27.06.20 Morning Kannada Murli Om Shanti
BapDada Madhuban
ಮಧುರ ಮಕ್ಕಳೇ - ನೀವೀಗ
ಹೊಸ ಸಂಬಂಧದಲ್ಲಿ ಹೋಗುತ್ತಿದ್ದೀರಿ, ಆದ್ದರಿಂದ ಇಲ್ಲಿನ ಕರ್ಮ ಬಂಧನಗಳ ಸಂಬಂಧಗಳನ್ನು ಮರೆತು
ಕರ್ಮಾತೀತರಾಗುವ ಪುರುಷಾರ್ಥ ಮಾಡಿ.
ಪ್ರಶ್ನೆ:
ತಂದೆಯು ಯಾವ
ಮಕ್ಕಳಿಗೆ ವಾಹ್ ವಾಹ್ ಎನ್ನುತ್ತಾರೆ? ಎಲ್ಲರಿಗಿಂತ ಅಧಿಕ ಪ್ರೀತಿಯನ್ನು ಯಾರಿಗೆ ಕೊಡುತ್ತಾರೆ?
ಉತ್ತರ:
ತಂದೆಯು ಬಡ ಮಕ್ಕಳನ್ನು ನೋಡಿ ವಾಹ್ ವಾಹ್ ಎನ್ನುತ್ತಾರೆ, ವಾಹ್ ಬಡತನವೇ ವಾಹ್ ಆರಾಮವಾಗಿ ಎರಡು
ರೊಟ್ಟಿಯನ್ನು ತಿನ್ನುವುದು, ಇನ್ನ್ಯಾವುದೇ ಚಪಲವಿಲ್ಲ. ಬಡ ಮಕ್ಕಳು ತಂದೆಯನ್ನು ಪ್ರೀತಿಯಿಂದ
ನೆನಪು ಮಾಡುತ್ತಾರೆ. ತಂದೆಯು ಅವಿದ್ಯಾವಂತ ಮಕ್ಕಳನ್ನು ನೋಡಿ ಖುಷಿ ಪಡುತ್ತಾರೆ ಏಕೆಂದರೆ ಅವರಿಗೆ
ಓದಿರುವುದನ್ನು ಮರೆಯುವ ಪರಿಶ್ರಮ ಪಡಬೇಕಾಗುವುದಿಲ್ಲ.
ಓಂ ಶಾಂತಿ.
ತಂದೆಗೆ ಮಕ್ಕಳ ಪ್ರತಿ ತಮ್ಮನ್ನು ಆತ್ಮನೆಂದು ತಿಳಿಯಿರಿ ಎಂದು ಪ್ರತಿನಿತ್ಯವೂ ಹೇಳುವ
ಅವಶ್ಯಕತೆಯಿಲ್ಲ. ಆತ್ಮಾಭಿಮಾನಿ ಭವ ಅಥವಾ ದೇಹೀ-ಅಭಿಮಾನಿ ಭವ..... ಶಬ್ಧವು ಅದೇ ಆಗಿದೆಯಲ್ಲವೆ.
ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮವೆಂದು ತಿಳಿಯಿರಿ, ಆತ್ಮದಲ್ಲಿಯೇ 84 ಜನ್ಮಗಳ ಪಾತ್ರವು
ಅಡಕವಾಗಿದೆ. ಒಂದು ಜನ್ಮವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸಿದ ನಂತರ ಶರೀರವು ಸಮಾಪ್ತಿಯಾಗಿ
ಬಿಡುತ್ತದೆ. ಆತ್ಮವು ಅವಿನಾಶಿಯಾಗಿದೆ, ನೀವು ಮಕ್ಕಳಿಗೆ ಈ ಜ್ಞಾನವು ಈಗಲೇ ಸಿಗುತ್ತದೆ
ಮತ್ತ್ಯಾರಿಗೂ ಈ ಮಾತುಗಳು ತಿಳಿದಿಲ್ಲ. ಆದ್ದರಿಂದ ಪ್ರಯತ್ನ ಪಟ್ಟು ಎಷ್ಟು ಸಾಧ್ಯವೋ ಅಷ್ಟು
ತಂದೆಯನ್ನು ನೆನಪು ಮಾಡಿ. ನಾವು ಧ್ಯಾನದಲ್ಲಿ ಕುಳಿತುಕೊಳ್ಳಬಿಡಬೇಕೆಂದಲ್ಲ. ಧ್ಯಾನ ಶಬ್ಧವು
ತಪ್ಪಾಗಿದೆ, ವಾಸ್ತವದಲ್ಲಿ ಇದು ನೆನಪಾಗಿದೆ. ಎಲ್ಲಿಯಾದರೂ ಕುಳಿತಿರಿ ಆದರೆ ತಂದೆಯನ್ನು ನೆನಪು
ಮಾಡಿ. ಮಾಯೆಯ ಬಹಳಷ್ಟು ಬಿರುಗಾಳಿಗಳು ಬರುತ್ತವೆ. ಕೆಲಕೆಲವರಿಗೆ ಕೆಲವೊಂದು ನೆನಪು ಬರುತ್ತದೆ.
ಬಿರುಗಾಳಿಗಳು ಅವಶ್ಯವಾಗಿ ಬಂದೇ ಬರುತ್ತವೆ ಆದರೆ ಆ ಸಮಯದಲ್ಲಿ ಅವು ಬರದಂತೆ ಕಳೆಯಬೇಕಾಗುತ್ತದೆ.
ಇಲ್ಲಿ ಕುಳಿತಿರುವಾಗಲೂ ಮಾಯೆಯು ಬಹಳ ತೊಂದರೆ ಕೊಡುತ್ತಿರುವುದು. ಇದೇ ಯುದ್ಧವಾಗಿದೆ. ಎಷ್ಟು
ಹಗುರವಾಗಿರುತ್ತೀರೋ ಅಷ್ಟು ಬಂಧನಗಳು ಕಡಿಮೆಯಾಗುತ್ತವೆ. ಮೊದಲಿಗೆ ಆತ್ಮವು ನಿರ್ಬಂಧವಾಗಿದೆ. ಅದು
ಜನ್ಮವನ್ನು ತೆಗೆದುಕೊಂಡಾಗ ತಂದೆ-ತಾಯಿಯ ಕಡೆ ಬುದ್ಧಿಯು ಹೋಗುತ್ತದೆ ನಂತರ ಸ್ರೀಯನ್ನು ದತ್ತು
ಮಾಡಿಕೊಳ್ಳುತ್ತಾರೆ. ಆಗ ಯಾವ ವಸ್ತುವು ಸನ್ಮುಖದಲ್ಲಿ ಇರಲಿಲ್ಲವೋ ಅದು ಸನ್ಮುಖದಲ್ಲಿ ಬಂದು
ಬಿಡುತ್ತದೆ. ನಂತರ ಮಕ್ಕಳಾದಾಗ ಅವರ ನೆನಪು ಹೆಚ್ಚುವುದು. ಆದರೆ ನೀವೀಗ ಎಲ್ಲವನ್ನೂ ಮರೆಯಬೇಕಾಗಿದೆ.
ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಆದ್ದರಿಂದಲೇ ತಂದೆಯ ಮಹಿಮೆಯಿದೆ. ನಿಮ್ಮ ಮಾತಾಪಿತಾ
ಸರ್ವಸ್ವವೂ ಅವರೇ ಆಗಿದ್ದಾರೆ, ಅವರನ್ನೇ ನೆನಪು ಮಾಡಿ. ಅವರು ನಿಮಗೆ ಭವಿಷ್ಯಕ್ಕಾಗಿ ಎಲ್ಲವೂ
ಹೊಸದನ್ನೇ ಕೊಡುತ್ತಾರೆ. ಹೊಸ ಸಂಬಂಧದಲ್ಲಿ ಕರೆ ತರುತ್ತಾರೆ. ಸಂಬಂಧವಂತೂ ಅಲ್ಲಿಯೂ
ಇರುತ್ತದೆಯಲ್ಲವೆ, ಯಾವುದೇ ಪ್ರಳಯವಾಗುತ್ತದೆಯೆಂದಲ್ಲ. ನೀವು ಒಂದು ಶರೀರವನ್ನು ಬಿಟ್ಟು
ಇನ್ನೊಂದನ್ನು ತೆಗೆದುಕೊಳ್ಳುತ್ತೀರಿ. ಯಾರು ಒಳ್ಳೊಳ್ಳೆಯವರಿದ್ದಾರೆಯೋ ಅವರು ಉತ್ತಮ ಕುಲದಲ್ಲಿ
ಜನ್ಮ ಪಡೆಯುತ್ತಾರೆ. ನೀವು ಭವಿಷ್ಯದ 21 ಜನ್ಮಗಳಿಗಾಗಿಯೇ ಓದುತ್ತೀರಿ. ವಿದ್ಯೆಯು
ಪೂರ್ಣವಾಯಿತೆಂದರೆ ನೀವೂ ಸಹ ಶಾಂತಿಧಾಮ ಮತ್ತು ಸುಖಧಾಮದಲ್ಲಿ ವರ್ಗಾಯಿತರಾಗುವವರಿದ್ದೀರಿ, ಈ ಛೀ
ಛೀ ಪ್ರಪಂಚದಿಂದ ಮುಕ್ತರಾಗಿ ಬಿಡುತ್ತೀರಿ. ಇದರ ಹೆಸರೇ ಆಗಿದೆ ನರಕ. ಸತ್ಯಯುಗಕ್ಕೆ ಸ್ವರ್ಗವೆಂದು
ಹೇಳಲಾಗುತ್ತದೆ, ಇಲ್ಲಿ ಮನುಷ್ಯರು ಎಷ್ಟೊಂದು ಘೋರ ಅಂಧಕಾರದಲ್ಲಿದ್ದಾರೆ. ನಮಗೆ ಇಲ್ಲಿಯೇ
ಸ್ವರ್ಗವಿದೆಯೆಂದು ಧನವಂತರು ತಿಳಿಯುತ್ತಾರೆ. ಆದರೆ ಸ್ವರ್ಗವಿರುವುದೇ ಹೊಸ ಪ್ರಪಂಚದಲ್ಲಿ. ಈ
ಹಳೆಯ ಪ್ರಪಂಚವು ಈಗ ವಿನಾಶವಾಗಲಿದೆ. ಯಾರು ಕರ್ಮಾತೀತ ಸ್ಥಿತಿಯನ್ನು ಹೊಂದುವರೋ ಅವರು ಧರ್ಮರಾಜ
ಪುರಿಯಲ್ಲಿ ಶಿಕ್ಷೆಯನ್ನನುಭವಿಸುವುದಿಲ್ಲ. ಸ್ವರ್ಗದಲ್ಲಂತೂ ಶಿಕ್ಷೆಯಿರುವುದೇ ಇಲ್ಲ. ಅಲ್ಲಿ
ಗರ್ಭವೂ ಸಹ ಮಹಲಿನ ಸಮಾನವಾಗಿರುತ್ತದೆ. ಯಾವುದೇ ದುಃಖದ ಮಾತಿಲ್ಲ. ಇಲ್ಲಂತೂ ಗರ್ಭವು ಜೈಲಿನ
ಸಮಾನವಾಗಿದೆ ಶಿಕ್ಷೆಯನ್ನನುಭವಿಸುತ್ತಾ ಇರುತ್ತಾರೆ. ನೀವು ಎಷ್ಟು ಬಾರಿ ಸ್ವರ್ಗವಾಸಿಗಳಾಗುತ್ತೀರಿ,
ಇದನ್ನು ನೆನಪು ಮಾಡಿದರೂ ಸಹ ಇಡೀ ಚಕ್ರವು ನೆನಪಿರುವುದು. ಒಂದೇ ಮಾತು ಲಕ್ಷಾಂತರ ರೂಪಾಯಿಗಳಷ್ಟು
ಬೆಲೆ ಬಾಳುವಂತದ್ದಾಗಿದೆ. ಇದನ್ನು ಮರೆತು ಹೋಗುವುದರಿಂದ, ದೇಹಾಭಿಮಾನದಲ್ಲಿ ಬರುವುದರಿಂದ ಮಾಯೆಯು
ನಷ್ಟವನ್ನುಂಟು ಮಾಡುತ್ತದೆ. ಇದೇ ಪರಿಶ್ರಮವಾಗಿದೆ. ಪರಿಶ್ರಮವಿಲ್ಲದೆ ಉತ್ತಮ ಪದವಿಯನ್ನು ಪಡೆಯಲು
ಸಾಧ್ಯವಿಲ್ಲ. ಬಾಬಾ, ನಾವು ಅವಿದ್ಯಾವಂತರಾಗಿದ್ದೇವೆ, ನಾವು ಏನನ್ನೂ ತಿಳಿದುಕೋಂಡಿಲ್ಲ ಎಂದು
ತಂದೆಗೆ ಹೇಳುತ್ತಾರೆ. ತಂದೆಯಂತೂ ಇನ್ನೂ ಖುಷಿ ಪಡುತ್ತಾರೆ. ಏಕೆಂದರೆ ಇಲ್ಲಿ ಓದಿರುವುದೆಲ್ಲವನ್ನೂ
ಮರೆಯಬೇಕಾಗಿದೆ. ಇಲ್ಲಿ ಸ್ವಲ್ಪ ಸಮಯಕ್ಕಾಗಿ ಶರೀರ ನಿರ್ವಹಣೆಗಾಗಿ ಓದಬೇಕಾಗಿದೆ. ಇದೆಲ್ಲವೂ
