12.06.20 Morning Kannada Murli Om Shanti
BapDada Madhuban
ಮಧುರ ಮಕ್ಕಳೇ - ನೀವೀಗ
ಈಶ್ವರೀಯ ಸಂತಾನರಾಗಿದ್ದೀರಿ, ನಿಮ್ಮಲ್ಲಿ ಯಾವುದೇ ಆಸುರಿ ಗುಣಗಳಿರಬಾರದು, ತಮ್ಮ ಉನ್ನತಿ
ಮಾಡಿಕೊಳ್ಳಬೇಕು, ಹುಡುಗಾಟಿಕೆ ಮಾಡಬಾರದು.
ಪ್ರಶ್ನೆ:
ತಾವು ಸಂಗಮಯುಗೀ
ಬ್ರಾಹ್ಮಣ ಮಕ್ಕಳಿಗೆ ಯಾವ ನಿಶ್ಚಯ ಮತ್ತು ನಶೆಯಿದೆ?
ಉತ್ತರ:
ನಾವು ಮಕ್ಕಳಿಗೆ ಇದೇ ನಿಶ್ಚಯ ಮತ್ತು ನಶೆಯಿದೆ- ನಾವೀಗ ಈಶ್ವರೀಯ ಸಂಪ್ರದಾಯದವರಾಗಿದ್ದೇವೆ. ನಾವು
ಸ್ವರ್ಗವಾಸಿಗಳು, ವಿಶ್ವದ ಮಾಲೀಕರಾಗುತ್ತಿದ್ದೇವೆ. ಸಂಗಮಯುಗದಲ್ಲಿ ನಾವು
ವರ್ಗಾಯಿತರಾಗುತ್ತಿದ್ದೇವೆ. ಆಸುರೀ ಸಂತಾನರಿಂದ ಈಶ್ವರೀಯ ಸಂತಾನರಾಗಿ 21 ಜನ್ಮಗಳಿಗಾಗಿ
ಸ್ವರ್ಗವಾಸಿಗಳಾಗುತ್ತಿದ್ದೇವೆ. ಇದಕ್ಕಿಂತ ದೊಡ್ಡದಾದುದು ಯಾವುದೂ ಇಲ್ಲ.
ಓಂ ಶಾಂತಿ.
ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಬಹುತೇಕ ಮಂದಿ ಮನುಷ್ಯರು ಶಾಂತಿಯನ್ನೇ ಇಷ್ಟ ಪಡುತ್ತಾರೆ.
ಮನೆಯಲ್ಲಿ ಒಂದುವೇಳೆ ಮಕ್ಕಳ ಕಿರಿ ಕಿರಿಯಿದ್ದರೆ ಅಲ್ಲಿ ಅಶಾಂತಿಯಿರುತ್ತದೆ. ಅಶಾಂತಿಯಿಂದ ದುಃಖವು
ಭಾಸವಾಗುತ್ತದೆ. ಶಾಂತಿಯಿಂದ ಸುಖದ ಅನುಭವವಾಗುತ್ತದೆ. ನೀವು ಮಕ್ಕಳು ಇಲ್ಲಿ ಕುಳಿತಿದ್ದೀರಿ,
ನಿಮಗೆ ಸತ್ಯವಾದ ಶಾಂತಿಯಿದೆ. ನಿಮಗೆ ತಿಳಿಸಲಾಗಿದೆ - ತಂದೆಯನ್ನು ನೆನಪು ಮಾಡಿ, ತನ್ನನ್ನು
ಆತ್ಮನೆಂದು ತಿಳಿಯಿರಿ. ಆತ್ಮದಲ್ಲಿ ಅರ್ಧ ಕಲ್ಪದಿಂದ ಯಾವ ಅಶಾಂತಿಯಿದೆಯೋ ಅದನ್ನು ಶಾಂತಿಯ ಸಾಗರ
ತಂದೆಯನ್ನು ನೆನಪು ಮಾಡುವುದರಿಂದ ಅದು ಕಳೆಯುತ್ತದೆ. ನಿಮಗೆ ಶಾಂತಿಯ ಆಸ್ತಿಯು ಸಿಗುತ್ತದೆ,
ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ - ಶಾಂತಿಯ ಪ್ರಪಂಚ ಮತ್ತು ಅಶಾಂತಿಯ ಪ್ರಪಂಚವು
ಸಂಪೂರ್ಣವಾಗಿ ಬೇರೆಯಾಗಿದೆ. ಆಸುರೀ ಪ್ರಪಂಚ, ಈಶ್ವರೀಯ ಪ್ರಪಂಚ. ಸತ್ಯಯುಗ-ಕಲಿಯುಗವೆಂದು
ಯಾವುದಕ್ಕೆ ಹೇಳಲಾಗುತ್ತದೆ ಎಂಬುದನ್ನು ಯಾವುದೇ ಮನುಷ್ಯ ಮಾತ್ರರೂ ತಿಳಿದುಕೊಂಡಿಲ್ಲ. ನಮಗೂ ಸಹ
ತಿಳಿದಿರಲಿಲ್ಲ ಭಲೆ ಎಷ್ಟು ದೊಡ್ಡ ಸ್ಥಾನದವರಾಗಿದ್ದೆವು, ಆದರೆ ನಮಗೂ ಸಹ ತಿಳಿದಿರಲಿಲ್ಲ.
