25.06.20 Morning Kannada Murli Om Shanti
BapDada Madhuban
ಮಧುರ ಮಕ್ಕಳೇ -
ಬೇಹದ್ದಿನ ಸುಖಕ್ಕಾಗಿ ನಿಮಗೆ ಬೇಹದ್ದಿನ ಜ್ಞಾನವು ಸಿಗುತ್ತದೆ, ನೀವು ಪುನಃ ರಾಜಯೋಗದ
ಶಿಕ್ಷಣದಿಂದ ರಾಜ್ಯ ಪದವಿಯನ್ನು ಪಡೆಯುತ್ತಿದ್ದೀರಿ.
ಪ್ರಶ್ನೆ:
ನಿಮ್ಮ ಈಶ್ವರೀಯ
ಕುಟುಂಬವು ಯಾವ ಮಾತಿನಲ್ಲಿ ಸಂಪೂರ್ಣ ಭಿನ್ನವಾಗಿದೆ?
ಉತ್ತರ:
ಈ ಈಶ್ವರೀಯ ಕುಟುಂಬದಲ್ಲಿ ಕೆಲವರು ಒಂದು ದಿನದ ಮಗುವಾಗಿದ್ದಾರೆ, ಇನ್ನೂ ಕೆಲವರು 8 ದಿನಗಳ
ಮಗುವಾಗಿದ್ದಾರೆ ಆದರೆ ಎಲ್ಲರೂ ಓದುತ್ತಿದ್ದಾರೆ. ತಂದೆಯೇ ಶಿಕ್ಷಕನಾಗಿ ತಮ್ಮ ಮಕ್ಕಳಿಗೆ
ಓದಿಸುತ್ತಿದ್ದಾರೆ. ಇದು ಭಿನ್ನವಾದ ಮಾತಾಗಿದೆ, ಆತ್ಮವೇ ಓದುತ್ತದೆ, ಬಾಬಾ ಎಂದು ಆತ್ಮವೇ
ಹೇಳುತ್ತದೆ. ತಂದೆಯು ಮಕ್ಕಳಿಗೆ 84 ಜನ್ಮಗಳ ಕಥೆಯನ್ನು ತಿಳಿಸುತ್ತಾರೆ.
ಗೀತೆ:
ದೂರ
ದೇಶದಲ್ಲಿರುವವರು.......
ಓಂ ಶಾಂತಿ.
ವೃಕ್ಷಪತಿ ವಾರಕ್ಕೆ ಬೃಹಸ್ಪತಿ ವಾರವೆಂದು ಹೆಸರನ್ನಿಟ್ಟಿದ್ದಾರೆ. ಆ ಹಬ್ಬ-ಹರಿ ದಿನಗಳನ್ನು ಪ್ರತೀ
ವರ್ಷವೂ ಆಚರಿಸುತ್ತಾರೆ. ಪ್ರತಿಯೊಂದು ವಾರದಲ್ಲಿಯೂ ಬೃಹಸ್ಪತಿ ದಿನವನ್ನಾಚರಿಸುತ್ತೀರಿ. ಯಾರು ಈ
ವೃಕ್ಷಪತಿ ಅಥವಾ ಮನುಷ್ಯ ಸೃಷ್ಟಿರೂಪಿ ವೃಕ್ಷದ ಬೀಜ ರೂಪನಾಗಿದ್ದಾರೆ, ಚೈತನ್ಯನಾಗಿದ್ದಾರೆಯೋ ಅವರೇ
ಈ ವೃಕ್ಷದ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿದ್ದಾರೆ. ಮತ್ತೆ ಯಾವುದೆಲ್ಲಾ ವೃಕ್ಷಗಳಾಗಿವೆಯೋ
ಅವೆಲ್ಲಾ ಜಡವಾಗಿರುತ್ತವೆ, ಇದು ಚೈತನ್ಯವಾಗಿದೆ. ಇದಕ್ಕೆ ಕಲ್ಪವೃಕ್ಷವೆಂದು ಹೇಳಲಾಗುತ್ತದೆ. ಇದರ
ಆಯಸ್ಸು 5000 ವರ್ಷಗಳಾಗಿದೆ ಮತ್ತು ಈ ವೃಕ್ಷವು ನಾಲ್ಕು ಭಾಗಗಳಲ್ಲಿದೆ. ಪ್ರತಿಯೊಂದು ವಸ್ತುವು
ನಾಲ್ಕು ಭಾಗಗಳಲ್ಲಿರುತ್ತದೆ. ಈ ಪ್ರಪಂಚವು ನಾಲ್ಕು ಭಾಗಗಳಲ್ಲಿದೆ ಈಗ ಈ ಹಳೆಯ ಪ್ರಪಂಚದ
ಅಂತಿಮವಾಗಿದೆ. ಎಷ್ಟು ದೊಡ್ಡ ಪ್ರಪಂಚವಾಗಿದೆ! ಈ ಜ್ಞಾನವು ಯಾವುದೇ ಮನುಷ್ಯ ಮಾತ್ರರ
ಬುದ್ಧಿಯಲ್ಲಿಲ್ಲ. ಇದು ಹೊಸ ಪ್ರಪಂಚಕ್ಕಾಗಿ ಹೊಸ ಶಿಕ್ಷಣವಾಗಿದೆ ಮತ್ತು ಹೊಸ ಪ್ರಪಂಚದ ರಾಜರಾಗಲು
ಅಥವಾ ಆದಿ ಸನಾತನ ದೇವಿ-ದೇವತೆಗಳಾಗುವುದಕ್ಕಾಗಿ ಹೊಸ ಶಿಕ್ಷಣವೂ ಇದೆ. ಭಾಷೆಯಂತೂ ಹಿಂದಿ ಆಗಿದೆ,
ತಂದೆಯು ತಿಳಿಸಿದ್ದಾರೆ - ಅನ್ಯ ರಾಜಧಾನಿಗಳು ಸ್ಥಾಪನೆಯಾದಾಗ ಅದರ ಭಾಷೆಯು ಬೇರೆಯಾಗಿರುತ್ತದೆ.
ಸತ್ಯಯುಗದಲ್ಲಿ ಯಾವ ಭಾಷೆಯಿರುವುದು? ಅದನ್ನು ನೀವು ಮಕ್ಕಳು ಸ್ವಲ್ಪ-ಸ್ವಲ್ಪ ತಿಳಿದುಕೊಂಡಿದ್ದೀರಿ.