ಸಮಾಪ್ತಿಯಾಗಲಿದೆ ಎಂಬುದನ್ನು ತಿಳಿದುಕೊಂಡಿದ್ದೀರಲ್ಲವೆ. ಎಷ್ಟು ಸಾಧ್ಯವೋ ಅಷ್ಟು ತಂದೆಯನ್ನು
ನೆನಪು ಮಾಡಬೇಕಾಗಿದೆ. ಮತ್ತು ತುಂಡು ರೊಟ್ಟಿಯನ್ನಾದರೂ ಖುಷಿಯಿಂದ ತಿನ್ನಬೇಕಾಗಿದೆ. ಈ ಸಮಯದಲ್ಲಿ
ಬಡತನವೇ ವಾಹ್! ಆರಾಮವಾಗಿ ತುಂಡುರೊಟ್ಟಿಯನ್ನು ತಿನ್ನಬೇಕಾಗಿದೆ, ಲಾಲಸೆಯಿಂದಲ್ಲ. ಈಗಂತೂ
ಆಹಾರವೆಲ್ಲಿ ಸಿಗುತ್ತಿದೆ! ಸಕ್ಕರೆ ಇತ್ಯಾದಿಯೂ ಸಹ ದಿನ ಕಳೆದಂತೆ ಸಿಗುವುದೇ ಇಲ್ಲ. ನೀವು
ಸರ್ವೀಸ್ ಮಾಡುತ್ತೀರಿ. ಆದ್ದರಿಂದ ನಿಮಗೆ ಸರ್ಕಾರವು ಕೊಡುವುದೆಂದಲ್ಲ. ಅವರಿಗಂತೂ ಏನೂ
ತಿಳಿದಿಲ್ಲ. ಹಾ! ಮಕ್ಕಳಿಗೆ ಹೇಳಲಾಗುತ್ತದೆ - ನಾವೆಲ್ಲರೂ ಸೇರಿ ತಂದೆ-ತಾಯಿಯ ಬಳಿಗೆ ಹೋಗುತ್ತೇವೆ.
ಅವರಿಗೆ ಮಕ್ಕಳಿಗಾಗಿ ಟೋಲಿಯನ್ನು ಕಳುಹಿಸಬೇಕಾಗಿದೆ ಎಂದು ಸರ್ಕಾರದವರಿಗೆ ತಿಳಿಸಿ. ಇಲ್ಲಂತೂ
ಸರ್ಕಾರದವರು ತಮ್ಮ ಬಳಿ ಇಲ್ಲವೇ ಇಲ್ಲವೆಂದು ನೇರವಾಗಿ ಹೇಳಿ ಬಿಡುತ್ತಾರೆ. ಅಲ್ಪ ಸ್ವಲ್ಪವನ್ನು
ಕೊಡುತ್ತಾರೆ. ಹೇಗೆ ಯಾರಾದರೂ ಭಿಕ್ಷುಕರಾಗಿದ್ದರೆ ಸಾಹುಕಾರರು ಅವರಿಗೆ ಕೈತುಂಬಿ ಕೊಡುತ್ತಾರೆ,
ಬಡವರಾಗಿದ್ದರೆ ಅಲ್ಪಸ್ವಲ್ಪ ಕೊಡುತ್ತಾರೆ. ಸಕ್ಕರೆ ಮೊದಲಾದ ಪದಾರ್ಥಗಳೆಲ್ಲವೂ ಬರಲು ಸಾಧ್ಯತೆಯಿದೆ.
ಆದರೆ ಮಕ್ಕಳ ಯೋಗವು ಕಡಿಮೆಯಾಗಿ ಬಿಡುತ್ತದೆ. ನೆನಪಿಲ್ಲದ ಕಾರಣ ದೇಹಾಭಿಮಾನದಲ್ಲಿ ಬರುವ ಕಾರಣ
ಯಾವುದೇ ಕೆಲಸವು ಆಗುವುದಿಲ್ಲ. ಈ ಕೆಲಸವು ಎಷ್ಟು ಯೋಗದಿಂದಾಗುವುದೋ ಅಷ್ಟು
ವಿದ್ಯೆಯಿಂದಾಗುವುದಿಲ್ಲ. ಆದರೆ ಅದು ಬಹಳ ಕಡಿಮೆಯಿದೆ, ಮಾಯೆಯು ನೆನಪನ್ನು ಮರೆಸುತ್ತದೆ.
ಶಕ್ತಿಶಾಲಿಗಳನ್ನು ಇನ್ನೂ ಚೆನ್ನಾಗಿ ಹಿಡಿದುಕೊಳ್ಳುತ್ತದೆ. ಒಳ್ಳೊಳ್ಳೆಯ ಮಕ್ಕಳ ಮೇಲೂ
ಗ್ರಹಚಾರಿಯು ಕುಳಿತುಕೊಳ್ಳುತ್ತದೆ. ಗ್ರಹಚಾರಿಯು ಕುಳಿತುಕೊಳ್ಳಲು ಮುಖ್ಯ ಕಾರಣ ಯೋಗದ
ಕೊರತೆಯಾಗಿದೆ. ಗ್ರಹಚಾರದ ಕಾರಣವೇ ನಾಮ-ರೂಪದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಇದು ಬಹಳ ದೊಡ್ಡ
ಗುರಿಯಾಗಿದೆ. ಒಂದುವೇಳೆ ಸತ್ಯವಾದ ಗುರಿಯನ್ನು ಮುಟ್ಟಬೇಕೆಂದರೆ ನೆನಪಿನಲ್ಲಿರಬೇಕಾಗುವುದು.
ತಂದೆಯು ತಿಳಿಸುತ್ತಾರೆ - ಧ್ಯಾನಕ್ಕಿಂತಲೂ ಜ್ಞಾನವು ಒಳ್ಳೆಯದಾಗಿದೆ. ಜ್ಞಾನಕ್ಕಿಂತಲೂ ನೆನಪು
ಒಳ್ಳೆಯದಾಗಿದೆ. ಧ್ಯಾನದಲ್ಲಿ ಹೆಚ್ಚು ಹೋದರೆ ಮಾಯೆಯ ಭೂತಗಳ ಪ್ರವೇಶತೆಯಾಗಿ ಬಿಡುತ್ತದೆ. ಹೀಗೆ
ಅನೇಕರಿದ್ದಾರೆ, ವ್ಯರ್ಥವಾಗಿ ಧ್ಯಾನದಲ್ಲಿ ಹೊರಟು ಹೋಗುತ್ತಾರೆ. ಏನೇನನ್ನೋ ಮಾತನಾಡುತ್ತಾರೆ.
ಅದರ ಮೇಲೆ ವಿಶ್ವಾಸವನ್ನಿಡಬಾರದು. ಜ್ಞಾನವಂತೂ ತಂದೆಯ ಮುರುಳಿಯಲ್ಲಿ ಸಿಗುತ್ತಿತ್ತಲ್ಲವೆ. ತಂದೆಯು
ಎಚ್ಚರಿಕೆ ನೀಡುತ್ತಾರೆ. ಧ್ಯಾನವು ಯಾವುದೇ ಪ್ರಯೋಜನಕ್ಕಿಲ್ಲ. ಮಾಯೆಯು ಬಹಳಷ್ಟು ಪ್ರವೇಶತೆಯಾಗಿ
ಬಿಡುತ್ತದೆ, ಅಹಂಕಾರವು ಬಂದು ಬಿಡುತ್ತದೆ. ಜ್ಞಾನವಂತೂ ಎಲ್ಲರಿಗೂ ಸಿಗುತ್ತಿರುತ್ತದೆ.
ಜ್ಞಾನವನ್ನು ಕೊಡುವವರು ಶಿವ ತಂದೆಯಾಗಿದ್ದಾರೆ, ಮಮ್ಮಾರವರಿಗೂ ಜ್ಞಾನವು ಇಲ್ಲಿಂದಲೇ
ಸಿಗುತ್ತಿರುತ್ತದೆ. ಅವರಿಗೂ ತಂದೆಯು ತಿಳಿಸುತ್ತಾರೆ - ಮನ್ಮನಾಭವ. ತಂದೆಯನ್ನು ನೆನಪು ಮಾಡಿ,
ದೈವೀ ಗುಣಗಳನ್ನು ಧಾರಣೆ ಮಾಡಿ. ತಮ್ಮನ್ನು ನೋಡಿಕೊಳ್ಳಿ - ನಾನು ದೈವೀ ಗುಣಗಳನ್ನು ಧಾರಣೆ
ಮಾಡುತ್ತೇನೆಯೇ? ಇಲ್ಲಿಯೇ ದೈವೀ ಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಕೆಲವರನ್ನು ನೋಡಿ, ಎಷ್ಟು
ಒಳ್ಳೆಯ ಸ್ಥಿತಿಯನ್ನು ಇಟ್ಟುಕೊಂಡಿದ್ದಾರೆ! ಖುಷಿ-ಖುಷಿಯಿಂದ ಕೆಲಸ ಮಾಡುತ್ತಾರೆ! ಒಂದು ಗಂಟೆಯ
ನಂತರ ಕ್ರೋಧದ ಭೂತವು ಬಂದಿತೆಂದರೆ ಸಮಾಪ್ತಿ. ನಂತರ ನಾವು ತಪ್ಪು ಮಾಡಿದೆವೆಂದು ಸ್ಮೃತಿಗೆ
ಬರುತ್ತದೆ ಮತ್ತೆ ಸುಧಾರಣೆಯಾಗುತ್ತಾರೆ. ಗಳಿಗೆ-ಗಳಿಗೆಯ ಗಡಿಯಾರಗಳು ತಂದೆಯ ಬಳಿ ಬಹಳಷ್ಟು
ಮಂದಿಯಿದ್ದಾರೆ. ಈಗೀಗ ನೋಡಿದರೆ ಬಹಳ ಮಧುರರಾಗಿರುತ್ತಾರೆ. ಇಂತಹ ಮಕ್ಕಳ ಮೇಲೆ
ಬಲಿಹಾರಿಯಾಗುವೆವೆಂದು ತಂದೆಯು ಹೇಳುತ್ತಾರೆ ಮತ್ತೆ ಒಂದು ಗಂಟೆಯ ನಂತರ ಯಾವುದಾದರೊಂದು ಮಾತಿನಲ್ಲಿ
ಮುನಿಸಿಕೊಳ್ಳುತ್ತಾರೆ. ಕ್ರೋಧವು ಬಂದಿತೆಂದರೆ ಇಡೀ ಸಂಪಾದನೆಯೆಲ್ಲವೂ ಸಮಾಪ್ತಿಯಾಗುವುದು. ಈಗೀಗ
ಸಂಪಾದನೆ, ಈಗೀಗ ನಷ್ಟವಾಗಿ ಬಿಡುತ್ತದೆ. ಎಲ್ಲವೂ ನೆನಪಿನ ಮೇಲೆ ಆಧಾರಿತವಾಗಿದೆ. ಜ್ಞಾನವು ಬಹಳ
ಸಹಜವಾಗಿದೆ. ಚಿಕ್ಕ ಮಕ್ಕಳೂ ಸಹ ತಿಳಿಸುವರು ಆದರೆ ನಾನು ಯಾರಾಗಿದ್ದೇನೆ, ಹೇಗಿದ್ದೇನೆ, ಯಥಾರ್ಥ
ರೀತಿಯಿಂದ ಅರಿತುಕೊಳ್ಳಬೇಕಾಗಿದೆ. ತಮ್ಮನ್ನು ಆತ್ಮನೆಂದು ತಿಳಿಯಬೇಕು. ಈ ರೀತಿ ಚಿಕ್ಕ ಮಕ್ಕಳು
ನೆನಪು ಮಾಡಲು ಸಾಧ್ಯವಿಲ್ಲ. ಮನುಷ್ಯರಿಗೆ ಸಾಯುವ ಸಮಯದಲ್ಲಿ ಭಗವಂತನನ್ನು ನೆನಪು ಮಾಡಿ ಎಂದು
ಹೇಳಲಾಗುತ್ತದೆ. ಆದರೆ ನೆನಪು ಮಾಡಲು ಸಾಧ್ಯವಾಗುವುದಿಲ್ಲ, ಏಕೆಂದರೆ ಯಥಾರ್ಥವಾಗಿ ಯಾರೂ
ತಿಳಿದುಕೊಂಡಿಲ್ಲ. ಯಾರೂ ಹಿಂತಿರುಗಿ ಹೋಗುವುದಕ್ಕೆ ಸಾಧ್ಯವಿಲ್ಲ, ವಿಕರ್ಮಗಳೂ
ವಿನಾಶವಾಗುವುದಿಲ್ಲ. ಪರಂಪರೆಯಿಂದ ಋಷಿ-ಮುನಿ ಮೊದಲಾದವರೆಲ್ಲರೂ ಸಹ ನಾವು ರಚಯಿತ ಮತ್ತು
ರಚನೆಯನ್ನು ಅರಿತುಕೊಂಡಿಲ್ಲವೆಂದು ಹೇಳುತ್ತಾರಲ್ಲವೆ. ಅವರಂತೂ ಸತೋಗುಣಿಯಾಗಿದ್ದರು, ಅಂದಮೇಲೆ
ಈಗಿನ ತಮೋಪ್ರಧಾನ ಬುದ್ಧಿಯವರು ಹೇಗೆ ಅರಿತುಕೊಳ್ಳಲು ಸಾಧ್ಯ! ತಂದೆಯು ತಿಳಿಸುತ್ತಾರೆ - ಈ
ಲಕ್ಷ್ಮೀ-ನಾರಾಯಣರೂ ಸಹ ಈ ರಚನೆಯ ಜ್ಞಾನವನ್ನು ಅರಿತುಕೊಂಡಿರುವುದಿಲ್ಲ. ಈ ರಾಜ-ರಾಣಿಯರೇ
ಅರಿತುಕೊಂಡಿಲ್ಲವೆಂದರೆ ಪ್ರಜೆಗಳು ಹೇಗೆ ಅರಿತುಕೊಳ್ಳುವರು? ಯಾರಿಗೂ ಗೊತ್ತಿಲ್ಲ. ಈಗ ಕೇವಲ ನೀವು
ಮಕ್ಕಳು ತಿಳಿದುಕೊಂಡಿದ್ದೀರಿ - ನಿಮ್ಮಲ್ಲಿಯೂ ಸಹ ಕೆಲವರು ಯಥಾರ್ಥ ರೀತಿಯಿಂದ
ಅರಿತುಕೊಳ್ಳುತ್ತಾರೆ. ಬಾಬಾ ಪದೇ-ಪದೇ ಮರೆತು ಹೋಗುತ್ತೇವೆಂದು ಹೇಳುತ್ತಾರೆ. ಇದಕ್ಕೆ ತಂದೆಯು
ತಿಳಿಸುತ್ತಾರೆ - ಎಲ್ಲಿಯಾದರೂ ಹೋಗಿ ಕೇವಲ ನನ್ನನ್ನು ನೆನಪು ಮಾಡಿ, ಬಹಳ ದೊಡ್ಡ ಸಂಪಾದನೆಯಿದೆ.