ಹಣವಿರುವವರಿಗೆ ಸ್ಥಾನ ಮಾನದವರೆಂದು ಹೇಳಲಾಗುತ್ತದೆ. ಬಡವರು ಮತ್ತು ಸಾಹುಕಾರರೆಂಬುದು
ತಿಳಿದುಕೊಳ್ಳಬಹುದಲ್ಲವೆ. ಹಾಗೆಯೇ ನೀವೂ ಸಹ ಅವಶ್ಯವಾಗಿ ತಿಳಿದುಕೊಳ್ಳುತ್ತೀರಿ - ಅವಶ್ಯವಾಗಿ
ಈಶ್ವರೀಯ ಸಂತಾನರು ಮತ್ತು ಆಸುರೀ ಸಂತಾನರಿದ್ದಾರೆ. ನಾವು ಈಶ್ವರೀಯ ಸಂಪ್ರದಾಯದವರು, ಸ್ವರ್ಗದ
ಮಾಲೀಕರಾಗುತ್ತಿದ್ದೇವೆಂದು ತಿಳಿದುಕೊಂಡಿದ್ದೀರಿ. ಅಂದಮೇಲೆ ಪ್ರತೀ ಕ್ಷಣ ಆ ಖುಷಿಯಿರಬೇಕು. ಬಹಳ
ಕೆಲವರೇ ಯಥಾರ್ಥ ರೀತಿಯಿಂದ ಅರಿತುಕೊಳ್ಳುತ್ತಾರೆ. ಸತ್ಯಯುಗದಲ್ಲಿ ಈಶ್ವರೀಯ
ಸಂಪ್ರದಾಯದವರಿರುತ್ತಾರೆ, ಕಲಿಯುಗದಲ್ಲಿ ಆಸುರೀ ಸಂಪ್ರದಾಯದವರಿದ್ದಾರೆ. ಪುರುಷೋತ್ತಮ
ಸಂಗಮಯುಗದಲ್ಲಿ ಆಸುರೀ ಸಂಪ್ರದಾಯವು ಬದಲಾಗುತ್ತದೆ. ನಾವೀಗ ಶಿವ ತಂದೆಯ ಸಂತಾನರಾಗಿದ್ದೇವೆ.
ಇದನ್ನು ಮಧ್ಯದಲ್ಲಿ ಮರೆತು ಹೋಗಿದ್ದೆವು. ನಾವು ಶಿವ ತಂದೆಯ ಸಂತಾನರೆಂಬುದನ್ನು
ಕರೆಸಿಕೊಳ್ಳುವುದಿಲ್ಲ. ಅವರು ದೈವೀ ಸಂತಾನರಾಗಿದ್ದಾರೆ, ಇದಕ್ಕೆ ಮೊದಲು ನಾವು ಅಸುರೀ
ಸಂತಾನರಾಗಿದ್ದೆವು. ಈಗ ಈಶ್ವರೀಯ ಸಂತಾನರಾಗಿದ್ದೇವೆ. ನಾವು ಬ್ರಾಹ್ಮಣರು ಬಿ.ಕೆ.ಗಳಾಗಿದ್ದೇವೆ.
ರಚನೆಯು ಒಬ್ಬ ತಂದೆಯದಾಗಿದೆ. ನೀವೆಲ್ಲರೂ ಸಹೋದರ-ಸಹೋದರರು ಮತ್ತು ಈಶ್ವರೀಯ ಸಂತಾನರಾಗಿದ್ದೀರಿ.
ತಂದೆಯಿಂದ ನಮಗೆ ರಾಜ್ಯವು ಸಿಗುತ್ತಿದೆ. ಭವಿಷ್ಯದಲ್ಲಿ ಹೋಗಿ ನಾವು ದೈವೀ ಸ್ವರಾಜ್ಯವನ್ನು
ಪಡೆಯುತ್ತೇವೆ, ಸುಖಿಯಾಗಿರುತ್ತೇವೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಸತ್ಯಯುಗವು
ಸುಖಧಾಮವಾಗಿದೆ, ಕಲಿಯುಗವು ದುಃಖಧಾಮವಾಗಿದೆ. ಇದನ್ನು ಕೇವಲ ನೀವು ಸಂಗಮಯುಗೀ ಬ್ರಾಹ್ಮಣರೇ
ಅರಿತುಕೊಂಡಿದ್ದೀರಿ. ಆತ್ಮವೇ ಈಶ್ವರೀಯ ಸಂತಾನವಾಗಿದೆ. ತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಾರೆ,
ಅವರು ರಚಯಿತನಲ್ಲವೆ. ನರಕದ ರಚಯಿತನಂತೂ ಅಲ್ಲ. ಆಗಿದ್ದರೆ ಅವರನ್ನು ಯಾರು ನೆನಪು ಮಾಡುತ್ತಾರೆ!
ತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಿದ್ದಾರೆ, ಅವರು ನಮ್ಮ ಮಧುರ ತಂದೆಯಾಗಿದ್ದಾರೆ. ನಮ್ಮನ್ನು
21 ಜನ್ಮಗಳಿಗಾಗಿ ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ. ಇದಕ್ಕಿಂತಲೂ ದೊಡ್ಡದಾದ್ದುದು ಬೇರೇನೂ
ಇಲ್ಲವೆಂದು ಮಧುರಾತಿ ಮಧುರ ಮಕ್ಕಳೇ ಅರ್ಥ ಮಾಡಿಕೊಂಡಿದ್ದೀರಿ. ಇದನ್ನು ನೆನಪಿಟ್ಟುಕೊಳ್ಳಬೇಕು.
ನಾವು ಈಶ್ವರೀಯ ಸಂತಾನರಾಗಿದ್ದೇವೆ ಅಂದಮೇಲೆ ನಮ್ಮಲ್ಲಿ ಯಾವುದೇ ಅಸುರೀ ಅವಗುಣವಿರಬಾರದು, ತಮ್ಮ
ಉನ್ನತಿ ಮಾಡಿಕೊಳ್ಳಬೇಕಾಗಿದೆ. ಇನ್ನು ಸ್ವಲ್ಪವೇ ಸಮಯವಿದೆ, ಇದರಲ್ಲಿ ಹುಡುಗಾಟಿಕೆ ಮಾಡಬಾರದು.
ಮರೆತು ಹೋಗಬೇಡಿ, ತಂದೆಯು ಸನ್ಮುಖದಲ್ಲಿ ಕುಳಿತಿದ್ದಾರೆಂಬುದನ್ನು ನೋಡುತ್ತೀರಿ. ನಾವು ಅವರ
ಸಂತಾನರಾಗಿದ್ದೇವೆ, ನಾವು ದೈವೀ ಸಂತಾನರಾಗಲು ಈಶ್ವರ ತಂದೆಯಿಂದ ಓದುತ್ತಿದ್ದೇವೆ ಅಂದಮೇಲೆ
ಎಷ್ಟೊಂದು ಖುಷಿಯಿರಬೇಕು. ತಂದೆಯು ಇಷ್ಟನ್ನೇ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ
ವಿಕರ್ಮಗಳು ವಿನಾಶವಾಗುವವು. ತಂದೆಯು ಎಲ್ಲರನ್ನೂ ಕರೆದುಕೊಂಡು ಹೋಗುವುದಕ್ಕಾಗಿಯೇ ಬಂದಿದ್ದಾರೆ.
