30.06.20 Morning Kannada Murli Om Shanti
BapDada Madhuban
ಮಧುರ ಮಕ್ಕಳೇ - ನೀವೀಗ
ಪೂಜಾರಿಗಳಿಂದ ಪೂಜ್ಯರಾಗುತ್ತಿದ್ದೀರಿ, ಪೂಜ್ಯ ತಂದೆಯು ನಿಮ್ಮನ್ನು ತನ್ನ ಸಮಾನ ಪೂಜ್ಯರನ್ನಾಗಿ
ಮಾಡಲು ಬಂದಿದ್ದಾರೆ.
ಪ್ರಶ್ನೆ:
ನೀವು ಮಕ್ಕಳಲ್ಲಿ
ಯಾವ ದೃಢ ವಿಶ್ವಾಸವಿದೆ?
ಉತ್ತರ:
ನಿಮಗೆ ದೃಢ ವಿಶ್ವಾಸವಿದೆ - ನಾವು ಜೀವಿಸಿದ್ದಂತೆಯೇ ತಂದೆಯಿಂದ ಪೂರ್ಣ ಆಸ್ತಿಯನ್ನು
ತೆಗೆದುಕೊಳ್ಳುತ್ತೇವೆ. ತಂದೆಯ ನೆನಪಿನಲ್ಲಿ ಈ ಹಳೆಯ ಶರೀರವನ್ನು ಬಿಟ್ಟು ತಂದೆಯ ಜೊತೆ
ಹೋಗುತ್ತೇವೆ. ತಂದೆಯು ನಮಗೆ ಮನೆಯ ಸಹಜ ಮಾರ್ಗವನ್ನು ತಿಳಿಸುತ್ತಿದ್ದಾರೆ.
ಗೀತೆ:
ಓಂ ನಮಃ ಶಿವಾಯ.........
ಓಂ ಶಾಂತಿ.
ಅನೇಕ ಮನುಷ್ಯರು ಓಂ ಶಾಂತಿಯೆಂದು ಹೇಳುತ್ತಾರೆ, ಮಕ್ಕಳೂ ಸಹ ಹೇಳುತ್ತೀರಿ. ಒಳಗಿರುವ ಆತ್ಮವು ಓಂ
ಶಾಂತಿ ಎಂದು ಹೇಳುತ್ತದೆ. ಆದರೆ ಆತ್ಮರು ತನ್ನನ್ನಾಗಲಿ, ತಂದೆಯನ್ನಾಗಲಿ ಯಥಾರ್ಥವಾಗಿ ಯಾರೂ
ತಿಳಿದುಕೊಂಡಿಲ್ಲ. ಭಲೆ ಕೂಗುತ್ತಾರೆ, ಆದರೆ ತಂದೆಯು ತಿಳಿಸುತ್ತಾರೆ - ನಾನು ಯಾರಾಗಿದ್ದೇನೆ,
ಹೇಗಿದ್ದೇನೆಯೋ ಹಾಗೆಯೇ ಯಥಾರ್ಥವಾಗಿ ತಿಳಿದುಕೊಂಡಿರಲಿಲ್ಲ. ನಾನು ಯಾರು? ಎಲ್ಲಿಂದ ಬಂದಿದ್ದೇನೆ?
ಎಂಬುದನ್ನು ನೀವೂ ಸಹ ತನ್ನ ಬಗ್ಗೆ ತಾವೇ ತಿಳಿದುಕೊಂಡಿಲ್ಲ. ಆತ್ಮವು ಪುರುಷನಲ್ಲವೆ. ಮಗನಾಗಿದೆ,
ಪರಮಾತ್ಮನು ತಂದೆಯಾಗಿದ್ದಾರೆ ಅಂದಮೇಲೆ ಆತ್ಮಗಳೆಲ್ಲರೂ ಪರಸ್ಪರ ಸಹೋದರರಾದರು ಮತ್ತೆ ಶರೀರದಲ್ಲಿ
ಬರುವ ಕಾರಣ ಕೆಲವರಿಗೆ ಸ್ತ್ರೀ, ಕೆಲವರಿಗೆ ಪುರುಷನೆಂದು ಹೇಳುತ್ತಾರೆ. ಆದರೆ ಯಥಾರ್ಥವಾಗಿ
ಆತ್ಮವೆಂದರೇನು ಎಂದು ಯಾವುದೇ ಮನುಷ್ಯ ಮಾತ್ರರಿಗೂ ಗೊತ್ತಿಲ್ಲ. ಈಗ ನೀವು ಮಕ್ಕಳಿಗೆ ಈ ಜ್ಞಾನವು
ಸಿಗುತ್ತದೆ, ಇದನ್ನು ನೀವು ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತೀರಿ. ಅಲ್ಲಿ ಈ ಜ್ಞಾನವಿರುತ್ತದೆ,
ನಾವು ಆತ್ಮ ಈ ಹಳೆಯ ಶರೀರವನ್ನು ಬಿಟ್ಟು ಬೇರೆ ಪಡೆಯುತ್ತೇವೆ. ಆತ್ಮದ ಪರಿಚಯವನ್ನು ಜೊತೆಯಲ್ಲಿ
ತೆಗೆದುಕೊಂಡು ಹೋಗುತ್ತದೆ. ಮೊದಲು ಆತ್ಮನನ್ನೂ ತಿಳಿದುಕೊಂಡಿರಲಿಲ್ಲ, ನಾವು ಯಾವಾಗಿನಿಂದ
ಪಾತ್ರವನ್ನಭಿನಯಿಸುತ್ತಾ ಬಂದಿದ್ದೇವೆ ಎಂಬುದೇನನ್ನೂ ತಿಳಿದುಕೊಂಡಿರಲಿಲ್ಲ. ಇಲ್ಲಿಯವರೆಗೂ ಕೆಲವರು
ತಮ್ಮನ್ನು ಪೂರ್ಣ ರೀತಿಯಲ್ಲಿ ಅರ್ಥ ಮಾಡಿಕೊಂಡಿಲ್ಲ. ದೊಡ್ಡ ರೂಪದಿಂದ ತಿಳಿದುಕೊಂಡಿದ್ದಾರೆ ಮತ್ತು
ದೊಡ್ಡ ಲಿಂಗ ರೂಪವನ್ನೇ ನೆನಪು ಮಾಡುತ್ತಾರೆ. ನಾನಾತ್ಮನು ಬಿಂದುವಾಗಿದ್ದೇನೆ, ತಂದೆಯೂ
ಬಿಂದುವಾಗಿದ್ದಾರೆ. ಈ ರೂಪದಲ್ಲಿ ನೆನಪು ಮಾಡುವವರು ಬಹಳ ವಿರಳ. ಬುದ್ಧಿಯು ನಂಬರ್ವಾರ್ ಇದೆಯಲ್ಲವೆ.