ನೀವು 21 ಜನ್ಮಗಳಿಗಾಗಿ ನಿರೋಗಿಗಳಾಗುತ್ತೀರಿ. ಇಂತಹ ತಂದೆಯನ್ನು ಅಂತರ್ಮುಖಿಯಾಗಿ ನೆನಪು
ಮಾಡಬೇಕಲ್ಲವೆ. ಆದರೆ ಮಾಯೆಯು ಮರೆಸಿ ಬಿರುಗಾಳಿಗಳಲ್ಲಿ ತೆಗೆದುಕೊಂಡು ಬರುತ್ತದೆ. ಆದ್ದರಿಂದ
ಇದರಲ್ಲಿ ಅಂತರ್ಮುಖಿಯಾಗಿ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ವಿಚಾರ ಸಾಗರ ಮಂಥನ ಮಾಡುವ ಮಾತೂ ಸಹ
ಈಗಿನದಾಗಿದೆ. ಇದು ಪುರುಷೋತ್ತಮರಾಗುವ ಸಂಗಮಯುಗವಾಗಿದೆ. ಇದೂ ಸಹ ವಿಚಿತ್ರವಾಗಿದೆ, ನೀವು ಮಕ್ಕಳು
ನೋಡಿದ್ದೀರಿ - ಒಂದೇ ಮನೆಯಲ್ಲಿ ನಾವು ಸಂಗಮಯುಗಿಯಾಗಿದ್ದೇವೆಂದು ಒಬ್ಬರು ಹೇಳಿದರೆ ಅವರು
ಅರ್ಧಾಂಗಿ ಮತ್ತು ಮಕ್ಕಳು ಕಲಿಯುಗಿಯಾಗಿರುತ್ತಾರೆ. ಎಷ್ಟೊಂದು ವ್ಯತ್ಯಾಸವಿದೆ! ಬಹಳ ಸೂಕ್ಷ್ಮವಾದ
ಮಾತನ್ನು ತಂದೆಯು ತಿಳಿಸುತ್ತಾರೆ - ಮನೆಯಲ್ಲಿದ್ದರೂ ಸಹ ಬುದ್ಧಿಯಲ್ಲಿದೆ - ನಾವು ಹೂಗಳಾಗಲು
ಪುರುಷಾರ್ಥ ಮಾಡುತ್ತಿದ್ದೇವೆ. ಇದು ಅನುಭವದ ಮಾತುಗಳಾಗಿವೆ. ಕಾರ್ಯತಃ ಪರಿಶ್ರಮ ಪಡಬೇಕಾಗಿದೆ.
ನೆನಪಿನದೇ ಪರಿಶ್ರಮವಾಗಿದೆ. ಒಂದೇ ಮನೆಯಲ್ಲಿ ಒಬ್ಬರು ಹಂಸವಾಗಿದ್ದರೆ ಇನ್ನೊಬ್ಬರು
ಕೊಕ್ಕರೆಯಂತಿರುತ್ತಾರೆ. ಕೆಲವರಂತೂ ಬಹಳ ಚೆನ್ನಾಗಿರುತ್ತಾರೆ, ಎಂದೂ ವಿಕಾರದ ವಿಚಾರವೂ
ಬರುವುದಿಲ್ಲ. ಜೊತೆಯಲ್ಲಿದ್ದರೂ ಪವಿತ್ರವಾಗಿರುತ್ತಾರೆ, ಸಾಹಸವನ್ನು ತೋರಿಸುತ್ತಾರೆ ಅಂದಮೇಲೆ
ಅವರಿಗೆ ಇಷ್ಟು ಶ್ರೇಷ್ಠ ಪದವಿಯು ಸಿಗುವುದು. ಇಂತಹ ಮಕ್ಕಳೂ ಇದ್ದಾರಲ್ಲವೆ. ಇನ್ನೂ ಕೆಲವರು ನೋಡಿ,
ವಿಕಾರಕ್ಕಾಗಿ ಎಷ್ಟೊಂದು ಜಗಳ ಮಾಡುತ್ತಾರೆ. ವಾಸ್ತವದಲ್ಲಿ ಸಂಕಲ್ಪದಲ್ಲಿಯೂ ಸಹ ಎಂದೂ
ಅಪವಿತ್ರರಾಗುವ ಸಂಕಲ್ಪವು ಬರಬಾರದು. ಅಂತಹ ಸ್ಥಿತಿಯಿರಬೇಕು. ತಂದೆಯು ಪ್ರತಿಯೊಂದು ಪ್ರಕಾರದಿಂದ
ಸಲಹೆಯನ್ನು ಕೊಡುತ್ತಿರುತ್ತಾರೆ. ನಿಮಗೆ ತಿಳಿದಿದೆ – ಶ್ರೇಷ್ಠಾತಿ ಶ್ರೇಷ್ಠ ತಂದೆಯ ಮತದಿಂದ ಶ್ರೀ
ಲಕ್ಷ್ಮೀ-ಶ್ರೀ ನಾರಾಯಣರಾಗುತ್ತೇವೆ, ಶ್ರೀ ಎಂದರೆ ಶ್ರೇಷ್ಠ. ಸತ್ಯಯುಗದಲ್ಲಿ ನಂಬರ್ವನ್
ಶ್ರೇಷ್ಠರಿರುತ್ತಾರೆ. ತ್ರೇತಾಯುಗದಲ್ಲಿ ಎರಡು ಕಲೆಗಳು ಕಡಿಮೆಯಾಗುತ್ತವೆ. ಈ ಜ್ಞಾನವು ನೀವು
ಮಕ್ಕಳಿಗೆ ಈಗಲೇ ಸಿಗುವುದು.
