26.06.20         Morning Kannada Murli       Om Shanti           BapDada Madhuban


ಮಧುರ ಮಕ್ಕಳೇ - ನೀವೀಗ ಶ್ರೀಮತದಂತೆ ಶಾಂತಿಯ ಆಳದಲ್ಲಿ ಹೋಗುತ್ತೀರಿ, ನಿಮಗೆ ತಂದೆಯಿಂದ ಶಾಂತಿಯ ಆಸ್ತಿಯು ಸಿಗುತ್ತದೆ, ಶಾಂತಿಯಲ್ಲಿ ಎಲ್ಲವೂ ಬಂದು ಬಿಡುತ್ತದೆ.

ಪ್ರಶ್ನೆ:
ಹೊಸ ಪ್ರಪಂಚದ ಸ್ಥಾಪನೆಗೆ ಮುಖ್ಯ ಆಧಾರವೇನು?

ಉತ್ತರ:
ಪವಿತ್ರತೆ. ಯಾವಾಗ ತಂದೆಯು ಬ್ರಹ್ಮಾರವರ ತನುವಿನಲ್ಲಿ ಬಂದು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುವರೋ ಆಗ ನೀವು ಸಹೋದರ-ಸಹೋದರಿಯರಾಗಿ ಬಿಡುತ್ತೀರಿ. ಸ್ತ್ರೀ-ಪುರುಷರೆಂಬ ಪರಿವೆಯು ಹೊರಟು ಹೋಗುತ್ತದೆ. ಈ ಅಂತಿಮ ಜನ್ಮದಲ್ಲಿ ಪವಿತ್ರರಾಗುತ್ತೇವೆಂದರೆ ಪವಿತ್ರ ಪ್ರಪಂಚದ ಮಾಲೀಕರಾಗಿ ಬಿಡುವಿರಿ. ನೀವು ತಮ್ಮೊಂದಿಗೆ ತಾವು ಪ್ರತಿಜ್ಞೆ ಮಾಡುತ್ತೀರಿ - ನಾವು ಸಹೋದರ-ಸಹೋದರಿಯರಾಗಿಯೇ ಇರುತ್ತೇವೆ, ವಿಕಾರದ ದೃಷ್ಟಿಯನ್ನು ಇಡುವುದಿಲ್ಲ, ಒಬ್ಬರು ಇನ್ನೊಬ್ಬರನ್ನು ಎಚ್ಚರಿಸುತ್ತಾ ಉನ್ನತಿಯನ್ನು ಪಡೆಯುತ್ತೇವೆ.

ಗೀತೆ:
ಎದ್ದೇಳಿ ಪ್ರಿಯತಮೆಯರೇ ಎದ್ದೇಳಿ........

ಓಂ ಶಾಂತಿ.
ಮಧುರಾತಿ ಮಧುರ ಆತ್ಮೀಯ ಮಕ್ಕಳು ಗೀತೆಯನ್ನು ಕೇಳಿದಿರಿ ಮತ್ತು ಬುದ್ಧಿಯಲ್ಲಿ ಸ್ವದರ್ಶನ ಚಕ್ರವು ತಿರುಗಿತು. ತಂದೆಯು ಸ್ವದರ್ಶನ ಚಕ್ರಧಾರಿಯೆಂದು ಕರೆಸಿಕೊಳ್ಳುತ್ತಾರೆ. ಏಕೆಂದರೆ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಳ್ಳುವುದು ಸ್ವದರ್ಶನ ಚಕ್ರಧಾರಿಗಳಾಗುವುದಾಗಿದೆ. ಈ ಮಾತುಗಳನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ನೀವು ಬ್ರಾಹ್ಮಣರ ಎಲ್ಲಾ ಆಧಾರವು ಶಾಂತಿಯ ಮೇಲಿದೆ. ಶಾಂತಿ ದೇವನೇ ಶಾಂತಿಯನ್ನು ನೀಡುವ ತಂದೆಯೇ......... ಎಂದು ಎಲ್ಲಾ ಮನುಷ್ಯರು ಹೇಳುತ್ತಾರೆ. ಆದರೆ ಶಾಂತಿಯನ್ನು ಯಾರು ಕೊಡುತ್ತಾರೆ ಹಾಗೂ ಶಾಂತಿಧಾಮಕ್ಕೆ ಯಾರು ಕರೆದುಕೊಂಡು ಹೋಗುತ್ತಾರೆಂಬುದು ಯಾರಿಗೂ ತಿಳಿದಿಲ್ಲ. ಇದನ್ನು ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ, ಬ್ರಾಹ್ಮಣರೇ ಸ್ವದರ್ಶನ ಚಕ್ರಧಾರಿಗಳಾಗುತ್ತಾರೆ, ದೇವತೆಗಳು ಸ್ವದರ್ಶನ ಚಕ್ರಧಾರಿಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ಎಷ್ಟು ರಾತ್ರಿ-ಹಗಲಿನ ಅಂತರವಿದೆ. ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ - ನಂಬರ್ವಾರ್ ಪುರುಷಾರ್ಥದನುಸಾರ ನೀವು ಪ್ರತಿಯೊಬ್ಬರೂ ಸ್ವದರ್ಶನ ಚಕ್ರಧಾರಿಗಳಾಗಿದ್ದೀರಿ. ತಂದೆಯನ್ನು ನೆನಪು ಮಾಡುವುದೇ ಮುಖ್ಯ ಮಾತಾಗಿದೆ. ತಂದೆಯನ್ನು ನೆನಪು ಮಾಡುವುದೆಂದರೆ ಶಾಂತಿಯ ಆಸ್ತಿಯನ್ನು ಪಡೆಯುವುದು. ಶಾಂತಿಯಲ್ಲಿ ಮತ್ತೆಲ್ಲವೂ ಬಂದು ಬಿಡುತ್ತದೆ, ನಿಮ್ಮ ಆಯಸ್ಸು ಧೀರ್ಘವಾಗುತ್ತದೆ. ನಿರೋಗಿ ಕಾಯ ಆಗುತ್ತಾ ಹೋಗುತ್ತೀರಿ. ತಂದೆಯ ವಿನಃ ಮತ್ತ್ಯಾರೂ ಸ್ವದರ್ಶನ ಚಕ್ರಧಾರಿಗಳನ್ನಾಗಿ ಮಾಡಲು ಸಾಧ್ಯವಿಲ್ಲ. ಆತ್ಮವೇ ಆಗುತ್ತದೆ. ತಂದೆಯೂ ಆಗಿದ್ದಾರೆ ಏಕೆಂದರೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ಈಗ ಹೊಸ ಪ್ರಪಂಚವು ಸ್ಥಾಪನೆಯಾಗುತ್ತಿದೆ ಎಂಬ ಗೀತೆಯನ್ನು ಕೇಳಿದಿರಿ. ಗೀತೆಗಳನ್ನು ಮನುಷ್ಯರೇ ರಚಿಸಿದ್ದಾರೆ. ತಂದೆಯು ಕುಳಿತು ಅದರ ಸಾರವನ್ನು ತಿಳಿಸುತ್ತಾರೆ. ಅವರು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ ಅಂದಾಗ ಎಲ್ಲಾ ಮಕ್ಕಳು ಪರಸ್ಪರ ಸಹೋದರರಾಗಿ ಬಿಡುತ್ತೀರಿ. ತಂದೆಯು ಹೊಸ ಪ್ರಪಂಚವನ್ನು ರಚಿಸುತ್ತಾರೆಂದರೆ ಪ್ರಜಾಪಿತ ಬ್ರಹ್ಮನ ಮೂಲಕ ನೀವು ಸಹೋದರ-ಸಹೋದರಿಯರಾಗಿದ್ದೀರಿ. ಪ್ರತಿಯೊಬ್ಬರೂ ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯರಾಗಿದ್ದಾರೆ, ಇದು ಬುದ್ಧಿಯಲ್ಲಿದ್ದರೆ ಸ್ತ್ರೀ-ಪುರುಷರೆಂಬ ದೃಷ್ಟಿಯು ಹೊರಟು ಹೋಗುತ್ತದೆ. ವಾಸ್ತವದಲ್ಲಿ ನಾವು ಸಹೋದರ-ಸಹೋದರಾಗಿದ್ದೇವೆ ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಮತ್ತೆ ತಂದೆಯು ರಚನೆಯನ್ನು ರಚಿಸಿದಾಗ ಸಹೋದರ-ಸಹೋದರಿಯರಾಗಿ ಬಿಡುತ್ತೇವೆ. ವಿಕಾರದ ದೃಷ್ಟಿಯು ಕಳೆಯುತ್ತದೆ, ತಂದೆಯು ನೆನಪು ತರಿಸುತ್ತಾರೆ - ಹೇ ಪತಿತ-ಪಾವನ ಎಂದು ನೀವು ಕರೆಯುತ್ತಾ ಬಂದಿದ್ದೀರಿ ಆದ್ದರಿಂದ ನಾನೀಗ ಬಂದಿದ್ದೇನೆ. ಈ ಅಂತಿಮ ಜನ್ಮದಲ್ಲಿ ಪವಿತ್ರರಾಗಿರಿ ಎಂದು ನಿಮಗೆ ಹೇಳುತ್ತೇನೆ ಅಂದಮೇಲೆ ಪವಿತ್ರ ಪ್ರಪಂಚದ ಮಾಲೀಕರಾಗುತ್ತೀರಿ. ನಿಮ್ಮ ಮನೆಯಲ್ಲಿಯೂ ಈ ಪ್ರದರ್ಶನಿಯಿರಬೇಕು ಏಕೆಂದರೆ ನೀವು ಮಕ್ಕಳು ಬ್ರಾಹ್ಮಣರಾಗಿದ್ದೀರಿ. ನಿಮ್ಮ ಮನೆಯಲ್ಲಿ ಈ ಚಿತ್ರವು ಇರಲೇಬೇಕಾಗಿದೆ. ಇವುಗಳ ಬಗ್ಗೆ ತಿಳಿಸಿ ಕೊಡುವುದು ಬಹಳ ಸಹಜವಾಗಿದೆ. 