ಮೊದಲು ಮಕ್ಕಳು ಧ್ಯಾನದಲ್ಲಿ ಹೋಗಿ ತಿಳಿಸುತ್ತಿದ್ದರು, ಅಲ್ಲಿ ಯಾವುದೇ ಸಂಸ್ಕೃತವಿಲ್ಲ,
ಸಂಸ್ಕೃತವು ಇಲ್ಲಿದೆಯಲ್ಲವೆ. ಯಾವುದು ಇಲ್ಲಿದೆಯೋ ಅದು ಮತ್ತೆ ಅಲ್ಲಿರಲು ಸಾಧ್ಯವಿಲ್ಲ ಅಂದಾಗ
ಮಕ್ಕಳಿಗೆ ತಿಳಿದಿದೆ - ಇವರು ವೃಕ್ಷಪತಿಯಾಗಿದ್ದಾರೆ, ಇವರಿಗೆ ವೃಕ್ಷದ ರಚಯಿತನೆಂದೂ ಹೇಳುತ್ತಾರೆ.
ಇವರು ಚೈತನ್ಯ ಬೀಜರೂಪನಾಗಿದ್ದಾರೆ, ಅವೆಲ್ಲಾ ಬೀಜಗಳು ಜಡವಾಗಿರುತ್ತವೆ. ಮಕ್ಕಳು ಸೃಷ್ಟಿಯ
ಆದಿ-ಮಧ್ಯ-ಅಂತ್ಯವನ್ನು ಅರಿತುಕೊಳ್ಳಬೇಕಲ್ಲವೆ. ಈ ಸಮಯದಲ್ಲಿ ಜ್ಞಾನವಿಲ್ಲದ ಕಾರಣ ಮನುಷ್ಯರಿಗೆ
ಸುಖವಿಲ್ಲ. ಇದು ಬೇಹದ್ದಿನ ಜ್ಞಾನವಾಗಿದೆ ಇದರಿಂದ ಬೇಹದ್ದಿನ ಸುಖಕ್ಕಾಗಿ ಈಗ ಪುನಃ ಪುರುಷಾರ್ಥ
ಮಾಡುತ್ತಿದ್ದೇವೆಂದು ನಿಮಗೆ ತಿಳಿದಿದೆ. ಈಗ ಪುನಃ ಎಂಬ ಶಬ್ಧವನ್ನು ಕೇವಲ ನೀವೇ ಕೇಳುತ್ತೀರಿ.
ನೀವೇ ಪುನಃ ಮನುಷ್ಯರಿಂದ ದೇವತೆಗಳಾಗಲು ಈ ರಾಜಯೋಗ ಶಿಕ್ಷಣವನ್ನು ಪ್ರಾಪ್ತಿ
ಮಾಡಿಕೊಳ್ಳುತ್ತಿದ್ದೀರಿ. ಇದನ್ನೂ ನೀವು ತಿಳಿದುಕೊಂಡಿದ್ದೀರಿ – ಜ್ಞಾನ ಸಾಗರ ತಂದೆಯೇ
ನಿರಾಕಾರನಾಗಿದ್ದಾರೆ. ಹಾಗೆ ನೋಡಿದರೆ ಆತ್ಮಗಳು ನಿರಾಕಾರಿಯಾಗಿದ್ದೀರಿ, ಆದರೆ ಎಲ್ಲರಿಗೆ
ತಮ್ಮ-ತಮ್ಮ ಶರೀರವಿದೆ, ಇದಕ್ಕೆ ಅಲೌಕಿಕ ಜನ್ಮವೆಂದು ಹೇಳಲಾಗುತ್ತದೆ ಮತ್ತ್ಯಾವ ಮನುಷ್ಯರೂ ಈ
ರೀತಿಯ ಜನ್ಮವನ್ನು ತೆಗೆದುಕೊಳ್ಳುವುದಿಲ್ಲ. ಹೇಗೆ ಇವರೂ ಸಹ ಅಲೌಕಿಕ ಜನ್ಮ ಪಡೆಯುತ್ತಾರೆ ಮತ್ತು
ಇವರ ವಾನಪ್ರಸ್ಥ ಸ್ಥಿತಿಯಲ್ಲಿ ತಂದೆಯು ಪ್ರವೇಶ ಮಾಡುತ್ತಾರೆ. ಮಕ್ಕಳಿಗೆ ಸನ್ಮುಖದಲ್ಲಿ ಕುಳಿತು
ತಿಳಿಸುತ್ತಾರೆ, ಮತ್ತ್ಯಾರೂ ಆತ್ಮಗಳಿಗೆ ಮಕ್ಕಳೇ, ಮಕ್ಕಳೇ ಎಂದು ಹೇಳಲು ಸಾಧ್ಯವಿಲ್ಲ. ಯಾವುದೇ
ಧರ್ಮದವರಿರಬಹುದು, ಶಿವ ತಂದೆಯು ನಾವಾತ್ಮಗಳ ತಂದೆಯಾಗಿದ್ದಾರೆ ಎಂಬುದನ್ನು ಅರಿತಿದ್ದಾರೆಂದರೆ
ಅವರನ್ನು ಅವಶ್ಯವಾಗಿ ತಂದೆಯು ಮಕ್ಕಳೇ, ಮಕ್ಕಳೇ ಎಂದೇ ಹೇಳುತ್ತಾರೆ. ಬಾಕಿ ಯಾವುದೇ
ಮನುಷ್ಯಾತ್ಮರಿಗೆ ಈಶ್ವರನೆಂದು ಹೇಳಲು ಸಾಧ್ಯವಿಲ್ಲ. ತಂದೆಯೆಂದು ಹೇಳಲು ಸಾಧ್ಯವಿಲ್ಲ. ಹಾಗೆ
ನೋಡಿದರೆ ಗಾಂಧೀಜಿಗೂ ಸಹ ಬಾಪೂಜಿ ಎಂದು ಹೇಳುತ್ತಿದ್ದರು, ಮೇಯರ್ರವರಿಗೂ ಸಹ ತಂದೆಯೆಂದು
ಹೇಳುತ್ತಾರೆ. ಆದರೆ ಆ ತಂದೆಯರೆಲ್ಲರೂ ದೇಹಧಾರಿಗಳಾಗಿದ್ದಾರೆ. ನಾವಾತ್ಮಗಳ ತಂದೆಯು ನಮಗೆ
ಓದಿಸುತ್ತಾರೆಂದು ನಿಮಗೆ ತಿಳಿದಿದೆ. ತಂದೆಯು ಮತ್ತೆ-ಮತ್ತೆ ತಿಳಿಸುತ್ತಾರೆ - ತಮ್ಮನ್ನು
ಆತ್ಮನೆಂದು ತಿಳಿಯಿರಿ, ಅವರೇ ಬಂದು ಆತ್ಮಗಳಿಗೆ ಓದಿಸುತ್ತಾರೆ. ಇದು ಈಶ್ವರೀಯ ಕುಟುಂಬವಾಗಿದೆ.