ಕೆಲವರಂತೂ ಚೆನ್ನಾಗಿ ಅರಿತುಕೊಂಡು ಅನ್ಯರಿಗೂ ತಿಳಿಸತೊಡಗುತ್ತಾರೆ. ತಮ್ಮನ್ನು ಆತ್ಮನೆಂದು ತಿಳಿದು
ತಂದೆಯನ್ನು ನೆನಪು ಮಾಡಬೇಕಾಗಿದೆ ಎಂದು ನೀವು ತಿಳಿಸುತ್ತೀರಿ. ಅವರೇ ಪತಿತ ಪಾವನರಾಗಿದ್ದಾರೆ.
ಮೊದಲು ಮನುಷ್ಯರಿಗೆ ಆತ್ಮನ ಪರಿಚಯವೇ ಇಲ್ಲ. ಆದ್ದರಿಂದ ಅದನ್ನು ತಿಳಿಸಬೇಕಾಗುತ್ತದೆ. ತಮ್ಮನ್ನು
ಯಾವಾಗ ಆತ್ಮ ನಿಶ್ಚಯ ಮಾಡಿಕೊಳ್ಳುವರೋ ಆಗ ತಂದೆಯನ್ನೂ ಅರಿತುಕೊಳ್ಳುವರು. ಆತ್ಮವನ್ನೇ
ತಿಳಿದುಕೊಂಡಿಲ್ಲ. ಆದ್ದರಿಂದ ತಂದೆಯನ್ನು ಪೂರ್ಣ ರೀತಿಯಲ್ಲಿ ತಿಳಿದುಕೊಳ್ಳಲು ಸಾಧ್ಯವಿಲ್ಲ.
ಮಕ್ಕಳಿಗೆ ತಿಳಿದಿದೆ - ನಾವಾತ್ಮರು ಬಿಂದುವಾಗಿದ್ದೇವೆ, ಇಷ್ಟು ಚಿಕ್ಕದಾದ ಆತ್ಮದಲ್ಲಿ 84
ಜನ್ಮಗಳ ಪಾತ್ರವಿದೆ, ಇದನ್ನೂ ಸಹ ನೀವು ತಿಳಿಸಬೇಕು ಇಲ್ಲವೆಂದರೆ ಕೇವಲ ಜ್ಞಾನವು ಬಹಳ ಚೆನ್ನಾಗಿದೆ,
ಭಗವಂತನೊಂದಿಗೆ ಮಿಲನ ಮಾಡುವ ಮಾರ್ಗವನ್ನು ಬಹಳ ಚೆನ್ನಾಗಿ ತಿಳಿಸುತ್ತಾರೆ ಎಂದಷ್ಟೇ ಹೇಳುತ್ತಾರೆ.
ಆದರೆ ನಾನು ಯಾರು? ತಂದೆಯು ಯಾರು? ಎಂಬುದನ್ನು ತಿಳಿದುಕೊಂಡಿಲ್ಲ. ಕೇವಲ ಚೆನ್ನಾಗಿದೆ,
ಚೆನ್ನಾಗಿದೆ ಎಂದು ಹೇಳಿ ಬಿಡುತ್ತಾರೆ. ಇವರು ನಾಸ್ತಿಕರನ್ನಾಗಿ ಮಾಡಿ ಬಿಡುತ್ತಾರೆ ಎಂದೂ ಸಹ
ಕೆಲವರು ಹೇಳುತ್ತಾರೆ ಆದರೆ ನಿಮಗೆ ಅರ್ಥವಾಗಿದೆ - ಜ್ಞಾನದ ತಿಳುವಳಿಕೆಯು ಯಾರಲ್ಲಿಯೂ ಇಲ್ಲ. ನೀವು
ತಿಳಿಸುತ್ತೀರಿ - ನಾವೀಗ ಪೂಜ್ಯರಾಗುತ್ತಿದ್ದೇವೆ, ನಾವು ಯಾರದೇ ಪೂಜೆಯನ್ನು ಮಾಡುವುದಿಲ್ಲ.
ಏಕೆಂದರೆ ಸರ್ವಶ್ರೇಷ್ಠ ಯಾರು ಎಲ್ಲರ ಪೂಜ್ಯರಾಗಿದ್ದಾರೆಯೋ ನಾವು ಅವರ ಸಂತಾನರಾಗಿದ್ದೇವೆ. ಅವರು
ಪೂಜ್ಯ ಪಿತಾಶ್ರೀ ಆಗಿದ್ದಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಆ ತಂದೆಯು ನಮ್ಮನ್ನು
ತನ್ನವರನ್ನಾಗಿ ಮಾಡಿಕೊಂಡು ಓದಿಸುತ್ತಿದ್ದಾರೆ. ಎಲ್ಲರಿಗಿಂತ ಸರ್ವಶ್ರೇಷ್ಠ ಪೂಜ್ಯರು ಅವರೊಬ್ಬರೇ
ಆಗಿದ್ದಾರೆ. ಅವರನ್ನು ಬಿಟ್ಟು ಮತ್ತ್ಯಾರೂ ಪೂಜ್ಯರನ್ನಾಗಿ ಮಾಡಲು ಸಾಧ್ಯವಿಲ್ಲ. ಪೂಜಾರಿಗಳು
ಅನ್ಯರನ್ನೂ ಪೂಜಾರಿಗಳನ್ನಾಗಿಯೇ ಮಾಡುತ್ತಾರಲ್ಲವೆ. ಪ್ರಪಂಚದಲ್ಲಿ ಎಲ್ಲರೂ ಪೂಜಾರಿಗಳಾಗಿದ್ದಾರೆ.
