24.06.20         Morning Kannada Murli       Om Shanti           BapDada Madhuban


"ತಾವು ಆತ್ಮರು ಯಾವಾಗ ಸ್ವಚ್ಛರಾಗುತ್ತೀರಿ, ಆಗ ಈ ಪ್ರಪಂಚವು ಸುಖದಾಯಿಯಾಗುತ್ತದೆ. ದುಃಖಗಳ ಕಾರಣ - 5 ವಿಕಾರಗಳಿಗೆ ವಶೀಭೂತರಾಗಿ ಮಾಡಿರುವ ಕರ್ಮ" (ಮಾತೇಶ್ವರಿಜಿಯವರ ಅಮೂಲ್ಯ ಮಹಾವಾಕ್ಯ)

ಗೀತೆ:
ಜಾನೆ ನ ನಜರ್, ಪಹಚಾನೆ ಜಿಗರ್.......

ತಮ್ಮ ಬೇಹದ್ದಿನ ತಂದೆಯ ಮಹಿಮೆಯನ್ನು ಕೇಳಿದಿರಿ. ಸಾಧಾರಣ ಮನುಷ್ಯರದು ಇಂತಹ ಮಹಿಮೆಯಾಗಲು ಸಾಧ್ಯವಿಲ್ಲ. ಇದು ಅವರೊಬ್ಬರದೇ ಮಹಿಮೆಯಾಗಿದೆ, ಯಾರು ಈ ಮಹಿಮೆಯ ಅಧಿಕಾರಿಯಾಗಿದ್ದಾರೆ. ಏಕೆಂದರೆ ಅವರ ಮಹಿಮೆಯು ಅವರ ಕರ್ತವ್ಯದನುಸಾರವಾಗಿ ಗಾಯನವಾಗುತ್ತದೆ. ಅವರ ಕರ್ತವ್ಯವೆಲ್ಲವೂ ಮನುಷ್ಯಾತ್ಮರಿಗಿಂತ ಮಹಾನ್ ಆಗಿದೆ ಏಕೆಂದರೆ ಎಲ್ಲಾ ಮನುಷ್ಯಾತ್ಮರಿಗಾಗಿಯೇ ಅವರ ಕರ್ತವ್ಯವಿದೆ. ಅಂದಾಗ ಎಲ್ಲರಿಗಿಂತಲೂ ಶ್ರೇಷ್ಠವಾಗಿ ಬಿಟ್ಟರಲ್ಲವೆ. ಏಕೆಂದರೆ ಎಲ್ಲರಿಗಾಗಿ ಗತಿ-ಸದ್ಗತಿದಾತಾ ಒಬ್ಬರಾಗಿದ್ದಾರೆ. ಹೀಗಂತು ಹೇಳುವುದಿಲ್ಲ - ಸ್ವಲ್ಪ ಆತ್ಮರ ಗತಿ-ಸದ್ಗತಿ ಮಾಡಿದರು. ಅವರು ಸರ್ವರ ಗತಿ-ಸದ್ಗತಿದಾತ. ಅಂದಾಗ ಎಲ್ಲರ ಅಥಾರಿಟಿ ಆಗಿ ಬಿಟ್ಟಿತಲ್ಲವೆ. ಹಾಗೆ ನೋಡಿದರೆ ಸಾಮಾನ್ಯ ರೀತಿಯಿಂದ ನೋಡಿದಾಗ, ಮಹಿಮೆಯು ಆಗ ಆಗುತ್ತದೆ ಯಾವಾಗ ಯಾವುದೇ ಕರ್ತವ್ಯವನ್ನು ಮಾಡುತ್ತಾರೆ. ಯಾರೇ ಅಲ್ಪ ಸ್ವಲ್ಪ ಏನಾದರೂ ಅಂತಹ ಕಾರ್ಯವನ್ನು ಮಾಡುತ್ತಾರೆಂದರೆ ಅವರ ಮಹಿಮೆಯಾಗುತ್ತದೆ. ಅಂದಾಗ ತಂದೆಯ ಮಹಿಮೆಯೂ ಏನಿದೆ - ಅವರು ಸರ್ವ ಶ್ರೇಷ್ಠನಾಗಿದ್ದಾರೆ. ಅಂದಾಗ ಅವರು ಅವಶ್ಯವಾಗಿ ಇಲ್ಲಿಗೆ ಬಂದು ಮಹಾನ್ ಕರ್ತವ್ಯವನ್ನು ಮಾಡಿದ್ದಾರೆ ಮತ್ತು ಅವರು ನಮಗಾಗಿ, ಮನುಷ್ಯ ಸೃಷ್ಟಿಗಾಗಿ ಮಹಾನ್ ಶ್ರೇಷ್ಠ ಕರ್ತವ್ಯವನ್ನು ಮಾಡಿದ್ದಾರೆ. ಏಕೆಂದರೆ ಈ ಸೃಷ್ಟಿಯ ದುಃಖಹರ್ತ ಸುಖಕರ್ತ ಎಂದು ಅವರಿಗೆ ಹೇಳಲಾಗುತ್ತದೆ ಅಂದಾಗ ಅವರು ಬಂದು ಮನುಷ್ಯ ಸೃಷ್ಟಿಯನ್ನು ಶ್ರೇಷ್ಠವನ್ನಾಗಿ ಮಾಡಿದ್ದಾರೆ. ಪ್ರಕೃತಿಯ ಸಹಿತವಾಗಿ ಎಲ್ಲವನ್ನೂ ಪರಿವರ್ತನೆಯಲ್ಲಿ ತಂದಿದ್ದಾರೆ. ಆದರೆ ಯಾವ ಯುಕ್ತಿಯಿಂದ ತಂದಿದ್ದಾರೆ? ಅವರು ಕುಳಿತುಕೊಂಡು ತಿಳಿಸುತ್ತಾರೆ ಏಕೆಂದರೆ ಮೊದಲು ಮನುಷ್ಯಾತ್ಮರು, ಆತ್ಮರನ್ನು ಪರಿವರ್ತನೆಯಲ್ಲಿ ತರುವುದರಿಂದ ನಂತರ ಆತ್ಮ ಬಲದಿಂದ, ತನ್ನ ಕರ್ಮದ ಬಲದಿಂದ, ನಂತರ ಇವೆಲ್ಲಾ ಪ್ರಕೃತಿಯ ತತ್ವಗಳಲ್ಲಿಯೂ ಅದರ ಕೆಲಸ ಮಾಡುತ್ತದೆ ಎಂದಲ್ಲ. ಆದರೆ ಮಾಡುವವರಂತು ಅವರಾಗಿ ಬಿಟ್ಟರಲ್ಲವೆ. ಆದ್ದರಿಂದ ಮಾಡುವವರು ಅವರು, ಆದರೆ ಹೇಗೆ ಮಾಡುತ್ತಾರೆ? ಎಲ್ಲಿಯವರೆಗೆ ಮನುಷ್ಯಾತ್ಮರು ಶ್ರೇಷ್ಠರಾಗುವುದಿಲ್ಲ, ಅಲ್ಲಿಯವರೆಗೆ ಆತ್ಮದ ಆಧಾರದಿಂದ ಶರೀರವು ಪ್ರಕೃತಿ ತತ್ವ ಮುಂತಾದ ಇವೆಲ್ಲವೂ ನಂಬರ್ವಾರ್ ಅದೇ ತಾಕತ್ತಿನಲ್ಲಿ ಬರುತ್ತದೆ, ಅದರಿಂದ ಮತ್ತೆ ಇಡೀ ಸೃಷ್ಟಿಯು ಹಚ್ಚ ಹಸಿರು ಸುಖದಾಯಿಯಾಗುತ್ತದೆ.