ತಂದೆಗೆ ಎಷ್ಟೊಂದು ಮಂದಿ ಮಕ್ಕಳಿದ್ದಾರೆ! ಬಾಬಾ, ನಾವು ತಮ್ಮವರಾಗಿದ್ದೇವೆಂದು ನೀವೂ ಹೇಳುತ್ತೀರಿ
ಅಂದಾಗ ನೀವು ಮಕ್ಕಳಾಗಿ ಇರಿ. ಬಾಬಾ ನಾವು ಒಂದು ದಿನದ ಮಗುವಾಗಿದ್ದೇನೆ, ನಾನು 8 ದಿನಗಳ
ಮಗುವಾಗಿದ್ದೇನೆ, ಒಂದು ತಿಂಗಳ ಮಗುವಾಗಿದ್ದೇನೆಂದು ಹೇಳುತ್ತಾರೆ. ಅವಶ್ಯವಾಗಿ ಚಿಕ್ಕವರೇ
ಆಗಿರುವರು. ಭಲೆ 4-8 ದಿನಗಳ ಮಗುವೇ ಆಗಿರಬಹುದು. ಆದರೆ ಕರ್ಮೇಂದ್ರಿಯಗಳಂತೂ ದೊಡ್ಡದಾಗಿದೆಯಲ್ಲವೆ.
ಆದ್ದರಿಂದ ಎಲ್ಲಾ ದೊಡ್ಡ ಮಕ್ಕಳಿಗೆ ವಿದ್ಯಾಭ್ಯಾಸವು ಬೇಕು. ಯಾರೆಲ್ಲರೂ ಬರುವರೋ ಅವರಿಗೆ ತಂದೆಯು
ಓದಿಸುತ್ತಾರೆ, ನೀವೂ ಓದುತ್ತೀರಿ. ತಂದೆಯ ಮಕ್ಕಳಾದ ಮೇಲೆ ತಂದೆಯು ತಿಳಿಸುತ್ತಾರೆ - ನೀವು 84
ಜನ್ಮಗಳನ್ನು ಹೇಗೆ ತೆಗೆದುಕೊಂಡಿದ್ದೀರಿ? ತಂದೆಯು ತಿಳಿಸುತ್ತಾರೆ - ನಾನು ಬಹಳ ಜನ್ಮಗಳ
ಅಂತಿಮದಲ್ಲಿ ಇವರಲ್ಲಿ (ಬ್ರಹ್ಮಾ) ಪ್ರವೇಶ ಮಾಡುತ್ತೇನೆ ಮತ್ತೆ ಓದಿಸುತ್ತೇನೆ. ಇಲ್ಲಿ ನಾವು ಅತಿ
ದೊಡ್ಡ ಶಿಕ್ಷಕನ ಬಳಿ ಬಂದಿದ್ದೇವೆಂದು ಮಕ್ಕಳಿಗೂ ತಿಳಿದಿದೆ. ಇವರಿಂದಲೇ ಮತ್ತೆ ಆ ಶಿಕ್ಷಕರು
ಬಂದಿದ್ದಾರೆ ಯಾರಿಗೆ ಮಾರ್ಗದರ್ಶಕನೆಂದು ಹೇಳುತ್ತಾರೆ ಅವರೂ ಸಹ ಎಲ್ಲರಿಗೆ ಓದಿಸುತ್ತಾ ಇರುತ್ತಾರೆ.
ಯಾರ್ಯಾರು ಅರಿತುಕೊಳ್ಳುತ್ತಾ ಹೋಗುವರೋ ಅವರಿಗೆ ಓದಿಸುತ್ತಾ ಇರುತ್ತಾರೆ.
ಮೊಟ್ಟ ಮೊದಲಿಗೆ ಇದನ್ನೇ ತಿಳಿಸಬೇಕಾಗಿದೆ - ಇಬ್ಬರು ತಂದೆಯರಿದ್ದಾರಲ್ಲವೆ. ಒಬ್ಬರು ಲೌಕಿಕ
ಇನ್ನೊಬ್ಬರು ಪಾರಲೌಕಿಕ ತಂದೆ. ಇಬ್ಬರಲ್ಲಿ ದೊಡ್ಡವರು ಪಾರಲೌಕಿಕ ತಂದೆಯೇ ಆದರು. ಅವರಿಗೆ
ಭಗವಂತನೆಂದು ಹೇಳಲಾಗುತ್ತದೆ. ನಮಗೆ ಪಾರಲೌಕಿಕ ತಂದೆಯು ಸಿಕ್ಕಿದ್ದಾರೆ ಎಂಬುದನ್ನು ನೀವು
ತಿಳಿದುಕೊಂಡಿದ್ದೀರಿ ಮತ್ತ್ಯಾರೂ ತಿಳಿದುಕೊಂಡಿಲ್ಲ. ನಿಧಾನ-ನಿಧಾನವಾಗಿ ಅರಿತುಕೊಳ್ಳುತ್ತಾ
ಹೋಗುತ್ತಾರೆ. ತಂದೆಯು ನಾವಾತ್ಮಗಳಿಗೇ ಓದಿಸುತ್ತಾರೆ. ನಾವೇ ಒಂದು ಶರೀರವನ್ನು ಬಿಟ್ಟು ಇನ್ನೊಂದು
ಶರೀರವನ್ನು ತೆಗೆದುಕೊಳ್ಳುತ್ತೇವೆ, ಸರ್ವ ಶ್ರೇಷ್ಠರಾಗುತ್ತೇವೆ. ಶ್ರೇಷ್ಠರಾಗುವುದಕ್ಕಾಗಿಯೇ
ಬಂದಿದ್ದೇವೆ. ಕೆಲವು ಮಕ್ಕಳು ನಡೆಯುತ್ತಾ-ನಡೆಯುತ್ತಾ ಶ್ರೇಷ್ಠ ವಿದ್ಯೆಯನ್ನೇ ಬಿಟ್ಟು
ಬಿಡುತ್ತಾರೆ. ಯಾವುದಾದರೊಂದು ಮಾತಿನಲ್ಲಿ ಸಂಶಯ ಬರುತ್ತದೆ ಇಲ್ಲವೆ ಮಾಯೆಯ ಯಾವುದೇ
ಬಿರುಗಾಳಿಗಳನ್ನು ಸಹನೆ ಮಾಡುವುದಕ್ಕೆ ಆಗುವುದಿಲ್ಲ. ಕಾಮ ಮಹಾಶತ್ರುವಿನಿಂದ ಸೋಲನ್ನು
ಅನುಭವಿಸುತ್ತಾರೆ, ಈ ಕಾರಣಗಳಿಂದ ವಿದ್ಯಾಭ್ಯಾಸವು ಬಿಟ್ಟು ಹೋಗುತ್ತದೆ. ಕಾಮ ಮಹಾಶತ್ರುವಿನ
ಕಾರಣವೇ ಮಕ್ಕಳು ಬಹಳಷ್ಟು ಸಹನೆ ಮಾಡಬೇಕಾಗುತ್ತದೆ. ಕಲ್ಪ-ಕಲ್ಪವೂ ನೀವು ಅಬಲೆಯರು, ಮಾತೆಯರೇ
ನನ್ನನ್ನು ಕರೆಯುತ್ತೀರಿ. ಬಾಬಾ, ನಮ್ಮನ್ನು ಅಪವಿತ್ರರಾಗುವುದರಿಂದ ರಕ್ಷಿಸಿ ಎಂದು ಕೂಗುತ್ತೀರಿ.