ಈಗ ನಿಮಗೆ ಪೂಜ್ಯರು ಸಿಕ್ಕಿದ್ದಾರೆ. ಅವರು ನಿಮ್ಮನ್ನು ತಮ್ಮ ಸಮಾನ ಮಾಡುತ್ತಿದ್ದಾರೆ. ನಿಮ್ಮಿಂದ
ಪೂಜೆಯನ್ನು ಬಿಡಿಸಿದ್ದಾರೆ ಮತ್ತು ತನ್ನ ಜೊತೆ ಕರೆದುಕೊಂಡು ಹೋಗುತ್ತಾರೆ. ಇದು ಛೀ ಛೀ
ಪ್ರಪಂಚವಾಗಿದೆ, ಮೃತ್ಯುಲೋಕವಾಗಿದೆ. ಯಾವಾಗ ರಾವಣ ರಾಜ್ಯವಾಗುವುದೋ ಆಗಲೇ ಭಕ್ತಿಯು
ಪ್ರಾರಂಭವಾಗುತ್ತದೆ. ಪೂಜ್ಯರಿಂದ ಪೂಜರಿಗಳಾಗಿ ಬಿಡುತ್ತಾರೆ ಮತ್ತೆ ಪೂಜಾರಿಗಳಿಂದ ಪೂಜ್ಯರನ್ನಾಗಿ
ಮಾಡಲು ತಂದೆಯು ಬರಬೇಕಾಗುತ್ತದೆ. ನೀವೀಗ ಪೂಜ್ಯ ದೇವತೆಗಳಾಗುತ್ತಿದ್ದೀರಿ. ಆತ್ಮವು ಶರೀರದ ಮೂಲಕ
ಪಾತ್ರವನ್ನಭಿನಯಿಸುತ್ತದೆ. ತಂದೆಯು ಆತ್ಮವನ್ನು ಪವಿತ್ರವನ್ನಾಗಿ ಮಾಡಲು ನಮ್ಮನ್ನು ಪೂಜ್ಯ
ದೇವತೆಯನ್ನಾಗಿ ಮಾಡುತ್ತಿದ್ದಾರೆ. ಆದ್ದರಿಂದ ನೀವು ಮಕ್ಕಳಿಗೆ ಯುಕ್ತಿಯನ್ನು ತಿಳಿಸಿದ್ದಾರೆ -
ತಂದೆಯನ್ನು ನೆನಪು ಮಾಡಿದರೆ ನೀವು ಪೂಜಾರಿಗಳಿಂದ ಪೂಜ್ಯರಾಗುತ್ತೀರಿ. ಏಕೆಂದರೆ ಆ ತಂದೆಯು ಸರ್ವರ
ಪೂಜ್ಯನಾಗಿದ್ದಾರೆ. ಯಾರು ಅರ್ಧಕಲ್ಪ ಪೂಜಾರಿಯಾಗುತ್ತಾರೆಯೋ ಅವರೇ ನಂತರ ಅರ್ಧಕಲ್ಪ
ಪೂಜ್ಯರಾಗುತ್ತಾರೆ. ಇದೂ ಸಹ ಡ್ರಾಮಾದಲ್ಲಿ ಪಾತ್ರವಿದೆ. ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ಯಾರೂ
ತಿಳಿದುಕೊಂಡಿಲ್ಲ. ಈಗ ತಂದೆಯ ಮೂಲಕ ನೀವು ತಿಳಿದುಕೊಂಡಿದ್ದೀರಿ ಮತ್ತು ಅನ್ಯರಿಗೂ ತಿಳಿಸುತ್ತೀರಿ.
ಮೊಟ್ಟ ಮೊದಲು ಇದೇ ಮುಖ್ಯ ಮಾತನ್ನು ತಿಳಿಸಿ - ತಮ್ಮನ್ನು ಆತ್ಮ ಬಿಂದು ಎಂದು ತಿಳಿಯಿರಿ, ಆತ್ಮದ
ತಂದೆ ನಿರಾಕಾರನಾಗಿದ್ದಾರೆ, ಆ ಜ್ಞಾನ ಸಂಪೂರ್ಣರೇ ಬಂದು ಓದಿಸುತ್ತಾರೆ ಮತ್ತೆ ಸೃಷ್ಟಿಯ
ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ತಂದೆಯು ಒಂದೇ ಬಾರಿ ಬರುತ್ತಾರೆ ಮತ್ತೆ
ಅವರನ್ನರಿತುಕೊಳ್ಳುವುದೂ ಸಹ ಒಂದೇ ಬಾರಿ ಹಾಗೂ ಅವರು ಸಂಗಮಯುಗದಲ್ಲಿಯೇ ಬರುತ್ತಾರೆ. ಹಳೆಯ ಪತಿತ
ಪ್ರಪಂಚವನ್ನು ಪಾವನವನ್ನಾಗಿ ಮಾಡುತ್ತಾರೆ. ಈಗ ತಂದೆಯು ನಾಟಕದನುಸಾರ ಬಂದಿದ್ದಾರೆ. ಇದೇನೂ ಹೊಸ
ಮಾತಲ್ಲ. ಕಲ್ಪ-ಕಲ್ಪವೂ ಇದೇ ರೀತಿ ಬರುತ್ತೇನೆ, ಇದರಲ್ಲಿ ಒಂದು ಕ್ಷಣವೂ ಹಿಂದೆ-ಮುಂದೆ ಆಗಲು
ಸಾಧ್ಯವಿಲ್ಲ. ನೀವು ಮಕ್ಕಳ ಹೃದಯದಲ್ಲಿ ಇದು ಭಾಸವಾಗುತ್ತದೆ - ಅವಶ್ಯವಾಗಿ ತಂದೆಯು ನಾವಾತ್ಮಗಳಿಗೆ
ಸತ್ಯ ಜ್ಞಾನವನ್ನು ಕೊಡುತ್ತಿದ್ದಾರೆ ಮತ್ತೆ ಕಲ್ಪದ ನಂತರವೂ ಸಹ ತಂದೆಯು ಬರಬೇಕಾಗುವುದು. ತಂದೆಯ
ಮೂಲಕ ಈ ಸಮಯದಲ್ಲಿ ಏನನ್ನು ತಿಳಿದುಕೊಂಡಿದ್ದೇವೆಯೋ ಅದನ್ನು ಮತ್ತೆ ಕಲ್ಪದ ನಂತರವೂ
ತಿಳಿದುಕೊಳ್ಳುತ್ತೇವೆ. ಇದನ್ನೂ ತಿಳಿದುಕೊಂಡಿದ್ದೀರಿ ಈಗ ಹಳೆಯ ಪ್ರಪಂಚದ ವಿನಾಶವಾಗುವುದು ಮತ್ತು
ನಾವು ಸತ್ಯಯುಗದಲ್ಲಿ ಬಂದು ಪಾತ್ರವನ್ನಭಿನಯಿಸುತ್ತೇವೆ, ಸತ್ಯಯುಗೀ ಸ್ವರ್ಗವಾಸಿಗಳಾಗುತ್ತೇವೆ -