84 ಚಕ್ರವಂತೂ ಬುದ್ಧಿಯಲ್ಲಿದೆ. ಒಳ್ಳೆಯದು - ನಿಮಗೆ ಒಬ್ಬ ಬ್ರಾಹ್ಮಣಿಯನ್ನು (ಶಿಕ್ಷಕಿ ಸಹೋದರಿ) ಕಳುಹಿಸಿ ಕೊಡುತ್ತೇವೆ, ಅವರು ಬಂದು ಸರ್ವೀಸ್ ಮಾಡಿ ಹೋಗುವರು. ಪ್ರದರ್ಶನಿಯನ್ನು ತೆರೆಯಿರಿ, ಭಕ್ತಿಮಾರ್ಗದಲ್ಲಿಯೂ ಯಾರಾದರೂ ಕೃಷ್ಣನ ಪೂಜೆ ಅಥವಾ ಮಂತ್ರ ಇತ್ಯಾದಿಗಳನ್ನು ಅರಿತಿಲ್ಲವೆಂದರೆ ಬ್ರಾಹ್ಮಣರನ್ನು ಕರೆಸುತ್ತಾರೆ, ಅವರು ನಿತ್ಯವೂ ಬಂದು ಪೂಜೆ ಮಾಡುತ್ತಾರೆ. ಇಲ್ಲಿ ನೀವು ಸಹೋದರಿಯರನ್ನು ಕರೆಸಬಹುದು. ಇದು ಬಹಳ ಸಹಜವಾಗಿದೆ. ತಂದೆಯು ಪ್ರಜಾಪಿತ ಬ್ರಹ್ಮನ ಮೂಲಕ ಸೃಷ್ಟಿಯನ್ನು ರಚಿಸಿದರೆಂದರೆ ಅವಶ್ಯವಾಗಿ ಬ್ರಹ್ಮಾಕುಮಾರ-ಕುಮಾರಿಯರು ಸಹೋದರಿಯರಾಗಿದ್ದರು. ನೀವು ಪ್ರತಿಜ್ಞೆ ಮಾಡುತ್ತೀರಿ - ನಾವಿಬ್ಬರೂ ಸಹೋದರ-ಸಹೋದರಿಯರಾಗಿರುತ್ತೇವೆ. ವಿಕಾರದ ದೃಷ್ಟಿಯನ್ನಿಡುವುದಿಲ್ಲ. ಒಬ್ಬರು ಇನ್ನೊಬ್ಬರನ್ನು ಎಚ್ಚರಿಸುತ್ತಾ ಉನ್ನತಿಯನ್ನು ಪಡೆಯುತ್ತೇವೆ. ಮುಖ್ಯವಾದುದು ನೆನಪಿನ ಯಾತ್ರೆಯಾಗಿದೆ. ಅವರು ವೈಜ್ಞಾನಿಕ ಬಲದಿಂದ ಎಷ್ಟೊಂದು ಎತ್ತರಕ್ಕೆ ಹೋಗುವ ಪ್ರಯತ್ನ ಪಡುತ್ತಾರೆ ಆದರೆ ಮೇಲೆ ಯಾವುದೇ ಪ್ರಪಂಚವಿಲ್ಲ. ಇದು ವಿಜ್ಞಾನದ ಅತಿಯಲ್ಲಿ ಹೋಗುವುದಾಗಿದೆ. ನೀವೀಗ ಶ್ರೀಮತದಂತೆ ಶಾಂತಿಯ ತುತ್ತ ತುದಿಗೆ ಹೋಗುತ್ತೀರಿ. ಅವರದು ಸೈನ್ಸ್, ನಿಮ್ಮದು ಸೈಲೆನ್ಸ್ ಆಗಿದೆ. ಮಕ್ಕಳಿಗೆ ತಿಳಿದಿದೆ - ಆತ್ಮವು ಸ್ವಯಂ ಶಾಂತ ಸ್ವರೂಪವಾಗಿದೆ, ಕೇವಲ ಈ ಶರೀರದ ಮೂಲಕ ಪಾತ್ರವನ್ನಭಿನಯಿಸಲಾಗುತ್ತದೆ. ಕರ್ಮ ಮಾಡದೆ ಯಾರೂ ಇರಲು ಸಾಧ್ಯವಿಲ್ಲ. ತಮ್ಮನ್ನು ಶರೀರದಿಂದ ಭಿನ್ನವೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ ಆಗ ವಿಕರ್ಮಗಳು ವಿನಾಶವಾಗುತ್ತವೆ ಎಂದು ತಂದೆಯು ತಿಳಿಸುತ್ತಾರೆ. ಇದು ಬಹಳ ಸಹಜವಾಗಿದೆ. ಎಲ್ಲರಿಗಿಂತ ಹೆಚ್ಚಿನದಾಗಿ ಯಾರು ಶಿವನ ಪೂಜಾರಿಗಳಿದ್ದಾರೆಯೋ ಅವರಿಗೆ ತಿಳಿಸಿ - ಸರ್ವಶ್ರೇಷ್ಠ ಪೂಜೆಯು ಶಿವನದಾಗಿದೆ ಏಕೆಂದರೆ ಅವರೇ ಸರ್ವರ ಸದ್ಗತಿದಾತನಾಗಿದ್ದಾರೆ.