ನೆನಪಿನ ವಿನಃ ಮತ್ತ್ಯಾವುದೂ ಇಲ್ಲ. ನೆನಪಿನಿಂದಲೇ ಬಲವು ಸಿಗುತ್ತದೆ. ಮಾಯಾ ಬಲಶಾಲಿಯ ಶಕ್ತಿಯು
ಕಡಿಮೆಯಾಗುತ್ತಾ ಹೋಗುವುದು. ಮತ್ತೆ ನೀವು ಅದರಿಂದ ಮುಕ್ತರಾಗುತ್ತೀರಿ. ಹೀಗೆ ಅನೇಕರು ಬಂಧನದಿಂದ
ಮುಕ್ತರಾಗಿ ಬರುತ್ತಾರೆ. ನಂತರ ಅತ್ಯಾಚಾರಗಳಾಗುವುದು ನಿಂತು ಹೋಗುತ್ತದೆ. ಮತ್ತೆ ಬಂದು ಶಿವ
ತಂದೆಯೊಂದಿಗೆ ಬ್ರಹ್ಮಾರವರ ಮೂಲಕ ವಾರ್ತಾಲಾಪ ಮಾಡುತ್ತಾರೆ. ಇದೂ ಸಹ ಹವ್ಯಾಸವಾಗಿ ಬಿಡಬೇಕು.
ಬುದ್ಧಿಯಲ್ಲಿರಬೇಕು - ನಾವು ಶಿವ ತಂದೆಯ ಬಳಿ ಹೋಗುತ್ತೇವೆ, ಅವರು ಈ ಬ್ರಹ್ಮಾರವರ ತನುವಿನಲ್ಲಿ
ಬರುತ್ತಾರೆ, ನಾವು ಶಿವ ತಂದೆಯ ಮುಂದೆ ಕುಳಿತಿದ್ದೇವೆ, ನೆನಪಿನಿಂದಲೇ ವಿಕರ್ಮಗಳು
ವಿನಾಶವಾಗುತ್ತವೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ನಿಮಗೆ ಇದೇ
ಶಿಕ್ಷಣವು ಸಿಗುತ್ತದೆ. ತಂದೆಯೊಂದಿಗೆ ಮಿಲನ ಮಾಡಲು ಬರುವಾಗಲೂ ಸಹ ತಮ್ಮನ್ನು ಆತ್ಮನೆಂದು
ತಿಳಿಯಿರಿ. ಆತ್ಮಾಭಿಮಾನಿ ಭವ. ಈ ಜ್ಞಾನವೂ ಸಹ ನಿಮಗೆ ಈಗಲೇ ಸಿಗುತ್ತದೆ. ಇದು ಪರಿಶ್ರಮವಾಗಿದೆ.
ಆ ಭಕ್ತಿಮಾರ್ಗದಲ್ಲಿ ಎಷ್ಟೊಂದು ವೇದ ಶಾಸ್ತ್ರಗಳನ್ನು ಓದುತ್ತಾರೆ, ಇದಂತೂ ಕೇವಲ ನೆನಪಿನದೊಂದೇ
ಪರಿಶ್ರಮವಾಗಿದೆ. ಇದು ಬಹಳ ಸಹಜಕ್ಕಿಂತ ಸಹಜವೂ ಆಗಿದೆ, ಕಷ್ಟಕ್ಕಿಂತ ಕಷ್ಟವೂ ಆಗಿದೆ. ತಂದೆಯನ್ನು
ನೆನಪು ಮಾಡುವುದು ಇದಕ್ಕಿಂತಲೂ ಸಹಜವಾದ ಮಾತು ಮತ್ತ್ಯಾವುದೂ ಇಲ್ಲ. ಮಗುವಿನ ಜನ್ಮವಾಯಿತೆಂದರೆ ಆ
ಮಗುವಿನ ಬಾಯಿಂದ ಬಾಬಾ, ಬಾಬಾ ಎಂದು ಬರುತ್ತದೆ. ಹೆಣ್ಣು ಮಗುವಿನ ಬಾಯಿಂದ ಅಮ್ಮ ಎಂಬ ಶಬ್ಧವು
ಬರುತ್ತದೆ. ಆತ್ಮವು ಸ್ತ್ರೀ ಶರೀರವನ್ನು ಧಾರಣೆ ಮಾಡಿದೆ, ಸ್ತ್ರೀಯು ತಾಯಿಯ ಬಳಿಯೇ ಹೋಗುವಳು.
ಗಂಡು ಮಕ್ಕಳು ಬಹುತೇಕವಾಗಿ ತಂದೆಯನ್ನೇ ನೆನಪು ಮಾಡುತ್ತಾರೆ, ಏಕೆಂದರೆ ಅವರಿಂದ ಆಸ್ತಿಯು
ಸಿಗುತ್ತದೆ. ತಂದೆಯನ್ನು ನೆನಪು ಮಾಡುವುದರಿಂದ ಆತ್ಮಕ್ಕೆ ಆಸ್ತಿಯು ಸಿಗುತ್ತದೆ.
ದೇಹಾಭಿಮಾನಿಗಳಾಗಿದ್ದಾಗ ಆಸ್ತಿಯನ್ನು ಪಡೆಯುವುದರಲ್ಲಿ ಕಷ್ಟವಾಗುತ್ತದೆ. ತಂದೆಯು ತಿಳಿಸುತ್ತಾರೆ
- ನಾನು ಮಕ್ಕಳಿಗೇ ಓದಿಸುತ್ತೇನೆ. ನಾವು ಮಕ್ಕಳಿಗೆ ತಂದೆಯು ಓದಿಸುತ್ತಾರೆಂದು ಮಕ್ಕಳಿಗೂ
ತಿಳಿದಿದೆ. ಈ ಮಾತುಗಳನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಅವರ ಜೊತೆಯೇ
ಭಕ್ತಿಮಾರ್ಗದಲ್ಲಿ ನಿಮಗೆ ಪ್ರೀತಿಯಿತ್ತು, ನೀವೆಲ್ಲರೂ ಆ ಪ್ರಿಯತಮನ ಪ್ರಿಯತಮೆಯರಾಗಿದ್ದಿರಿ. ಇಡೀ
ಪ್ರಪಂಚವು ಒಬ್ಬ ಪ್ರಿಯತಮನ ಪ್ರಿಯತಮೆಯಾಗಿದೆ. ಪರಮಾತ್ಮನನ್ನು ಎಲ್ಲರೂ ಪರಮಪಿತನೆಂದು ಹೇಳುತ್ತಾರೆ.