ಇದಂತೂ ಬುದ್ಧಿಯಲ್ಲಿ ನೆನಪಿದೆಯಲ್ಲವೆ. ನೆನಪಿದ್ದಾಗ ಖುಷಿಯೂ ಇರುತ್ತದೆ. ಇದು ವಿದ್ಯಾರ್ಥಿ
ಜೀವನವಾಗಿದೆ, ನಾವು ಸ್ವರ್ಗವಾಸಿಗಳಾಗಲು ಓದುತ್ತಿದ್ದೇವೆ. ವಿದ್ಯಾಭ್ಯಾಸವು ಪೂರ್ಣವಾಗುವವರೆಗೆ ಈ
ಖುಷಿಯು ಸ್ಥಿರವಾಗಿರಬೇಕು. ತಂದೆಯು ತಿಳಿಸುತ್ತಲೇ ಇರುತ್ತಾರೆ - ಯಾವಾಗ ವಿನಾಶಕ್ಕಾಗಿ ಎಲ್ಲಾ
ಸಾಮಗ್ರಿಗಳು ತಯಾರಾಗುವವೋ ಆಗ ನಿಮ್ಮ ವಿದ್ಯಾಭ್ಯಾಸವು ಮುಕ್ತಾಯವಾಗುವುದು. ಆಗ ಅವಶ್ಯವಾಗಿ ಬೆಂಕಿ
ಬೀಳುವುದಿದೆ ಎಂದು ನಿಮಗೆ ಅರ್ಥವಾಗುತ್ತದೆ. ತಯಾರಿಗಳಂತೂ ಆಗುತ್ತಿರುತ್ತದೆಯಲ್ಲವೆ. ಪರಸ್ಪರ
ಎಷ್ಟೊಂದು ದ್ವೇಷಿಗಳಾಗುತ್ತಿರುತ್ತಾರೆ. ನಾಲ್ಕೂ ಕಡೆ ಭಿನ್ನ-ಭಿನ್ನ ಪ್ರಕಾರದ ಸೈನ್ಯಗಳಿವೆ,
ಎಲ್ಲರೂ ಹೊಡೆದಾಡುವುದಕ್ಕಾಗಿ ತಯಾರಾಗುತ್ತಾ ಇರುತ್ತಾರೆ. ಯಾವುದಾದರೊಂದು ಇಂತಹ ತೊಡಕುಂಟು
ಮಾಡುತ್ತಾರೆ ಅದರಿಂದ ಅವಶ್ಯವಾಗಿ ಯುದ್ಧವಾಗುವುದು. ಕಲ್ಪದ ಹಿಂದಿನಂತೆ ವಿನಾಶವಂತೂ ಆಗಲೇಬೇಕಾಗಿದೆ.
ನೀವು ಮಕ್ಕಳು ನೋಡುತ್ತೀರಿ, ಮೊದಲೂ ಸಹ ಮಕ್ಕಳು ನೋಡಿದ್ದೀರಿ, ಒಂದು ಕಿಡಿಯಿಂದ ಎಷ್ಟೊಂದು
ಯುದ್ಧವಾಗಿತ್ತು, ಒಬ್ಬರು ಇನ್ನೊಬ್ಬರನ್ನು ಹೆದರಿಸುತ್ತಾ ಇರುತ್ತಾರೆ - ಈ ರೀತಿ ಮಾಡಿ
ಇಲ್ಲವೆಂದರೆ ನಾವು ಈ ಬಾಂಬನ್ನು ಹಾಕಿ ಬಿಡುತ್ತೇವೆ ಎಂದು. ಮೃತ್ಯುವು ಸನ್ಮುಖದಲ್ಲಿ ಬಂದಾಗ ಅವರು
ಆ ಕೆಲಸವನ್ನು ಮಾಡದೇ ಇರಲು ಸಾದ್ಯವೇ ಆಗುವುದಿಲ್ಲ. ಮೊದಲೂ ಸಹ ಯುದ್ಧವಾಗಿತ್ತು, ಆಗ ಬಾಂಬುಗಳನ್ನು
ಹಾಕಿದ್ದರು, ವಿಧಿಯಲ್ಲವೇ ಈಗಂತೂ ಸಾವಿರಾರು ಬಾಂಬುಗಳಿವೆ.
ನೀವು ಮಕ್ಕಳು ಇದನ್ನು ಅವಶ್ಯವಾಗಿ ತಿಳಿಸಬೇಕು - ಈಗ ಎಲ್ಲರನ್ನು ಹಿಂತಿರುಗಿ ಕರೆದುಕೊಂಡು ಹೋಗಲು
ತಂದೆಯೇ ಬಂದಿದ್ದಾರೆ. ಹೇ ಪತಿತ-ಪಾವನ ಬನ್ನಿ, ಈ ಛೀ ಛೀ ಪ್ರಪಪಂಚದಿಂದ ಪಾವನ ಪ್ರಪಂಚಕ್ಕೆ
ಕರೆದುಕೊಂಡು ಹೋಗಿ ಎಂದು ಎಲ್ಲರೂ ಕೂಗುತ್ತಿದ್ದಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಪಾವನ
ಪ್ರಪಂಚಗಳು ಎರಡು ಇವೆ - ಮುಕ್ತಿ ಮತ್ತು ಜೀವನ್ಮುಕ್ತಿ. ಎಲ್ಲಾ ಆತ್ಮಗಳು ಪವಿತ್ರರಾಗಿ
ಮುಕ್ತಿಧಾಮಕ್ಕೆ ಹೊರಟು ಹೋಗುತ್ತಾರೆ. ಈ ದುಃಖಧಾಮದ ವಿನಾಶವಾಗುತ್ತದೆ, ಇದಕ್ಕೆ ಮೃತ್ಯುಲೋಕವೆಂದು
ಹೇಳುತ್ತಾರೆ. ಮೊದಲು ಅಮರ ಲೋಕವಾಗಿತ್ತು, ಚಕ್ರವನ್ನು ಸುತ್ತುತ್ತಾ ಹೇಗೆ ಮೃತ್ಯುಲೋಕದಲ್ಲಿ
ಬಂದಿದ್ದೇವೆ ಮತ್ತೆ ಅಮರಲೋಕದ ಸ್ಥಾಪನೆಯಾಗುತ್ತದೆ. ಅಲ್ಲಿ ಯಾವುದೇ ಅಕಾಲ ಮೃತ್ಯುವಿಲ್ಲ.
ಆದ್ದರಿಂದ ಅದಕ್ಕೆ ಅಮರಲೋಕವೆಂದು ಹೇಳಲಾಗುತ್ತದೆ. ಶಾಸ್ತ್ರಗಳಲ್ಲಿಯೂ ಈ ಅಕ್ಷರವಿದೆ. ಆದರೆ
ಯಥಾರ್ಥ ರೀತಿಯಿಂದ ಯಾರೂ ತಿಳಿದುಕೊಂಡಿಲ್ಲ. ಇದನ್ನೂ ಸಹ ನೀವೇ ತಿಳಿದುಕೊಂಡಿದ್ದೀರಿ. ತಂದೆಯು
ಬಂದಿದ್ದಾರೆಂದರೆ ಮೃತ್ಯುಲೋಕದ ವಿನಾಶವು ಖಂಡಿತ ಆಗಲೇಬೇಕಾಗಿದೆ. ಇದು 100% ನಿಶ್ಚಿತವಾಗಿದೆ.
