01/06/20 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ


ಮಧುರ ಮಕ್ಕಳೇ - ಎಲ್ಲಿಯವರೆಗೆ ಜೀವಿಸಬೇಕಾಗಿದೆಯೋ ಅಲ್ಲಿಯವರೆಗೆ ಓದಬೇಕಾಗಿದೆ ಮತ್ತು ಓದಿಸಬೇಕಾಗಿದೆ, ಖುಷಿ ಮತ್ತು ಪದವಿಗೆ ಆಧಾರ ವಿದ್ಯೆಯಾಗಿದೆ.

ಪ್ರಶ್ನೆ:

ಸೇವೆಯ ಸಫಲತೆಗಾಗಿ ಮುಖ್ಯವಾಗಿ ಯಾವ ಗುಣವಿರಬೇಕು?

ಉತ್ತರ:

ಸಹನಶೀಲತೆ. ಪ್ರತಿಯೊಂದು ಮಾತಿನಲ್ಲಿ ಸಹನಶೀಲರಾಗಿ. ಪರಸ್ಪರ ಸಂಘಟನೆಯಲ್ಲಿದ್ದು ಸೇವೆ ಮಾಡಿ. ಭಾಷಣ ಇತ್ಯಾದಿಗಳ ಕಾರ್ಯಕ್ರಮಗಳನ್ನು ತೆಗೆದುಕೊಂಡು ಬನ್ನಿ. ಮನುಷ್ಯರನ್ನು ನಿದ್ರೆಯಿಂದ ಜಾಗೃತಗೊಳಿಸಲು ಅನೇಕ ಅವಕಾಶಗಳೂ ಬರುತ್ತವೆ. ಯಾರು ಅದೃಷ್ಟವಂತರಾಗುವವರಿದ್ದಾರೆಯೋ ಅವರು ವಿದ್ಯೆಯನ್ನೂ ಸಹ ರುಚಿಯಿಂದ ಓದುತ್ತಾರೆ.

ಗೀತೆ:

ನಾವು ಆ ಮಾರ್ಗದಂತೆ ನಡೆಯಬೇಕು.............