ತಂದೆಯು ಎಲ್ಲರನ್ನೂ ಜೊತೆ ಕರೆದುಕೊಂಡು ಹೋಗಲು ಬಂದಿದ್ದಾರೆಂದು ಮಕ್ಕಳಿಗೆ ತಿಳಿದಿದೆ. ನಮ್ಮ ಸಮಯದಲ್ಲಿ ನಾವೂ ಸಹ ಡ್ರಾಮಾನುಸಾರ ಕರ್ಮಾತೀತ ಸ್ಥಿತಿಯನ್ನು ಪಡೆಯುತ್ತೇವೆ ನಂತರ ವಿನಾಶವಾಗುವುದು. ನಾವಾತ್ಮಗಳು ಸತೋಪ್ರಧಾನರಾಗಬೇಕೆಂದು ಬಹಳ ಪುರುಷಾರ್ಥ ಮಾಡಬೇಕಾಗಿದೆ. ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ. ಶ್ರೀ ಮದ್ಭಗವದ್ಗೀತೆಯೆಂದು ಹೇಳುತ್ತಾರೆ, ಎಷ್ಟು ದೊಡ್ಡ ಮಹಿಮೆಯಾಗಿದೆ. ಸರ್ವಗುಣ ಸಂಪನ್ನರು, ಸಂಪೂರ್ಣ ನಿರ್ವಿಕಾರಿಗಳು..... ಎಂದು ದೇವತೆಗಳ ಮಹಿಮೆ ಮಾಡುತ್ತಾರೆ. ತಂದೆಯೇ ಬಂದು ಸಂಪೂರ್ಣ ಪಾವನರನ್ನಾಗಿ ಮಾಡುತ್ತಾರೆ. ಯಾವಾಗ ಸಂಪೂರ್ಣ ಪತಿತ ಪ್ರಪಂಚವಾಗುವುದೋ ಆಗಲೇ ತಂದೆಯು ಬಂದು ಸಂಪೂರ್ಣ ಪಾವನ ಪ್ರಪಂಚವನ್ನು ಮಾಡುತ್ತಾರೆ. ನಾವು ಭಗವಂತನ ಮಕ್ಕಳಾಗಿದ್ದೇವೆಂದು ಎಲ್ಲರೂ ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಸ್ವರ್ಗದ ಆಸ್ತಿಯಿರಬೇಕಲ್ಲವೆ. ಪ್ರಜಾಪಿತ ಬ್ರಹ್ಮಾರವರ ಮೂಲಕ ನಾವೀಗ ಸಹೋದರ-ಸಹೋದರಿಯರಾಗಿದ್ದೇವೆ. ಕಲ್ಪದ ಮೊದಲೂ ತಂದೆಯು ಬಂದಿದ್ದರು ಆದ್ದರಿಂದಲೇ ಶಿವ ಜಯಂತಿಯನ್ನಾಚರಿಸುತ್ತಾರೆ. ಅವಶ್ಯವಾಗಿ ಪ್ರಜಾಪಿತ ಬ್ರಹ್ಮನ ಮಕ್ಕಳು ಆಗಿದ್ದಿರಿ, ತಂದೆಯೊಂದಿಗೆ ಪ್ರತಿಜ್ಞೆ ಮಾಡುತ್ತಾರೆ - ಬಾಬಾ, ನಾವು ಪರಸ್ಪರ ಜೊತೆಗಾರರಾಗಿದ್ದು ಪವಿತ್ರರಾಗಿರುತ್ತೇವೆ. ತಮ್ಮ ಆದೇಶದಂತೆ ನಡೆಯುತ್ತೇವೆ. ಯಾವುದೇ ದೊಡ್ಡ ಮಾತಲ್ಲ. ಇದು ಈಗ ಅಂತಿಮ ಜನ್ಮವಾಗಿದೆ. ಈ ಮೃತ್ಯುಲೋಕವು ಸಮಾಪ್ತಿಯಾಗಲಿದೆ. ನೀವೀಗ ಬುದ್ಧಿವಂತರಾಗಿದ್ದೀರಿ. ಯಾರಾದರೂ ತಮ್ಮನ್ನು ಭಗವಂತನೆಂದು ಹೇಳಿಕೊಂಡರೆ ಭಗವಂತನಂತೂ ಸರ್ವರ ಸದ್ಗತಿದಾತನಾಗಿದ್ದಾರೆ ಅಂದಮೇಲೆ ಇವರು ತಮ್ಮನ್ನು ಕರೆಸಿಕೊಳ್ಳಲು ಹೇಗೆ ಸಾಧ್ಯವೆಂದು ಹೇಳುತ್ತೀರಿ, ಆದರೆ ಇದೂ ಸಹ ನಾಟಕದ ಆಟವೆಂದು ತಿಳಿಯುತ್ತೀರಿ.

ತಂದೆಯು ನೀವು ಮಕ್ಕಳನ್ನು ಸ್ವದರ್ಶನ ಚಕ್ರಧಾರಿಗಳನ್ನಾಗಿ ಮಾಡುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ - ಈಗ ಸರ್ವೀಸಿನಲ್ಲಿ ತತ್ಫರರಾಗಿರಿ, ಮನೆ-ಮನೆಯಲ್ಲಿಯೂ ಪ್ರದರ್ಶನಿಯನ್ನು ತೆರೆಯಿರಿ. ಇಂತಹ ಮಹಾನ್ ಪುಣ್ಯವು ಮತ್ತ್ಯಾವುದೂ ಇಲ್ಲ. ಯಾರಿಗಾದರೂ ತಂದೆಯ ಮಾರ್ಗವನ್ನು ತಿಳಿಸುವಂತಹ ದಾನವು ಮತ್ತೊಂದಿಲ್ಲ,ತಂದೆ ಹೇಳುತ್ತಾರೆ ನನ್ನೊಬ್ಬನನ್ನೇ ನೆನಪು ಮಾಡಿದರೆ ಪಾಪ ವಿನಾಶವಾಗುತ್ತದೆ. ಹೇ ಪತಿತ-ಪಾವನ, ಮುಕ್ತಿದಾತ, ಮಾರ್ಗದರ್ಶಕ ಬನ್ನಿ ಎಂದು ತಂದೆಯನ್ನು ನೀವು ಕರೆಯುವುದೇ ಇದಕ್ಕಾಗಿ. ನಿಮ್ಮ ಹೆಸರು ಪಾಂಡವ ಎಂದು ಗಾಯನವಿದೆ, ತಂದೆಯು ಪಂಡ (ಮಾರ್ಗದರ್ಶಕ) ನಾಗಿದ್ದಾರೆ. ಎಲ್ಲಾ ಆತ್ಮಗಳನ್ನು ಕರೆದುಕೊಂಡು ಹೋಗುತ್ತಾರೆ. ಹೇಗೆ ಅವರು ಸ್ಥೂಲ ಮಾರ್ಗದರ್ಶಕರಿರುತ್ತಾರೆ, ಇವರು ಆತ್ಮೀಯ ಮಾರ್ಗದರ್ಶಕನಾಗಿದ್ದಾರೆ. ಅದು ಸ್ಥೂಲ ಯಾತ್ರೆ, ಇದು ಆತ್ಮಿಕ ಯಾತ್ರೆಯಾಗಿದೆ. ಸತ್ಯಯುಗದಲ್ಲಿ ಭಕ್ತಿಮಾರ್ಗದ ಸ್ಥೂಲ ಯಾತ್ರೆಗಳಿರುವುದಿಲ್ಲ. ಅಲ್ಲಿ ನೀವು ಪೂಜ್ಯರಾಗುತ್ತೀರಿ. ಈಗ ತಂದೆಯು ನಿಮ್ಮನ್ನು ಎಷ್ಟೊಂದು ಬುದ್ಧಿವಂತರನ್ನಾಗಿ ಮಾಡುತ್ತಾರೆ ಅಂದಮೇಲೆ ತಂದೆಯ ಮತದಂತೆ ನಡೆಯಬೇಕಲ್ಲವೆ. ಯಾವುದೇ ಸಂಶಯವಿಲ್ಲದೆ ಕೇಳಿರಿ. ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ದೇಹೀ-ಅಭಿಮಾನಿಗಳಾಗಿ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ನೀವು ನನ್ನ ಮುದ್ದು ಮಕ್ಕಳಾಗಿದ್ದೀರಲ್ಲವೆ. ಅರ್ಧಕಲ್ಪ ಪ್ರಿಯತಮೆಯರಾಗಿದ್ದೀರಿ. ನನ್ನೊಬ್ಬನಿಗೇ ಎಷ್ಟು ಹೆಸರುಗಳನ್ನಿಟ್ಟಿದ್ದಾರೆ, ಎಷ್ಟೊಂದು ಹೆಸರು, ಎಷ್ಟೊಂದು ಮಂದಿರಗಳನ್ನು ಕಟ್ಟಿಸುತ್ತಾರೆ. ನಾನು ಒಬ್ಬನೇ ಆಗಿದ್ದೇನೆ, ನನ್ನ ಹೆಸರಾಗಿದೆ ಶಿವ. ನಾನು 5000 ವರ್ಷಗಳ ಮೊದಲೂ ಸಹ ಭಾರತದಲ್ಲಿಯೇ ಬಂದಿದ್ದೆನು. ಮಕ್ಕಳನ್ನು ದತ್ತು ಮಾಡಿಕೊಂಡಿದ್ದೆನು, ಈಗಲೂ ದತ್ತು ಮಾಡಿಕೊಳ್ಳುತ್ತಿದ್ದೇನೆ. ನೀವು ಬ್ರಹ್ಮನ ಮಕ್ಕಳಾಗಿರುವ ಕಾರಣ ಮೊಮ್ಮಕ್ಕಳಾದಿರಿ. ಇಲ್ಲಿ ಆತ್ಮಕ್ಕೇ ಆಸ್ತಿಯು ಸಿಗುತ್ತದೆ. ಇದರಲ್ಲಿ ಸಹೋದರ-ಸಹೋದರಿಯೆನ್ನುವ ಪ್ರಶ್ನೆ ಬರುವುದಿಲ್ಲ. ಆತ್ಮವೇ ಓದುತ್ತದೆ, ಆಸ್ತಿಯನ್ನು ತೆಗೆದುಕೊಳ್ಳುತ್ತದೆ. ಎಲ್ಲರಿಗೂ ಈ ಅಧಿಕಾರವಿದೆ. ನೀವು ಮಕ್ಕಳು ಈ ಹಳೆಯ ಪ್ರಪಂಚದಲ್ಲಿ ಏನೆಲ್ಲವನ್ನೂ ನೋಡುತ್ತೇವೆಯೋ ಇದೆಲ್ಲವೂ ವಿನಾಶವಾಗಲಿದೆ. ಮಹಾಭಾರತ ಯುದ್ಧವೂ ನಿಂತಿದೆ. ಬೇಹದ್ದಿನ ತಂದೆಯೇ ಬೇಹದ್ದಿನ ಆಸ್ತಿಯನ್ನು ಕೊಡುತ್ತಿದ್ದಾರೆ. ಬೇಹದ್ದಿನ ಜ್ಞಾನವನ್ನು ತಿಳಿಸುತ್ತಿದ್ದಾರೆ ಅಂದಮೇಲೆ ಬೇಹದ್ದಿನ ತ್ಯಾಗವೂ ಬೇಕಲ್ಲವೆ. ನಿಮಗೆ ತಿಳಿದಿದೆ - ಕಲ್ಪದ ಹಿಂದೆಯೂ ತಂದೆಯು ರಾಜಯೋಗವನ್ನು