14.06.20    Avyakt Bapdada     Kannada Murli     22.01.86     Om Shanti     Madhuban


ಬಾಪ್ದಾದಾರವರ ಆಶೆ- ಸಂಪೂರ್ಣ ಮತ್ತು ಸಂಪನ್ನರಾಗಿರಿ


ಇಂದು ವಿಶೇಷವಾಗಿ ದೂರ ದೇಶವಾಸಿ ದೂರ ದೇಶ ನಿವಾಸಿ ಮಕ್ಕಳೊಂದಿಗೆ ಮಿಲನವಾಗಲು ಬಂದಿದ್ದಾರೆ. ಇಷ್ಟೂ ದೂರದಿಂದ ಮಿಲನವಾಗಲು ಬಂದಿದ್ದಾರೆ. ಇಷ್ಟು ದೂರದಿಂದ ಯಾವ ಲಗನ್ನಿನಿಂದ ಬರುತ್ತಾರೆ? ಬಾಪ್ದಾದಾರವರು ಮಕ್ಕಳ ಲಗನ್ನ್ನು ತಿಳಿದಿದ್ದಾರೆ. ಒಂದು ಕಡೆ ಹೃದಯದ ಮಿಲನದ ಲಗನ್ ಇದೆ. ಇನ್ನೊಂದು ಕಡೆ ತಂದೆಯೊಂದಿಗೆ ಮಿಲನವಾಗುವುದಕಾಗಿ ಧೈರ್ಯವನ್ನೂ ಧಾರಣೆ ಮಾಡಿದ್ದಾರೆ ಆದ್ದರಿಂದ ಧೈರ್ಯದ ಫಲವನ್ನು ವಿಶೇಷ ರೂಪದಲ್ಲಿ ಕೊಡುವುದಕ್ಕಾಗಿ ಬಂದಿದ್ದಾರೆ. ವಿಶೇಷವಾಗಿ ಮಿಲನವಾಗಲು ಬಂದಿದ್ದಾರೆ. ಎಲ್ಲಾ ಡಬಲ್ ವಿದೇಶಿ ಮಕ್ಕಳ ಸ್ನೇಹದ ಸಂಕಲ್ಪ, ಹೃದಯದಲ್ಲಿ ಮಿಲನದ ಉಮ್ಮಂಗವು ಪ್ರತೀ ಸಮಯದಲ್ಲಿಯೂ ಬಾಪ್ದಾದಾರವರು ನೋಡುತ್ತಾ ಮತ್ತು ಕೇಳುತ್ತಿರುತ್ತಾರೆ. ದೂರ ಕುಳಿತಿದ್ದರೂ ಸಹ ಸ್ನೇಹದ ಕಾರಣದಿಂದ ಸಮೀಪವಿದ್ದಾರೆ. ಬಾಪ್ದಾದಾರವರು ಪ್ರತೀ ಸಮಯವೂ ನೋಡುತ್ತಾರೆ - ಹೇಗೆ ರಾತ್ರೋ ರಾತ್ರಿ ಜಾಗರಣೆ ಮಾಡಿ ಮಕ್ಕಳು ದೃಷ್ಟಿ ಮತ್ತು ವೈಬ್ರೇಷನ್ನಿಂದ ಸ್ನೇಹ ಮತ್ತು ಶಕ್ತಿಯನ್ನು ಕ್ಯಾಚ್ ಮಾಡುತ್ತಾರೆ. ಇಂದು ವಿಶೇಷವಾಗಿ ಮುರುಳಿಯನ್ನು ನುಡಿಸುವುದಕ್ಕಾಗಿ ಬಂದಿಲ್ಲ. ಮುರುಳಿಯನ್ನಂತು ಬಹಳ ಕೇಳಿದಿರಿ - ಈಗಂತು ಬಾಪ್ದಾದಾರವರಿಗೆ ಈ ವರ್ಷದಲ್ಲಿ ವಿಶೇಷವಾಗಿ ಪ್ರತ್ಯಕ್ಷ ಸ್ವರೂಪ, ಬಾಪ್ದಾದಾರವರ ಸ್ನೇಹದ ಪ್ರಮಾಣ ಸ್ವರೂಪ, ಸಂಪೂರ್ಣ ಮತ್ತು ಸಂಪನ್ನರಾಗುವ ಸಮೀಪತೆಯ ಸ್ವರೂಪ, ಶ್ರೇಷ್ಠ ಸಂಕಲ್ಪ, ಶ್ರೇಷ್ಠ ಮಾತು, ಶ್ರೇಷ್ಠ ಕರ್ಮ, ಶ್ರೇಷ್ಠ ಸಂಬಂಧ ಮತ್ತು ಸಂಪರ್ಕ - ಇಂತಹ ಶ್ರೇಷ್ಠ ಸ್ವರೂಪವನ್ನು ನೋಡ ಬಯಸುತ್ತಾರೆ. ಏನನ್ನು ಕೇಳಿದಿರಿ, ಕೇಳುವುದು ಮತ್ತು ಸ್ವರೂಪರಾಗುವ ಸಮಾನತೆಯನ್ನು ನೋಡ ಬಯಸುತ್ತಾರೆ. ಪ್ರತ್ಯಕ್ಷದ ಪರಿವರ್ತನೆಯ ಶ್ರೇಷ್ಠ ಸಮಾರೋಹವನ್ನು ನೋಡಲು ಬಯಸುತ್ತಾರೆ. ಈ ವರ್ಷದಲ್ಲಿ ಸಿಲ್ವರ್, ಗೋಲ್ಡನ್ ಜುಬಿಲಿಯಂತು ಆಚರಿಸಿದಿರಿ ಮತ್ತು ಆಚರಿಸುತ್ತೀರಿ. ಆದರೆ ಬಾಪ್ದಾದಾರವರು ಸತ್ಯ ಕಲೆರಹಿತ, ಅಮೂಲ್ಯ ರತ್ನಗಳ ಹಾರವನ್ನು ತಯಾರು ಮಾಡಲು ಬಯಸುತ್ತಾರೆ. ಇಂತಹ ಒಂದೊಂದು ವಜ್ರಗಳು ಅಮೂಲ್ಯವಾದ ಹೊಳೆಯುವಂತದ್ದಾಗಿರಲಿ, ಅದರ ಲೈಟ್ ಮೈಟ್ನ ಹೊಳಪು ಅಲ್ಪದವರೆಗಲ್ಲ. ಆದರೆ ಬೇಹದ್ದಿನವರೆಗೆ ಹೋಗಲಿ. ಬಾಪ್ದಾದಾರವರು ಅಲ್ಪಕಾಲದ ಸಂಕಲ್ಪ, ಅಲ್ಪಕಾಲದ ಮಾತು, ಅಲ್ಪಕಾಲ ಸೇವೆಗಳು, ಅಲ್ಪಕಾಲದ ಸಂಬಂಧವನ್ನು ಬಹಳಷ್ಟು ನೋಡಿದ್ದಾರೆ, ಆದರೆ ಈಗ ಬೇಹದ್ದಿನ ತಂದೆಯಿದ್ದಾರೆ - ಬೇಹದ್ದಿನ ಸೇವೆಯ ಅವಶ್ಯಕತೆಯಿದೆ. ಅವರ ಮುಂದೆ ಈ ದೀಪಕಗಳ ಬೆಳಕೇನೆನಿಸುತ್ತದೆ. ಈಗ ಲೈಟ್ಹೌಸ್, ಮೈಟ್ಹೌಸ್ ಆಗಬೇಕಾಗಿದೆ. ಬೇಹದ್ದಿನ ಕಡೆಗೆ ದೃಷ್ಟಿಯನ್ನಿಡಿ. ಬೇಹದ್ದಿನ ದೃಷ್ಟಿಯಿರಲಿ ಆಗಲೇ ಸೃಷ್ಟಿಯ ಪರಿವರ್ತನೆಯಾಗುತ್ತದೆ. ಸೃಷ್ಟಿ ಪರಿವರ್ತನೆಯ ಇಷ್ಟು ದೊಡ್ಡ ಕಾರ್ಯವನ್ನು ಸ್ವಲ್ಪ ಸಮಯದಲ್ಲಿ ಸಂಪನ್ನಗೊಳಿಸಬೇಕು. ಅದಕ್ಕಾಗಿ ಗತಿ ಮತ್ತು ವಿಧಿಯೂ ಸಹ ಬೇಹದ್ದಿನಲ್ಲಿ ತೀವ್ರವಾಗಿರಬೇಕು.