ಓಂ ಶಾಂತಿ. ನೀವು ಮಕ್ಕಳು ಯಾವ ವಿಚಾರವನ್ನಿಟ್ಟುಕೊಂಡು ಮಧುಬನಕ್ಕೆ ಬರುತ್ತೀರಿ! ವಿದ್ಯೆಯನ್ನು ಓದಲು ಬರುತ್ತೀರಾ? ಯಾರ ಬಳಿ ಬರುತ್ತೀರಿ? (ಬಾಪ್ದಾದಾರವರ ಬಳಿ) ಇದು ಹೊಸ ಮಾತಾಗಿದೆ. ಈ ರೀತಿಯೆಂದಾದರೂ ಕೇಳಿದ್ದೀರಾ - ಬಾಪ್ದಾದಾರವರ ಬಳಿ ಓದಲು ಹೋಗುತ್ತೇವೆ. ಅದರಲ್ಲಿಯೂ ಬಾಪ್ದಾದಾ ಇಬ್ಬರೂ ಇದ್ದಾರೆ. ವಿಚಿತ್ರವಲ್ಲವೆ! ನೀವು ವಿಚಿತ್ರ ತಂದೆಯ ಸಂತಾನರಾಗಿದ್ದೀರಿ. ನೀವು ಮಕ್ಕಳೂ ಸಹ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿರಲಿಲ್ಲ. ಈಗ ಆ ರಚಯಿತ ಮತ್ತು ರಚನೆಯನ್ನು ನೀವು ನಂಬರ್ವಾರ್ ಪುರುಷಾರ್ಥದನುಸಾರ ಅರಿತಿದ್ದೀರಿ. ಯಾರೆಷ್ಟು ತಿಳಿದುಕೊಂಡಿದ್ದೀರಿ ಮತ್ತು ಅನ್ಯರಿಗೂ ತಿಳಿಸುತ್ತೀರಿ ಅಷ್ಟು ಖುಷಿ ಮತ್ತು ಭವಿಷ್ಯದ ಪದವಿ ಸಿಗುವುದು. ಮುಖ್ಯ ಮಾತಾಗಿದೆ, ನಾವೀಗ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೇವೆ. ಕೇವಲ ನೀವು ಬ್ರಾಹ್ಮಣ-ಬ್ರಾಹ್ಮಿಣಿಯರೇ ತಿಳಿದುಕೊಂಡಿದ್ದೀರಿ. ಎಲ್ಲಿಯವರೆಗೆ ಜೀವಿಸಿರುವಿರೋ ಅಲ್ಲಿಯವರೆಗೆ ತಮ್ಮನ್ನು ನಿಶ್ಚಯ ಮಾಡಿಕೊಳ್ಳಬೇಕಾಗಿದೆ. ನಾವು ಬಿ.ಕೆ., ಆಗಿದ್ದೇವೆ ಮತ್ತು ಶಿವ ತಂದೆಯಿಂದ ಇಡೀ ವಿಶ್ವದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಪೂರ್ಣ ಓದುತ್ತೇವೆ ಅಥವಾ ಕಡಿಮೆ ಓದುತ್ತೇವೆ ಎಂಬುದು ಬೇರೆ ಮಾತಾಗಿದೆ, ಆದರೆ ಅರಿತುಕೊಂಡಿದ್ದೀರಲ್ಲವೆ. ಮೊದಲು ನಾವು ಅವರ ಮಕ್ಕಳಾಗಿದ್ದೇವೆ. ಓದುವ ಅಥವಾ ಓದದೇ ಇರುವ ಪ್ರಶ್ನೆಯು ನಂತರ ಬರುತ್ತದೆ ಅದರನುಸಾರವೇ ಪದವಿಯು ಸಿಗುವುದು. ತಂದೆಯ ಮಡಿಲಿಗೆ ಬಂದ ನಂತರವೇ ನಾವು ರಾಜ್ಯಭಾಗ್ಯಕ್ಕೆ ಹಕ್ಕುದಾರರಾಗುತ್ತೇವೆಂದು ನಿಶ್ಚಯವಂತೂ ಆಗುವುದು. ಆದರೆ ವಿದ್ಯಾಭ್ಯಾಸದಲ್ಲಿ ರಾತ್ರಿ-ಹಗಲಿನ ಅಂತರವಾಗುತ್ತದೆ. ಕೆಲವರು ಚೆನ್ನಾಗಿ ಓದುತ್ತಾರೆ ಮತ್ತು ಓದಿಸುತ್ತಾರೆ. ಅವರಿಗೆ ಮತ್ತೇನು ತೋಚುವುದೇ ಇಲ್ಲ, ಕೇವಲ ಓದಬೇಕು ಮತ್ತು ಓದಿಸಬೇಕಾಗಿದೆ, ಇದು ಅಂತ್ಯದವರೆಗೆ ನಡೆಯಬೇಕಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಯಾರೂ ಅಂತ್ಯದವರೆಗೆ ಓದುವುದಿಲ್ಲ, ಅಲ್ಲಿ ಸಮಯವಿರುತ್ತದೆ ಆದರೆ ನೀವಂತೂ ಎಲ್ಲಿಯವರೆಗೆ ಜೀವಿಸಿರುವಿರೋ ಅಲ್ಲಿಯವರೆಗೆ ಓದಬೇಕು ಮತ್ತು ಓದಿಸಬೇಕಾಗಿದೆ. ತಮ್ಮನ್ನು ಕೇಳಿಕೊಳ್ಳಿ - ನಾನು ಎಷ್ಟು ಜನರಿಗೆ ರಚಯಿತ ತಂದೆಯ ಪರಿಚಯ ಕೊಡುತ್ತೇನೆ? ಮನುಷ್ಯರಂತೂ ಮನುಷ್ಯರೇ, ನೋಡಲು ಯಾವುದೇ ವ್ಯತ್ಯಾಸವೂ ಕಾಣುವುದಿಲ್ಲ. ಶರೀರದಲ್ಲಿಯೂ ವ್ಯತ್ಯಾಸವಿಲ್ಲ. ಇದು ಒಳಗಡೆ ಬುದ್ಧಿಯಲ್ಲಿ ವಿದ್ಯೆಯು ಮೊಳಗುತ್ತಿರುತ್ತದೆ. ಯಾರೆಷ್ಟು ಓದುವರೋ ಅವರಿಗೆ ಅಷ್ಟು ಖುಷಿಯೂ ಇರುವುದು. ಆಂತರ್ಯದಲ್ಲಿ ನಾವು ಹೊಸ ವಿಶ್ವದ ಮಾಲೀಕರಾಗುತ್ತೇವೆ. ನಾವೀಗ ಸ್ವರ್ಗದ ದ್ವಾರದಲ್ಲಿ ಹೋಗುತ್ತೇವೆಂದು ನೆನಪಿರುತ್ತದೆ. ಆದ್ದರಿಂದ ತಮ್ಮೊಂದಿಗೆ ತಾವು ಸದಾ ಕೇಳಿಕೊಳ್ಳುತ್ತಾ ಇರಿ - ನನ್ನಲ್ಲಿ ಎಷ್ಟು ಅಂತರವಿದೆ? ತಂದೆಯು ನಮ್ಮನ್ನು ತಮ್ಮವರನ್ನಾಗಿ ಮಾಡಿಕೊಂಡಿದ್ದಾರೆ. ನಾವು ಹೇಗಿದ್ದವರು ಏನಾಗುತ್ತೇವೆ! ಎಲ್ಲವೂ ವಿದ್ಯೆಯ ಮೇಲೆ ಆಧಾರಿತವಾಗಿದೆ. ವಿದ್ಯೆಯಿಂದ ಮನುಷ್ಯರು ಎಷ್ಟೊಂದು ಉತ್ತಮರಾಗುತ್ತಾರೆ! ಆದರೆ ಅವೆಲ್ಲವೂ ಅಲ್ಪಕಾಲದ ಕ್ಷಣ ಭಂಗುರ ಪದವಿಗಳಾಗಿವೆ. ಅದರಲ್ಲಿ ಏನೂ ಸಾರವಿಲ್ಲ. ಹೇಗೆ ಯಾವುದೇ ಕೆಲಸಕ್ಕೆ ಬರುವುದಿಲ್ಲ ಮತ್ತು ಲಕ್ಷಣಗಳೇನೂ ಇರಲಿಲ್ಲ ಆದರೆ ಈ ವಿದ್ಯೆಯಿಂದ ಎಷ್ಟೊಂದು ಶ್ರೇಷ್ಠರಾಗುತ್ತೀರಿ. ವಿದ್ಯೆಯ ಮೇಲೆ ಸಂಪೂರ್ಣ ಗಮನವನ್ನಿಡಬೇಕಾಗಿದೆ. ಯಾರ ಅದೃಷ್ಟದಲ್ಲಿದೆಯೋ ಅವರ ಮನಸ್ಸಿನಲ್ಲಿ ವಿದ್ಯೆಯೇ ಇರುತ್ತದೆ. ಅನ್ಯರಿಗೂ ಓದಿಸುವುದಕ್ಕಾಗಿ ಭಿನ್ನ-ಭಿನ್ನ ರೀತಿಯಿಂದ ಪುರುಷಾರ್ಥ ಮಾಡಿಸುತ್ತೀರಿ. ನಾವು ಅನ್ಯರಿಗೂ ಓದಿಸಿ ವೈಕುಂಠದ ಮಾಲೀಕರನ್ನಾಗಿ ಮಾಡೋಣವೆಂದು ಮನಸಾಗುತ್ತದೆ. ಮನುಷ್ಯರನ್ನು ನಿದ್ರೆಯಿಂದ ಜಾಗೃತಗೊಳಿಸಲು ಎಷ್ಟೊಂದು ತಲೆಕೆಡಿಸಿಕೊಳ್ಳುತ್ತಾರೆ ಮತ್ತು ಮುಂದೆಯೂ ತಲೆ ಕೆಡಿಸಿಕೊಳ್ಳುತ್ತಿರುತ್ತಾರೆ. ಈ ಪ್ರದರ್ಶನಿ ಇತ್ಯಾದಿಗಳು ಇನ್ನು ಏನೇನೂ ಇಲ್ಲ. ಮುಂದೆ ಹೋದಂತೆ ತಿಳಿಸಲು ಪ್ರಭಂಧ ವಾಗುತ್ತದೆ. ಈಗ ತಂದೆಯು ಪಾವನರನ್ನಾಗಿ ಮಾಡುತ್ತಿದ್ದಾರೆ, ಅಂದಮೇಲೆ ತಂದೆಯ ಶಿಕ್ಷಣದ ಮೇಲೆ ಗಮನ ಕೊಡಬೇಕು. ಪ್ರತಿಯೊಂದು ಮಾತಿನಲ್ಲಿ ಸಹನಶೀಲರೂ ಆಗಬೇಕು. ಪರಸ್ಪರ ಸೇರಿ ಸಂಘಟನೆ ಮಾಡಿ ಭಾಷಣ ಇತ್ಯಾದಿ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳಬೇಕು. ಒಬ್ಬ ಪರಮಾತ್ಮನ ಪರಿಚಯದ ಮೇಲೆ ನಾವು ಬಹಳಷ್ಟು ಚೆನ್ನಾಗಿ ತಿಳಿಸಿಕೊಡಬಹುದಾಗಿದೆ. ಶ್ರೇಷ್ಠಾತಿ ಶ್ರೇಷ್ಠ ಭಗವಂತನು ಯಾರು? ಇದನ್ನು ಕುರಿತು ನೀವು ಎರಡು ಗಂಟೆಗಳ ಕಾಲ ಭಾಷಣ ಮಾಡಬಹುದು. ಇದೂ ಸಹ ನಿಮಗೆ ತಿಳಿದಿದೆ - ತಂದೆಯನ್ನು ನೆನಪು ಮಾಡುವುದರಿಂದ ಖುಷಿಯಿರುತ್ತದೆ. ಒಂದುವೇಳೆ ಮಕ್ಕಳಿಗೆ ನೆನಪಿನ ಯಾತ್ರೆಯಲ್ಲಿ ಗಮನವಿಲ್ಲ, ತಂದೆಯನ್ನು ನೆನಪು ಮಾಡುತ್ತಿಲ್ಲವೆಂದರೆ ಖಂಡಿತ ನಷ್ಟವುಂಟಾಗುತ್ತದೆ. ಎಲ್ಲದಕ್ಕೂ ಆಧಾರವು ನೆನಪಿನ ಮೇಲಿದೆ. ನೆನಪು ಮಾಡುವುದರಿಂದ ಸ್ವರ್ಗದಲ್ಲಿ ಹೋಗುತ್ತೀರಿ. ನೆನಪನ್ನು ಮರೆಯುವುದರಿಂದಲೇ ಕೆಳಗೆ ಬೀಳುತ್ತೀರಿ. ಈ ಮಾತುಗಳನ್ನು ಮತ್ತ್ಯಾರೂ ತಿಳಿದುಕೊಂಡಿರುವುದಿಲ್ಲ. ಶಿವ ತಂದೆಯನ್ನಂತೂ ಮೊದಲೇ ತಿಳಿದುಕೊಂಡಿಲ್ಲ. ಭಲೆ ಯಾರು ಎಷ್ಟೇ ಆಡಂಬರದಿಂದ ಪೂಜೆ ಮಾಡುತ್ತಿರಲಿ, ನೆನಪು ಮಾಡುತ್ತಿರಲಿ ಆದರೂ ಸಹ ತಿಳಿದುಕೊಂಡಿರುವುದಿಲ್ಲ.