ಕಲಿಸಿದ್ದರು. ರಾಜಸ್ವ ಅಶ್ವಮೇಧ ಯಜ್ಞವನ್ನು ರಚಿಸಿದ್ದರು ಮತ್ತೆ ರಾಜ್ಯಭಾರಕ್ಕಾಗಿ ಸತ್ಯಯುಗೀ ಹೊಸ ಪ್ರಪಂಚವು ಅವಶ್ಯವಾಗಿ ಬೇಕು. ಹಳೆಯ ಪ್ರಪಂಚದ ವಿನಾಶವೂ ಆಗಿತ್ತು, ಇದು 5000 ವರ್ಷಗಳ ಮಾತಲ್ಲವೆ. ಇದೇ ಯುದ್ಧವಾಗಿತ್ತು, ಯಾವುದರಿಂದ ಸ್ವರ್ಗದ ಬಾಗಿಲು ತೆರೆದಿತ್ತು, ಬೋರ್ಡಿನ ಮೇಲೆ ಬರೆಯಿರಿ- ಹೇಗೆ ಸ್ವರ್ಗದ ಬಾಗಿಲು ತೆರೆಯುತ್ತಿದೆ ಎಂದು ಬಂದು ತಿಳಿದುಕೊಳ್ಳಿ. ನಿಮಗೆ ತಿಳಿಸಿಕೊಡಲಾಗದಿದ್ದರೆ ಅನ್ಯರನ್ನು ಕರೆಸಿರಿ. ಇದು ನಿಧಾನ-ನಿಧಾನವಾಗಿ ವೃದ್ಧಿಯಾಗುತ್ತಾ ಹೋಗುವುದು. ನೀವು ಪ್ರಜಾಪಿತ ಬ್ರಹ್ಮನ ಮಕ್ಕಳು ಎಷ್ಟೊಂದು ಮಂದಿ ಬ್ರಾಹ್ಮಣ-ಬ್ರಾಹ್ಮಿಣಿಯಿದ್ದೀರಿ. ಶಿವ ತಂದೆಯಿಂದ ಆಸ್ತಿಯು ಸಿಗುತ್ತದೆ, ಅವರೇ ಎಲ್ಲರ ತಂದೆಯಾಗಿದ್ದಾರೆ. ನಾವು ಬ್ರಾಹ್ಮಣರಿಂದ ದೇವತೆಗಳಾಗುತ್ತೇವೆ, ನಾವೇ ದೇವತೆಗಳಾಗಿದ್ದೆವು ಮತ್ತೆ ಚಕ್ರವನ್ನು ಸುತ್ತಿದೆವು. ನಾವೀಗ ಬ್ರಾಹ್ಮಣರಾಗಿದ್ದೇವೆ, ಈಗ ಮತ್ತೆ ವಿಷ್ಣು ಪುರಿಯಲ್ಲಿ ಹೋಗುತ್ತೇವೆಂದು ನಿಮ್ಮ ಬುದ್ಧಿಯಲ್ಲಿ ಚೆನ್ನಾಗಿ ನೆನಪಿರಬೇಕು. ಜ್ಞಾನವು ಬಹಳ ಸಹಜವಾಗಿದೆ ಆದರೆ ಇಲ್ಲಿ ಕೋಟಿಯಲ್ಲಿ ಕೆಲವರೇ ಬರುತ್ತಾರೆ. ಪ್ರದರ್ಶನಿಯಲ್ಲಿ ಎಷ್ಟೊಂದು ಮಂದಿ ಬರುತ್ತಾರೆ. ಆದರೆ ಕೆಲವರೇ ಯಥಾರ್ಥವಾಗಿ ಅರಿತುಕೊಂಡು ಮಕ್ಕಳಾಗುತ್ತಾರೆ, ಕೆಲವರಂತೂ ಇದು ಬಹಳ ಚೆನ್ನಾಗಿದೆ, ನಾವು ಬರುತ್ತೇವೆಂದು ಕೇವಲ ಮಹಿಮೆ ಮಾಡುತ್ತಾರೆ. ಕೆಲವರೇ ವಿರಳ 7 ದಿನಗಳ ಕೋರ್ಸನ್ನು ತೆಗೆದುಕೊಳ್ಳುತ್ತಾರೆ. 7 ದಿನಗಳ ಮಾತೇನು, ಗೀತಾ ಪಾಠವನ್ನೂ ಸಹ 7 ದಿನಗಳ ಇಡುತ್ತಾರೆ. ನೀವೂ ಸಹ 7 ದಿನಗಳವರೆಗೆ ಭಟ್ಟಿಯಲ್ಲಿರಬೇಕಾಗಿದೆ, ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುವುದರಿಂದ ಕೊಳಕೆಲ್ಲವೂ ಬಿಟ್ಟು ಹೋಗುವುದು. ದೇಹಾಭಿಮಾನವು ಅರ್ಧಕಲ್ಪದ ಕೊಳಕು ಖಾಯಿಲೆಯಾಗಿದೆ. ಈಗ ಅವರು ಸೆಕೆಂಡಿನಲ್ಲಿಯೂ ಬಾಣವು ನಾಟುತ್ತದೆ. ತಡವಾಗಿ ಬರುವವರು ಮುಂದೆ ಹೋಗುತ್ತಾರೆ. ನಾವು ಸ್ಪರ್ಧೆ ಮಾಡಿ ತಂದೆಯಿಂದ ಆಸ್ತಿಯನ್ನು ಪಡೆದೇ ಪಡೆಯುತ್ತೇವೆಂದು ಹೇಳುತ್ತಾರೆ. ಕೆಲವರಂತೂ ಹಳಬರಿಗಿಂತಲೂ ಮುಂದೆ ಹೋಗುತ್ತಾರೆ ಏಕೆಂದರೆ ಒಳ್ಳೊಳ್ಳೆಯ ಅಂಶಗಳು ತಯಾರಿರುವ ಪದಾರ್ಥ (ಜ್ಞಾನ) ವು ಸಿಗುತ್ತದೆ. ಪ್ರದರ್ಶನಿಯಲ್ಲಿ ತಿಳಿಸುವುದರಲ್ಲಿ ಎಷ್ಟೊಂದು ಸಹಜವಾಗುತ್ತದೆ. ತಾವು ತಿಳಿಸಲು ಆಗದಿದ್ದರೆ ಸಹೋದರಿಯರನ್ನು ಕರೆಸಿರಿ. ಪ್ರತಿನಿತ್ಯವೂ ಬಂದು ತಿಳಿಸಿ ಹೋಗಲಿ. 5000 ವರ್ಷಗಳ ಮೊದಲಂತೂ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಇದು 1250 ವರ್ಷಗಳ ಕಾಲ ನಡೆಯಿತು, ಎಷ್ಟು ಚಿಕ್ಕದಾದ ಕಥೆಯಾಗಿದೆ. ನಾವೇ ದೇವತೆಗಳಾಗಿದ್ದೆವು, ನಾವೇ ಕ್ಷತ್ರಿಯರು, ವೈಶ್ಯರು, ಶೂದ್ರರಾದೆವು.... ನಾವಾತ್ಮಗಳು ಬ್ರಾಹ್ಮಣರಾದೆವು, ಹಮ್ ಸೋ ಸೋ ಹಮ್ನ ಅರ್ಥವನ್ನು ತಂದೆಯು ಎಷ್ಟೊಂದು ಯುಕ್ತಿಯುಕ್ತವಾಗಿ ತಿಳಿಸುತ್ತಾರೆ! ವಿರಾಟ ರೂಪವು ಇದೆ ಆದರೆ ಅದರಲ್ಲಿ ಬ್ರಾಹ್ಮಣರು ಮತ್ತು ಶಿವ ತಂದೆಯನ್ನು ಹಾರಿಸಿ ಬಿಟ್ಟಿದ್ದಾರೆ. ಅರ್ಥವೇನನ್ನೂ ತಿಳಿದುಕೊಳ್ಳುವುದಿಲ್ಲ. ನೀವೀಗ ನೆನಪು ಮಾಡುವ ಪರಿಶ್ರಮ ಪಡಬೇಕಾಗಿದೆ ಮತ್ತ್ಯಾವುದೇ ಸಂಶಯದಲ್ಲಿ ಬರಬಾರದು. ವಿಕರ್ಮಾಜೀತರಾಗಿ ಶ್ರೇಷ್ಠ ಪದವಿಯನ್ನು ಪಡೆಯಬೇಕೆಂದರೆ ಇದೇಕೆ ಆಗುತ್ತದೆ, ಇವರೇಕೆ ಹೀಗೆ ಮಾಡುತ್ತಾರೆ..... ಇದೆಲ್ಲಾ ಚಿಂತನೆಯನ್ನು ಸಮಾಪ್ತಿ ಮಾಡಬೇಕಾಗಿದೆ. ಇವೆಲ್ಲಾ ಮಾತುಗಳನ್ನು ಬಿಟ್ಟು ನಾವು ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕೆಂಬ ಒಂದೇ ಚಿಂತೆಯಿರಲಿ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ವಿಕರ್ಮಾಜೀತರಾಗಿ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಉಳಿದ ವ್ಯರ್ಥ ಮಾತುಗಳನ್ನು ಕೇಳಿ ತಮ್ಮ ತಲೆಯನ್ನು ಕೆಡಿಸಿಕೊಳ್ಳಬಾರದು. ಎಲ್ಲಾ ಮಾತುಗಳಿಗಿಂತ ಒಂದು ಮುಖ್ಯವಾಗಿದೆ - ಅದನ್ನು ಮರೆಯಬೇಡಿ, ಯಾರ ಜೊತೆಯೂ ಸಮಯವನ್ನು ವ್ಯರ್ಥ ಮಾಡಬೇಡಿ. ನಿಮ್ಮ ಸಮಯವು ಬಹಳ ಅಮೂಲ್ಯವಾಗಿದೆ, ಬಿರುಗಾಳಿಗಳಿಗೆ ಹೆದರಬೇಡಿ. ಬಹಳ ಕಷ್ಟವೂ ಬರುವುದು, ನಷ್ಟವುಂಟಾಗುವುದು ಆದರೆ ತಂದೆಯ ನೆನಪನ್ನೆಂದೂ ಮರೆಯಬೇಡಿ. ನೆನಪಿನಿಂದ ಪಾವನರಾಗಬೇಕಾಗಿದೆ. ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ಈ ವೃದ್ಧ ತಂದೆಯು (ಬ್ರಹ್ಮಾ) ಇಷ್ಟು ದೊಡ್ಡ ಪದವಿಯನ್ನು ಪಡೆಯುತ್ತಾರೆಂದರೆ ನಾವೇಕೆ ಪಡೆಯಬಾರದು! ಇದು ವಿದ್ಯೆಯಾಗಿದೆಯಲ್ಲವೆ. ನಿಮಗೆ ಇದರಲ್ಲಿ ಯಾವುದೇ ಗ್ರಂಥಗಳನ್ನು ತಿಳಿದುಕೊಳ್ಳುವ ಅವಶ್ಯಕತೆಯಿಲ್ಲ. ಬುದ್ಧಿಯಲ್ಲಿ ಇಡೀ ಕಥೆಯು ಇದೆ, ಎಷ್ಟು ಚಿಕ್ಕ ಕಥೆಯಾಗಿದೆ. ಸೆಕೆಂಡಿನ ಮಾತಾಗಿದೆ, ಜೀವನ್ಮುಕ್ತಿಯು ಸೆಕೆಂಡಿನಲ್ಲಿ ಸಿಗುತ್ತದೆ. ಮೂಲ ಮಾತು ತಂದೆಯನ್ನು ನೆನಪು ಮಾಡಿ, ಯಾವ ತಂದೆಯು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರನ್ನೇ ನೀವು ಮರೆತು ಹೋಗುತ್ತೀರೇನು! ಎಲ್ಲರೂ ರಾಜರಾಗಲು ಸಾಧ್ಯವೇ! ಎಂದು ಹೇಳುತ್ತಾರೆ. ಅರೆ! ನೀವು ಎಲ್ಲರ ಚಿಂತೆಯನ್ನೇಕೆ ಮಾಡುವಿರಿ. ಶಾಲೆಯಲ್ಲಿ ಎಲ್ಲರೂ ವಿದ್ಯಾರ್ಥಿ ವೇತನವನ್ನು ಪಡೆಯಲು ಸಾಧ್ಯವೇ ಎಂಬ ಚಿಂತೆಯನ್ನು ಇಟ್ಟುಕೊಳ್ಳುತ್ತಾರೆಯೇ? ಅವರು ಓದುವುದರಲ್ಲಿ ತತ್ಪರರಾಗುತ್ತಾರಲ್ಲವೆ. ಇವರೇನು ಪದವಿಯನ್ನು ಪಡೆಯುವರೆಂದು ಪ್ರತಿಯೊಬ್ಬರ ಪುರುಷಾರ್ಥದಿಂದಲೇ ತಿಳಿದುಬರುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. ಅತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ-
1) ಈ ಸಮಯವು ಬಹಳ ಅಮೂಲ್ಯವಾಗಿದೆ, ಇದನ್ನು ವ್ಯರ್ಥ ಮಾತುಗಳಲ್ಲಿ ಕಳೆಯಬಾರದು. ಎಷ್ಟಾದರೂ ಬಿರುಗಾಳಿಗಳು ಬರಲಿ, ನಷ್ಟವುಂಟಾಗಲಿ ಆದರೆ ತಂದೆಯ ನೆನಪಿನಲ್ಲಿರಬೇಕಾಗಿದೆ.

2) ತಮೋಪ್ರಧಾನರಿಂದ ಸತೋಪ್ರಧಾನರಾಗುವ ಚಿಂತನೆಯನ್ನೇ ಮಾಡಬೇಕಾಗಿದೆ. ಮತ್ತ್ಯಾವುದೇ ಚಿಂತನೆಯು ನಡೆಯಬಾರದು. ಹಮ್ ಸೋ ಸೋ ಹಮ್ನ ಚಿಕ್ಕದಾದ ಕಥೆಯನ್ನು ತಿಳಿದುಕೊಳ್ಳಬೇಕು ಮತ್ತು ಅನ್ಯರಿಗೂ ತಿಳಿಸಬೇಕು.

ವರದಾನ:
ದಾತಾತನದ ಭಾವನೆಯ ಮುಖಾಂತರ ಇಚ್ಛಾ ಮಾತ್ರಂ ಅವಿದ್ಯೆ ನ ಸ್ಥಿತಿಯ ಅನುಭವ ಮಾಡುವಂತಹ ತೃಪ್ತ ಆತ್ಮ ಭವ.

ಸದಾ ಒಂದೇ ಲಕ್ಷ್ಯ ಇರಲಿ ನಾನು ದಾತಾನ ಮಗುವಾಗಿ ಸರ್ವ ಆತ್ಮರಿಗೆ ಕೊಡಬೇಕು, ದಾತಾತನದ ಭಾವನೆ ಇಡುವುದರಿಂದ ಸಂಪನ್ನ ಆತ್ಮರಾಗಿ ಬಿಡುವಿರಿ ಮತ್ತು ಯಾರು ಸಂಪನ್ನರಾಗಿರುತ್ತಾರೆ ಅವರು ಸದಾ ತೃಪ್ತರಾಗಿರುತ್ತಾರೆ. ನಾನು ಕೊಡುವಂತಹ ದಾತಾನ ಮಗು ಆಗಿದ್ದೇನೆ - ಕೊಡುವುದೇ ತೆಗೆದುಕೊಳ್ಳುವುದಾಗಿದೆ, ಇದೇ ಭಾವನೆ ಸದಾ ನಿರ್ವಿಘ್ನ, ಇಚ್ಛಾ ಮಾತ್ರಂ ಅವಿಧ್ಯಾ ನ ಸ್ಥಿತಿಯ ಅನುಭವವನ್ನು ಮಾಡಿಸುತ್ತದೆ. ಸದಾ ಒಂದೇ ಲಕ್ಷ್ಯದ ಕಡೆ ಗಮನಯಿರಲಿ, ಆ ಲಕ್ಷ್ಯವಾಗಿದೆ ಬಿಂದು ಮತ್ತು ಬೇರೆ ಯಾವುದೇ ಮಾತಿನ ವಿಸ್ತಾರವನ್ನು ನೋಡುತ್ತಿದ್ದರೂ ನೋಡದಂತೆ, ಕೇಳುತ್ತಿದ್ದರೂ ಕೇಳದಂತಿರಿ.

ಸ್ಲೋಗನ್:
ಬುದ್ಧಿ ಹಾಗೂ ಸ್ಥಿತಿ ಒಂದುವೇಳೆ ಬಲಹೀನವಾಗಿದ್ದಾಗ ಅದರ ಕಾರಣವಾಗಿದೆ ವ್ಯರ್ಥ ಸಂಕಲ್ಪ.