ಅಂದಾಗ ಮನುಷ್ಯ ಸೃಷ್ಟಿಯನ್ನು ಸುಖದಾಯಿಯನ್ನಾಗಿ ಮಾಡುವಂತಹ ತಂದೆಯು ತಿಳಿದಿದ್ದಾರೆ – ಮನುಷ್ಯ ಸೃಷ್ಟಿಯನ್ನು ಸುಖದಾಯಿ ಹೇಗಾಗುತ್ತದೆ? ಎಲ್ಲಿಯವರೆಗೆ ಆತ್ಮರು ಸ್ವಚ್ಛವಾಗುವುದಿಲ್ಲ, ಅಲ್ಲಿಯವರೆಗೆ ಸೃಷ್ಟಿಯು ಸುಖದಾಯಿಯಾಗಲು ಸಾಧ್ಯವಿಲ್ಲ. ಆದ್ದರಿಂದ ಅವರು ಬಂದು ಮೊಟ್ಟ ಮೊದಲು ಆತ್ಮರನ್ನೇ ಸ್ವಚ್ಛಗೊಳಿಸುತ್ತಾರೆ. ಈ ಆತ್ಮನಿಗೆ ಅಪವಿತ್ರತೆಯು ಅಂಟಿದೆ. ಮೊದಲು ಆ ಅಪವಿತ್ರತೆಯನ್ನು ತೆಗೆಯಬೇಕಾಗಿದೆ. ನಂತರ ಆತ್ಮದ ಬಲದಿಂದ ಪ್ರತಿಯೊಂದು ವಸ್ತುವಿನಿಂದ ಅದರ ತಮೋಪ್ರಧಾನತೆಯನ್ನು ಬದಲಾಗಿ ಸತೋಪ್ರಧಾನತೆಯಾಗುತ್ತದೆ. ಅದಕ್ಕೆ ಹೇಳಲಾಗುತ್ತದೆ - ಎಲ್ಲರೂ ಗೋಲ್ಡನೇಜಡ್ನಲ್ಲಿ ಬಂದು ಬಿಡುತ್ತಾರೆ, ಅಂದಾಗ ಈ ತತ್ವ ಮುಂತಾದವೆಲ್ಲವೂ ಗೋಲ್ಡನೇಜ್ಡ್ ಸ್ಥಿತಿಯಲ್ಲಿ ಬಂದು ಬಿಡುತ್ತದೆ. ಆದರೆ ಮೊದಲು ಆತ್ಮನ ಸ್ಥಿತಿಯು ಬದಲಾಗುತ್ತದೆ. ಹಾಗಾದರೆ ಆತ್ಮರನ್ನು ಬದಲಾಯಿಸುವವರು ಅರ್ಥಾತ್ ಆತ್ಮರನ್ನು ಪ್ಯೂರಿಫೈಡ್ ಮಾಡುವವರು, ಮತ್ತೆ ಅಥಾರಿಟಿ ಅವರಾಗಿ ಬಿಟ್ಟರು. ನೀವು ನೋಡುತ್ತೀರಲ್ಲವೆ - ಈಗ ಪ್ರಪಂಚವು ಬದಲಾಗುತ್ತಾ ಹೋಗುತ್ತಿದೆ. ಮೊದಲಂತು ಸ್ವಯಂನ್ನು ಬದಲಾಯಿಸಬೇಕು, ಯಾವಾಗ ನಾವು ನಮ್ಮನ್ನು ಬದಲಾಯಿಸುತ್ತೇವೆ, ಆಗ ಅದರ ಆಧಾರದಿಂದ ಪ್ರಪಂಚವು ಬದಲಾಗುತ್ತದೆ. ಒಂದುವೇಳೆ ಈಗಿನವರೆಗೆ ನಮ್ಮಲ್ಲಿ ಅಂತರವು ಬಂದಿಲ್ಲ, ಸ್ವಯಂನ್ನೇ ಬದಲಾಯಿಸಿಲ್ಲವೆಂದರೆ ಪ್ರಪಂಚವು ಹೇಗೆ ಬದಲಾಗುತ್ತದೆ. ಆದ್ದರಿಂದ ತಮ್ಮನ್ನು ಪ್ರತಿನಿತ್ಯವೂ ಪರಿಶೀಲನೆ ಮಾಡಿಕೊಳ್ಳಿರಿ. ಹೇಗೆ ಲೆಕ್ಕವನ್ನಿಡುವವರು ರಾತ್ರಿಯಲ್ಲಿ ತನ್ನ ಲೆಕ್ಕವನ್ನು ನೋಡುತ್ತಾರಲ್ಲವೆ - ಇಂದು ಜಮಾ ಎಷ್ಟಾಯಿತು? ಎಲ್ಲರೂ ತನ್ನ ಲೆಕ್ಕವನ್ನಿಡುತ್ತಾರೆ. ಅಂದಾಗ ತಮ್ಮ ಈ ಲೆಕ್ಕವನ್ನೂ ಇಡಬೇಕು – ಇಡೀ ದಿನದಲ್ಲಿ ನಮ್ಮ ಲಾಭವೆಷ್ಟಿತ್ತು, ಎಷ್ಟು ನಷ್ಟವಾಯಿತು? ಒಂದುವೇಳೆ ನಷ್ಟದಲ್ಲಿ ಸ್ವಲ್ಪ ಹೆಚ್ಚಾಗಿ ಹೋಯಿತೆಂದರೆ, ಮತ್ತೆ ಇನ್ನೊಂದು ದಿನದಲ್ಲಿ ಎಚ್ಚರಿಕೆಯಿರಬೇಕು. ಇದೇ ರೀತಿಯಿಂದ ತಮ್ಮ ಗಮನವನ್ನಿಡುವುದರಿಂದ ನಾವು ಲಾಭದಲ್ಲಿ ಹೋಗುತ್ತಾ-ಹೋಗುತ್ತಾ, ತಮ್ಮ ಯಾವ ಪೊಸಿಷನ್ ಇದೆ ಅದನ್ನು ಹಿಡಿದುಕೊಂಡು ನಡೆಯುತ್ತೀರಿ. ಹೀಗೆ ಪರಿಶೀಲನೆಯನ್ನಿಡುತ್ತಾ ತಮ್ಮ ಬದಲಾಗಿರುವುದನ್ನು ಅನುಭೂತಿ ಮಾಡಬೇಕು. ಹೀಗಲ್ಲ - ನಾವಂತು