಿದ್ದರು ಆದ್ದರಿಂದ
ಸಮಾಪ್ತಿಯಾಗಿ ಬಿಡುತ್ತಿತ್ತು. ಇದಕ್ಕೆ ಹೇಳಲಾಗುತ್ತದೆ - ಸಮಾಧಾನ ಸ್ವರೂಪ. ಒಬ್ಬೊಬ್ಬರೂ ಸಮಾಧಾನ
ಸ್ವರೂಪರಾಗಿ ಬಿಟ್ಟರೆ ಸಮಸ್ಯೆಗಳು ಎಲ್ಲಿಗೆ ಹೋಗುತ್ತದೆ. ಅರ್ಧ ಕಲ್ಪಕ್ಕಾಗಿ ವಿದಾಯಿ ಸಮಾರೋಹವಾಗಿ
ಬಿಡುತ್ತದೆ. ಈಗಂತು ವಿಶ್ವದ ಸಮಸ್ಯೆಗಳ ಸಮಾಧಾನವೇ ಪರಿವರ್ತನೆಯಾಗಿದೆ. ಅಂದಾಗ ಗೋಲ್ಡನ್
ಜುಬಿಲಿಯನ್ನೇನು ಆಚರಿಸಿದಿರಿ. ಮೋಲ್ಡ್ ಆಗುವ ಜುಬಿಲಿಯನ್ನಾಚರಿಸಿದಿರಾ. ಯಾರು ಮೋಲ್ಡ್ ಆಗುತ್ತಾರೆ,
ಅವರು ಯಾವುದೇ ರೂಪದಲ್ಲಿ ತೆಗೆದುಕೊಳ್ಳಬೇಕೆಂದು ಬಯಸುತ್ತಾರೆ, ಆ ರೂಪದಲ್ಲಿ ಬರಬಹುದು. ಮೋಲ್ಡ್
ಆಗುವುದು ಅರ್ಥಾತ್ ಸರ್ವರ ಪ್ರಿಯರಾಗುವುದು. ನಂತರ ಎಲ್ಲರ ದೃಷ್ಟಿಯು ನಿಮಿತ್ತರಾಗುವವರ
ಮೇಲಿರುತ್ತದೆ. ಒಳ್ಳೆಯದು.
ವರದಾನ:
ಶ್ರೇಷ್ಠತೆಯ ಆಧಾರದ ಮೆಲೆ ಸಮೀಪತೆಯ ಮೂಲಕ ಕಲ್ಪದ ಶ್ರೇಷ್ಠ ಪ್ರಾಲಬ್ಧವನ್ನು ತಯಾರು
ಮಾಡಿಕೊಳ್ಳುವಂತಹ ವಿಶೇಷ ಪಾತ್ರಧಾರಿ ಭವ.
ಈ ಮರುಜೀವಾ ಜೀವನದಲ್ಲಿ
ಶ್ರೇಷ್ಠತೆಗೆ ಎರಡು ಮಾತುಗಳಿವೆ - 1. ಸದಾ ಪರೋಪಕಾರಿಯಾಗಿ ಇರುವುದು. 2. ಬಾಲ ಬ್ರಹ್ಮಚಾರಿಯಾಗಿ
ಇರುವುದು. ಯಾವ ಮಕ್ಕಳು ಈ ಎರಡು ಮಾತುಗಳಲ್ಲಿ ಆದಿಯಿಂದ ಅಂತ್ಯದವರೆಗೆ ಅಖಂಡವಾಗಿದ್ದಾರೆ, ಯಾವುದೇ
ಪ್ರಕಾರದ ಅಪವಿತ್ರತೆ ಅರ್ಥಾತ್ ಸ್ವಚ್ಛತೆಯು ಮತ್ತೆ-ಮತ್ತೆ ಖಂಡನೆಯಾಗಿಲ್ಲ ಹಾಗೂ ವಿಶ್ವದ ಪ್ರತಿ
ಮತ್ತು ಬ್ರಾಹ್ಮಣ ಪರಿವಾರದ ಪ್ರತಿ ಸದಾ ಯಾರು ಉಪಕಾರಿಯಾಗಿದ್ದಾರೆ, ಅಂತಹ ವಿಶೇಷ ಪಾತ್ರಧಾರಿಗಳು
ಸದಾ ಬಾಪ್ದಾದಾರವರ ಸಮೀಪದಲ್ಲಿರುತ್ತಾರೆ ಮತ್ತು ಅವರ ಪ್ರಾಲಬ್ಧವು ಇಡೀ ಕಲ್ಪಕ್ಕಾಗಿ ಶ್ರೇಷ್ಠರಾಗಿ
ಬಿಡುತ್ತಾರೆ.
ಸ್ಲೋಗನ್:
ಸಂಕಲ್ಪವು
ವ್ಯರ್ಥವಿದೆಯೆಂದರೆ ಅನ್ಯ ಎಲ್ಲಾ ಖಜಾನೆಗಳೂ ಸಹ ವ್ಯರ್ಥವಾಗಿ ಬಿಡುತ್ತವೆ.