ತಂದೆಗೆ ಪ್ರಿಯತಮೆಯೆಂದು ಹೇಳುವುದಿಲ್ಲ, ತಂದೆಯು ತಿಳಿಸುತ್ತಾರೆ - ನೀವು ಭಕ್ತಿಮಾರ್ಗದಲ್ಲಿ
ಪ್ರಿಯತಮೆಯರಾಗಿದ್ದಿರಿ, ಈಗಲೂ ಆಗಿದ್ದೀರಿ ಆದರೆ ಯಾರಿಗೆ ಪರಮಾತ್ಮನೆಂದು ಹೇಳುವುದು
ಎನ್ನುವುದರಲ್ಲಿ ಬಹಳ ತಬ್ಬಿಬ್ಬಾಗುತ್ತಾರೆ. ಗಣೇಶ, ಹನುಮಂತ ಮೊದಲಾದವರನ್ನು ಪರಮಾತ್ಮನೆಂದು ಹೇಳಿ
ಒಮ್ಮೆಲೆ ಸೂತ್ರವನ್ನು ಗಂಟು ಹಾಕಿಕೊಳ್ಳುತ್ತಾರೆ. ಇದನ್ನು ಒಬ್ಬ ತಂದೆಯ ವಿನಃ ಮತ್ತ್ಯಾರೂ ಸರಿ
ಪಡಿಸಲು ಸಾಧ್ಯವಿಲ್ಲ, ಮತ್ತ್ಯಾರಿಗೂ ಆ ಶಕ್ತಿಯಿಲ್ಲ. ತಂದೆಯೇ ಬಂದು ಮಕ್ಕಳಿಗೆ ತಿಳಿಸುತ್ತಾರೆ,
ನಂತರ ಮಕ್ಕಳು ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡು ಅನ್ಯರಿಗೆ ತಿಳಿಸಲು
ಯೋಗ್ಯರಾಗುತ್ತಾರೆ. ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಚಾಚೂ ತಪ್ಪದೆ ಕಲ್ಪದ ಹಿಂದಿನಂತೆ
ನೀವಿಲ್ಲಿ ಓದುತ್ತೀರಿ. ಮತ್ತೆ ಹೊಸ ಪ್ರಪಂಚದಲ್ಲಿ ಪ್ರಾಲಬ್ಧವನ್ನು ಪಡೆಯುತ್ತೀರಿ ಅದಕ್ಕೆ
ಅಮರಲೋಕವೆಂದು ಹೇಳುತ್ತಾರೆ. ನೀವು ಕಾಲದ (ಮೃತ್ಯು) ಮೇಲೆ ವಿಜಯವನ್ನು ಗಳಿಸುತ್ತೀರಿ. ಅಲ್ಲೆಂದೂ
ಅಕಾಲಮೃತ್ಯುವಾಗುವುದಿಲ್ಲ. ಹೆಸರೇ ಆಗಿದೆ - ಸ್ವರ್ಗ. ನೀವು ಮಕ್ಕಳಿಗೆ ಈ ವಿದ್ಯೆಯಲ್ಲಿ ಬಹಳ
ಖುಷಿಯಿರಬೇಕು. ತಂದೆಯ ನೆನಪಿನಿಂದ ತಂದೆಯ ಆಸ್ತಿಯ ನೆನಪೂ ಬರುವುದು. ಸೆಕೆಂಡಿನಲ್ಲಿ ಇಡೀ ನಾಟಕದ
ಜ್ಞಾನವು ಬುದ್ಧಿಯಲ್ಲಿ ಬಂದು ಬಿಡುವುದು. ಮೂಲವತನ, ಸೂಕ್ಷ್ಮವತನ, ಸ್ಥೂಲ ವತನ ಪೂರ್ಣ 84 ಜನ್ಮಗಳ
ಚಕ್ರ, ಈ ನಾಟಕವೆಲ್ಲವೂ ಭಾರತದ ಮೇಲೆಯೇ ಮಾಡಲ್ಪಟ್ಟಿದೆ. ಉಳಿದೆಲ್ಲವೂ ಶಾಖೆಗಳಾಗಿವೆ. ತಂದೆಯು
ಜ್ಞಾನವನ್ನು ನಿಮಗೇ ತಿಳಿಸುತ್ತಾರೆ, ನೀವೇ ಶ್ರೇಷ್ಠರಿಂದ ಕನಿಷ್ಠರಾಗುವಿರಿ. ಡಬಲ್ ಕಿರೀಟಧಾರಿ
ರಾಜರಾಗಿದ್ದವರು ಈಗ ಸಂಪೂರ್ಣ ಗುಲಾಮರಾಗಿದ್ದೀರಿ. ಈಗ ಭಾರತವು ಗುಲಾಮ, ಭಿಕಾರಿಯಾಗಿದೆ. ಪ್ರಜೆಗಳ
ಮೇಲೆ ಪ್ರಜೆಗಳ ರಾಜ್ಯವಿದೆ. ಸತ್ಯಯುಗದಲ್ಲಿ ಡಬಲ್ ಕಿರೀಟಧಾರಿ ಮಹಾರಾಜ-ಮಹಾರಾಣಿಯರ ರಾಜ್ಯವಿತ್ತು.