ದೇವತೆಯಾಗುತ್ತೇವೆ, ಅವರಂತು ಹಿಂದೆ ಆಗುವರು, ಈಗ ಹೇಗಿದ್ದೇವೆ ಹಾಗೆಯೇ ಸರಿಯಾಗಿದೆ...... ಇಲ್ಲ. ಈಗಿನಿಂದ ಆ ದೈವೀ ಸಂಸ್ಕಾರಗಳನ್ನು ತಯಾರು ಮಾಡಿಕೊಳ್ಳಬೇಕು. ಈಗಿನವರೆಗೆ ಯಾವ 5 ವಿಕಾರಗಳ ವಶವಾಗಿರುವ ಸಂಸ್ಕಾರದಲ್ಲಿ ನಡೆಯುತ್ತಿದ್ದೆವು, ಆ ವಿಕಾರಗಳಿಂದ ನಾವು ಮುಕ್ತರಾಗುತ್ತಾ ಹೋಗುತ್ತಿದ್ದೇವೆಯೇ? ಅದನ್ನೀಗ ನೋಡಬೇಕು. ನಮಲ್ಲಿ ಯಾವ ಕ್ರೋಧ ಮುಂತಾದವುಗಳಿದ್ದವು, ಅದು ಹೊರಟು ಹೋಗುತ್ತಿದೆಯೇ? ಲೋಭ ಅಥವಾ ಮೋಹ ಮುಂತಾದವೇನಿತ್ತು, ಅದೆಲ್ಲಾ ವಿಕಾರಿ ಸಂಸ್ಕಾರಗಳು ಬದಲಾಗುತ್ತಾ ಹೋಗುತ್ತಿದೆಯೇ? ಒಂದುವೇಳೆ ಬದಲಾಗುತ್ತಾ ಹೋಗುತ್ತಿದೆ, ಮುಕ್ತವಾಗುತ್ತಾ ಹೋಗುತ್ತಿದೆಯೆಂದರೆ ತಿಳಿಯಿರಿ - ನಾವು ಬದಲಾಗುತ್ತಾ ಹೋಗುತ್ತಿದ್ದೇವೆ. ಒಂದುವೇಳೆ ಬಿಟ್ಟು ಹೋಗಿಲ್ಲವೆಂದರೆ ತಿಳಿಯಿರಿ - ಈಗ ನಾವು ಬದಲಾಗಿಲ್ಲ. ಅಂದಾಗ ಬದಲಾಗುವ ಅಂತರವು ಅನುಭವವಾಗಬೇಕು, ತಮ್ಮಲ್ಲಿ ಪರಿವರ್ತನೆ ಬರಬೇಕು. ಇಡೀ ದಿನದಲ್ಲಿ ವಿಕಾರಿ ಖಾತೆಯಲ್ಲಿಯೇ ನಡೆಯುತ್ತಿರುವುದು, ಉಳಿದವರು ತಿಳಿಯಲಿ - ನಾವು ಬಹಳ ಚೆನ್ನಾಗಿ ದಾನ ಪುಣ್ಯ ಮಾಡಿದೆವು ಅಷ್ಟೇ, ಹೀಗಲ್ಲ. ನಮ್ಮ ಯಾವ ಕರ್ಮದ ಖಾತೆಯು ನಡೆಯುತ್ತದೆ, ಅದರಲ್ಲಿ ನಮ್ಮನ್ನು ಸಂಭಾಲನೆ ಮಾಡಬೇಕು. ನಾವೇನು ಮಾಡುತ್ತೇವೆ, ಅದರಲ್ಲಿ ಯಾವುದೇ ವಿಕಾರಕ್ಕೆ ವಶರಾಗಿ ತಮ್ಮ ವಿಕರ್ಮದ ಖಾತೆಯನ್ನಂತು ಮಾಡುತ್ತಿಲ್ಲವೇ? ಇದರಲ್ಲಿ ತಮ್ಮನ್ನು ತಾವು ಸಂಭಾಲನೆ ಮಾಡಬೇಕು. ಇದೆಲ್ಲದರ ಲೆಕ್ಕವನ್ನಿಡಬೇಕು ಮತು ಮಲಗುವ ಮುನ್ನವೇ 10-15 ನಿಮಿಷಗಳು ತಮ್ಮನ್ನು ನೋಡಿಕೊಳ್ಳಬೇಕು - ಇಡೀ ದಿನವನ್ನು ನಾವು ಹೇಗೆ ಕಳೆದೆವು? ಕೆಲವರಂತು ನೋಟ್ ಸಹ ಮಾಡುತ್ತಾರೆ. ಏಕೆಂದರೆ ಹಿಂದಿನ ಪಾಪಗಳೇನು ತಲೆಯ ಮೇಲೆ ಹೊರೆಯಿದೆ, ಅದೂ ಸಮಾಪ್ತಿಯಾಗಬೇಕು, ಅದಕ್ಕಾಗಿ ತಂದೆಯ ಆದೇಶವಿದೆ - ನನ್ನನ್ನು ನೆನಪು ಮಾಡಿರಿ. ಅದನ್ನೂ ಸಹ ನಾವು ಎಷ್ಟು ಸಮಯ ನೆನಪಿನಲ್ಲಿ ಕೊಟ್ಟಿದ್ದೆವು? ಏಕೆಂದರೆ ಈ ಚಾರ್ಟ್ ಇಡುವುದರಿಂದ ಇನ್ನೊಂದು ದಿನಕ್ಕಾಗಿ ಎಚ್ಚರವಾಗಿರುತ್ತೇವೆ. ಹೀಗೆ ಎಚ್ಚರಿಕೆಯಿರುತ್ತಾ-ಇರುತ್ತಾ ನಂತರ ಎಚ್ಚರವಾಗಿ ಬಿಡುತ್ತೇವೆ, ನಂತರ ನಮ್ಮ ಕರ್ಮವು ಒಳ್ಳೆಯದಾಗುತ್ತಾ ನಡೆಯುತ್ತದೆ ಮತ್ತು ಅಂತಹ ಯಾವುದೇ ಪಾಪವಾಗುವುದಿಲ್ಲ. ಅಂದಾಗ ಪಾಪಗಳಿಂದಲೇ ಪಾರಾಗಬೇಕಲ್ಲವೆ.