ಈ ಈಶ್ವರೀಯ ಸಭೆಯ ನಿಯಮವಾಗಿದೆ - ಯಾರಿಗೆ ಜ್ಞಾನರತ್ನಗಳ ಬೆಲೆಯಿದೆಯೋ ಅವರೆಂದೂ ಆಕಳಿಸುವುದಿಲ್ಲ.
ಅಂತಹವರು ಮುಂದೆ ಕುಳಿತುಕೊಳ್ಳಬೇಕು. ಕೆಲವು ಮಕ್ಕಳಂತೂ ತಂದೆಯ ಸನ್ಮುಖದಲ್ಲಿ ಕುಳಿತುಕೊಂಡಿದ್ದರೂ
ತೂಕಡಿಸುತ್ತಾರೆ, ಆಕಳಿಸುತ್ತಿರುತ್ತಾರೆ. ಇದು ಮಕ್ಕಳ ಈಶ್ವರೀಯ ಸಭೆಯಾಗಿದೆ ಆದರೆ ಕೆಲವು
ಬ್ರಾಹ್ಮಿಣಿಯರು ಇಂತಿಂತಹವರನ್ನು ಕರೆ ತರುತ್ತಾರೆ, ಹಾಗೆ ನೋಡಿದರೆ ತಂದೆಯಿಂದ ಧನವು ಸಿಗುತ್ತದೆ.
ಒಂದೊಂದು ಮಹಾವಾಕ್ಯವು ಲಕ್ಷಾಂತರ ರೂಪಾಯಿಗಳಷ್ಟು ಅಮೂಲ್ಯವಾಗಿದೆ. ನೀವು ತಿಳಿದುಕೊಂಡಿದ್ದೀರಿ -
ಜ್ಞಾನವು ಸಂಗಮಯುಗದಲ್ಲಿಯೇ ಸಿಗುತ್ತದೆ. ನಾವು ಪುನಃ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆಯಲು
ಬಂದಿದ್ದೇವೆಂದು ನೀವು ಹೇಳುತ್ತೀರಿ. ಮಧುರಾತಿ ಮಧುರ ಮಕ್ಕಳಿಗೆ ತಂದೆಯು ಮತ್ತೆ-ಮತ್ತೆ
ತಿಳಿಸುತ್ತಾರೆ - ಇದು ಛೀ ಛೀ ಪ್ರಪಂಚವಾಗಿದೆ, ನಿಮ್ಮದು ಬೇಹದ್ದಿನ ವೈರಾಗ್ಯವಾಗಿದೆ. ಈ
ಪ್ರಪಂಚದಲ್ಲಿ ನೀವು ಏನೆಲ್ಲವನ್ನೂ ನೋಡುವಿರೋ ಅದು ನಾಳೆಯಿರುವುದಿಲ್ಲ. ಮಂದಿರ ಮೊದಲಾದವುಗಳು
ಹೆಸರು-ಗುರುತೂ ಸಹ ಉಳಿಯುವುದಿಲ್ಲ. ಸ್ವರ್ಗದಲ್ಲಿ ಅವರಿಗೆ ಹಳೆಯ ವಸ್ತುವನ್ನು ನೋಡುವ ಅವಶ್ಯಕತೆಯೇ
ಇರುವುದಿಲ್ಲ. ಇಲ್ಲಂತೂ ಹಳೆಯ ವಸ್ತುವಿಗೆ ಎಷ್ಟೊಂದು ಮೌಲ್ಯವಿದೆ, ವಾಸ್ತವದಲ್ಲಿ ಒಬ್ಬ ತಂದೆಯ
ವಿನಃ ಮತ್ತ್ಯಾವುದೇ ವಸ್ತುವಿಗೆ ಮೌಲ್ಯವಿಲ್ಲ. ತಂದೆಯು ಹೇಳುತ್ತಾರೆ - ನಾನು ಬರದೇ ಹೋಗಿದ್ದರೆ
ನೀವು ರಾಜ್ಯ ಪದವಿಯನ್ನು ಹೇಗೆ ತೆಗೆದುಕೊಳ್ಳುವಿರಿ? ಯಾರಿಗೆ ತಿಳಿದಿದೆಯೋ ಅವರೇ ಬಂದು ತಂದೆಯಿಂದ
ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ಆದ್ದರಿಂದ ಕೋಟಿಯಲ್ಲಿ ಕೆಲವರು ಎಂದು ಹೇಳಲಾಗುತ್ತದೆ.