ಇದನ್ನು ಎಲ್ಲರೂ ಒಪ್ಪುತ್ತಾರೆ. ಆದಿ ದೇವ ಬ್ರಹ್ಮನಿಗೆ ಅನೇಕ ಹೆಸರುಗಳನ್ನಿಟ್ಟಿದ್ದಾರೆ, ಅವರಿಗೆ
ಮಹಾವೀರನೆಂತಲೂ ಹೇಳುತ್ತಾರೆ, ಹನುಮಂತನಿಗೂ ಮಹಾವೀರನೆಂದು ಹೇಳುತ್ತಾರೆ. ವಾಸ್ತವದಲ್ಲಿ ನೀವು
ಮಕ್ಕಳು ಮಹಾವೀರ ಹನುಮಂತರಾಗಿದ್ದೀರಿ, ಏಕೆಂದರೆ ನೀವು ಇಷ್ಟು ಯೋಗದಲ್ಲಿರುತ್ತೀರಿ ಅದರಿಂದ ಮಾಯೆಯು
ಭಲೆ ಎಷ್ಠಾದರೂ ಬಿರುಗಾಳಿಗಳನ್ನು ತರಲಿ ಆದರೆ ನಿಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ. ನೀವು
ಮಹಾವೀರನ ಮಕ್ಕಳು ಮಹಾವೀರರಾಗಿದ್ದೀರಿ. ಏಕೆಂದರೆ ನೀವು ಮಾಯೆಯ ಮೇಲೆ ಜಯ ಗಳಿಸುತ್ತೀರಿ. ಪಂಚ
ವಿಕಾರರೂಪಿ ರಾವಣನ ಮೇಲೆ ಪ್ರತಿಯೊಬ್ಬರೂ ಜಯ ಗಳಿಸುತ್ತಾರೆ. ಒಬ್ಬ ಮನುಷ್ಯನ ಮಾತಲ್ಲ. ನೀವು
ಪ್ರತಿಯೊಬ್ಬರು ಧನಸ್ಸನ್ನು ಮುರಿಯಬೇಕಾಗಿದೆ ಅರ್ಥಾತ್ ಮಾಯೆಯ ಮೇಲೆ ವಿಜಯ ಪಡೆಯಬೇಕಾಗಿದೆ.
ಇದರಲ್ಲಿ ಯುದ್ಧದ ಮಾತಿಲ್ಲ. ಯುರೋಪಿಯನ್ನರು ಹೇಗೆ ಹೊಡೆದಾಡುತ್ತಾರೆ. ಭಾರತದಲ್ಲಿ ಕೌರವರು ಮತ್ತು
ಪಾಂಡವರ ಯುದ್ಧವಾಗಿದೆ, ರಕ್ತದ ನದಿಗಳು ಹರಿಯುತ್ತದೆಯೆಂದು ಗಾಯನವೂ ಇದೆ ಮತ್ತು ಹಾಲಿನ ನದಿಗಳೂ
ಹರಿಯುತ್ತವೆ. ವಿಷ್ಣುವನ್ನು ಕ್ಷೀರ ಸಾಗರದಲ್ಲಿ ತೋರಿಸುತ್ತಾರೆ. ಲಕ್ಷ್ಮೀ-ನಾರಾಯಣರು
ಪಾರಸನಾಥರಾಗಿದ್ದಾರೆ. ಅವರಿಗೆ ನೇಪಾಳದ ಕಡೆ ಪಶುಪತಿನಾಥನೆಂದು ಹೆಸರನ್ನಿಟ್ಟಿದ್ದಾರೆ. ಒಬ್ಬರೇ
ವಿಷ್ಣುವಿಗೆ ಎರಡು ರೂಪಗಳಾಗಿವೆ, ಪಾರಸನಾಥ-ಪಾರಸನಾಥಿನಿ. ಅವರು ಪಶುಪತಿನಾಥ ಪತಿಯು, ಪಶುಪತಿನಾಥ
ಪತ್ನಿಯೂ ಆಗಿದ್ದಾರೆ. ಅದರಲ್ಲಿ ವಿಷ್ಣುವಿನ ಚಿತ್ರವನ್ನು ರಚಿಸುತ್ತಾರೆ. ಸರೋವರವನ್ನೂ
ಮಾಡುತ್ತಾರೆ ಅಂದಾಗ ಸರೋವರದಲ್ಲಿ ಹಾಲು ಎಲ್ಲಿಂದ ಬಂದಿತು! ವಿಶೇಷ ದಿನಗಳಲ್ಲಿ ಆ ಸರೋವರದಲ್ಲಿ
ಹಾಲನ್ನು ಹಾಕುತ್ತಾರೆ. ಕ್ಷೀರ ಸಾಗರದಲ್ಲಿ ವಿಷ್ಣುವು ಮಲಗಿರುವಂತೆ ತೋರಿಸುತ್ತಾರೆ. ಅರ್ಥವೇನೂ
ಇಲ್ಲ. ಹೀಗೆ ನಾಲ್ಕು ಭುಜಗಳ್ಳುಳ್ಳ ಮನುಷ್ಯರು ಯಾರೂ ಇರುವುದಿಲ್ಲ.
ನೀವೀಗ ಸಮಾಜ ಸೇವಕರಾಗಿದ್ದೀರಿ. ಆತ್ಮಿಕ ತಂದೆಯ ಮಕ್ಕಳಾಗಿದ್ದೀರಲ್ಲವೆ. ತಂದೆಯು ಎಲ್ಲಾ
ಮಾತುಗಳನ್ನು ತಿಳಿಸುತ್ತಾರೆ. ಇದರಲ್ಲಿ ಯಾವುದೇ ಸಂಶಯ ಬರಬಾರದು. ಸಂಶಯವೆಂದರೆ ಮಾಯೆಯ ಬಿರುಗಾಳಿ.
ನೀವು ನನ್ನನ್ನು ಪತಿತ-ಪಾವನ ಬನ್ನಿ, ನಮ್ಮನ್ನು ಪಾವನ ಮಾಡಿ ಎಂದೇ ಕರೆಯುತ್ತೀರಿ ಅಂದಾಗ ಈಗ
ನನ್ನೊಬ್ಬನನ್ನೇ ನೆನಪು ಮಾಡಿ ಅದರಿಂದ ನೀವು ಪಾವನರಾಗಿ ಬಿಡುತ್ತೀರಿ. 84 ಜನ್ಮಗಳ ಚಕ್ರವನ್ನೂ ಸಹ
ನೆನಪು ಮಾಡಬೇಕಾಗಿದೆ. ತಂದೆಯು ಪತಿತ-ಪಾವನ, ಜ್ಞಾನಸಾಗರನೆಂದು ಹೇಳಲಾಗುತ್ತದೆ. ಎರಡು
ಕೆಲಸಗಳಾಯಿತು, ಪತಿತರನ್ನು ಪಾವನ ಮಾಡುತ್ತಾರೆ ಮತ್ತು 84 ಜನ್ಮಗಳ ಚಕ್ರದ ಜ್ಞಾನವನ್ನು
ತಿಳಿಸುತ್ತಾರೆ. ಇದೂ ಸಹ ನೀವು ಮಕ್ಕಳಿಗೆ ತಿಳಿದಿದೆ - 84 ಜನ್ಮಗಳ ಚಕ್ರವು ನಡೆಯುತ್ತಲೇ ಇರುವುದು.