ನಮ್ಮನ್ನು ಈ ವಿಕಾರಗಳೇ ಕೆಟ್ಟವರನ್ನಾಗಿ ಮಾಡಿತು. ವಿಕಾರಗಳ ಕಾರಣದಿಂದಲೇ ನಾವು ದುಃಖಿಯಾದೆವು. ಈಗ ನಾವು ದುಃಖದಿಂದ ಮುಕ್ತರಾಗಬೇಕು ಅಂದಾಗ ಇದೇ ಮುಖ್ಯ ವಸ್ತುವಾಗಿದೆ. ಭಕ್ತಿಯಲ್ಲಿಯೂ ಪರಮಾತ್ಮನನ್ನು ನಾವು ಕರೆಯುತ್ತೇವೆ, ನೆನಪು ಮಾಡುತ್ತೇವೆ, ಏನೆಲ್ಲಾ ಪುರುಷಾರ್ಥ ಮಾಡುತ್ತೇವೆ, ಅದು ಏತಕ್ಕಾಗಿ ಮಾಡುತ್ತೇವೆ? ಸುಖ ಮತ್ತು ಶಾಂತಿಗಾಗಿ ಮಾಡುತ್ತೇವಲ್ಲವೆ! ಅಂದಾಗ ಅದರ ಈ ಪ್ರಾಕ್ಟಿಕಲ್ ಪ್ರಾಕ್ಟೀಸ್ನ್ನೀಗ ಮಾಡಿಸಲಾಗುತ್ತದೆ. ಇದು ಪ್ರಾಕ್ಟಿಕಲ್ ಮಾಡುವ ಕಾಲೇಜ್ ಆಗಿದೆ, ಇದರ ಪ್ರಾಕ್ಟೀಸ್ ಮಾಡುವುದರಿಂದ ನಾವು ಸ್ವಚ್ಛ ಅಥವಾ ಪವಿತ್ರರಾಗುತ್ತಾ ಹೋಗುತ್ತೇವೆ. ನಂತರ ನಮ್ಮ ಯಾವ ಆದಿ ಸನಾತನ ಪವಿತ್ರ ಪ್ರವೃತ್ತಿಯ ಲಕ್ಷ್ಯವಿದೆ, ಅದನ್ನು ನಾವು ಪಡೆದುಕೊಳ್ಳುತ್ತೇವೆ. ಹೇಗೆ ಯಾರೇ ವೈದ್ಯರಾಗುವುದಕ್ಕಾಗಿ ಡಾಕ್ಟರಿ ಕಾಲೇಜಿನಲ್ಲಿ ಹೋಗುತ್ತಾರೆ, ಡಾಕ್ಟರಿ ಪ್ರಾಕ್ಟೀಸ್ನಿಂದ ಡಾಕ್ಟರ್ ಆಗುತ್ತಾ ಹೋಗುತ್ತಾರೆ. ಇದೇ ರೀತಿಯಿಂದ ನಾವೂ ಸಹ ಈ ಕಾಲೇಜಿನಲ್ಲಿ ಈ ವಿದ್ಯೆಯಿಂದ ಅಥವಾ ಈ ಅಭ್ಯಾಸದಿಂದ, ಈ ವಿಕಾರಗಳಿಂದ ಅಥವಾ ಪಾಪ ಕರ್ಮಗಳನ್ನು ಮಾಡುವುದರಿಂದ ಮುಕ್ತರಾಗುತ್ತಾ ಸ್ವಚ್ಛವಾಗುತ್ತಾ ಹೋಗುತ್ತೇವೆ. ನಂತರ ಸ್ವಚ್ಛತೆಯ ಡಿಗ್ರಿಯೇನಾಗಿದೆ? ದೇವತಾ.