ಅವರನ್ನು ಎಷ್ಟೆಷ್ಟು ನೆನಪು ಮಾಡುತ್ತೀರೋ ಅಷ್ಟು ವಿಕರ್ಮಗಳು ವಿನಾಶವಾಗುವವು. ಅಜ್ಞಾನ ಕಾಲದಲ್ಲಿ
ಹೇಗೆ ಕನ್ಯೆಗೆ ನಿಶ್ಚಿತಾರ್ಥವಾದ ನಂತರ ಅವರ ನೆನಪೇ ಹೆಚ್ಚಾಗಿ ಬಿಡುತ್ತದೆ. ಮಕ್ಕಳಾದರೆ ಇನ್ನೂ
ಹೆಚ್ಚು ನೆನಪು ಉಳಿದು ಬಿಡುತ್ತದೆ. ಈ ನೆನಪಂತೂ ಸ್ವರ್ಗದಲ್ಲಿಯೂ ಉಳಿದು ಬಿಡುತ್ತದೆ, ನರಕದಲ್ಲಿಯೂ
ಉಳಿದು ಬಿಡುತ್ತದೆ. ಇವರು ನಮ್ಮ ತಂದೆಯಾಗಿದ್ದಾರೆ ಎಂದು ಮಗನು ಹೇಳುವರು. ಈಗ ಇವರಂತೂ ಬೇಹದ್ದಿನ
ತಂದೆಯಾಗಿದ್ದಾರೆ, ಇವರಿಂದ ಸ್ವರ್ಗದ ಆಸ್ತಿಯು ಸಿಗುತ್ತದೆ ಅಂದಮೇಲೆ ಅವರ ನೆನಪು ಹಾಗೆ ಅಚ್ಚಾಗಿ
ಬಿಡಬೇಕಾಗಿಲ್ಲವೆ. ತಂದೆಯಿಂದ ನಾವು ಭವಿಷ್ಯದ 21 ಜನ್ಮಗಳ ಆಸ್ತಿಯನ್ನು ಪುನಃ
ತೆಗೆದುಕೊಳ್ಳುತ್ತಿದ್ದೇವೆ. ಬುದ್ಧಿಯಲ್ಲಿ ಆಸ್ತಿಯ ನೆನಪೇ ಇದೆ.
ಇದನ್ನೂ ಸಹ ತಿಳಿದುಕೊಂಡಿದ್ದೀರಿ - ಎಲ್ಲರೂ ಸಾಯಲೇಬೇಕಾಗಿದೆ. ಒಬ್ಬರೂ ಉಳಿಯುವುದಿಲ್ಲ, ಯಾರೆಲ್ಲಾ
ಪ್ರಿಯಾತಿ ಪ್ರಿಯರು ಇದ್ದಾರೆಯೋ ಎಲ್ಲರೂ ಹೊರಟು ಹೋಗುವರು. ಇದನ್ನು ಕೇವಲ ನೀವು ಬ್ರಾಹ್ಮಣರೇ
ತಿಳಿದುಕೊಂಡಿದ್ದೀರಿ - ಈ ಹಳೆಯ ಪ್ರಪಂಚವು ಈಗ ಹೊರಟೇ ಹೋಯಿತು. ಅದು ಹೋಗುವುದಕ್ಕೆ ಮುಂಚೆ ಪೂರ್ಣ
ಪುರುಷಾರ್ಥ ಮಾಡಬೇಕಾಗಿದೆ. ಈಶ್ವರೀಯ ಸಂತಾನರಾಗಿದ್ದೀರಿ ಅಂದಮೇಲೆ ಅಪಾರ ಖುಷಿಯಿರಬೇಕು. ತಂದೆಯು
ತಿಳಿಸುತ್ತಿರುತ್ತಾರೆ - ಮಕ್ಕಳೇ, ತಮ್ಮ ಜೀವನವನ್ನು ವಜ್ರ ಸಮಾನ ಮಾಡಿಕೊಳ್ಳಿ. ಅದು ದೈವೀ
ಪ್ರಪಂಚ, ಇದು ದೆವ್ವಗಳ ಪ್ರಪಂಚವಾಗಿದೆ. ಸತ್ಯಯುಗದಲ್ಲಿ ಎಷ್ಟೊಂದು ಅಪಾರ ಸುಖವಿರುತ್ತದೆ ಅದನ್ನು
ತಂದೆಯೇ ಕೊಡುತ್ತಾರೆ. ನೀವಿಲ್ಲಿ ತಂದೆಯ ಬಳಿ ಬಂದಿದ್ದೀರಿ, ನೀವಿಲ್ಲಿ ಕುಳಿತು ಬಿಡುವುದಿಲ್ಲ.
ಎಲ್ಲರೂ ಒಟ್ಟಿಗೆ ಇರುತ್ತೀರೆಂದಲ್ಲ, ಏಕೆಂದರೆ ಬೇಹದ್ದಿನ ಮಕ್ಕಳಾಗಿದ್ದೀರಿ. ನೀವಿಲ್ಲಿ ಬಹಳ
ಉಮ್ಮಂಗದಿಂದ ಬರುತ್ತೀರಿ. ನಾವು ಬೇಹದ್ದಿನ ತಂದೆಯ ಬಳಿ ಹೋಗುತ್ತೇವೆ. ನಾವು ಈಶ್ವರೀಯ
ಸಂತಾನರಾಗಿದೇವೆ, ಪರಮಾತ್ಮನ ಮಕ್ಕಳಾಗಿದ್ದೇವೆ ಅಂದಮೇಲೆ ನಾವೇಕೆ ಸ್ವರ್ಗದಲ್ಲಿರಬಾರದು!