ತಮ್ಮ ವೃತ್ತಿಯಿಂದ ದೇಶ-ವಿದೇಶದ ವಾಯುಮಂಡಲದಲ್ಲಿ ಇದೊಂದೇ ಧ್ವನಿಯು ಮೊಳಗಲಿ - ಬೇಹದ್ದಿನ ಮಾಲೀಕ ವಿಶ್ವದ ಮಾಲೀಕ, ಬೇಹದ್ದಿನ ರಾಜ್ಯಾಧಿಕಾರಿ, ಬೇಹದ್ದಿನ ಸತ್ಯ ಸೇವಾಧಾರಿ, ನಮ್ಮ ದೇವಾತ್ಮರು ಬಂದು ಬಿಟ್ಟರು. ಈಗ ಈ ಬೇಹದ್ದಿನ ಒಂದು ಧ್ವನಿಯು ದೇಶ-ವಿದೇಶದಲ್ಲಿ ಮೊಳಗಲಿ. ಆಗ ಸಂಪೂರ್ಣತೆ ಮತ್ತು ಸಮಾಪ್ತಿಯು ಸಮೀಪದ ಅನುಭವವಾಗುತ್ತದೆ. ತಿಳಿಯಿತೆ. ಒಳ್ಳೆಯದು.

ನಾಲ್ಕೂ ಕಡೆಯ ಶ್ರೇಷ್ಠ ಭಾವನೆ, ಶ್ರೇಷ್ಠ ಕಾಮನೆಯನ್ನು ಪೂರ್ಣಗೊಳಿಸುವ, ಫರಿಶ್ತೆಯಿಂದ ದೇವತಾ ಆತ್ಮರಿಗೆ, ಸದಾ ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗುವಂತಹ ಲೈಟ್ಹೌಸ್, ಮೈಟ್ಹೌಸ್ ವಿಶೇಷ ಆತ್ಮರಿಗೆ, ಬಾಪ್ದಾದಾರವರ ಸೂಕ್ಷ್ಮ ಸೂಚನೆಗಳನ್ನು ತಿಳಿದುಕೊಳ್ಳುವ ವಿಶಾಲ ಬುದ್ಧಿ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ದೇಶ-ವಿದೇಶದ ಎಲ್ಲಾ ಮಕ್ಕಳ ಪ್ರತಿ ಬಾಪ್ದಾದಾರವರು ಸಂದೇಶದ ರೂಪದಲ್ಲಿ ನೆನಪು-ಪ್ರೀತಿಯನ್ನು ಕೊಟ್ಟರು.