ಈ ದೇವತೆಗಳಂತು ಗಾಯನ ಯೋಗ್ಯರಾಗಿದ್ದಾರೆ ಅಲ್ಲವೆ, ಅವರ ಮಹಿಮೆಯಿದೆ - ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣ, ಸಂಪೂರ್ಣ ನಿರ್ವಿಕಾರಿ...... ಅಂದಾಗ ಹೀಗೇಗಾಗುವುದು? ನಾವಂತು ಮಾಡಿ-ಮಾಡಲ್ಪಟ್ಟಿರುವವರು ಎಂದಲ್ಲ. ಆಗಬೇಕು ಏಕೆಂದರೆ ನಾವೇ ಹಾಳಾಗಿದ್ದೇವೆ, ನಾವೇ ಆಗಬೇಕು. ದೇವತೆಗಳ ಯಾವುದೋ ಇನ್ನೊಂದು ಪ್ರಪಂಚವಿದೆಯೆಂದಲ್ಲ. ನಾವು ಮನುಷ್ಯರೇ ದೇವತೆಯಾಗಬೇಕು. ಆ ದೇವತೆಗಳೇ ಬಿದ್ದು ಹೋಗಿದ್ದಾರೆ(ಕನಿಷ್ಟ), ಈಗ ಮತ್ತೆ ಏರಬೇಕು. ಆದರೆ ಏರುವ ವಿಧಿಯನ್ನು ತಂದೆಯು ಕಲಿಸುತ್ತಿದ್ದಾರೆ. ಈಗ ಅವರ ಜೊತೆ ನಾವು ನಮ್ಮ ಸಂಬಂಧವನ್ನು ಜೋಡಿಸಬೇಕಾಗಿದೆ. ಈಗ ತಂದೆಯು ಬಂದು ಪ್ರಕಾಶತೆಯನ್ನು ಕೊಟ್ಟಿದ್ದಾರೆ, ಕೊನೆಗೆ ನೀವು ನನ್ನವರಾಗಿದ್ದೀರಿ, ಈಗ ನನ್ನವರಾಗಿ ಇರುವುದು ಹೇಗೆ! ಹೇಗೆ ಲೌಕಿಕದಲ್ಲಿ ತಂದೆಯು ಮಕ್ಕಳ, ಮಕ್ಕಳು ತಂದೆಯ ಜೊತೆ ಹೇಗಿರುತ್ತಾರೆ. ಹಾಗೆಯೇ ನೀವು ತನು-ಮನ-ಧನದಿಂದ ನನ್ನವರಾಗಿದ್ದು ನಡೆಯಿರಿ. ಹೇಗೆ ನಡೆಯುವುದು! ಅದರ ಪ್ರಮಾಣವನ್ನು ಇವರು (ಬ್ರಹ್ಮಾ) ಆಗಿದ್ದಾರೆ, ಯಾರ ತನುವಿನಲ್ಲಿ ಬರುತ್ತಾರೆ, ಅವರು ತನ್ನ ತನು-ಮನ-ಧನವೆಲ್ಲವನ್ನೂ ಅವರಿಗೆ ಅರ್ಪಣೆ ಮಾಡಿ, ಅವರವರಾಗಿದ್ದು ನಡೆಯುತ್ತಿದ್ದಾರೆ. ಹೀಗೆ ಫಾಲೋ ಫಾದರ್. ಇದರಲ್ಲಿ ಇನ್ನೇನು ಕೇಳುವ ಮತ್ತು ತಬ್ಬಿಬ್ಬಾಗುವ ಮಾತಿಲ್ಲ. ಸೀದಾ ಮಾತಾಗಿದೆ. ಅಂದಾಗ ಈಗ ನಡೆಯುತ್ತಿರಿ. ಹೀಗಲ್ಲ - ಕೇಳುವುದು ಬಹಳ ಮತ್ತು ಧಾರಣೆ ಮಾಡುವುದು ಕಡಿಮೆ. ಇಲ್ಲ. ಕೇಳುವುದು ಸ್ವಲ್ಪ ಧಾರಣೆಯು ಬಹಳ ಮಾಡಿರಿ. ಏನನ್ನು ಕೇಳುತ್ತೀರಿ ಅದನ್ನು ಪ್ರಾಕ್ಟಿಕಲ್ನಲ್ಲಿ ಹೇಗೆ ತರುವುದು, ಅದರ ಪೂರ್ಣ ವಿಚಾರವನ್ನಿಡುತ್ತಾ ಇರಿ. ತಮ್ಮ ಅಭ್ಯಾಸವನ್ನು ಮುಂದುವರೆಸುತ್ತಿರಿ. ಹೀಗಲ್ಲ- ಕೇಳುತ್ತಿರೋಣ, ಕೇಳುತ್ತಿರುತ್ತೇವೆ.... ಅಲ್ಲ. ಇಂದೇನು ಕೇಳಿದ್ದೇವೆ, ಅದನ್ನು ಒಂದುವೇಳೆ ಯಾರೇ ಪ್ರಾಕ್ಟಿಕಲ್ನಲ್ಲಿ ತಂದರು, ಅಷ್ಟೇ ನಾವು ಇಂದಿನಿಂದ ಅದೇ ಸ್ಥಿತಿಯಲ್ಲಿ ನಡೆಯುತ್ತೇವೆ. ವಿಕಾರಗಳಿಗೆ ವಶರಾಗಿ ಯಾವುದೇ ಅಂತಹ ಕರ್ಮವನ್ನು ಮಾಡುವುದಿಲ್ಲ ಮತ್ತು ನನ್ನ ದಿನಚರಿಯನ್ನು ಹಾಗೆ ಮಾಡಿಕೊಳ್ಳುತ್ತೇನೆ, ನನ್ನ ಅಂತಹ ಚಾರ್ಟನ್ನೂ ಇಡುತ್ತೇನೆ. ಒಂದುವೇಳೆ ಇದನ್ನೇನಾದರೂ ಪ್ರಾಕ್ಟಿಕಲ್ ಪ್ರಾಕ್ಟೀಸ್ನಲ್ಲಿ ತಂದಿದ್ದೇ ಆದರೆ ನೋಡಿ, ಏನಾಗಿ ಬಿಡುತ್ತದೆ! ಈಗೇನು ಹೇಳಲಾಯಿತಲ್ಲವೆ, ಅದನ್ನು ಪ್ರಾಕ್ಟಿಕಲ್ನಲ್ಲಿ ತನ್ನಿರಿ. ಏನು ಹೇಳುತ್ತೀರಿ, ಏನು ಕೇಳುತ್ತೀರಿ ಅದನ್ನು ಮಾಡಿರಿ. ಇನ್ನೊಂದು ಮಾತಿಲ್ಲ. ಕೇವಲ ಮಾಡುವುದರ ಮೇಲೆ ಒತ್ತುಕೊಡಿ. ತಿಳಿಯಿತೆ. ಹೇಗೆ ಬಾಪ್ ಮತ್ತು ದಾದಾ ಇಬ್ಬರನ್ನೂ ಬಹಳ ಚೆನ್ನಾಗಿ ತಿಳಿದಿದ್ದೀರಲ್ಲವೆ, ಹಾಗೆಯೇ ಈಗ ಫಾಲೋ ಮಾಡಿರಿ. ಹೀಗೆ ಫಾಲೋ ಮಾಡುವ ಸುಪುತ್ರ ಮಕ್ಕಳು ಯಾರಿದ್ದಾರೆ ಅಥವಾ ಮಧುರಾತಿ ಮಧುರ ಮಕ್ಕಳು ಯಾರಿದ್ದಾರೆ, ಅಂತಹ ಮಕ್ಕಳ ಪ್ರತಿ ನೆನಪು-ಪ್ರೀತಿ ಹಾಗೂ ಸುಪ್ರಭಾತ.