ಪರಮಾತ್ಮನಂತೂ ಸ್ವರ್ಗವನ್ನೇ ರಚಿಸುತ್ತಾರಲ್ಲವೆ. ಈಗ ನಿಮ್ಮ ಬುದ್ಧಿಯಲ್ಲಿ ಇಡೀ ವಿಶ್ವದ
ಚರಿತ್ರೆ-ಭೂಗೋಳವಿದೆ. ಸ್ವರ್ಗದ ರಚಯಿತ ತಂದೆಯು ನಮ್ಮನ್ನು ಸ್ವರ್ಗಕ್ಕೆ ಯೋಗ್ಯರನ್ನಾಗಿ
ಮಾಡುತ್ತಿದ್ದಾರೆ. ಕಲ್ಪ-ಕಲ್ಪವೂ ಮಾಡುತ್ತಾರೆ. ನಾನು ಪಾತ್ರಧಾರಿಯಾಗಿದ್ದೇನೆ, ಪರಮಾತ್ಮನ ಮಕ್ಕಳು
ಅಂದಮೇಲೆ ನಾವೇಕೆ ದುಃಖಿಯಾಗಿದ್ದೇವೆ! ಪರಸ್ಪರ ಏಕೆ ಹೊಡೆದಾಡುತ್ತೇವೆ, ನಾವಾತ್ಮಗಳೆಲ್ಲರೂ
ಸಹೋದರರಾಗಿದ್ದೇವೆ ಎಂಬುದನ್ನು ತಿಳಿದಿರುವ ಮನುಷ್ಯರು ಯಾರೊಬ್ಬರೂ ಇಲ್ಲ. ಸಹೋದರ ಪರಸ್ಪರ ಹೇಗೆ
ಹೊಡೆದಾಡುತ್ತಿರುತ್ತಾರೆ. ಹೊಡೆದಾಡಿ ಸಮಪ್ತಿಯಾಗಿ ಬಿಡುತ್ತಾರೆ. ನಾವಿಲ್ಲಿ ತಂದೆಯಿಂದ
ಆಸ್ತಿಯನ್ನು ಪಡೆಯುತ್ತಿದ್ದೇವೆ, ಸಹೋದರರೆಂದ ಮೇಲೆ ಪರಸ್ಪರ ಎಂದೂ ಉಪ್ಪು ನೀರಾಗಬಾರದು. ಇಲ್ಲಂತೂ
ಮಾಯೆಯ್ಯು ಎಷ್ಟು ಶಕ್ತಿಶಾಲಿಯಾಗಿದೆ! ಒಳ್ಳೊಳ್ಳೆಯ ಮಕ್ಕಳು ಉಪ್ಪು ನೀರಾಗಿ ಬಿಡುತ್ತಾರೆ. ತಂದೆಯ
ಮೇಲೆ ಎಷ್ಟೊಂದು ಪ್ರೀತಿಯಿದೆ! ತಂದೆಗಂತೂ ನೆನಪು ಮಾಡಲು ಮಕ್ಕಳ ವಿನಃ ಮತ್ತ್ಯಾರೂ ಇಲ್ಲ. ನಿಮಗಾಗಿ
ಬಹಳಷ್ಟು ಮಂದಿ ಇದ್ದಾರೆ, ನಿಮ್ಮ ಬುದ್ಧಿಯು ಅಲ್ಲಿ-ಇಲ್ಲಿ ಹೋಗುತ್ತದೆ.
ಉದ್ಯೋಗ-ವ್ಯವಹಾರಗಳಲ್ಲಿಯೂ ಬುದ್ಧಿಯು ಹೋಗುತ್ತದೆ ಆದರೆ ನನಗಂತೂ ಯಾವುದೇ ಉದ್ಯೋಗ-ವ್ಯವಹಾರವಿಲ್ಲ.
ನೀವು ಅನೇಕ ಮಕ್ಕಳಿಗೆ ಅನೇಕ ವ್ಯವಹಾರಗಳಿವೆ. ನನಗಂತೂ ಒಂದೇ ವ್ಯವಹಾರವಿದೆ. ಮಕ್ಕಳನ್ನು ಸ್ವರ್ಗದ
ವಾರಸುಧಾರರನ್ನಾಗಿ ಮಾಡುವುದಕ್ಕಾಗಿಯೇ ನಾನು ಬಂದಿದ್ದೇನೆ. ತಂದೆಗೆ ಕೇವಲ ನೀವು ಮಕ್ಕಳೇ
ಆಸ್ತಿಯಾಗಿದ್ದೀರಿ. ಅವರು ಪರಮಪಿತನಲ್ಲವೆ. ಎಲ್ಲಾ ಆತ್ಮಗಳು ಅವರಿಗೆ ಆಸ್ತಿಯಾಗಿದ್ದೇವೆ. ಮಾಯೆಯು
ಪತಿತರನ್ನಾಗಿ ಮಾಡಿಬಿಟ್ಟಿದೆ. ಈಗ ಪುನಃ ತಂದೆಯು ಹೂವಿನ ಸಮಾನರನ್ನಾಗಿ ಮಾಡುತ್ತಾರೆ. ತಂದೆಯು
ತಿಳಿಸುತ್ತಾರೆ - ನನ್ನವರಂತೂ ನೀವೇ ಆಗಿದ್ದೀರಿ. ನಿಮ್ಮ ಮೇಲೆ ನನಗೂ ಮೋಹವೂ ಇದೆ. ನೀವು ಪತ್ರ
ಬರೆಯಲಿಲ್ಲವೆಂದರೆ ಚಿಂತೆಯಾಗಿ ಬಿಡುತ್ತದೆ. ಒಳ್ಳೊಳ್ಳೆಯ ಮಕ್ಕಳಿಂದ ಪತ್ರಗಳು ಬರುವುದೇ ಇಲ್ಲ.
ಒಳ್ಳೊಳ್ಳೆಯ ಮಕ್ಕಳನ್ನೂ ಸಹ ಮಾಯೆಯು ಒಮ್ಮೆಲೆ ಸಮಾಪ್ತಿ ಮಾಡಿ ಬಿಡುತ್ತದೆ ಅಂದಾಗ ಅವಶ್ಯವಾಗಿ
ದೇಹಾಭಿಮಾನವಿದೆ. ಆದ್ದರಿಂದ ತಂದೆಯು ತಿಳಿಸುತ್ತಿರುತ್ತಾರೆ - ಮಕ್ಕಳೇ, ತಮ್ಮ ಕ್ಷೇಮ
ಸಮಾಚಾರವನ್ನು ಬರೆಯುತ್ತಾ ಇರಿ. ತಂದೆಯು ಮಕ್ಕಳೊಂದಿಗೆ ಕೇಳುತ್ತಾರೆ - ಮಕ್ಕಳೇ ನಿಮಗೆ ಮಾಯೆಯು
ತೊಂದರೆ ಕೊಡುತ್ತಿಲ್ಲವೆ? ಸಾಹಸವಂತರಾಗಿ ಮಾಯೆಯ ಮೇಲೆ ಜಯ ಗಳಿಸುತ್ತಿದ್ದೀರಲ್ಲವೇ! ನೀವು ಯುದ್ಧದ
ಮೈದಾನದಲ್ಲಿದ್ದೀರಿ, ಕರ್ಮೇಂದ್ರಿಯಗಳನ್ನು ಈ ರೀತಿ ವಶದಲ್ಲಿಟ್ಟುಕೊಳ್ಳಿ – ಒಂದು ಸ್ವಲ್ಪವೂ
ಚಂಚಲತೆಯಾಗದಿರಲಿ. ಸತ್ಯಯುಗದಲ್ಲಿ ಎಲ್ಲಾ ಕರ್ಮೇಂದ್ರಿಯಗಳು ವಶದಲ್ಲಿರುತ್ತವೆ, ಕರ್ಮೇಂದ್ರಿಯಗಳ
ಚಂಚಲತೆಯಿರುವುದಿಲ್ಲ. ಬಾಯಿಯದಾಗಲಿ, ಕಿವಿಯದಾಗಲಿ.... ಯಾವುದೇ ಚಂಚಲತೆಯ ಮಾತಿರುವುದಿಲ್ಲ.
ಯಾವುದೇ ಕೆಟ್ಟ ವಸ್ತುವಿರುವುದಿಲ್ಲ. ಇಲ್ಲಿ ಯೋಗಬಲದಿಂದ ಕರ್ಮೇಂದ್ರಿಯಗಳ ಮೇಲೆ
ವಿಜಯಿಗಳಾಗುತ್ತೀರಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಯಾವುದೇ ಕೊಳಕು ಮಾತಿಲ್ಲ.
ಕರ್ಮೇಂದ್ರಿಯಗಳನ್ನು ವಶ ಪಡಿಸಿಕೊಳ್ಳಬೇಕಾಗಿದೆ ಬಹಳ ಚೆನ್ನಾಗಿ ಪುರುಷಾರ್ಥ ಮಾಡಬೇಕಾಗಿದೆ. ಸಮಯವು
ಬಹಳ ಕಡಿಮೆಯಿದೆ, ಬಹಳ ಹೋಯಿತು ಸ್ವಲ್ಪವೇ ಉಳಿಯಿತೆಂದು ಗಾಯನವಿದೆ. ಈಗ ಸ್ವಲ್ಪ ಉಳಿಯುತ್ತಾ
ಹೋಗುತ್ತದೆ, ಹೊಸ ಮನೆಯಾಗುತ್ತಿದ್ದರೆ ಸ್ವಲ್ಪವೇ ಸಮಯವು ಈಗ ಇದು ತಯಾರಾಗಿ ಬಿಡುವುದು, ಇನ್ನು
ಕೆಲಸವಷ್ಟೇ ಉಳಿದಿದೆ ಎಂದು ಬುದ್ಧಿಯಲ್ಲಿರುತ್ತದೆಯಲ್ಲವೆ. ಅದು ಹದ್ದಿನ ಮಾತು, ಇದು ಬೇಹದ್ದಿನ
ಮಾತಾಗಿದೆ. ಇದನ್ನೂ ಸಹ ಮಕ್ಕಳಿಗೆ ತಿಳಿಸಲಾಗಿದೆ - ಅವರದು ಸೈನ್ಸ್ನ ಬಲ, ನಿಮ್ಮದು ಸೈಲೆನ್ಸ್ನ
ಬಲವಾಗಿದೆ. ಅವರದು ಬುದ್ಧಿಯ ಬಲ, ನಿಮ್ಮದೂ ಬುದ್ಧಿಯ ಬಲವಾಗಿದೆ. ವಿಜ್ಞಾನದ ಎಷ್ಟೊಂದು
ಸಂಶೋಧನೆಗಳನ್ನು ಮಾಡುತ್ತಿರುತ್ತಾರೆ. ಈಗಂತೂ ಇಂತಹ ಬಾಂಬುಗಳನ್ನು ತಯಾರು ಮಾಡುತ್ತಿದ್ದಾರೆ -
ನಾವು ಕುಳಿತಿದ್ದಂತೆಯೇ ಒಂದು ಬಾಂಬನ್ನು ಎಸೆದರೆ ಸಾಕು, ಇಡೀ ನಗರವೇ ಸಮಾಪ್ತಿಯಾಗಿ ಬಿಡುವುದು
ಎಂದು ತಾವೇ ಹೇಳುತ್ತಿರುತ್ತೀರಿ. ನಂತರ ಈ ಸೈನ್ಸ್, ವಿಮಾನ, ಇತ್ಯಾದಿಯೇನೂ ಕೆಲಸಕ್ಕೆ
ಬರುವುದಿಲ್ಲ ಅಂದಾಗ ಅವರದು ವೈಜ್ಞಾನಿಕ ಬುದ್ಧಿಯಾಗಿದೆ. ನಿಮ್ಮದು ಶಾಂತಿಯ ಬುದ್ಧಿಯಾಗಿದೆ. ಅವರು
ವಿನಾಶಕ್ಕಾಗಿ ನಿಮಿತ್ತರಾಗಿದ್ದಾರೆ, ನೀವು ಅವಿನಾಶಿ ಪದವಿಯನ್ನು ಪಡೆಯಲು ನಿಮಿತ್ತರಾಗಿದ್ದಿರಿ.