ಮುರಳಿ ಪ್ರಶ್ನೆಗಳು -
1. ಪ್ರತಿಯೊಂದು
ಗಂಗೆಯಲ್ಲಿ ಯಾವ ದೃಢ ನಿಶ್ಚಯ ಮತ್ತು ನಶೆಯಿರಬೇಕು?
ಅ. ಪತಿತ ಪ್ರಪಂಚ, ಪತಿತ ಆತ್ಮರನ್ನು ಪಾವನ ಮಾಡುವುದು
ಆ. ಪತಿತ ಸೃಷ್ಟಿ, ಪತಿತ ತತ್ವವನ್ನು ಪಾವನ ಮಾಡುವುದು
ಇ. ತಮೋಪ್ರಧಾನ ಸ್ವಭವ-ಸಂಸ್ಕಾರಗಳನ್ನು ಸತೋಪ್ರಧಾನ ಮಾಡುವುದು
2. ಬಾಬಾರವರು ನಮಗೆ
ಯಾವುದಕ್ಕೆ ನಿಮಿತ್ತರಾಗಲು ತಿಳಿಸುತ್ತಿದ್ದಾರೆ?
ಅ. ಸುಖ, ಶಾಂತಿ, ಶಕ್ತಿಯ ಕಿರಣಗಳನ್ನು ವಿಶ್ವಕ್ಕೆ ಕೊಡಲು
ಆ. ಪ್ರೇಮ, ಆನಂದ, ಸಂತುಷ್ಟತೆ ಕಿರಣಗಳನ್ನು ವಿಶ್ವಕ್ಕೆ ಕೊಡಲು
ಇ. ಪವಿತ್ರತೆ, ಸುಖ, ಶಾಂತಿಯ ಕಿರಣಗಳನ್ನು ವಿಶ್ವಕ್ಕೆ ಕೊಡಲು
3. ಸೇವೆಯ ಆದಿಯಲ್ಲಿ
ಯಾವ ವಿಶೇಷತೆ ಇತ್ತು?
ಅ. ಆದಿ ಸ್ವರೂಪ ಅನಾದಿ ಸ್ಥಿತಿ
ಆ. ಫರಿಶ್ತಾ ಮತ್ತು ಬ್ರಾಹ್ಮಣ ಸ್ವರೂಪ
ಇ. ಭಿನ್ನತೆ ಮತ್ತು ದೈವೀತನ
4. ಗೋಲ್ಡನ ಜುಬಲೀಯ
ಆಚರಿಸುವುದು ಎಂದರೆ________
ಅ. ನಿಮಿತ್ತ, ನಿರ್ಮಾಣ, ನಿರಹಂಕಾರಿಯಾಗಿ ಸೇವೆಯಲ್ಲಿ ಅರ್ಪಣೆಯಾಗುವುದು
ಆ. ತನು, ಮನ, ಧನವನ್ನು ಸೇವೆಯಲ್ಲಿ ಅರ್ಪಣೆ ಮಾಡುವುದು
ಇ. ಸಮಯ-ಸಂಕಲ್ಪವನ್ನು ಸೇವೆಯಲ್ಲಿ ಅರ್ಪಣೆ ಮಾಡುವುದು
5. ಮಾಯೆಯು ನಮ್ಮ
ಹತ್ತಿರ ಬರಲು ಸಮಯ ಯಾವಾಗ ಇರುವುದಿಲ್ಲ?
ಅ. ಸಕಾಶ ಕೊಡುವ ಸೇವೆಯಲ್ಲಿ ಬಿಜಿಯಾಗಿದ್ದಾಗ
ಆ. ಸಮಯ - ಸಂಕಲ್ಪ ಸೇವೆಯಲ್ಲಿ ಬಿಜಿಯಾಗಿದ್ದಾಗ
ಇ. ತನು-ಮನ-ಧನದಿಂದ ಸೇವೆಯಲ್ಲಿ ಬಿಜಿಯಾಗಿದ್ದಾಗ
6. ಯಾವ ಮಹಾ ಸಂಸ್ಕಾರವು ಬಲಹೀನತೆಯ ಸಂಸ್ಕಾರವನ್ನು ಸಮಾಪ್ತಿ ಮಾಡುವುದು?
ಅ. ದಾತಾ, ವಿದಾತಾ, ವರದಾತನ ಸಂಸ್ಕಾರ
ಆ. ದಾನಿ, ವರದಾನಿ, ಮಹಾದಾನಿಯ ಸಂಸ್ಕಾರ
ಇ. ಮುಕ್ತಿ, ಜೀವನ್ಮುಕ್ತಿಯ ಸಂಸ್ಕಾರ
7. ಯಾವ ವಿಧಿಯಿಂದ
ಸಿದ್ಧಿ ಪ್ರಾಪ್ತಿಯಾಗುವುದು?
8. ಸಮಸ್ಯೆಗಳು
ಸ್ವತಃವಾಗಿ ಯಾವಾಗ ಸಮಾಪ್ತಿಯಾಗುವುದು?
9. ಮರುಜೀವನದಲ್ಲಿ
ಶ್ರೇಷ್ಠತೆಯ ಆಧಾರವೇನು?
10. ಎಲ್ಲ ಖಜಾನೆಗಳು
ವ್ಯರ್ಥವಾಗಿ ಯಾವಾಗ ಹೋಗುವುದು?