ಇನ್ನೊಂದು ಮುರುಳಿ: 1957

ಗೀತೆ:
ಮೇರಾ ಛೋಟಾ ಸ ದೇಖೊ ಯೆ ಸಂಸಾರ್ ಹೈ....

ಈ ಗೀತೆಯು ಯಾವ ಸಮಯದಲ್ಲಿ ಗಾಯನವಾಗಿದೆ, ಏಕೆಂದರೆ ಈ ಸಂಗಮದ ಸಮಯದಲ್ಲಿಯೇ ನಾವು ಬ್ರಾಹ್ಮಣ ಕುಲದ ಚಿಕ್ಕದಾದ ಈ ಸಂಸಾರವಿದೆ. ನಮ್ಮ ಈ ಯಾವ ಪರಿವಾರವಿದೆ, ಅದನ್ನು ನಂಬರ್ವಾರ್ ಎಂದು ಹೇಳಲಾಗುತ್ತದೆ. ನಾವು ಪರಮಪಿತ ಪರಮಾತ್ಮ ಶಿವನ ಮೊಮ್ಮಕ್ಕಳಾಗಿದ್ದೇವೆ, ಬ್ರಹ್ಮಾ-ಸರಸ್ವತಿಯ ಮುಖವಂಶಾವಳಿ ಮತ್ತು ವಿಷ್ಣು-ಶಂಕರನು ನಮ್ಮ ದೊಡ್ಡಪ್ಪ ಆಗಿದ್ದಾರೆ ಮತ್ತು ನಾವು ಪರಸ್ಪರದಲ್ಲಿ ಎಲ್ಲರೂ ಸಹೋದರ-ಸಹೋದರಿಯಾದೆವು. ಇದು ನಮ್ಮ ಚಿಕ್ಕದಾದ ಸಂಸಾರ...... ಇದರ ಮುಂದೆ ಮತ್ತ್ಯಾವುದೇ ಸಂಬಂಧದ ರಚನೆಯೇ ಇಲ್ಲ, ಇದೇ ಸಮಯದ ಇಷ್ಟೇ ಸಂಬಂಧವನ್ನು ಹೇಳುತ್ತೇವೆ. ನೋಡಿ, ನಮ್ಮ ಸಂಬಂಧವು ಎಷ್ಟೊಂದು ಶ್ರೇಷ್ಠ ಅಥಾರಿಟಿಯಿಂದ ಇದೆ! ನಮ್ಮ ಮುತ್ತಾತ ಶಿವನಾಗಿದ್ದಾರೆ, ಅವರ ಹೆಸರು ಎಷ್ಟೊಂದು ಶ್ರೇಷ್ಠ, ಅವರು ಇಡೀ ಮನುಷ್ಯ ಸೃಷ್ಟಿಯ ಬೀಜ ರೂಪನಾಗಿದ್ದಾರೆ, ಸರ್ವಾತ್ಮರ ಕಲ್ಯಾಣಕಾರಿ ಆಗುವುದರಿಂದ ಅವರಿಗೆ ಹೇಳಲಾಗುತ್ತದೆ - ಹರ್ ಹರ್ ಭೋಲಾನಾಥ ಶಿವ ಮಹಾದೇವ್. ಅವರು ಇಡೀ ಸೃಷ್ಟಿಯ ದುಃಖಹರ್ತ, ಸುಖಕರ್ತನಾಗಿದ್ದಾರೆ, ಅವರ ಮೂಲಕ ನಮಗೆ ಸುಖ-ಶಾಂತಿ-ಪವಿತ್ರತೆಯ ದೊಡ್ಡ ಅಧಿಕಾರವು ಸಿಗುತ್ತದೆ, ಶಾಂತಿಯಲ್ಲಿ ಮತ್ತ್ಯಾವುದೇ ಕರ್ಮ ಬಂಧನದ ಲೆಕ್ಕಾಚಾರವಿರುವುದಿಲ್ಲ. ಆದರೆ ಇವೆರಡೂ ವಸ್ತುಗಳು ಪವಿತ್ರತೆಯ ಆಧಾರದಿಂದ ಇಡುತ್ತೇವೆ. ಎಲ್ಲಿಯವರೆಗೆ ತಂದೆಯ ಪಾಲನೆಯ ಪೂರ್ಣ ಆಸ್ತಿಯನ್ನು ತೆಗೆದುಕೊಂಡು ತಂದೆಯ ಸರ್ಟಿಫಿಕೇಟ್ ಸಿಕ್ಕಿಲ್ಲ, ಅಲ್ಲಿಯವರೆಗೆ ಆ ಆಸ್ತಿಯು ಸಿಗಲು ಸಾಧ್ಯವಿಲ್ಲ. ನೋಡಿ, ಬ್ರಹ್ಮಾರವರ ಮೇಲೆ ಎಷ್ಟೊಂದು ದೊಡ್ಡ ಕಾರ್ಯವಿದೆ - ಮಲೇಚ್ಛ 5 ವಿಕಾರಗಳಲ್ಲಿ ಮೈಲಿಗೆಯಾಗಿರುವ ಅಪವಿತ್ರ ಆತ್ಮರನ್ನು ಸುಂದರರನ್ನಾಗಿ ಮಾಡುತ್ತಾರೆ. ಈ ಅಲೌಕಿಕ ಕಾರ್ಯದ ರಿಟರ್ನ್ನಲ್ಲಿ ಮತ್ತೆ ಸತ್ಯಯುಗದ ಮೊದಲ ನಂಬರಿನ ಶ್ರೀಕೃಷ್ಣನ ಪದವಿಯು ಸಿಗುತ್ತದೆ. ಈಗ ನೋಡಿ - ಆ ತಂದೆಯ ಜೊತೆ ನಿಮ್ಮ ಸಂಬಂಧವು ಹೇಗಿದೆ! ಅಂದಾಗ ಎಷ್ಟೊಂದು ನಿಶ್ಚಿಂತ ಮತ್ತು ಖುಷಿಯಾಗಬೇಕು. ಈಗ ಪ್ರತಿಯೊಬ್ಬರೂ ತಮ ಹೃದಯದಿಂದ ಕೇಳಿಕೊಳ್ಳಿರಿ - ನಾವು ಸಂಪೂರ್ಣವಾಗಿ ಅವರವರಾಗಿದ್ದೇವೆಯೇ?