ಇದನ್ನೂ ಸಹ ತಿಳಿದುಕೊಳ್ಳುವ ಬುದ್ಧಿಯು ಬೇಕಲ್ಲವೆ.
ನೀವು ಮಕ್ಕಳು ಇದನ್ನು
ತಿಳಿದುಕೊಳ್ಳಬಹುದು - ತಂದೆಯು ಎಷ್ಟು ಸಹಜ ಮಾರ್ಗವನ್ನು ತಿಳಿಸುತ್ತಾರೆ. ಭಲೆ ಎಷ್ಟೇ ಅಹಲ್ಯೆ,
ಕುಬ್ಜೆಯರಿರಲಿ ಕೇವಲ ತಂದೆ ಮತ್ತು ಆಸ್ತಿ - ಇವೆರಡೇ ಶಬ್ಧಗಳನ್ನು ನೆನಪು ಮಾಡಿ. ಮತ್ತೆ ಯಾರೆಷ್ಟು
ನೆನಪು ಮಾಡುವರೋ ಅಷ್ಟು ಪದವಿ ಸಿಗುವುದು. ಅನ್ಯ ಸಂಗಗಳನ್ನು ಬಿಟ್ಟು ಒಬ್ಬ ತಂದೆಯನ್ನು ನೆನಪು
ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಯಾವಾಗ ನನ್ನ ಮನೆ ಪರಮಧಾಮದಲ್ಲಿದ್ದೆನೋ ಆಗ
ಭಕ್ತಿಮಾರ್ಗದಲ್ಲಿ ಬಾಬಾ, ತಾವು ಬಂದರೆ ನಾವು ಎಲ್ಲವನ್ನೂ ಬಲಿಹಾರಿ ಮಾಡುತ್ತೇವೆಂದು ನೀವು
ಕರೆಯುತ್ತಿದ್ದಿರಿ. ಸತ್ತ ನಂತರ ಅವರು ಬಳಸುವ ವಸ್ತುಗಳನ್ನು ಸ್ಮಶಾನದವರಿಗೆ ಕೊಡುತ್ತಾರೆ. ಅವರಿಗೆ
ಹಳೆಯ ಸಾಮಾನುಗಳನ್ನು ಕೊಡಲಾಗುತ್ತದೆ, ನೀವು ತಂದೆಗೆ ಏನು ಕೊಡುವಿರಿ? ಇವರಿಗಂತೂ (ಬ್ರಹ್ಮಾ)
ಕೊಡುವುದಿಲ್ಲ. ಇವರೂ ಸಹ ಎಲ್ಲವನ್ನು ಕೊಟ್ಟು ಬಿಟ್ಟರಲ್ಲವೆ. ಇವರಿಲ್ಲಿ ಕುಳಿತು ಮಹಲುಗಳನ್ನೇನು
ಕಟ್ಟುವುದಿಲ್ಲ. ಇದೆಲ್ಲವೂ ಶಿವ ತಂದೆಗಾಗಿ ಅವರ ಆದೇಶದಂತೆ ಮಾಡುತ್ತಿದ್ದಾರೆ. ಅವರು
ಮಾಡಿ-ಮಾಡಿಸುವವರಾಗಿ ಆದೇಶ ನೀಡುತ್ತಿರುತ್ತಾರೆ. ಬಾಬಾ, ತಾವು ಒಬ್ಬರೇ ನಮ್ಮವರಾಗಿದ್ದೀರಿ.
ತಮಗಾಗಿ ಬಹಳ ಮಂದಿ ಮಕ್ಕಳಿದ್ದಾರೆಂದು ಮಕ್ಕಳು ಹೇಳುತ್ತಾರೆ. ಮಕ್ಕಳೇ, ನನಗಂತೂ ಕೇವಲ ನೀವೇ
ಮಕ್ಕಳಿದ್ದೀರಿ. ನಿಮಗಂತೂ ಬಹಳ ಮಂದಿಯಿದ್ದಾರೆ. ಎಷ್ಟೊಂದು ದೇಹದ ಸಂಬಂಧಗಳ ನೆನಪಿರುತ್ತದೆ ಎಂದು
ತಂದೆಯು ಹೇಳುತ್ತಾರೆ. ಮಧುರಾತಿ ಮಧುರ ಮಕ್ಕಳು ಎಷ್ಟು ಸಾಧ್ಯವೋ ಅಷ್ಟು ತಂದೆಯನ್ನು ನೆನಪು ಮಾಡಿ
ಮತ್ತು ಎಲ್ಲರನ್ನು ಮರೆಯುತ್ತಾ ಹೋಗಿ. ಸ್ವರ್ಗದ ರಾಜ್ಯರೂಪಿ ಬೆಣ್ಣೆಯು ನಿಮಗೆ ಸಿಗುತ್ತದೆ.