ನಿಮಗೆ ತಂದೆಯಿಂದ ಬಹಳ ದೊಡ್ಡ ಆಸ್ತಿಯು ಸಿಗುತ್ತದೆ. ಭಕ್ತಿಮಾರ್ಗದಲ್ಲಿ ಕೃಷ್ಣನ ಸಾಕ್ಷಾತ್ಕಾರ ಮಾಡಲು ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ! ಒಳ್ಳೆಯದು - ದರ್ಶನವಾಯಿತು ಆದರೆ ಮತ್ತೇನು? ಲಾಭವಂತೂ ಏನೂ ಆಗಲಿಲ್ಲ. ಪ್ರಪಂಚವು ನೋಡಿ, ಎಂತಹ ಮಾತುಗಳ ಮೇಲೆ ನಡೆಯುತ್ತಿದೆ! ನೀವು ಹೇಗೆ ಕಬ್ಬಿನ ರಸವನ್ನು ಕುಡಿಯುತ್ತೀರಿ, ಉಳಿದೆಲ್ಲಾ ಮನುಷ್ಯರು ಅದರ ಸಿಪ್ಪೆಯನ್ನು ಚಪ್ಪರಿಸುತ್ತಾರೆ. ನೀವೀಗ ಸಿಹಿಯಾದ ರಸವನ್ನು ಕುಡಿದು ಹೊಟ್ಟೆ ತುಂಬಿಸಿಕೊಂಡು ಅರ್ಧಕಲ್ಪ ಸುಖ ಪಡೆಯುತ್ತೀರಿ. ಉಳಿದೆಲ್ಲರೂ ಭಕ್ತಿಮಾರ್ಗದ ಸಿಪ್ಪೆಯನ್ನು ಚಪ್ಪರಿಸುತ್ತಾ ಕೆಳಗಿಳಿಯುತ್ತಾ ಬರುತ್ತಾರೆ. ಈಗ ತಂದೆಯು ಎಷ್ಟು ಪ್ರೀತಿಯಿಂದ ಪುರುಷಾರ್ಥ ಮಾಡಿಸುತ್ತಾರೆ ಆದರೆ ಅದೃಷ್ಟದಲ್ಲಿ ಇಲ್ಲವೆಂದಮೇಲೆ ಗಮನವನ್ನೂ ಕೊಡುವುದಿಲ್ಲ. ತಾನೂ ಗಮನವನ್ನಿಟ್ಟುಕೊಳ್ಳುವುದಿಲ್ಲ, ಅನ್ಯರಿಗೂ ಗಮನ ತರಿಸುವುದಿಲ್ಲ. ತಾನೂ ಅಮೃತವನ್ನು ಕುಡಿಯುವುದಿಲ್ಲ, ಅನ್ಯರು ಕುಡಿಯುವುದಕ್ಕೂ ಬಿಡುವುದಿಲ್ಲ. ಅನೇಕ ಮಕ್ಕಳದು ಇಂತಹ ಚಟುವಟಿಕೆಗಳು ನಡೆಯುತ್ತದೆ. ಒಂದುವೇಳೆ ಸಂಪೂರ್ಣ ಓದುವುದಿಲ್ಲ, ದಯಾಹೃದಯಿಗಳಾಗುವುದಿಲ್ಲ, ಅನ್ಯರ ಕಲ್ಯಾಣ ಮಾಡುವುದಿಲ್ಲವೆಂದರೆ ಅವರು ಎಂತಹ ಪದವಿಯನ್ನು ಪಡೆಯುತ್ತಾರೆ! ಓದುವ ಮತ್ತು ಓದಿಸುವವರು ಎಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ! ಓದದೇ ಇದ್ದರೆ ಯಾವ ಪದವಿ ಸಿಗುವುದೆಂದು ಮುಂದೆ ಹೋದಂತೆ ಫಲಿತಾಂಶವು ಅರ್ಥವಾಗುವುದು. ಆಗ ತಂದೆಯು ನಮಗೆ ಎಷ್ಟೊಂದು ಎಚ್ಚರಿಕೆ ಕೊಡುತ್ತಿದ್ದರೆಂದು ಅರ್ಥವಾಗುತ್ತದೆ. ಇಲ್ಲಿ ಕುಳಿತಿದ್ದೀರಿ ಅಂದಾಗ ಬುದ್ಧಿಯಲ್ಲಿರಬೇಕು, ನಾವು ಬೇಹದ್ದಿನ ತಂದೆಯ ಬಳಿ ಕುಳಿತಿದ್ದೇವೆ ಅವರು ಮೇಲಿನಿಂದ ಬಂದು ಈ ಶರೀರದ ಮೂಲಕ ಕಲ್ಪದ ಹಿಂದಿನಂತೆ ಓದಿಸುತ್ತಾರೆ. ಈಗ ನಾವು ಪುನಃ ಆ ತಂದೆಯ ಮುಂದೆ ಕುಳಿತಿದ್ದೇವೆ. ನಾವು ಅವರ ಜೊತೆಯೇ ನಡೆಯಬೇಕಾಗಿದೆ, ಬಿಟ್ಟು ಹೋಗುವಂತಿಲ್ಲ. ತಂದೆಯು ನಮ್ಮನ್ನು ಜೊತೆ ಕರೆದುಕೊಂಡು ಹೋಗುತ್ತಾರೆ. ಈ ಹಳೆಯ ಪ್ರಪಂಚವು ವಿನಾಶವಾಗುವುದು, ಈ ಮಾತುಗಳನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ, ಮುಂದೆ ಹೋದಂತೆ ಖಂಡಿತ ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ ಎಂಬುದನ್ನು ತಿಳಿದುಕೊಳ್ಳುವರು. ಆದರೆ ಆಗ ಏನೂ ಸಿಗಲು ಸಾಧ್ಯವಿಲ್ಲ, ಟೂಲೇಟ್ ಆಗಿ ಬಿಡುತ್ತದೆ. ಎಲ್ಲರೂ ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿಕೊಂಡು ಹಿಂತಿರುಗಬೇಕಾಗಿದೆ. ಈ ಮಾತನ್ನು ಬುದ್ಧಿವಂತ ಮಕ್ಕಳೇ ಅರಿತುಕೊಳ್ಳುತ್ತಾರೆ. ಯಾರು ಸೇವೆಯಲ್ಲಿ ಉಪಸ್ಥಿತರಿದ್ದಾರೆಯೋ, ಮಾತಾಪಿತರನ್ನು ಫಾಲೋ ಮಾಡುತ್ತಾರೆಯೋ ಅವರೇ ಮಕ್ಕಳಾಗಿದ್ದಾರೆ. ಹೇಗೆ ತಂದೆಯು ಆತ್ಮಿಕ ಸೇವೆ ಮಾಡುವರೋ ಅದೇರೀತಿ ನೀವೂ ಮಾಡಬೇಕಾಗಿದೆ. ಕೆಲವು ಮಕ್ಕಳಿದ್ದಾರೆ, ಅವರಿಗೆ ಇದೇ ಗುಂಗು ಇರುತ್ತದೆ - ತಂದೆಯು ಯಾರ ಮಹಿಮೆ ಮಾಡುತ್ತಾರೆಯೋ ಅವರಂತೆ ನಾವೂ ಆಗಬೇಕಾಗಿದೆ. ಶಿಕ್ಷಕನಂತೂ ಎಲ್ಲರಿಗೂ ಸಿಗುತ್ತಾರೆ, ಇಲ್ಲಿಯೂ ಎಲ್ಲರೂ ಬರುತ್ತಾರೆ. ಇಲ್ಲಿ ದೊಡ್ಡ ಶಿಕ್ಷಕ ಕುಳಿತಿದ್ದಾರೆ. ಆ ತಂದೆಯನ್ನು ನೆನಪು ಮಾಡದಿದ್ದರೆ ಸುಧಾರಣೆಯಾಗುವುದಾದರೂ ಹೇಗೆ? ಜ್ಞಾನವು ಬಹಳ ಸಹಜವಾಗಿದೆ, 84 ಜನ್ಮಗಳ ಚಕ್ರವು ಎಷ್ಟೊಂದು ಸಹಜವಾಗಿದೆ ಆದರೆ ಎಷ್ಟೊಂದು ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ತಂದೆಯು ಎಷ್ಟು ಸಹಜ ಮಾತನ್ನು ತಿಳಿಸುತ್ತಾರೆ, ತಂದೆ ಮತ್ತು 84 ಜನ್ಮಗಳ ಚಕ್ರವನ್ನು ನೆನಪು ಮಾಡಿ ಆಗ ದೋಣಿಯು ಪಾರಾಗುವುದು - ಈ ಸಂದೇಶವನ್ನು ಎಲ್ಲರಿಗೂ ಕೊಡಬೇಕಾಗಿದೆ. ಅಂದಮೇಲೆ ನಾನು ಎಷ್ಟು ಸಂದೇಶವಾಹಕ ನಾಗಿದ್ದೇನೆಂದು ತಮ್ಮೊಂದಿಗೆ ಕೇಳಿಕೊಳ್ಳಿ. ಎಷ್ಟು ಅನೇಕರನ್ನು ಜಾಗೃತಗೊಳಿಸುವಿರೋ ಅಷ್ಟೇ ಬಳುವಳಿ ಸಿಗುವುದು. ಒಂದುವೇಳೆ ಜಾಗೃತಗೊಳಿಸುತ್ತಿಲ್ಲವೆಂದರೆ ಅವಶ್ಯವಾಗಿ ನಾನೂ ಸಹ ಮಲಗಿದ್ದೇನೆಂದರ್ಥ ಮತ್ತು ನನಗೂ ಸಹ ಅಷ್ಟೊಂದು ಪದವಿಯು ಸಿಗುವುದಿಲ್ಲ. ತಂದೆಯು ಪ್ರತಿನಿತ್ಯವೂ ಸಹ ಹೇಳುತ್ತಾರೆ - ಪ್ರತಿನಿತ್ಯ ಸಂಧ್ಯಾ ಸಮಯದಲ್ಲಿ ತಮ್ಮ ಇಡೀ ದಿನದ ದಿನಚರಿಯನ್ನು ನೋಡಿಕೊಳ್ಳಿ, ಸೇವೆಯಲ್ಲಿಯೂ ಇರಬೇಕಾಗಿದೆ. ಮೂಲ ಮಾತು ತಂದೆಯ ಪರಿಚಯ ಕೊಡುವುದಾಗಿದೆ. ತಂದೆಯೇ ಭಾರತವನ್ನು ಸ್ವರ್ಗವನ್ನಾಗಿ ಮಾಡಿದ್ದರು, ಈಗ ನರಕವಾಗಿದೆ ಪುನಃ ಸ್ವರ್ಗವಾಗುವುದಿದೆ. ಚಕ್ರವು ಸುತ್ತುತ್ತಿರುತ್ತದೆ, ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ತಂದೆಯನ್ನು ನೆನಪು ಮಾಡಿದರೆ ವಿಕಾರಗಳು ಬಿಟ್ಟು ಹೋಗುತ್ತವೆ. ಸತ್ಯಯುಗದಲ್ಲಿ ಕೆಲವರೇ ಇರುತ್ತಾರೆ ಮತ್ತೆ ರಾವಣ ರಾಜ್ಯದಲ್ಲಿ ಎಷ್ಟೊಂದು ವೃದ್ಧಿಯಾಗುತ್ತದೆ. ಸತ್ಯಯುಗದ ಆರಂಭದಲ್ಲಿ 9 ಲಕ್ಷ ಜನಸಂಖ್ಯೆಯಿದ್ದು ನಂತರ ನಿಧಾನ-ನಿಧಾನವಾಗಿ ವೃದ್ಧಿಯಾಗುತ್ತದೆ. ಯಾರು ಮೊದಲು ಪಾವನರಿದ್ದರೋ ಅವರೇ ನಂತರ ಪತಿತರಾಗುತ್ತಾರೆ. ಸತ್ಯಯುಗದಲ್ಲಿ ದೇವತೆಗಳದು ಪವಿತ್ರ ಪ್ರವೃತ್ತಿ ಮಾರ್ಗ ಆಗಿತ್ತು, ಅವರೇ ನಂತರ ಅಪವಿತ್ರ ಪ್ರವೃತ್ತಿ ಮಾರ್ಗದವರಾಗಿದ್ದಾರೆ. ತಂದೆಯೇ ಬಂದು ಪವಿತ್ರರನ್ನಾಗಿ ಮಾಡುತ್ತಾರೆ. ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ. ನೀವು ಅರ್ಧಕಲ್ಪ ಪವಿತ್ರರಾಗಿದ್ದಿರಿ ನಂತರ ರಾವಣ ರಾಜ್ಯದಲ್ಲಿ ಪತಿತರಾಗಿದ್ದೀರಿ ಎಂದು ತಂದೆಯು ತಿಳಿಸುತ್ತಾರೆ. ಇದನ್ನೂ ಸಹ ನೀವೀಗ ತಿಳಿದುಕೊಂಡಿದ್ದೀರಿ. ನಾವು ಪೈಸೆಗೂ ಬೆಲೆ ಬಾಳದವರಾಗಿದ್ದೆವು ಈಗ ಎಷ್ಟೊಂದು ಜ್ಞಾನ ಸಿಕ್ಕಿದೆ. ಇದರಿಂದ ನಾವು ಹೇಗಿದ್ದವರು ಏನಾಗುತ್ತೇವೆ! ಬಾಕಿ ಯಾವುದೆಲ್ಲಾ ಧರ್ಮಗಳಿವೆಯೋ ಅವೆಲ್ಲವೂ ಸಮಾಪ್ತಿಯಾಗುವವು, ಪ್ರಾಣಿಗಳು ಸಾಯುವ ರೀತಿಯಲ್ಲಿ ಎಲ್ಲಾ ಮನುಷ್ಯರು ಸಾಯುತ್ತಾರೆ. ಹೇಗೆ ಹಿಮ ಬೀಳುತ್ತದೆಯೆಂದರೆ ಎಷ್ಟೊಂದು ಪ್ರಾಣಿ-ಪಕ್ಷಿಗಳೆಲ್ಲವೂ ಸತ್ತು ಹೋಗುತ್ತದೆ. ಪ್ರಾಕೃತಿಕ ವಿಕೋಪಗಳೂ ಆಗುತ್ತವೆ. ಇದೆಲ್ಲವೂ ಸಮಾಪ್ತಿಯಾಗಿ ಬಿಡುತ್ತವೆ. ಇವರೆಲ್ಲರೂ ಸತ್ತು ಬಿದ್ದಿದ್ದಾರೆ, ಈ ಕಣ್ಣುಗಳಿಂದ ನೀವು ಏನೆಲ್ಲವನ್ನೂ ನೋಡುತ್ತೀರೋ ಅದೇನೂ ಉಳಿಯುವುದಿಲ್ಲ. ಹೊಸ ಪ್ರಪಂಚದಲ್ಲಿ ಕೆಲವರೇ ಇರುತ್ತಾರೆ. ಈ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ, ಜ್ಞಾನ ಸಾಗರ ತಂದೆಯು ನಿಮಗೆ ಜ್ಞಾನದ ಆಸ್ತಿಯನ್ನು ಕೊಡುತ್ತಿದ್ದಾರೆ. ನಿಮಗೆ ತಿಳಿದಿದೆ- ಇಡೀ ಪ್ರಪಂಚದಲ್ಲಿ ಕೊಳಕೇ ಕೊಳಕಿದೆ. ನಾವೂ ಸಹ ಕೆಸರಿನಲ್ಲಿ ಮೈಲಿಗೆಯಾಗಿದ್ದೆವು, ತಂದೆಯು ಈಗ ಕೆಸರಿನಿಂದ ಹೊರ ತೆಗೆದು ಎಷ್ಟೊಂದು ಸುಂದರ ಹೂಗಳನ್ನಾಗಿ ಮಾಡುತ್ತಿದ್ದಾರೆ. ನಾವು ಈ ಶರೀರವನ್ನು ಬಿಡುತ್ತೇವೆ, ಆತ್ಮವು ಪವಿತ್ರವಾಗಿ ಬಿಡುತ್ತದೆ.