ಯೋಚಿಸಬೇಕು - ಯಾವಾಗ ಪರಮಾತ್ಮ ತಂದೆಯು ಬಂದಿದ್ದಾರೆ ಅಂದಮೇಲೆ ಅವರಿಂದ ನಾವು ಸಂಪೂರ್ಣವಾಗಿ ಆಸ್ತಿಯನ್ನು ತೆಗೆದುಕೊಂಡು ಬಿಡಬೇಕು. ವಿದ್ಯಾರ್ಥಿಯ ಕಾರ್ಯವಾಗಿದೆ - ಸಂಪೂರ್ಣವಾಗಿ ಪುರುಷಾರ್ಥ ಮಾಡಿ ವಿದ್ಯಾರ್ಥಿವೇತನವನ್ನು ತೆಗೆದುಕೊಳ್ಳುವುದು, ಹಾಗಾದರೆ ನಾವು ಮೊದಲ ನಂಬರಿನ ಲಾಟರಿಯನ್ನೇಕೆ ವಿನ್ ಮಾಡಬಾರದು! ಅಂತಹವರೇ ವಿಜಯ ಮಾಲೆಯಲ್ಲಿ ಪೋಣಿಸಲ್ಪಡುವವರಾಗಿದ್ದಾರೆ. ಉಳಿದವರೇನಿದ್ದಾರೆ, ಅವರು ಎರಡು ಲಡ್ಡುಗಳನ್ನಿಡಿದು ಕುಳಿತಿದ್ದಾರೆ. ಇಲ್ಲಿಯೂ ಸಹ ಅಲ್ಪಕಾಲದ ಸುಖವನ್ನು ತೆಗೆದುಕೊಳ್ಳೋಣ ಮತ್ತು ಅಲ್ಲಿಯೂ ವೈಕುಂಠದಲ್ಲಿ ಏನೋ ಒಂದು ಸುಖವನ್ನು ತೆಗೆದುಕೊಳ್ಳೋಣ, ಹೀಗೆ ವಿಚಾರವಿರುವವರಿಗೆ ಮಧ್ಯಮ ಮತ್ತು ಕನಿಷ್ಟ ಪುರುಷಾರ್ಥಿ ಎಂದು ಹೇಳುವರು, ಸರ್ವೋತ್ತಮ ಪುರುಷಾರ್ಥಿಯಲ್ಲ. ಯಾವಾಗ ತಂದೆಯು ಕೊಡುವುದರಲ್ಲಿ ಕಡಿಮೆ ಮಾಡುವುದಿಲ್ಲ, ಅಂದಮೇಲೆ ತೆಗೆದುಕೊಳ್ಳುವವರು ಕ್ಯೂ ಮಾಡುತ್ತಾರೆಯೇ? ಅದಕ್ಕಾಗಿ ಗುರುನಾನಕರು ಹೇಳುತ್ತಾರೆ - ಪರಮಾತ್ಮನಂತು ದಾತಾ ಆಗಿದ್ದಾರೆ, ಸಮರ್ಥನಾಗಿದ್ದಾರೆ. ಆದರೆ ಆತ್ಮರು ತೆಗೆದುಕೊಳ್ಳುವುದಕ್ಕೂ ತಾಕತ್ತಿಲ್ಲ. ಹೇಳಿದೆಯಿದೆ - ದೆಂದಾ ದೆ, ಲೆಂದಾ ತಕ್ ಪಾವೆ (ಕೊಡುವವರು ಕೊಡುತ್ತಾರೆ ಆದರೆ ತೆಗೆದುಕೊಳ್ಳುವವರು ಸುಸ್ತಾಗುತ್ತಾರೆ) ತಮ್ಮ ಹೃದಯದಲ್ಲಿ ಬರುತ್ತದೆ - ನಾವೇಕೆ ಬಯಸುವುದಿಲ್ಲ - ನಾವೂ ಸಹ ಈ ಪದವಿಯನ್ನು ಪಡೆಯೋಣ. ಆದರೆ ನೋಡಿ, ಬಾಬಾರವರು ಎಷ್ಟೊಂದು ಪರಿಶ್ರಮ ಪಡುತ್ತಾರೆ, ಆದರೂ ಮಾಯೆಯು ಎಷ್ಟೊಂದು ವಿಘ್ನವನ್ನು ಹಾಕುತ್ತದೆ, ಏಕೆ? ಈಗ ಮಾಯೆಯ ರಾಜ್ಯವು ಸಮಾಪ್ತಿಯಾಗುವುದಿದೆ. ಈಗ ಮಾಯೆಯು ಇಡೀ ಸಾರವನ್ನೇ ತೆಗೆದು ಬಿಟ್ಟಿದೆ, ಆಗಲೇ ಪರಮಾತ್ಮನ ತಂದೆಯು ಬರುತ್ತಾರೆ. ಅವರಲ್ಲಿ ಎಲ್ಲಾ ರಸ(ಶಕ್ತಿ)ಗಳು ಸಮಾವೇಶವಾಗಿದೆ, ಅವರಿಂದ ಎಲ್ಲಾ ಸಂಬಂಧಗಳ ಶಕ್ತಿಯು ಸಿಗುತ್ತದೆ. ಆಗಲೇ ತ್ವಮೇವ ಮಾತಾಶ್ಚ ಪಿತಾ...... ಮುಂತಾದ ಈ ಮಹಿಮೆಯನ್ನು ಆ ಪರಮಾತ್ಮನಿಗೆ ಗಾಯನವಾಗಿದೆ, ಅಂದಾಗ ಬಲಿಹಾರಿ ಈ ಸಮಯದ್ದಾಗಿದೆ, ಅದರಿಂದ ಇಂತಹ ಸಂಬಂಧವುಂಟಾಗಿದೆ.