ಯಾವುದೇ ಮಾತಿನಲ್ಲಿ ಸಂಶಯವು ಬರಬಾರದು. ಭೋಗ ಮೊದಲಾದುದರ ರೀತಿ-ಪದ್ಧತಿಯಿದೆ. ಇದರೊಂದಿಗೆ ಜ್ಞಾನ
ಮತ್ತು ಯೋಗದ ಯಾವುದೇ ಸಂಬಂಧವಿಲ್ಲ. ಮತ್ತ್ಯಾವುದೇ ಮಾತಿನೊಂದಿಗೆ ನಿಮಗೆ ಸಂಬಂಧವಿಲ್ಲ. ಕೇವಲ ಎರಡು
ಮಾತುಗಳಿವೆ - ತಂದೆ ಮತ್ತು ಆಸ್ತಿ. ಅಲ್ಫ್ ಎಂದು ಭಗವಂತನಿಗೆ ಹೇಳಲಾಗುತ್ತದೆ. ಬೆರಳಿನಿಂದಲೂ ಮೇಲೆ
ತೋರಿಸುತ್ತಾರೆ. ಆತ್ಮವು ಹೀಗೆ ಸನ್ನೆ ಮಾಡುತ್ತದೆಯಲ್ಲವೆ. ತಂದೆಯು ತಿಳಿಸುತ್ತಾರೆ -
ಭಕ್ತಿಮಾರ್ಗದಲ್ಲಿ ನೀವೇ ನನ್ನನ್ನು ನೆನಪು ಮಾಡುತ್ತೀರಿ. ನೀವೆಲ್ಲರೂ ನನ್ನ
ಪ್ರಿಯತಮೆಯರಾಗಿದ್ದೀರಿ. ಇದೂ ಸಹ ನಿಮಗೆ ತಿಳಿದಿದೆ. ತಂದೆಯು ಕಲ್ಪ-ಕಲ್ಪವೂ ಬಂದು ಎಲ್ಲಾ ಮನುಷ್ಯ
ಮಾತ್ರರನ್ನು ದುಃಖದಿಂದ ಬಿಡಿಸಿ ಶಾಂತಿ ಮತ್ತು ಸುಖವನ್ನು ಕೊಡುತ್ತಾರೆ. ಆದ್ದರಿಂದ ತಂದೆಯು
ತಿಳಿಸಿದ್ದರು - ಇದನ್ನು ಬೋರ್ಡಿನ ಮೇಲೆ ಬರೆಯಿರಿ - ಬೇಹದ್ದಿನ ತಂದೆಯು ವಿಶ್ವದಲ್ಲಿ ಶಾಂತಿಯನ್ನು
ಹೇಗೆ ಸ್ಥಾಪನೆ ಮಾಡುತ್ತಿದ್ದಾರೆ ಎಂಬುದನ್ನು ಬಂದು ತಿಳಿದುಕೊಳ್ಳಿ. ಒಂದು ಸೆಕೆಂಡಿನಲ್ಲಿ 21
ಜನ್ಮಗಳಿಗಾಗಿ ವಿಶ್ವದ ಮಾಲೀಕರಾಗಬೇಕೆಂದರೆ ಬಂದು ತಿಳಿದುಕೊಳ್ಳಿ. ಮನೆಯಲ್ಲಿ ಈ ಬೋರ್ಡನ್ನು
ಹಾಕಿರಿ. ಮೂರು ಹೆಜ್ಜೆಗಳ ಪೃಥ್ವಿಯ ಮೇಲೆ ನೀವು ದೊಡ್ಡದಕ್ಕಿಂತ ದೊಡ್ಡ ಆಸ್ಪತ್ರೆ ಮತ್ತು ವಿಶ್ವ
ವಿದ್ಯಾಲಯವನ್ನು ತೆರೆಯಬಹುದು. ನೆನಪಿನಿಂದ 21 ಜನ್ಮಗಳಿಗಾಗಿ ನಿರೋಗಿಗಳು ಮತ್ತು ವಿದ್ಯೆಯಿಂದ
ಸ್ವರ್ಗದ ರಾಜ್ಯಭಾಗ್ಯವು ಸಿಗುತ್ತದೆ. ನಾವು ಸ್ವರ್ಗದ ಮಾಲೀಕರೆಂದು ಪ್ರಜೆಗಳೂ ಸಹ ಹೇಳುತ್ತಾರೆ -
ಇಂದಿನ ಮನುಷ್ಯರಿಗೆ ಸಂಕೋಚವಾಗುತ್ತದೆ ಏಕೆಂದರೆ ನರಕವಾಸಿಗಳಾಗಿದ್ದಾರೆ. ನಮ್ಮ ತಂದೆಯು
ಸ್ವರ್ಗಸ್ಥರಾದರೆಂದು ತಾವೇ ಹೇಳುತ್ತಾರೆ ಅಂದಮೇಲೆ ನರಕವಾಸಿಗಳಾಗಿದ್ದಾರಲ್ಲವೆ. ಅಂದಮೇಲೆ
ಸತ್ತಾಗಲೇ ಸ್ವರ್ಗದಲ್ಲಿ ಹೋಗುವವರು ಎಂದಾಯಿತಲ್ಲವೆ. ಎಷ್ಟು ಸಹಜ ಮಾತಾಗಿದೆ! ಒಳ್ಳೆಯ
ಕಾರ್ಯಗಳನ್ನು ಮಾಡುವವರಿಗೆ ವಿಶೇಷವಾಗಿ ಇವರು ಮಹಾದಾನಿಯಾಗಿದ್ದರು. ಈಗ ಸ್ವರ್ಗಸ್ಥರಾದರೆಂದು
ಹೇಳುತ್ತಾರೆ ಆದರೆ ಯಾರೂ ಸ್ವರ್ಗದಲ್ಲಿ ಹೋಗುವುದಿಲ್ಲ. ನಾಟಕವು ಪೂರ್ಣವಾದಾಗ ಎಲ್ಲರೂ ಸ್ಟೇಜಿನ
ಮೇಲೆ ಬಂದು ನಿಲ್ಲುತ್ತಾರೆ. ಯಾವಾಗ ಎಲ್ಲಾ ಪಾತ್ರಧಾರಿಗಳು ಎಲ್ಲಿ ಬಂದು ಬಿಡುವರೋ ಆಗ
ಯುದ್ಧವಾಗುವುದು ನಂತರ ಎಲ್ಲರೂ ಹಿಂದಿರುಗುತ್ತಾರೆ. ಶಿವನ ಮೆರವಣಿಗೆ ಎಂದು ಹೇಳುತ್ತಾರಲ್ಲವೆ.
ಶಿವ ತಂದೆಯ ಜೊತೆ ಎಲ್ಲಾ ಆತ್ಮಗಳೂ ಹೋಗುವರು. ಮೂಲ ಮಾತು ಈಗ ನಿಮ್ಮ 84 ಜನ್ಮಗಳು ಪೂರ್ಣವಾಯಿತು,
ಈಗ ನೀವು ಹಳೆಯ ವಸ್ತ್ರವನ್ನು ಬಿಡಬೇಕಾಗಿದೆ. ಹೇಗೆ ಸರ್ಪವು ಹಳೆಯ ಪೊರೆಯನ್ನು ಬಿಟ್ಟು ಹೊಸದನ್ನು
ತೆಗೆದುಕೊಳ್ಳುತ್ತದೆ. ನೀವು ಹೊಸ ಪೊರೆಯನ್ನು ಸತ್ಯಯುಗದಲ್ಲಿ ತೆಗೆದುಕೊಳ್ಳುವಿರಿ. ಶ್ರೀಕೃಷ್ಣನು
ಎಷ್ಟು ಸುಂದರವಾಗಿದ್ದಾನೆ, ಅವನಲ್ಲಿ ಎಷ್ಟೊಂದು ಆಕರ್ಷಣೆಯಿದೆ. ಶರೀರವು ಫಸ್ಟ್ಕ್ಲಾಸ್ ಆಗಿದೆ.