ತಂದೆಯು ಎಲ್ಲರಿಗೂ ಏಕರಸವಾಗಿ ವಿದ್ಯೆಯನ್ನು ಓದಿಸುತ್ತಾರೆ, ಆದರೆ ಕೆಲವರ ಬುದ್ಧಿಯು ಸಂಪೂರ್ಣ ಜಡವಾಗಿದೆ, ಏನೂ ಅರ್ಥವಾಗುವುದಿಲ್ಲ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ತಂದೆಯು ತಿಳಿಸುತ್ತಾರೆ - ಇವರ ಅದೃಷ್ಟದಲ್ಲಿಲ್ಲವೆಂದರೆ ನಾನು ತಾನೇ ಏನು ಮಾಡಲು ಸಾಧ್ಯ! ನಾನಂತೂ ಎಲ್ಲರಿಗೆ ಏಕರಸವಾಗಿ ಓದಿಸುತ್ತೇನೆ. ನಂಬರ್ವಾರ್ ಆಗಿಯೇ ಓದುತ್ತಾರೆ. ಕೆಲವರು ಚೆನ್ನಾಗಿ ತಿಳಿದುಕೊಂಡು ಅನ್ಯರಿಗೂ ತಿಳಿಸುತ್ತಾರೆ. ಅನ್ಯರ ಜೀವನವನ್ನೂ ವಜ್ರ ಸಮಾನ ಮಾಡುತ್ತಾರೆ. ಇನ್ನೂ ಕೆಲವರು ಮಾಡುವುದೇ ಇಲ್ಲ. ಎಷ್ಟೊಂದು ಉಲ್ಟಾ ಅಹಂಕಾರವಿರುತ್ತದೆ. ಹೇಗೆ ವಿಜ್ಞಾನಿಗಳಿಗೆ ಎಷ್ಟೊಂದು ಬುದ್ಧಿಯ ಅಭಿಮಾನವಿದೆ! ಬಹು ದೂರದ ತನಕ ಇರುವ ಆಕಾಶ, ಸಮುದ್ರವನ್ನು ನೋಡಲು ಬಯಸುತ್ತಾರೆ. ತಂದೆಯು ತಿಳಿಸುತ್ತಾರೆ- ಇದರಿಂದೇನೂ ಲಾಭವೇ ಇಲ್ಲ. ಸುಮ್ಮನೆ ವಿಜ್ಞಾನದ ಅಭಿಮಾನದಿಂದ ತನ್ನ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಬಹಳ ಹೆಚ್ಚಿನ ಸಂಬಳವೂ ಅವರಿಗೆ ಸಿಗುತ್ತದೆ. ಅದೆಲ್ಲವನ್ನೂ ಅವರು ವ್ಯರ್ಥಮಾಡುತ್ತಿರುತ್ತಾರೆ. ಚಿನ್ನದ ದ್ವಾರಿಕೆಯು ಕೆಳಗಿನಿಂದ ಬರುತ್ತದೆಯೆಂದಲ್ಲ. ವಾಸ್ತವದಲ್ಲಿ ಇದು ನಾಟಕದ ಚಕ್ರವಾಗಿದೆ, ಅದು ಸುತ್ತುತ್ತಾ ಇರುತ್ತದೆ ನಂತರ ನಾವು ಸಮಯದಲ್ಲಿ ಹೊಸ ಪ್ರಪಂಚದಲ್ಲಿ ಹೋಗಿ ನಮ್ಮ ಮಹಲುಗಳನ್ನು ಕಟ್ಟುತ್ತೇವೆ. ಪುನಃ ಅದೇರೀತಿ ಮನೆ ಆಗುತ್ತವೆಯೇ ಎಂದು ಕೆಲವರು ಆಶ್ಚರ್ಯ ಪಡುತ್ತಾರೆ. ಖಂಡಿತವಾಗಿ, ತಂದೆಯು ತೋರಿಸುತ್ತಾರೆ, ನೀವು ಪುನಃ ಅದೇರೀತಿ ಚಿನ್ನದ ಮಹಲುಗಳನ್ನು ಕಟ್ಟುತ್ತೀರಿ. ಅಲ್ಲಂತೂ ಹೇರಳವಾಗಿ ಚಿನ್ನವಿರುತ್ತದೆ. ಇಲ್ಲಿಯವರೆಗೂ ಸಹ ಕೆಲವೊಂದು ಕಡೆ ಅಪಾರ ಚಿನ್ನದ ಗಣಿಗಳಿದ್ದವು, ಅದೆಲ್ಲವೂ ಸಮಾಪ್ತಿಯಾಯಿತು. ಈಗ ವಜ್ರದ ಬೆಲೆ ನೋಡಿ ಎಷ್ಟೊಂದಿದೆ! ಇಂದು ಇಷ್ಟೊಂದು ಬೆಲೆಯಿದೆ ನಾಳೆ ಕಲ್ಲುಗಳ ಸಮಾನವಾಗಿ ಬಿಡುವುದು. ತಂದೆಯು ನೀವು ಮಕ್ಕಳಿಗೆ ಬಹಳ ಅದ್ಭುತವಾದ ಮಾತುಗಳನ್ನು ತಿಳಿಸುತ್ತಾರೆ ಮತ್ತು ಸಾಕ್ಷಾತ್ಕಾರವನ್ನೂ ಮಾಡಿಸುತ್ತಾರೆ. ನೀವು ಮಕ್ಕಳಿಗೆ ಈಗ ಇದೇ ಬುದ್ಧಿಯಲ್ಲಿರಬೇಕು - ನಾವು ಆತ್ಮಗಳು ಮನೆಯನ್ನು ಬಿಟ್ಟು 5000 ವರ್ಷಗಳಾಯಿತು, ಅದಕ್ಕೆ ಮುಕ್ತಿಧಾಮವೆಂದು ಹೇಳುತ್ತಾರೆ. ಭಕ್ತಿಮಾರ್ಗದಲ್ಲಿ ಮುಕ್ತಿಗಾಗಿ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ ಆದರೆ ನೀವೀಗ ತಿಳಿದುಕೊಂಡಿದ್ದೀರಿ, ತಂದೆಯ ವಿನಃ ಮತ್ತ್ಯಾರೂ ಮುಕ್ತಿಯನ್ನು ಕೊಡಲು ಸಾಧ್ಯವಿಲ್ಲ, ಜೊತೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಈಗ ನೀವು ಮಕ್ಕಳ ಬುದ್ಧಿಯಲ್ಲಿ ಹೊಸ ಪ್ರಪಂಚವಿದೆ, ಇದು ಹೇಗೆ ಸುತ್ತುತ್ತದೆ ಎಂಬುದನ್ನು ತಿಳಿದುಕೊಂಡಿದ್ದೀರಿ. ನೀವು ಮತ್ತ್ಯಾವುದೇ ಮಾತುಗಳಲ್ಲಿ ಹೋಗುವಂತಿಲ್ಲ, ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ ಮತ್ತು ಎಲ್ಲರಿಗೆ ಇದನ್ನೇ ಹೇಳುತ್ತಾ ಇರಿ - ತಂದೆಯನ್ನು ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ತಂದೆಯು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಿದ್ದರಲ್ಲವೆ. ನೀವು ನನ್ನ ಶಿವ ಜಯಂತಿಯನ್ನೂ ಆಚರಿಸುತ್ತೀರಿ, ಎಷ್ಟು ವರ್ಷಗಳಾಯಿತು? 5000 ವರ್ಷಗಳ ಮಾತಾಗಿದೆ. ನೀವು ಸ್ವರ್ಗವಾಸಿಗಳಾಗಿದ್ದಿರಿ ನಂತರ 84 ಜನ್ಮಗಳ ಚಕ್ರವನ್ನು ಸುತ್ತಿದ್ದೀರಿ. ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ. ನಿಮಗೆ ಈ ಸೃಷ್ಟಿಚಕ್ರವನ್ನು ನಾನು ಬಂದು ತಿಳಿಸಿಕೊಡುತ್ತೇನೆ. ಈಗ ನೀವು ಮಕ್ಕಳಿಗೆ ಬಹಳ ಚೆನ್ನಾಗಿ ಸ್ಮೃತಿ ಬಂದಿದೆ - ನಾವು ಎಲ್ಲರಿಗಿಂತ ಶ್ರೇಷ್ಠ ಪಾತ್ರಧಾರಿಗಳಾಗಿದ್ದೇವೆ. ನಮ್ಮ ಪಾತ್ರವು ತಂದೆಯ ಜೊತೆಯಲ್ಲಿದೆ, ನಾವು ತಂದೆಯ ಶ್ರೀಮತದನುಸಾರ ತಂದೆಯ ನೆನಪಿನಲ್ಲಿದ್ದು ಅನ್ಯರನ್ನೂ ತಮ್ಮ ಸಮಾನ ಮಾಡುತ್ತೇವೆ. ಯಾರು ಕಲ್ಪದ ಹಿಂದೆ ಇದ್ದರೋ ಅವರೇ ಆಗುತ್ತಾರೆ. ಸಾಕ್ಷಿಯಾಗಿ ನೋಡುತ್ತಾ ಇರುತ್ತಾರೆ ಮತ್ತು ಪುರುಷಾರ್ಥವನ್ನೂ ಮಾಡಿಸುತ್ತಾರೆ. ಸದಾ ಉಮ್ಮಂಗದಲ್ಲಿರಲು ನಿತ್ಯವೂ ತಮ್ಮ ಜೊತೆ ಮಾತನಾಡಿಕೊಳ್ಳಿರಿ - ಇನ್ನು ಸ್ವಲ್ಪ ಸಮಯವೇ ಈ ಅಶಾಂತಿ ಪ್ರಪಂಚದಲ್ಲಿರುತ್ತೇವೆ ಅನಂತರ ಅಶಾಂತಿಯ ಹೆಸರೇ ಇರುವುದಿಲ್ಲ. ಮನಃಶ್ಯಾಂತಿ ಹೇಗೆ ಸಿಗುವುದೆಂದು ಯಾರೂ ಹೇಳಲು ಸಾಧ್ಯವಿಲ್ಲ. ಶಾಂತಿಗಾಗಿ ಎಲ್ಲೆಲ್ಲಿಗೋ ಹೋಗುತ್ತಾರೆ ಆದರೆ ಶಾಂತಿಯ ಸಾಗರನು ಒಬ್ಬರೇ ತಂದೆಯಾಗಿದ್ದಾರೆ, ಮತ್ತ್ಯಾರ ಬಳಿಯೂ ಈ ಶಾಂತಿಯಿಲ್ಲ. ಹಾಗೆಯೇ ನೀವು ಮಕ್ಕಳ ಬುದ್ಧಿಯಲ್ಲಿ ಇದು ಇರಬೇಕು - ರಚಯಿತ ಮತ್ತು ರಚನೆಯನ್ನು ಅರಿತುಕೊಳ್ಳಬೇಕು ಎಂದು. ಇದು ಜ್ಞಾನವಾಗಿದೆ, ಅದು ಶಾಂತಿಗಾಗಿ, ಇದು ಸುಖಕ್ಕಾಗಿ. ಸುಖವು ಧನದಿಂದಲೇ ಸಿಗುತ್ತದೆ, ಧನವಿಲ್ಲದಿದ್ದರೆ ಮನುಷ್ಯರು ಪ್ರಯೋಜನಕ್ಕಿಲ್ಲ. ಧನಕ್ಕಾಗಿ ಮನುಷ್ಯರು ಎಷ್ಟೊಂದು ಪಾಪ ಮಾಡುತ್ತಾರೆ! ತಂದೆಯು ಅಪಾರಧನವನ್ನು ಕೊಟ್ಟಿದ್ದಾರೆ, ಸ್ವರ್ಗವು ಚಿನ್ನದ್ದು, ನರಕವು ಕಲ್ಲುಗಳದಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1) ಸಮಯ ತೆಗೆದು ಏಕಾಂತದಲ್ಲಿ ತಮ್ಮ ಜೊತೆ ತಾವು ಮಾತನಾಡಿಕೊಂಡು ತಮ್ಮನ್ನು ಉಮ್ಮಂಗದಲ್ಲಿ ತರಬೇಕಾಗಿದೆ. ಅನ್ಯರನ್ನು ತಮ್ಮ ಸಮಾನ ಮಾಡುವ ಸೇವೆಯ ಜೊತೆ ಜೊತೆಗೆ ಸಾಕ್ಷಿಯಾಗಿ ಪ್ರತಿಯೊಬ್ಬರ ಪಾತ್ರವನ್ನು ನೋಡುವ ಅಭ್ಯಾಸ ಮಾಡಬೇಕಾಗಿದೆ.