ಹಾಗಾದರೆ ಪರಮಾತ್ಮನ ಜೊತೆ ಇಷ್ಟು ಸಂಪೂರ್ಣ ಸಂಬಂಧವನ್ನು ಜೋಡಿಸಬೇಕು, ಅದರಿಂದ 21 ಜನ್ಮಗಳಿಗಾಗಿ ಸುಖದ ಪ್ರಾಪ್ತಿಯಾಗಿ ಬಿಡಲಿ - ಇದು ಪುರುಷಾರ್ಥದ ಸಿದ್ಧಿಯಾಗಿದೆ. ಆದರೆ ಜನ್ಮದ ಹೆಸರನ್ನು ಕೇಳಿ ತಣ್ಣಗಾಗಿ ಬಿಡಬಾರದು. ಹೀಗೆ ಯೋಚಿಸಬಾರದು - 21 ಜನ್ಮಗಳಿಗಾಗಿ ಇಷ್ಟು ಸಮಯ ಪುರುಷಾರ್ಥವನ್ನೂ ಮಾಡುತ್ತೇವೆ ಮತ್ತೆ 21 ಜನ್ಮಗಳ ನಂತರ ಬೀಳಲೇಬೇಕು, ಅಂದಾಗ ಸಿದ್ಧಿಯೇನಾಯಿತು? ಆದರೆ ಡ್ರಾಮಾದಲ್ಲಿ ಆತ್ಮರದೆಷ್ಟು ಸರ್ವೋತ್ತಮ ಸಿದ್ಧಿಯು ನಿಗಧಿಯಾಗಿದೆ, ಅದಂತು ಸಿಗುತ್ತದೆಯಲ್ಲವೆ! ತಂದೆಯು ಬಂದು ನಮ್ಮನ್ನು ಸಂಪೂರ್ಣ ಸ್ಥಿತಿಯಲ್ಲಿ ತಲುಪಿಸಿ ಬಿಡುತ್ತಾರೆ. ಆದರೆ ನಾವು ಮಕ್ಕಳು ತಂದೆಯನ್ನು ಮರೆತು ಹೋಗುತ್ತೇವೆಂದರೆ ಅವಶ್ಯವಾಗಿ ಬೀಳುತ್ತೇವೆ. ಇದರಲ್ಲಿ ತಂದೆಯ ದೋಷವೇನೂ ಇಲ್ಲ. ಈಗ ಕಡಿಮೆಯಿದೆಯೆಂದರೆ ನಾವು ಮಕ್ಕಳದು, ಸತ್ಯಯುಗ-ತ್ರೇತಾದ ಸರ್ವ ಸುಖವು ಈ ಜನ್ಮದ ಪುರುಷಾರ್ಥದ ಆಧಾರವಾಗುತ್ತದೆ, ಅಂದಮೇಲೆ ಸಂಪೂರ್ಣ ಪುರುಷಾರ್ಥ ಮಾಡಿ ನಮ್ಮ ಸರ್ವೋತ್ತಮ ಪಾತ್ರವನ್ನಭಿನಯಿಸಬಾರದು! ನಾವೇಕೆ ಪುರುಷಾರ್ಥ ಮಾಡಿ ಆ ಆಸ್ತಿಯನ್ನು ತೆಗೆದುಕೊಂಡು ಬಿಡಬಾರದು! ಪುರುಷಾರ್ಥವನ್ನು ಮನುಷ್ಯರು ಸದಾ ಸುಖಕ್ಕಾಗಿಯೇ ಮಾಡುತ್ತಾರೆ. ಸುಖ-ದುಃಖದಿಂದ ಭಿನ್ನವಾಗುವುದಕ್ಕಾಗಿ ಯಾರೂ ಸಹ ಪುರುಷಾರ್ಥ ಮಾಡುವುದಿಲ್ಲ. ಅದಂತು ಡ್ರಾಮಾದ ಅಂತ್ಯದಲ್ಲಿ ಪರಮಾತ್ಮನು ಬಂದು, ಎಲ್ಲಾ ಆತ್ಮರಿಗೆ ಶಿಕ್ಷೆಯನ್ನು ಕೊಟ್ಟು ಪವಿತ್ರರನ್ನಾಗಿ ಮಾಡಿ ಪಾತ್ರದಿಂದ ಮುಕ್ತಗೊಳಿಸುತ್ತಾರೆ. ಇದಂತು ಪರಮಾತ್ಮನ ಕಾರ್ಯವಾಗಿದೆ, ಅವರು ತನ್ನ ನಿಗಧಿತ ಸಮಯದಲ್ಲಿ ತಾನಾಗಿಯೇ ಬಂದು ತಿಳಿಸುತ್ತಾರೆ. ಈಗ ಆತ್ಮರು ಪುನಃ ಸಹ ಪಾತ್ರದಲ್ಲಿ ಬರಲೇಬೇಕಾಗುತ್ತದೆ ಅಂದಮೇಲೆ ಸರ್ವೋತ್ತಮ ಪಾತ್ರವನ್ನೇಕೆ ಅಭಿನಯಿಸಬಾರದು!

ಒಳ್ಳೆಯದು. ಮಧುರಾತಿ ಮಧುರ ಮಕ್ಕಳ ಪ್ರತಿ ಮಮ್ಮಾರವರ ನೆನಪು-ಪ್ರೀತಿ. ಓಂ ಶಾಂತಿ.

ವರದಾನ:
ಬಾಬಾ ಶಬ್ಧದ ಸೃತಿಯಿಂದ ಕಾರಣವನ್ನು ನಿವಾರಣೆಯಲ್ಲಿ ಪರಿವರ್ತನೆ ಮಾಡುವಂತಹ ಸದಾ ಅಚಲ-ಅಡೋಲ ಭವ.

ಯಾವುದೇ ಪರಿಸ್ಥಿತಿಗಳು, ಅದು ಭಲೆ ಏರುಪೇರಿನದೇ ಆಗಿರಲಿ ಆದರೆ ಬಾಬಾ ಹೇಳಿದಿರಿ ಮತ್ತು ಅಚಲರಾದಿರಿ. ಯಾವಾಗ ಪರಿಸ್ಥಿತಿಗಳ ಚಿಂತನೆಯಲ್ಲಿ ಹೊರಟು ಹೋಗುತ್ತೀರೆಂದರೆ ಕಷ್ಟದ ಅನುಭವವಾಗುತ್ತದೆ. ಒಂದುವೇಳೆ ಕಾರಣಕ್ಕೆ ಬದಲಾಗಿ ನಿವಾರಣೆಯಲ್ಲಿ ಹೊರಟು ಹೋಗುತ್ತೀರೆಂದರೆ, ಕಾರಣವೇ ನಿವಾರಣೆಯಾಗಿ ಬಿಡಲಿ. ಏಕೆಂದರೆ ಮಾಸ್ಟರ್ ಸರ್ವಶಕ್ತಿವಂತ ಬ್ರಾಹ್ಮಣರ ಮುಂದೆ ಪರಿಸ್ಥಿತಿಗಳು ಇರುವೆಯ ಸಮಾನವೂ ಅಲ್ಲ. ಕೇವಲ ಏನಾಯಿತು, ಏಕೆ ಆಯಿತು - ಇದನ್ನು ಯೋಚಿಸುವ ಬದಲು, ಏನಾಯಿತೋ ಅದರಲ್ಲಿ ಕಲ್ಯಾಣ ಅಡಗಿದೆ, ಸೇವೆಯು ಸಮಾವೇಶವಾಗಿದೆ..... ಭಲೆ ರೂಪವು ಸಂದರ್ಭದ್ದಾಗಿದೆ. ಆದರೆ ಸೇವೆಯು ಸಮಾವೇಶವಾಗಿದೆ - ಈ ರೂಪದಿಂದ ನೋಡುತ್ತೀರೆಂದರೆ ಸದಾ ಅಚಲ-ಅಡೋಲರಾಗಿರುತ್ತೀರಿ.

ಸ್ಲೋಗನ್:
ಒಬ್ಬ ತಂದೆಯ ಪ್ರಭಾವದಲ್ಲಿರುವವರು ಯಾವುದೇ ಆತ್ಮದ ಪ್ರಭಾವದಲ್ಲಿ ಬರಲು ಸಾಧ್ಯವಿಲ್ಲ.