ನಾವು ಈ ರೀತಿಯ ಶರೀರವನ್ನು ತೆಗೆದುಕೊಳ್ಳುತ್ತೇವೆ. ನಾನಂತೂ ನಾರಾಯಣನಾಗುತ್ತೇನೆಂದು
ಹೇಳುತ್ತಾರಲ್ಲವೆ. ಈಗಂತೂ ಇದು ಹರಿದು ಹೋಗಿರುವ ಪತಿತ ಪೋರೆ (ವಸ್ತ್ರ) ಯಾಗಿದೆ. ನಾವು ಇದನ್ನು
ಬಿಟ್ಟು ಹೊಸ ಪ್ರಪಂಚದಲ್ಲಿ ಹೋಗುತ್ತೇವೆ. ಇದನ್ನು ನೆನಪು ಮಾಡುತ್ತಾ-ಮಾಡುತ್ತಾ ನಿಮಗೆ ಏಕೆ
ಖುಷಿಯಾಗುವುದಿಲ್ಲ? ಯಾವಾಗ ನಾವು ನರನಿಂದ ನಾರಾಯಣನಾಗುತ್ತೇವೆಂದು ನೀವು ಹೇಳುತ್ತೀರಿ. ಈ ಸತ್ಯ
ನಾರಾಯಣನ ಕಥೆಯನ್ನು ಬಹಳ ಚೆನ್ನಾಗಿ ತಿಳಿದುಕೊಳ್ಳಿ ಯಾವುದನ್ನು ಹೇಳುತ್ತೀರೋ ಅದನ್ನು ಮಾಡಿ
ತೋರಿಸಿ. ಹೇಳುವುದು, ಮಾಡುವುದು ಒಂದೇ ಆಗಿರಬೇಕು. ಭಲೆ ವ್ಯವಹಾರಗಳನ್ನೂ ಮಾಡಿ. ತಂದೆಯು
ತಿಳಿಸುತ್ತಾರೆ – ಕೈ ಕೆಲಸ ಮಾಡುತ್ತಿರಲಿ, ಬುದ್ಧಿಯು ತಂದೆಯನ್ನು ನೆನಪು ಮಾಡುತ್ತಿರಲಿ.
ಎಷ್ಟೆಷ್ಟು ಧಾರಣೆ ಮಾಡುತ್ತೀರೋ ಅಷ್ಟು ನಿಮ್ಮ ಬಳಿ ಜ್ಞಾನದ ಬೆಲೆಯು ಹೆಚ್ಚುತ್ತಾ ಹೋಗುವುದು.
ಜ್ಞಾನದ ಧಾರಣೆಯಿಂದ ನೀವು ಎಷ್ಟೊಂದು ಧನವಂತರಾಗುತ್ತೀರಿ. ಇದು ಆತ್ಮಿಕ ಜ್ಞಾನವಾಗಿದೆ, ನೀವು
ಆತ್ಮವಾಗಿದ್ದೀರಿ. ಆತ್ಮವೇ ಶರೀರದಿಂದ ಮಾತನಾಡುತ್ತದೆ, ಆತ್ಮವೇ ಜ್ಞಾನವನ್ನು ಕೊಡುತ್ತದೆ. ಆತ್ಮವೇ
ಧಾರಣೆ ಮಾಡುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ನಮಸ್ತೆ. ಅತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1) ಈ ಹಳೆಯ
ಪ್ರಪಂಚದ ಹಳೆಯ ವಸ್ತುಗಳನ್ನು ನೋಡಿಯೂ ನೋಡದಂತಿರಬೇಕಾಗಿದೆ. ನರನಿಂದ ನಾರಾಯಣರಾಗಲು ಹೇಳುವುದು,
ಮಾಡುವುದು ಎರಡಲ್ಲಿ ಒಂದೇ ಆಗಿರಬೇಕು.
2) ಅವಿನಾಶಿ
ಜ್ಞಾನರತ್ನಗಳ ಪ್ರತಿ ಬೆಲೆಯನ್ನಿಡಬೇಕಾಗಿದೆ. ಇದು ಬಹಳ ದೊಡ್ಡ ಸಂಪಾದನೆಯಾಗಿದೆ. ಇದರಲ್ಲಿ ಆಕಳಿಕೆ
ಅಥವಾ ತೂಕಡಿಕೆ ಬರಬಾರದು. ನಾಮರೂಪದ ಗ್ರಹಚಾರದಿಂದ ಪಾರಾಗಲು ನೆನಪಿನಲ್ಲಿರುವ ಪುರುಷಾರ್ಥ
ಮಾಡಬೇಕಾಗಿದೆ.
ವರದಾನ:
ಸಾಥಿ ಮತ್ತು
ಸಾಕ್ಷೀತನದ ಅನುಭವದ ಮುಖಾಂತರ ಸಫಲತಾ ಮೂರ್ತಿ ಭವ.
ಯಾವ ಮಕ್ಕಳು ಸದಾ ತಂದೆಯ
ಜೊತೆಯಿರುತ್ತಾರೆ ಅವರು ಸ್ವತಃವಾಗಿ ಸಾಕ್ಷಿಯಾಗಿ ಬಿಡುತ್ತಾರೆ ಏಕೆಂದರೆ ತಂದೆ ಸ್ವಯಂ
ಸಾಕ್ಷಿಯಾಗಿರುತ್ತಾ ಪಾತ್ರ ಮಾಡುತ್ತಾರೆ ಅಂದಾಗ ಅವರ ಜೊತೆ ಇರುವವರೂ ಸಹ ಸಾಕ್ಷಿಯಾಗಿರುತ್ತಾ
ಪಾತ್ರ ಮಾಡುತ್ತಾರೆ ಮತ್ತು ಯಾರ ಜೊತೆಗಾರ ಸ್ವಯಂ ಸರ್ವ ಶಕ್ತಿವಾನ್ ತಂದೆಯಾಗಿದ್ದಾರೆ ಅವರು
ಸ್ವತಃವಾಗಿ ಸಫಲತಾ ಮೂರ್ತಿಗಳಾಗಿ ಬಿಡುತ್ತಾರೆ. ಭಕ್ತಿ ಮಾರ್ಗದಲ್ಲಂತೂ ಕರೆಯುತ್ತಾರೆ ಸ್ವಲ್ಪ
ಸಮಯಕ್ಕೆ ಜೊತೆಯ ಅನುಭವ ಮಾಡಿಸಿ, ನೋಟ ತೋರಿಸಿ ಆದರೆ ನೀವು ಸರ್ವ ಸಂಬಂಧಗಳಿಂದ ಜೊತೆಗಾರರಾಗಿ
ಬಿಟ್ಟಿರಿ - ಆದ್ದರಿಂದ ಇದೇ ಖುಷಿ ಮತ್ತು ನಶೆಯಲ್ಲಿರಿ ಏನು ಪಡೆಯ ಬೇಕೊ ಅದನ್ನು ಪಡೆದು ಬಿಟ್ಟೆನು.
ಸ್ಲೋಗನ್:
ವ್ಯರ್ಥ ಸಂಕಲ್ಪಗಳ
ನಿಶಾನಿಯಾಗಿದೆ - ಮನಸ್ಸು ಉದಾಸ ಮತ್ತು ಖುಷಿ ಕಾಣದಾಗುವುದು.