ತಂದೆಯು ತಿಳಿಸುತ್ತಿದ್ದಾರೆ - ತಮ್ಮ ಆತ್ಮವನ್ನು ಯೋಗಬಲದಿಂದ ಪವಿತ್ರ ಮಾಡಿಕೊಳ್ಳಿ, ನನ್ನನ್ನು
ನೆನಪು ಮಾಡಿದರೆ ವಿಕರ್ಮ ವಿನಾಶವಾಗುವುದು. ಆದರೆ ಇದನ್ನೂ ಸಹ ಮಕ್ಕಳು ನೆನಪು ಮಾಡುವುದಿಲ್ಲ.
ತಂದೆಯಿಂದ ಆಸ್ತಿ ಅಥವಾ ರಾಜ್ಯಭಾಗ್ಯವನ್ನು ಪಡೆಯುವುದರಲ್ಲಿ ಪರಿಶ್ರಮ ಇದೆಯಲ್ಲವೆ. ಸಾಧ್ಯವಾದಷ್ಟು
ನೆನಪಿನಲ್ಲಿರಬೇಕಾಗಿದೆ. ತಮ್ಮನ್ನು ನೋಡಿಕೊಳ್ಳಿ - ಎಷ್ಟು ಸಮಯ ನೆನಪಿನಲ್ಲಿರುತ್ತೇವೆ ಮತ್ತು
ಎಷ್ಟು ಜನರಿಗೆ ನೆನಪು ತರಿಸುತ್ತೇನೆ? ಮನ್ಮನಾಭವ- ಇದಕ್ಕೆ ಮಂತ್ರವೆಂದೂ ಹೇಳಲಾಗುವುದಿಲ್ಲ. ಇದು
ತಂದೆಯ ನೆನಪಾಗಿದೆ. ದೇಹಾಭಿಮಾನವನ್ನು ಬಿಡಬೇಕಾಗಿದೆ. ನೀವಾತ್ಮರಾಗಿದ್ದೀರಿ. ಇದು ನಿಮ್ಮ
ರಥ(ಶರೀರ)ವಾಗಿದೆ, ಇದರಿಂದ ನೀವು ಎಷ್ಟೊಂದು ಕೆಲಸ ಮಾಡುತ್ತೀರಿ! ಸತ್ಯಯುಗದಲ್ಲಿ ನೀವು
ದೇವಿ-ದೇವತೆಗಳಾಗಿ ಹೇಗೆ ರಾಜ್ಯ ಮಾಡುತ್ತೀರಿ ಎಂಬ ಅನುಭವವನ್ನು ನೀವು ಮಾಡುತ್ತೀರಿ. ಆ ಸಮಯದಲ್ಲಿ
ನೀವು ಸಂಪೂರ್ಣ ಆತ್ಮಾಭಿಮಾನಿಗಳಾಗಿರುತ್ತೀರಿ. ಈ ಶರೀರಕ್ಕೆ ವಯಸ್ಸಾಗಿದೆ. ಆದ್ದರಿಂದ ಇದನ್ನು
ಬಿಟ್ಟು ಹೊಸದನ್ನು ತೆಗೆದುಕೊಳ್ಳುತ್ತೇನೆ ಎಂದು ಆತ್ಮವು ಹೇಳುತ್ತದೆ, ದುಃಖದ ಮಾತೇ ಇರುವುದಿಲ್ಲ.
ಇಲ್ಲಂತೂ ಶರೀರವು ಬಿಟ್ಟು ಹೋಗಬಾರದೆಂದು ವೈದ್ಯರು ಔಷಧಿಗಳನ್ನು ಕೊಟ್ಟು ಎಷ್ಟು ಪರಿಶ್ರಮ
ಪಡುತ್ತಾರೆ. ಮಕ್ಕಳಿಗೆ ಖಾಯಿಲೆ ಇತ್ಯಾದಿಗಳಲ್ಲಿಯೂ ಹಳೆಯ ಶರೀರದಿಂದ ಎಂದೂ ಬೇಸರವುಂಟಾಗಬಾರದು.
ಏಕೆಂದರೆ ನಿಮಗೆ ಅರ್ಥವಾಗಿದೆ - ಈ ಶರೀರದಲ್ಲಿದ್ದಂತೆಯೇ ತಂದೆಯಿಂದ ಆಸ್ತಿಯನ್ನು
ತೆಗೆದುಕೊಳ್ಳಬೇಕಾಗಿದೆ. ಶಿವ ತಂದೆಯ ನೆನಪಿನಿಂದಲೇ ಪವಿತ್ರರಾಗಿ ಬಿಡುತ್ತೀರಿ, ಇದು
ಪರಿಶ್ರಮವಾಗಿದೆ. ಆದರೆ ಮೊದಲು ಆತ್ಮವನ್ನರಿಯಬೇಕಾಗಿದೆ. ಮುಖ್ಯವಾಗಿ ನಿಮ್ಮದು ನೆನಪಿನ
ಯಾತ್ರೆಯಾಗಿದೆ. ನೆನಪಿನಲ್ಲಿರುತ್ತಾ - ಇರುತ್ತಾ ನಾವು ಮೂಲವತನಕ್ಕೆ ಹೊರಟು ಹೋಗುತ್ತೇವೆ. ನಾವು
ಅಲ್ಲಿನ ನಿವಾಸಿಗಳಾಗಿದ್ದೇವೆ, ಅದೇ ನಮ್ಮ ಶಾಂತಿಧಾಮವಾಗಿದೆ. ಶಾಂತಿಧಾಮ ಸುಖಧಾಮವನ್ನು ನಾವೇ
ತಿಳಿದುಕೊಂಡಿದ್ದೇವೆ ಮತ್ತು ನೆನಪು ಮಾಡುತ್ತೇವೆ, ಮತ್ತ್ಯಾರಿಗೂ ತಿಳಿದಿಲ್ಲ. ಯಾರು ಕಲ್ಪದ ಹಿಂದೆ
ತಂದೆಯಿಂದ ಆಸ್ತಿಯನ್ನು ಪಡೆದಿದ್ದರೋ ಅವರೇ ಪಡೆಯುತ್ತಾರೆ.
ಮುಖ್ಯವಾದದು ನೆನಪಿನ ಯಾತ್ರೆ. ಭಕ್ತಿಮಾರ್ಗದ ಯಾತ್ರೆಗಳೆಲ್ಲವೂ ಈಗ ಸಮಾಪ್ತಿಯಾಗಲಿದೆ.