2) ತಂದೆಯನ್ನು ನೆನಪು ಮಾಡಿ ತಮ್ಮನ್ನು ತಾವು ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ತಮ್ಮೊಂದಿಗೆ ಕೇಳಿಕೊಳ್ಳಿ - ನಾನು ಸಂದೇಶವಾಹಕನಾಗಿದ್ದೇನೆ, ಎಷ್ಟು ಜನರನ್ನು ತನ್ನ ಸಮಾನ ಮಾಡುತ್ತಿದ್ದೇನೆ?

ವರದಾನ:

ಸೈಲೆನ್ಸ್ ನ ಶಕ್ತಿಯ ಮುಖಾಂತರ ವಿಶ್ವದಲ್ಲಿ ಪ್ರತ್ಯಕ್ಷತೆಯ ನಗಾರಿ ಬಾರಿಸುವಂತಹ ಶಾಂತ ಸ್ವರೂಪ ಭವ.

"ವಿಜ್ಞಾನದ ಮೇಲೆ ಶಾಂತಿಯ ವಿಜಯ” (ಸೈನ್ಸ್ ನ ಮೇಲೆ ಸೈಲೆನ್ಸ್ ನ ಗೆಲುವು) ಎಂಬ ಗಾಯನವಿದೆಯೇ ವಿನಹ ವಾಣಿಯಿಂದಲ್ಲ. ಎಷ್ಟು ಸಮಯ ಸಂಪೂರ್ಣತೆಯ ಸಮೀಪ ಬರುತ್ತಾ ಹೋಗುವಿರಿ ಅಷ್ಟೇ. ತಾನೇ ತಾನಾಗಿ ಶಭ್ಧದಲ್ಲಿ ಹೆಚ್ಚ್ಲು ಬರುವುದರಿಂದ ವೈರಾಗ್ಯ ಬರುತ್ತಾ ಹೋಗುವುದು. ಹೇಗೆ ಈಗ ಇಷ್ಟ ಪಟ್ಟರೂ ಸಹ ಶಭ್ಧದಲ್ಲಿ ಬರುವುದು ಅಭ್ಯಾಸವಾಗಿ ಬಿಟ್ಟಿದೆ, ಹಾಗೇ ಮುಂದೆ ಇಷ್ಟ ಪಟ್ಟರೂ ಸಹಾ ಶಭ್ಧದಿಂದ ದೂರ ಹೋಗುವಿರಿ. ಪ್ರೋಗ್ರಾಂ ಮಾಡಿಕೊಂಡು ಶಭ್ಧದಲ್ಲಿ ಬರುವಿರಿ. ಯಾವಾಗ ಈ ಬದಲಾವಣೆ ಕಂಡು ಬರುವುದೋ ಆಗ ತಿಳಿಯಿರಿ, ವಿಜಯದ ನಗಾರಿ ಇನ್ನೇನು ಭಾರಿಸಲಿದೆ ಎಂದು, ಇದಕ್ಕಾಗಿ ಎಷ್ಟು ಸಮಯ ಸಿಕ್ಕುವುದೊ ಅಷ್ಟು ಶಾಂತ ಸ್ವರೂಪದಲ್ಲಿರುವ ಅಭ್ಯಾಸಿಗಳಾಗಿ.

ಸ್ಲೋಗನ್:

ಜೀರೋ ತಂದೆಯ ಜೊತೆ ಇರುವಂತಹವರೇ ಹೀರೋ ಪಾತ್ರಧಾರಿಗಳಾಗಿದ್ದಾರೆ.