ಸ್ವಲ್ಪ ಆಲೋಚನೆಯನ್ನಾದರೂ ಮಾಡಿ - ಹೇಗೆ ಈ ಆಟದ ರಚನೆಯಾಗಿದೆ, ನೀವು ಕೇವಲ ತಂದೆಯನ್ನು ನೆನಪು
ಮಾಡುತ್ತೀರಿ ಮತ್ತು ಸ್ವದರ್ಶನ ಚಕ್ರಧಾರಿ ಆಗುವುದರಿಂದ ಚಕ್ರವರ್ತಿ ರಾಜರಾಗುತ್ತೀರಿ. ನೀವೀಗ
ಪ್ರತ್ಯಕ್ಷವಾಗಿಯೂ ಅನುಭವಿಗಳಾಗಿದ್ದೀರಿ. ಭಕ್ತಿಯು ಪರಂಪರೆಯಿಂದ ನಡೆದು ಬಂದಿದೆ. ವಿಕಾರವೂ ಸಹ
ನಡೆದು ಬಂದಿದೆ. ಈ ಲಕ್ಷ್ಮೀ-ನಾರಾಯಣ, ರಾಧೆ-ಕೃಷ್ಣರಿಗೂ ಮಕ್ಕಳಿದ್ದರಲ್ಲವೆ ಎಂದು ಮನುಷ್ಯರು
ತಿಳಿಯುತ್ತಾರೆ. ಅರೆ! ಮಕ್ಕಳಂತೂ ಇದ್ದರು ಆದರೆ ಅವರನ್ನು ಸಂಪೂರ್ಣ ನಿರ್ವಿಕಾರಿಗಳೆಂದು
ಕರೆಯಲಾಗುವುದು. ಇಲ್ಲಿ ಸಂಪೂರ್ಣ ವಿಕಾರಿಗಳಿದ್ದಾರೆ, ಅಲ್ಲಿ ಒಬ್ಬರು ಇನ್ನೊಬ್ಬರನ್ನು ನಿಂದನೆ
ಮಾಡುತ್ತಿರುತ್ತಾರೆ. ನೀವು ಮಕ್ಕಳಿಗೆ ಈಗ ಶ್ರೇಷ್ಠಾತಿ ಶ್ರೇಷ್ಠ ತಂದೆಯ ಶ್ರೀಮತವು ಸಿಗುತ್ತದೆ,
ಶ್ರೇಷ್ಠರನ್ನಾಗಿ ಮಾಡುತ್ತಾರೆ. ಒಂದುವೇಳೆ ತಂದೆಯ ಮಾತನ್ನು ಪಾಲಿಸದೇ ಹೋದರೆ ನೀವು ಆಗುವುದಿಲ್ಲ
ಅಂದಮೇಲೆ ಈಗ ಒಪ್ಪಿದರೆ ಒಪ್ಪಿಕೊಳ್ಳಿ, ಬಿಟ್ಟರೆ ಬಿಡಿ. ಸುಪುತ್ರ ಮಕ್ಕಳು ಅದನ್ನು ಒಡನೆಯೇ
ಪಾಲಿಸುತ್ತಾರೆ. ಪೂರ್ಣ ಸಹಯೋಗ ಕೊಡಲಿಲ್ಲವೆಂದರೆ ತಮಗೇ ನಷ್ಟವನ್ನು ಮಾಡಿಕೊಳ್ಳುತ್ತಾರೆ. ನಾನು
ಎಷ್ಟೊಂದು ಪುರುಷಾರ್ಥ ಮಾಡಿಸುತ್ತೇನೆ, ಎಷ್ಟೊಂದು ಖುಷಿಯಿಂದ ಕರೆದುಕೊಂಡು ಬರುತ್ತೇನೆ ಆದರೆ ನೀವು
ಆ ಜಾಲದಲ್ಲಿ ಸಿಕ್ಕಿ ಹಾಕಿಕೊಳ್ಳಬಾರದು. ಮಾಯೆಯೊಂದಿಗೆ ಯುದ್ಧವಾಗುತ್ತದೆ, ಬಹಳ ದೊಡ್ಡ-ದೊಡ್ಡ
ಬಿರುಗಾಳಿಗಳು ಬರುತ್ತವೆ, ಅದರಲ್ಲಿಯೂ ಸಹ ವಾರಸುಧಾರರ ಮೇಲೆ ಮಾಯೆಯು ಹೆಚ್ಚು ಯುದ್ಧ ಮಾಡುವುದು.
ಶಕ್ತಿಶಾಲಿಗಳೊಂದಿಗೆ ಶಕ್ತಿಶಾಲಿಗಳಾಗಿ ಹೋರಾಡುವುದು. ಹೇಗೆ ವೈದ್ಯರು ಔಷಧಿಯನ್ನು
ಕೊಡುತ್ತಾರೆಂದರೆ ಒಳಗಿರುವ ಖಾಯಿಲೆಯೆಲ್ಲವೂ ಹೆಚ್ಚಿನ ರೂಪದಲ್ಲಿ ಹೊರ ಬರುತ್ತದೆ. ಇಲ್ಲಿಯೂ ಸಹ
ನನ್ನವರಾದ ಮೇಲೆ ಮತ್ತೆಲ್ಲರ ನೆನಪು ಬರತೊಡಗುತ್ತದೆ. ಬಿರುಗಾಳಿಗಳೂ ಬರುತ್ತವೆ, ಇದರಲ್ಲಿ
ಬುದ್ಧಿಯೋಗವು ಸ್ಪಷ್ಟವಾಗಿರಬೇಕು. ನಾವುಮೊದಲು ಪವಿತ್ರರಾಗಿದ್ದೆವು ನಂತರ ಅರ್ಧಕಲ್ಪ
ಅಪವಿತ್ರರಾದೆವು. ಈಗ ಮತ್ತೆ ವಿಕರ್ಮಗಳು ವಿನಾಶವಾಗುತ್ತದೆ. ಎಷ್ಟು ನೆನಪು ಮಾಡುವಿರೋ ಅಷ್ಟು
ಶ್ರೇಷ್ಠ ಪದವಿಯನ್ನು ಪಡೆಯುವಿರಿ. ಆತ್ಮದಲ್ಲಿಯೇ ಜ್ಞಾನವು ಧಾರಣೆಯಾಗುತ್ತದೆಯಲ್ಲವೆ. ಆತ್ಮವೇ
ಓದುತ್ತದೆ, ಆತ್ಮದ ಜ್ಞಾನವನ್ನು ಪರಮಾತ್ಮ ತಂದೆಯು ಬಂದು ಕೊಡುತ್ತಾರೆ. ನೀವು ವಿಶ್ವದ ಮಾಲೀಕರಾಗಲು
ಇಷ್ಟು ದೊಡ್ಡ ಜ್ಞಾನವನ್ನು ಪಡೆಯುತ್ತೀರಿ. ಪತಿತ-ಪಾವನ, ಜ್ಞಾನ ಸಾಗರನೆಂದು ನೀವು ಹೇಳುತ್ತೀರಿ.