ಇದೆಂದೂ ಅಂತ್ಯವಾಗುವುದಿಲ್ಲ. ತಂದೆಯು ಎಷ್ಟು ಮಧುರನಾಗಿದ್ದಾರೆ, ಅವರಿಗೆ ಪತಿಯರಿಗೂ ಪತಿಯೆಂದು
ಹೇಳುತ್ತಾರೆ, ತಂದೆಯೂ ಆಗಿದ್ದಾರೆ, ಇದನ್ನು ನೀವು ನಂಬರ್ವಾರ್ ಪುರುಷಾರ್ಥದನುಸಾರ
ತಿಳಿದುಕೊಂಡಿದ್ದೀರಿ, ತಂದೆಯು ತಿಳಿಸುತ್ತಾರೆ - ನನ್ನಿಂದ ನೀವು ಮಕ್ಕಳಿಗೆ ಬಹಳ ದೊಡ್ಡ ಆಸ್ತಿಯೂ
ಸಿಗುತ್ತದೆ ಆದರೆ ಇಂತಹ ತಂದೆಗೂ ಸಹ ವಿಚ್ಛೇದನವನ್ನು ಕೊಟ್ಟು ಬಿಡುತ್ತಾರೆ, ವಿದ್ಯೆಯನ್ನೇ ಬಿಟ್ಟು
ಬಿಡುತ್ತಾರೆ. ಇದೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ವಿದ್ಯೆಯನ್ನು ಬಿಡುವುದೆಂದರೆ ವಿಚ್ಛೇದನವನ್ನು
ಕೊಡುವುದು. ಎಷ್ಟೊಂದು ತಿಳುವಳಿಕೆ ಹೀನರಾಗಿದ್ದಾರೆ. ಯಾರು ಬುದ್ಧಿವಂತ ಮಕ್ಕಳಿದ್ದಾರೆಯೋ ಅವರು
ಸಹಜವಾಗಿ ಅರ್ಥ ಮಾಡಿಕೊಂಡು ಅನ್ಯರಿಗೆ ಓದಿಸಲು ತೊಡಗುತ್ತಾರೆ. ಈ ವಿದ್ಯೆಯಿಂದ ಏನು ಸಿಗುತ್ತದೆ
ಮತ್ತು ಆ ವಿದ್ಯೆಯಿಂದ ಏನು ಸಿಗುತ್ತದೆ, ಯಾವುದನ್ನು ಓದಬೇಕು ಎಂಬುದನ್ನು ಅವರು ಬಹಳ ಬೇಗನೆ
ನಿರ್ಣಯ ತೆಗೆದುಕೊಳ್ಳುತ್ತಾರೆ. ತಂದೆಯು ಮಕ್ಕಳೊಂದಿಗೆ ಕೇಳುತ್ತಾರೆ, ಮಕ್ಕಳು ಇದನ್ನು
ತಿಳಿದುಕೊಂಡಿದ್ದೀರಿ - ಈ ವಿದ್ಯೆಯು ಬಹಳ ಒಳ್ಳೆಯದಾಗಿದೆ ಆದರೂ ಸಹ ಏನು ಮಾಡುವುದು ಲೌಕಿಕ
ವಿದ್ಯೆಯನ್ನು ಓದದಿದ್ದರೆ ಮಿತ್ರ ಸಂಬಂಧಿಗಳು ಬೇಸರಗೊಳ್ಳುತ್ತಾರೆ ಎಂದು ಹೇಳುತ್ತಾರೆ. ತಂದೆಯು
ತಿಳಿಸುತ್ತಾರೆ - ದಿನ-ಪ್ರತಿದಿನ ಸಮಯ ಕಡಿಮೆಯಾಗುತ್ತಾ ಹೋಗುತ್ತದೆ. ಅನಂತರ ಇಷ್ಟೊಂದು
ವಿದ್ಯೆಯನ್ನಂತೂ ಓದಲು ಸಾಧ್ಯವಿಲ್ಲ, ದಿನ ಕಳೆದಂತೆ ಪರಸ್ಪರ ಶತ್ರುತ್ವವು ಹೆಚ್ಚುತ್ತಾ ಹೋಗುವುದು.
ಅವರೇ ಹೇಳುತ್ತಾರೆ - ನಾವು ಇಂತಿಂತಹ ವಸ್ತುಗಳನ್ನು ತಯಾರಿಸಿದ್ದೇವೆ ಅದರಿಂದ ಸೆಕೆಂಡಿನಲ್ಲಿ
ಎಲ್ಲವನ್ನೂ ಸಮಾಪ್ತಿ ಮಾಡಿ ಬಿಡುತ್ತೇವೆ. ನೀವು ಮಕ್ಕಳಿಗೆ ತಿಳಿದಿದೆ - ಡ್ರಾಮಾನುಸಾರ ಈಗಲೇ
ಯುದ್ಧವಾಗಲು ಸಾಧ್ಯವಿಲ್ಲ. ರಾಜಧಾನಿಯು ಸ್ಥಾಪನೆಯಾಗುವವರೆಗೆ ನಾವೂ ಸಹ ತಯಾರಿ
ಮಾಡಿಕೊಳ್ಳುತ್ತಿದ್ದೇವೆ. ಇವರೂ ಸಹ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಅಂತಿಮದಲ್ಲಿ ನಿಮ್ಮ
ಪ್ರಭಾವವು ಎಲ್ಲರ ಮೇಲೆ ಬಹಳಷ್ಟು ಬೀರುವುದು. ಅಹೋ ಪ್ರಭು ನಿನ್ನ ಲೀಲೆ ಅಪರಮಪಾರ ಎಂದು ಗಾಯನವಿದೆ.