ಭಕ್ತಿಮಾರ್ಗವೇ ಸಮಾಪ್ತಿಯಾಗುವುದು, ಭಕ್ತಿಮಾರ್ಗವೆಂದರೇನು? ಜ್ಞಾನವಿದ್ದಾಗಲೇ ಇದು
ಅರ್ಥವಾಗುತ್ತದೆ. ಭಕ್ತಿಯಿಂದಲೇ ಭಗವಂತನು ಸಿಗುತ್ತಾರೆಂದು ಹೇಳುತ್ತಾರೆ. ಭಕ್ತಿಯ ಫಲವಾಗಿ ಏನನ್ನು
ಕೊಡುತ್ತಾರೆ? ಎಂಬುದನ್ನು ತಿಳಿದಿಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ, ತಂದೆಯು ಮಕ್ಕಳಿಗೆ
ಅವಶ್ಯವಾಗಿ ಸ್ವರ್ಗದ ರಾಜಧಾನಿಯ ಆಸ್ತಿಯನ್ನೇ ಕೊಡುತ್ತಾರೆ. ಎಲ್ಲರಿಗೂ ಆಸ್ತಿಯು ಸಿಕ್ಕಿತ್ತು,
ಯಥಾ ರಾಜ-ರಾಣಿ ತಥಾ ಪ್ರಜಾ ಎಲ್ಲರೂ ಸ್ವರ್ಗವಾಸಿಯಾಗಿದ್ದರು. ತಂದೆಯು ತಿಳಿಸುತ್ತಾರೆ - 5000
ವರ್ಷಗಳ ಮೊದಲೂ ಸಹ ನಿಮ್ಮನ್ನು ಸ್ವರ್ಗವಾಸಿಗಳನ್ನಾಗಿ ಮಾಡಿದ್ದೆನು, ಈಗ ಪುನಃ ಮಾಡುತ್ತೇನೆ.
ನಂತರ ನೀವು ಇದೇ ರೀತಿ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ಇದು ಬುದ್ಧಿಯಲ್ಲಿ ನೆನಪಿರಬೇಕು,
ಮರೆಯಬಾರದು. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಯಾವ ಜ್ಞಾನವು ತಂದೆಯ ಬಳಿಯಿದೆಯೋ ಅದು ಮಕ್ಕಳ
ಬುದ್ಧಿಯಲ್ಲಿ ಹನಿಯುತ್ತಿರುತ್ತದೆ - ನಾವು ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇನೆ, ಈಗ
ಮತ್ತೆ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ? ಅನೇಕ ಬಾರಿ ತಂದೆಯಿಂದ ಆಸ್ತಿಯನ್ನು
ಪಡೆದಿದ್ದೇವೆ. ತಂದೆಯು ತಿಳಿಸುತ್ತಾರೆ - ಹೇಗೆ ತೆಗೆದುಕೊಂಡಿದ್ದಿರೋ ಅದೇ ರೀತಿ ಪುನಃ
ತೆಗೆದುಕೊಳ್ಳಿ. ತಂದೆಯು ಎಲ್ಲರಿಗೆ ಓದಿಸುತ್ತಾರೆ, ದೈವೀ ಗುಣಗಳನ್ನು ಧಾರಣೆ ಮಾಡಲು ಸಲಹೆಯೂ
ಸಿಗುತ್ತಿರುತ್ತದೆ. ತಮ್ಮ ಪರಿಶೀಲನೆ ಮಾಡಿಕೊಳ್ಳಲು ಸಾಕ್ಷಿಯಾಗಿ ನೋಡಬೇಕು - ನಾನು ಎಲ್ಲಿಯವರೆಗೆ
ಪುರುಷಾರ್ಥ ಮಾಡಿದ್ದೇನೆ. ನಾವಂತೂ ಬಹಳ ಚೆನ್ನಾಗಿ ಪುರುಷಾರ್ಥ ಮಾಡುತ್ತಿದ್ದೇವೆ ಎಂದು ಕೆಲವರು
ತಿಳಿದಿರುತ್ತಾರೆ. ಪ್ರದರ್ಶನಿ ಇತ್ಯಾದಿಯ ವ್ಯವಸ್ಥೆ ಮಾಡುತ್ತಿರುತ್ತೇವೆ ಆಗಲಾದರೂ ಭಗವಂತ ತಂದೆಯು
ಬಂದಿದ್ದಾರೆಂದು ಮನುಷ್ಯರಿಗೆ ತಿಳಿಯಲಿ. ಬಡಪಾಯಿ ಮನುಷ್ಯರೆಲ್ಲರೂ ಘೋರ ನಿದ್ರೆಯಲ್ಲಿದ್ದಾರೆ
ಜ್ಞಾನ ಯಾರಿಗೂ ತಿಳೀಯದೇ ಇರುವುದರಿಂದ ಅವಶ್ಯವಾಗಿ ಭಕ್ತಿಯನ್ನೇ ಶ್ರೇಷ್ಠವೆಂದು ತಿಳಿಯುತ್ತಾರೆ.
ಮೊದಲು ನಿಮ್ಮಲ್ಲೂ ಸಹ ಜ್ಞಾನವಿರಲಿಲ್ಲ, ಈಗ ನಿಮಗೆ ತಿಳಿದಿದೆ – ಜ್ಞಾನ ಸಾಗರನು ತಂದೆಯೇ
ಆಗಿದ್ದಾರೆ, ಅವರೇ ಭಕ್ತಿಯ ಫಲವನ್ನು ಕೊಡುತ್ತಾರೆ. ಯಾರು ಹೆಚ್ಚು ಭಕ್ತಿಯನ್ನು ಮಾಡಿದ್ದಾರೆಯೋ
ಅವರಿಗೆ ಹೆಚ್ಚು ಫಲವು ಸಿಗುವುದು. ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ ಅವರೇ ಓದುತ್ತಾರೆ.