ನನ್ನ ಬಳಿ ಯಾವ ಜ್ಞಾನವಿದೆಯೋ ಅದೆಲ್ಲವನ್ನೂ ನಿಮಗೆ ಕೊಡುತ್ತೇನೆ. ಆದರೆ ದಿವ್ಯ ದೃಷ್ಟಿಯ ಬೀಗದ
ಕೈಯನ್ನು ನಿಮಗೆ ಕೊಡುವುದಿಲ್ಲ ಅದಕ್ಕೆ ಬದಲಾಗಿ ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ.
ಸಾಕ್ಷಾತ್ಕಾರದಲ್ಲಿ ಏನೂ ಇಲ್ಲ, ಮುಖ್ಯವಾದುದು ವಿದ್ಯೆಯಾಗಿದೆ. ವಿದ್ಯೆಯಿಂದ ನಿಮಗೆ 21 ಜನ್ಮಗಳ
ಸುಖವು ಸಿಗುತ್ತದೆ. ಮೀರಾಳ ಹೋಲಿಕೆಯಲ್ಲಿ ನಿವು ತಮ್ಮ ಸುಖವನ್ನು ಹೋಲಿಕೆ ಮಾಡಿ - ಮೀರಾ
ಕಲಿಯುಗದಲ್ಲಿದ್ದಳು, ಸಾಕ್ಷಾತ್ಕಾರ ಮಾಡಿದಳು ಮತ್ತೇನಾಯಿತು? ಭಕ್ತಿಯ ಮಾಲೇ ಬೇರೆಯಾಗಿದೆ, ಜ್ಞಾನ
ಮಾರ್ಗದ ಮಾಲೆಯೇ ಬೇರೆಯಾಗಿದೆ. ರಾವಣನ ರಾಜ್ಯವೇ ಬೇರೆ, ನಿಮ್ಮ ರಾಜ್ಯವೇ ಬೇರೆ ಆಗಿದೆ ಅದಕ್ಕೆ
ದಿನ, ಇದಕ್ಕೆ ರಾತ್ರಿಯೆಂದು ಹೇಳಲಾಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ
ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ಅತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1) ನೆನಪಿನ
ಬಲದಿಂದ ತಮ್ಮ ಕರ್ಮೇಂದ್ರಿಯಗಳನ್ನು ಈ ರೀತಿ ವಶ ಪಡಿಸಿಕೊಳ್ಳಬೇಕಾಗಿದೆ ಅದರಿಂದ ಯಾವುದೇ
ಚಂಚಲತೆಯಾಗದಿರಲಿ. ಸಮಯವು ಬಹಳ ಕಡಿಮೆಯಿದೆ, ಆದ್ದರಿಂದ ಪುರುಷಾರ್ಥ ಮಾಡಿ ಮಾಯಾಜೀತರಾಗಬೇಕಾಗಿದೆ.
2) ತಂದೆಯು ಯಾವ
ಜ್ಞಾನವನ್ನು ಕೊಡುತ್ತಾರೆಯೋ ಅದನ್ನು ಅಂತರ್ಮುಖಿಯಾಗಿ ಧಾರಣೆ ಮಾಡಬೇಕಾಗಿದೆ. ಎಂದೂ ಪರಸ್ಪರ ಉಪ್ಪು
ನೀರಾಗಿ ವರ್ತಿಸಬಾರದು. ತಂದೆಗೆ ತಮ್ಮ ಕ್ಷೇಮ ಸಮಾಚಾರವನ್ನು ಅವಶ್ಯವಾಗಿ ತಿಳಿಸಬೇಕಾಗಿದೆ.
ವರದಾನ:
ಪ್ರತಿ
ಆತ್ಮವನ್ನು ಅಲೆದಾಡುವುದರಿಂದ ಅಥವಾ ಭಿಕಾರಿತನದಿಂದ ರಕ್ಷಣೆ ಮಾಡುವ ನಿಷ್ಕಾಮ ದಯಾಹೃದಯಿ ಭವ.
ಯಾವ ಮಕ್ಕಳು ನಿಷ್ಕಾಮ
ದಯಾಹೃದಯಿಯಾಗಿದ್ದಾರೆ ಅವರ ದಯೆಯ ಸಂಕಲ್ಪದಿಂದ ಅನ್ಯ ಆತ್ಮಗಳಿಗೆ ತಮ್ಮ ಆತ್ಮೀಯ ರೂಪ ಹಾಗೂ ಆತ್ಮನ
ಗುರಿ ಸೆಕೆಂಡ್ ನಲ್ಲಿ ಸ್ಮೃತಿಗೆ ಬಂದು ಬಿಡುವುದು. ಅವರ ದಯೆಯ ಸಂಕಲ್ಪದಿಂದ ಭಿಕಾರಿಗೆ ಸರ್ವ
ಖಜಾನೆಗಳ ನೋಟ ಕಂಡು ಬರುವುದು. ಅಲೆದಾಡುತ್ತಿರುವ ಆತ್ಮಗಳಿಗೆ ಮುಕ್ತಿ ಹಾಗೂ ಜೀವನ್ ಮುಕ್ತಿಯ ದಡ
ಹಾಗೂ ನೆಲೆ ಎದುರಿಗೆ ಕಂಡು ಬರುವುದು. ಅವರು ಸರ್ವರ ದುಃಖ ಹರ್ತ ಸುಖ ಕರ್ತನ ಪಾತ್ರ
ಅಭಿನಯಿಸುತ್ತಾರೆ, ದುಃಖಿಗಳನ್ನು ಸುಖಿಯನ್ನಾಗಿ ಮಾಡುವಂತಹ ಯುಕ್ತಿ ಹಾಗೂ ಸಾಧನೆ ಸದಾ ಅವರ ಬಳಿ
ಜಾದೂವಿನ ಕೀಲಿ ಕೈ ನ ತರಹ ಇರುವುದು.
ಸ್ಲೋಗನ್:
ಸೇವಾಧಾರಿಯಾಗಿ
ನಿಸ್ವಾರ್ಥ ಸೇವೆ ಮಾಡಿ ಆಗ ಸೇವೆಯ ಮೇವು ಸಿಗಲೇ ಬೇಕು.