ಅದು ಈ ಸಮಯದ ಗಾಯನವಾಗಿದೆ - ನಿಮ್ಮ ಗತಿಮತವು ಭಿನ್ನವೆಂದೂ ಗಾಯನ ಮಾಡಲಾಗಿದೆ. ಎಲ್ಲಾ ಆತ್ಮಗಳ
ಪಾತ್ರವು ಭಿನ್ನವಾಗಿದೆ. ಈಗ ತಂದೆಯು ನಿಮಗೆ ಶ್ರೀಮತವನ್ನು ಕೊಡುತ್ತಿದ್ದಾರೆ - ನನ್ನೊಬ್ಬನನ್ನೇ
ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುವವು. ಮನುಷ್ಯರ ಮತವೆಲ್ಲಿ, ಶ್ರೀಮತವೆಲ್ಲಿ! ವಿಶ್ವದಲ್ಲಿ
ಸಂಪೂರ್ಣ ಶಾಂತಿಯನ್ನು ಪರಮಪಿತ ಪರಮಾತ್ಮನ ವಿನಃ ಮತ್ತ್ಯಾರೂ ಸ್ಥಾಪನೆ ಮಾಡಲು ಸಾಧ್ಯವಿಲ್ಲ. 100%
ಪವಿತ್ರತೆ-ಸುಖ-ಶಾಂತಿಯನ್ನು 5000 ವರ್ಷಗಳ ಹಿಂದಿನಂತೆ ಡ್ರಾಮಾನುಸಾರವಾಗಿ ಸ್ಥಾಪನೆ
ಮಾಡುತ್ತಿದಾರೆ. ಅದು ಹೇಗೆ? ಇದನ್ನು ಬಂದು ತಿಳಿದುಕೊಳ್ಳಿ. ನೀವು ಮಕ್ಕಳೂ ಸಹಯೋಗಿಗಳಾಗಿದ್ದೀರಿ,
ಯಾರು ಬಹಳ ಸಹಯೋಗ ನೀಡುವರೋ ಅವರು ವಿಜಯ ಮಾಲೆಯ ಮಣಿಗಳಾಗುವರು. ನೀವು ಮಕ್ಕಳ ಹೆಸರುಗಳೂ ಎಷ್ಟು
ರಮಣೀಕವಾಗಿದ್ದವು. ಆ ಹೆಸರುಗಳ ಪಟ್ಟಿಯನ್ನು ಆಲ್ಬಂನಲ್ಲಿ ಇಡಬೇಕು. ನೀವು ಭಟ್ಟಿಯಲ್ಲಿದ್ದೀರಿ,
ಗೃಹಸ್ಥವನ್ನು ಬಿಟ್ಟು ಬಂದು ತಂದೆಗೆ ಬಲಿಹಾರಿಯಾದಿರಿ. ಬಂದೊಡನೆಯೇ ಭಟ್ಟಿಯಲ್ಲಿ ಕುಳಿತಿರಿ.
ಇಂತಹ ಪಕ್ಕಾ ಭಟ್ಟಿಯಾಗಿತ್ತು, ಒಳಗೆ ಯಾರೂ ಪ್ರವೇಶಿಸಲು ಸಾಧ್ಯವಿರಲಿಲ್ಲ. ಯಾವಾಗ ತಂದೆಯ
ಮಕ್ಕಳಾಗಿ ಬಿಟ್ಟರೆಂದರೆ ಹೆಸರುಗಳು ಅವಶ್ಯವಾಗಿ ಇರಬೇಕು. ಎಲ್ಲವನ್ನೂ ಸಮರ್ಪಣೆ ಮಾಡಿ ಬಿಟ್ಟರು.
ಆದ್ದರಿಂದ ಹೆಸರನ್ನು ಇಡಲಾಯಿತು. ತಂದೆಯೇ ಎಲ್ಲರಿಗೆ ಹೆಸರುಗಳನ್ನಿಟ್ಟರು. ಇದು
ಅದ್ಭುತವಾಗಿದೆಯಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ನಮಸ್ತೆ. ಅತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.|
ಧಾರಣೆಗಾಗಿ ಮುಖ್ಯಸಾರ-
1) ಯಾವುದೇ
ಮಾತಿನಲ್ಲಿ ಸಂಶಯ ಬುದ್ಧಿಯವರಾಗಬಾರದು. ಮಾಯೆಯ ಬಿರುಗಾಳಿಗಳನ್ನು ಮಹಾವೀರರಾಗಿ ಪಾರು ಮಾಡಬೇಕಾಗಿದೆ.
ಈ ರೀತಿ ಯೋಗದಲ್ಲಿರಿ, ಮಾಯೆಯ ಬಿರುಗಾಳಿಗಳು ಅಲುಗಾಡಿಸಲು ಸಾಧ್ಯವಾಗಬಾರದು.
2) ಬುದ್ಧಿವಂತರಾಗಿ ತಮ್ಮ ಜೀವನವನ್ನು ಈಶ್ವರೀಯ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ.
ಸತ್ಯ-ಸತ್ಯವಾದ ಆತ್ಮೀಯ ಸಮಾಜ ಸೇವಕರಾಗಬೇಕಾಗಿದೆ. ಆತ್ಮಿಕ ವಿದ್ಯೆಯನ್ನು ಓದಬೇಕು ಮತ್ತು
ಓದಿಸಬೇಕಾಗಿದೆ.
ವರದಾನ:
ಸಂಕಲ್ಪರೂಪಿ
ಬೀಜವನ್ನು ಕಲ್ಯಾಣದ ಶುಭ ಭಾವನೆಯಿಂದ ಸಂಪನ್ನವಾಗಿಡುವಂತಹ ವಿಶ್ವ ಕಲ್ಯಾಣಕಾರಿ ಭವ.
ಹೇಗೆ ಇಡೀ ವೃಕ್ಷದ ಸಾರ
ಬೀಜದಲ್ಲಿರುತ್ತದೆ ಅದೇ ರೀತಿ ಸಂಕಲ್ಪರೂಪಿ ಬೀಜ ಎಲ್ಲಾ ಆತ್ಮರ ಪ್ರತಿ, ಪ್ರಕೃತಿಯ ಪ್ರತಿ ಶುಭ
ಭಾವನೆಯುಳ್ಳದ್ದಾಗಿರುತ್ತದೆ. ಎಲ್ಲರನ್ನೂ ತಂದೆಯ ಸಮಾನ ಮಾಡುವಂತಹ ಭಾವನೆ, ನಿರ್ಬಲರನ್ನು ಬಲವಾನ್
ಆಗಿ, ದುಃಖಿ ಅಶಾಂತ ಆತ್ಮರನ್ನು ಸದಾ ಖುಶಿ ಶಾಂತ ಮಾಡುವ ಭಾವನೆಯ ರಸ ಹಾಗೂ ಸಾರ ಪ್ರತಿ
ಸಂಕಲ್ಪದಲ್ಲಿಯೂ ತುಂಬಿರುವಂತಿರಬೇಕು, ಯಾವುದೇ ಸಂಕಲ್ಪರೂಪಿ ಬೀಜ ಈ ಸಾರದಿಂದ ಖಾಲಿ ಅರ್ಥಾತ್
ವ್ಯರ್ಥವಾಗಬಾರದು, ಕಲ್ಯಾಣದ ಭಾವನೆಯಿಂದ ಸಮರ್ಥವಾಗಬೇಕು ಆಗ ಹೇಳಲಾಗುವುದು ತಂದೆ ಸಮಾನ ವಿಶ್ವ
ಕಲ್ಯಾಣಕಾರಿ ಆತ್ಮ.
ಸ್ಲೋಗನ್:
ಮಾಯೆಯ ಗೊಂದಲದಿಂದ
ಗಾಬರಿಯಾಗುವ ಬದಲು ಪರಮಾತ್ಮನ ಮೇಳದ ಮೋಜನ್ನು ಆಚರಿಸುತ್ತಿರಿ.