ಇದೆಲ್ಲಾ ಎಷ್ಟು ಮಧುರಾತಿ ಮಧುರ ಮಾತುಗಳಾಗಿವೆ! ವೃದ್ಧೆಯರಿಗೂ ಸಹ ಬಹಳ ಸಹಜವಾಗಿ ತಿಳಿಸಿ
ಕೊಡುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ, ಶ್ರೇಷ್ಠಾತಿ ಶ್ರೇಷ್ಠ
ಭಗವಂತನು ಶಿವನಾಗಿದ್ದಾರೆ. ಶಿವ ಪರಮಾತ್ಮಾಯ ನಮಃ ಎಂದು ಹೇಳಲಾಗುತ್ತದೆ. ಈಗ ಅವರೇ ತಿಳಿಸುತ್ತಾರೆ
- ನನ್ನೊಬ್ಬನನ್ನೇ ನೆನಪು ಮಾಡುವುದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುವವು. ಮತ್ತ್ಯಾವುದೇ
ಕಷ್ಟವನ್ನು ಕೊಡುವುದಿಲ್ಲ. ಮುಂದೆ ಹೋಗುತ್ತಾ ಶಿವ ತಂದೆಯನ್ನೇ ನೆನಪು ಮಾಡಲು ತೊಡಗುತ್ತಾರೆ,
ಆಸ್ತಿಯನ್ನಂತೂ ಪಡೆಯಬೇಕಾಗಿದೆ. ಜೀವಿಸಿದ್ದಂತೆಯೇ ಆಸ್ತಿಯನ್ನು ಪಡೆದೇ ಪಡೆಯುತ್ತಾರೆ. ಶಿವಬಾಬನ
ನೆನಪಿನಲ್ಲಿ ಶರೀರವನ್ನು ಬಿಟ್ಟರೆ ಅವರು ಮತ್ತೆ ಅದೇ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತಾರೆ.
ಸ್ವರ್ಗದಲ್ಲಿ ಅವಶ್ಯವಾಗಿ ಬರುತ್ತಾರೆ. ಆದರೆ ಎಷ್ಟು ಯೋಗವೋ ಅಷ್ಟು ಫಲವು ಸಿಗುವುದು. ಮೂಲ
ಮಾತಾಗಿದೆ - ನಡೆದಾಡುತ್ತಾ-ತಿರುಗಾಡುತ್ತಾ ಎಷ್ಟು ಸಾಧ್ಯವೋ ಅಷ್ಟು ನೆನಪಿನಲ್ಲಿರಬೇಕಾಗಿದೆ,
ತಮ್ಮ ತಲೆ ಮೇಲಿರುವ ಪಾಪದ ಹೊರೆಯನ್ನು ಇಳಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಕೇವಲ ನೆನಪು ಮಾಡಬೇಕು
ಅಷ್ಟೇ, ಮತ್ತ್ಯಾವುದೇ ಕಷ್ಟವನ್ನು ತಂದೆಯು ಕೊಡುವುದಿಲ್ಲ. ಏಕೆಂದರೆ ತಂದೆಗೆ ಗೊತ್ತಿದೆ -
ಅರ್ಧಕಲ್ಪದಿಂದ ಮಕ್ಕಳು ಬಹಳ ಕಷ್ಟವನ್ನೂ ನೋಡಿದ್ದೀರಿ. ಆದ್ದರಿಂದಲೇ ನಾನೀಗ ಆಸ್ತಿಯನ್ನು
ತೆಗೆದುಕೊಳ್ಳುವ ಸಹಜ ಮಾರ್ಗವನ್ನು ತಿಳಿಸಲು ಬಂದಿದ್ದೇನೆ. ಕೇವಲ ತಂದೆಯನ್ನು ನೆನಪು ಮಾಡಿ. ಮೊದಲೂ
ಸಹ ನೆನಪು ಮಾಡುತ್ತಿದ್ದಿರಿ ಆದರೆ ಆಗ ಯಾವುದೇ ಜ್ಞಾನವಿರಲಿಲ್ಲ. ಈಗ ತಂದೆಯು ಈ ರೀತಿ ನೆನಪು
ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುವವು ಎಂಬ ಜ್ಞಾನವನ್ನು ಕೊಟ್ಟಿದ್ದಾರೆ. ಭಲೆ ಶಿವನ
ಭಕ್ತಿಯನ್ನು ಪ್ರಪಂಚದಲ್ಲಿ ಬಹಳಷ್ಟು ಮಾಡುತ್ತಾರೆ. ಆದರೆ ಪರಿಚಯ ರಹಿತ. ಈ ಸಮಯದಲ್ಲಿ ತಂದೆಯು
ತಾನೇ ಬಂದು ಪರಿಚಯ ಕೊಡುತ್ತಾರೆ - ನನ್ನನ್ನು ನೆನಪು ಮಾಡಿ. ನಾವೀಗ ಚೆನ್ನಾಗಿ ಅರ್ಥ
ಮಾಡಿಕೊಂಡಿದ್ದೇವೆ ಎಂದು ನೀವು ತಿಳಿದಿದ್ದೀರಿ. ಬಾಪ್ದಾದಾರವರ ಬಳಿ ಹೋಗುತ್ತೇವೆಂದು ಹೇಳುತ್ತೀರಿ.
ತಂದೆಯು ಈ ಭಗೀರಥನನ್ನು ಆಧಾರವಾಗಿ ತೆಗೆದುಕೊಂಡಿದ್ದಾರೆ. ಭಗೀರಥನು ಪ್ರಸಿದ್ಧವಾಗಿದ್ದಾರೆ. ಇವರ
ಮೂಲಕ ತಂದೆಯು ಜ್ಞಾನವನ್ನು ತಿಳಿಸುತ್ತಾರೆ. ಇದೂ ಸಹ ನಾಟಕದಲ್ಲಿ ನಿಗಧಿಯಿದೆ. ಕಲ್ಪ-ಕಲ್ಪವೂ ಈ
ಭಾಗ್ಯಶಾಲಿ ರಥದಲ್ಲಿಯೇ ಬರುತ್ತಾರೆ. ಯಾರನ್ನು ಶ್ಯಾಮ ಸುಂದರನೆಂದು ಹೇಳುತ್ತಿದ್ದರೋ ಅವರೇ
ಇವರಾಗಿದ್ದಾರೆಂದು ನಿಮಗೆ ತಿಳಿದಿದೆ. ಮನುಷ್ಯರು ಮತ್ತೆ ಅರ್ಜುನನೆಂದು ಹೆಸರಿಟ್ಟಿದ್ದಾರೆ. ಈಗ
ತಂದೆಯು ಮಕ್ಕಳಿಗೆ ಸರಿಯಾದುದನ್ನು ತಿಳಿಸುತ್ತಾರೆ- ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ
ಬ್ರಹ್ಮ ಹೇಗಾಗುತ್ತಾರೆ? ಮಕ್ಕಳಲ್ಲಿ ತಿಳುವಳಿಕೆಯಿದೆ - ಈಗ ನಾವು ಬ್ರಹ್ಮಪುರಿಯ
ನಿವಾಸಿಗಳಾಗಿದ್ದೇವೆ ನಂತರ ವಿಷ್ಣು ಪುರಿಯವರಾಗುತ್ತೇವೆ. ವಿಷ್ಣು ಪುರಿಯಿಂದ ಬ್ರಹ್ಮ ಪುರಿಗೆ
ಬರುವುದರಲ್ಲಿ 84 ಜನ್ಮಗಳು ಹಿಡಿಸುತ್ತವೆ. ಇದನ್ನೂ ಸಹ ಅನೇಕ ಬಾರಿ ತಿಳಿಸಿದ್ದೇನೆ. ಅದನ್ನು ನೀವು
ಈಗ ಮತ್ತೆ ಕೇಳುವಿರಿ. ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ - ಕೇವಲ ನನ್ನೊಬ್ಬನನ್ನೇ ನೆನಪು ಮಾಡಿ
ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಅದರಿಂದ ನಿಮಗೆ ಖುಷಿಯೂ ಆಗುತ್ತದೆ, ಇದೊಂದು ಅಂತಿಮ
ಜನ್ಮದಲ್ಲಿ ಪವಿತ್ರರಾಗಿರುವುದರಿಂದ ನೀವು ಪವಿತ್ರ ಪ್ರಪಂಚದ ಮಾಲೀಕರಾಗುವಿರಿ ಅಂದಮೇಲೆ ಏಕೆ
ಪವಿತ್ರರಾಗಬಾರದು? ನಾವು ಒಬ್ಬ ತಂದೆಯ ಮಕ್ಕಳು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ. ಆದರೂ ಸಹ ಆ
ದೈಹಿಕ ದೃಷ್ಟಿಯನ್ನು ಪರಿವರ್ತನೆ ಮಾಡಿಕೊಳ್ಳುವುದರಲ್ಲಿ ಸಮಯ ಹಿಡಿಸುತ್ತದೆ. ನಿಧಾನ-ನಿಧಾನವಾಗಿ
ಅಂತಿಮದಲ್ಲಿ ಕರ್ಮಾತೀತ ಸ್ಥಿತಿಯು ಬರುವುದು. ಈ ಸಮಯದಲ್ಲಿ ಯಾರದೇ ಕರ್ಮಾತೀತ ಸ್ಥಿತಿಯಾಗುವುದು
ಅಸಂಭವವಾಗಿದೆ. ಕರ್ಮಾತೀತ ಸ್ಥಿತಿಯು ಬಂದರೆ ಈ ಶರೀರವೂ ಇರುವುದಿಲ್ಲ, ಇದನ್ನು ಬಿಡಬೇಕಾಗುತ್ತದೆ.
ಯುದ್ಧವಾದಾಗ ಒಬ್ಬ ತಂದೆಯ ನೆನಪೇ ಇರಬೇಕು. ಇದರಲ್ಲಿ ಪರಿಶ್ರಮವಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1) ಸಾಕ್ಷಿಯಾಗಿ
ತಮ್ಮನ್ನು ನೋಡಿಕೊಳ್ಳಬೇಕು - ನಾನು ಎಷ್ಟು ಪುರುಷಾರ್ಥ ಮಾಡುತ್ತೇನೆ? ನಡೆಯುತ್ತಾ-ತಿರುಗಾಡುತ್ತಾ,
ಕರ್ಮ ಮಾಡುತ್ತಾ ಎಷ್ಟು ಸಮಯ ತಂದೆಯ ನೆನಪಿನಲ್ಲಿರುತ್ತೇನೆ?
2) ಈ ಶರೀರದೊಂದಿಗೆ ಎಂದೂ ಬೇಸರವಾಗಬಾರದು. ಈ ಶರೀರದಲ್ಲಿಯೇ ಜೀವಿಸಿದ್ದು ತಂದೆಯಿಂದ ಆಸ್ತಿಯನ್ನು
ಪಡೆಯಬೇಕಾಗಿದೆ. ಸ್ವರ್ಗವಾಸಿಗಳಾಗಲು ಈ ಜೀವನದಲ್ಲಿ ಪೂರ್ಣ ವಿದ್ಯಾಭ್ಯಾಸ ಮಾಡಬೇಕಾಗಿದೆ.
ವರದಾನ:
ಮಾಸ್ಟರ್ ರಚೈತನ
ಸ್ಟೇಜ್ ಮುಖಾಂತರ ಆಪತ್ತುಗಳಲ್ಲಿಯೂ ಸಹ ಮನೋರಂಜನೆಯ ಅನುಭವವನ್ನು ಮಾಡುವಂತಹ ಸಂಪೂರ್ಣ ಯೋಗಿ ಭವ.
ಮಾಸ್ಟರ್ ರಚೈತನ ಸ್ಟೇಜ್
ಮೇಲೆ ಸ್ಥಿತ ಆಗುವುದರಿಂದ ದೊಡ್ಡದರಲ್ಲಿ ದೊಡ್ಡ ಆಪತ್ತು ಒಂದು ಮನೋರಂಜನೆಯ ದೃಶ್ಯದ
ಅನುಭವವಾಗುವುದು. ಹೇಗೆ ಮಹಾ ವಿನಾಶದ ಆಪತ್ತನ್ನೂ ಸಹ ಸ್ವರ್ಗದ ದ್ವಾರ ತೆಗೆಯುವ ಸಾಧನ ಎಂದು
ಹೇಳುವಿರಿ. ಆ ರೀತಿ ಯಾವುದೇ ಪ್ರಕಾರದ ಚಿಕ್ಕ - ದೊಡ್ಡ ಸಮಸ್ಯೆ ಹಾಗೂ ಆಪತ್ತುಗಳಲ್ಲಿಯೂ
ಮನೋರಂಜನೆಯ ರೂಪ ಕಂಡುಬರುವುದು, ಹಾಯ್-ಹಾಯ್ ಎನ್ನುವ ಬದಲು ಓಹೋ ಶಬ್ಧ ಬರಲಿ - ದುಃಖವೂ ಸಹ ಸುಖದ
ರೂಪದಲ್ಲಿ ಅನುಭವವಾಗಲಿ ದುಃಖ-ಸುಖದ ಜ್ಞಾನ ಇದ್ದರೂ ಸಹ ಅದರ ಫ್ರಭಾವದಲ್ಲಿ ಬರಬಾರದು, ದುಃಖವನ್ನೂ
ಸಹ ಬಲಿಹಾರಿಯಾಗಿ ಸುಖದ ದಿನಗಳು ಬರುವುದಿದೆ ಎಂದು ತಿಳಿಯಿರಿ - ಆಗ ಹೇಳಲಾಗುವುದು ಸಂಪೂರ್ಣ ಯೋಗಿ.
ಸ್ಲೋಗನ್:
ಹೃದಯ ಸಿಂಹಾಸನವನ್ನು
ಬಿಟ್ಟು ಸಾಧಾರಣ ಸಂಕಲ್ಪ ಮಾಡುವುದು ಅರ್ಥಾತ್ ಧರಣಿಯ ಮೇಲೆ ಪಾದವನ್ನಿಡುವುದು.