ನಾಲ್ಕೂ ಕಡೆಯಲ್ಲಿನ ಸ್ನೇಹಿ ಸಹಯೋಗಿ ಮತ್ತು ಶಕ್ತಿಶಾಲಿ ಮಕ್ಕಳ ಭಿನ್ನ-ಭಿನ್ನ ವಿಧದ ಪತ್ರಗಳನ್ನು ನೋಡಿ, ಬಾಪ್ದಾದಾರವರು ಸ್ನೇಹದ ಸಾಗರನಲ್ಲಿ ಸಮಾವೇಶವಾಗಿ ಬಿಟ್ಟರು. ಎಲ್ಲರ ಭಿನ್ನ-ಭಿನ್ನ ರೀತಿಯ ತಮ್ಮ-ತಮ್ಮ ಉಮ್ಮಂಗ-ಉತ್ಸಾಹದನುಸಾರವಾಗಿ ಶ್ರೇಷ್ಠವಿದೆ ಮತ್ತು ಬಾಪ್ದಾದಾರವರು ಆ ಪ್ರಕಂಪನಗಳನ್ನು ನೋಡುತ್ತಾ ಹರ್ಷಿತವಾಗುತ್ತಾರೆ. ಉಮ್ಮಂಗವೂ ಬಹಳ ಚೆನ್ನಾಗಿದೆ, ಯೋಜನೆಯೂ ಬಹಳ ಚೆನ್ನಾಗಿದೆ. ಈಗ ಪ್ರಾಕ್ಟಿಕಲ್ನ ಅಂಕಗಳನ್ನು ಬಾಪ್ದಾದಾರವರಿಗೆ ತೆಗೆದುಕೊಳ್ಳಬೇಕು, ಮತ್ತು ಭವಿಷ್ಯ ಖಾತೆಯನ್ನೂ ಜಮಾ ಮಾಡಿಕೊಳ್ಳಬೇಕು. ಈ ಸಮಯದಲ್ಲಿ ಬಾಪ್ದಾದಾರವರು ಪ್ರತಿಯೊಂದು ಮಕ್ಕಳ ಪ್ರಾಕ್ಟಿಕಲ್ ಕೋರ್ಸ್ನ ಮಾರ್ಕ್ಸ್ನ್ನು ನೋಟ್ ಮಾಡುತ್ತಿದಾರೆ. ಮತ್ತು ಈ ವರ್ಷದಲ್ಲಿ ವಿಶೇಷವಾಗಿ ಪ್ರಾಕ್ಟಿಕಲ್ ಕೋರ್ಸ್ ಮತ್ತು ಪ್ರಾಕ್ಟಿಕಲ್ ಕೋರ್ಸ್ನ ಹೆಚ್ಚಿನ ಅಂಕಗಳನ್ನು ತೆಗೆದುಕೊಳ್ಳಬಹುದು. ಆದ್ದರಿಂದ ಯಾವ ಸೂಚನೆಗಳು ಸಮಯ-ಸಮಯದಲ್ಲಿ ಸಿಗುತ್ತದೆ, ಆ ಸೂಚನೆಗಳನ್ನು ಪ್ರತಿಯೊಬ್ಬರೂ ಸ್ವಯಂಗಾಗಿ ಎಂದು ತಿಳಿದು ಪ್ರಾಕ್ಟಿಕಲ್ನಲ್ಲಿ ತರುತ್ತೀರೆಂದರೆ ನಂಬರ್ವನ್ ತೆಗೆದುಕೊಳ್ಳಬಹುದು. ವಿದೇಶದ ಹಾಗೂ ದೇಶದ ಮಕ್ಕಳು, ಯಾರು ದೂರ ಕುಳಿತಿದ್ದರೂ ಸಮೀಪದ ಸ್ನೇಹದ ಅನುಭವವು ಸದಾ ಆಗುತ್ತದೆ ಮತ್ತು ಸದಾ ಉಮ್ಮಂಗವಿರುತ್ತದೆ - ಏನಾದರೂ ಮಾಡಿ ತೋರಿಸೋಣ, ಇದನ್ನು ಮಾಡೋಣ, ಹೀಗೆ ಮಾಡೋಣ..... ಈ ಉಮ್ಮಂಗವಿದೆಯೆಂದರೆ ಈಗ ಬೇಹದ್ದಿನ ಸೇವೆಯ ಪ್ರಮಾಣವಾಗಿ, ಉಮ್ಮಂಗವನ್ನು ಪ್ರಾಕ್ಟಿಕಲ್ನಲ್ಲಿ ತರುವ ವಿಶೇಷ ಅವಕಾಶವಿದೆ. ಆದ್ದರಿಂದ ಹಾರುವ ಕಲೆಯ ರೇಸ್ ಮಾಡಿರಿ. ನೆನಪಿನಲ್ಲಿ, ಸೇವೆಯಲ್ಲಿ, ದಿವ್ಯ ಗುಣ ಮೂರ್ತಿ ಆಗುವುದರಲ್ಲಿ ಮತ್ತು ಜೊತೆ ಜೊತೆಗೆ ಜ್ಞಾನ ಸ್ವರೂಪರಾಗಿ ಜ್ಞಾನದ ಚರ್ಚೆ ಮಾಡುವುದರಲ್ಲಿ, ನಾಲ್ಕೂ ವಿಷಯಗಳಲ್ಲಿ ಹಾರುವ ಕಲೆಯ ರೇಸ್ನಲ್ಲಿ ಅಂಕಗಳನ್ನು ವಿಶೇಷವಾಗಿ ತೆಗೆದುಕೊಳ್ಳುವುದು - ಈ ವರ್ಷದ ಅವಕಾಶವಾಗಿದೆ. ಈ ವಿಶೇಷ ಚಾನ್ಸ್ನ್ನು ತೆಗೆದುಕೊಂಡು ಬಿಡಿ. ಹೊಸ ಅನುಭವವನ್ನು ಮಾಡಿರಿ. ನವೀನತೆಯನ್ನು ಇಷ್ಟ ಪಡುತ್ತೀರಲ್ಲವೆ. ಅಂದಾಗ ಈ ನವೀನತೆಯನ್ನು ಮಾಡಿ ನಂಬರ್ ತೆಗೆದುಕೊಳ್ಳಬಲ್ಲಿರಿ. ಈಗ ಈ ವರ್ಷದಲ್ಲಿ ಎಕ್ಸ್ಟ್ರಾ ರೇಸ್ನ ಎಕ್ಸ್ಟ್ರಾ ಮಾರ್ಕ್ಸ್ ಇದೆ. ಸಮಯವು ವಿಶೇಷವಾಗಿ ಸಿಕ್ಕಿದೆ. ಪುರುಷಾರ್ಥದನುಸಾರವಾಗಿ ಪ್ರಾಲಬ್ಧವಂತು ಸದಾ ಇರುತ್ತದೆ. ಆದರೆ ಈ ವರ್ಷದಲ್ಲಿ ವಿಶೇಷವಾಗಿ ವಿಶೇಷ ಅಂಕಗಳಿದೆ. ಆದ್ದರಿಂದ ಹಾರುವ ಕಲೆಯ ಒಳ್ಳೆಯ ಅನುಭವಿಗಳಾಗಿ ಮುಂದುವರೆಯುತ್ತಾ ಅನ್ಯರನ್ನೂ ಮುಂದುವರೆಸಿರಿ. ತಂದೆಯು ಎಲ್ಲಾ ಮಕ್ಕಳ ಕೊರಳಿನಲ್ಲಿ ಬಾಹುಗಳ ಮಾಲೆಯನ್ನು ಹಾಕಿ ಬಿಡುತ್ತಾರೆ. ದೊಡ್ಡ ಹೃದಯವನ್ನು ಮಾಡಿಕೊಳ್ಳುತ್ತೀರೆಂದರೆ ಸಾಕಾರದಲ್ಲಿ ತಲುಪುವುದೂ ಸಹ ಸಹಜವಾಗಿ ಬಿಡುತ್ತದೆ. ಎಲ್ಲಿ ಮನಸ್ಸಿದೆಯೋ ಅಲ್ಲಿ ಧನವೂ ಸಹ ಬಂದು ಬಿಡುತ್ತದೆ. ಮನಸ್ಸು ಧನವನ್ನು ಎಲ್ಲಿಂದಲಾದರೂ ತರುತ್ತದೆ. ಆದ್ದರಿಂದ ಮನಸ್ಸಿದೆ ಮತ್ತು ಧನವಿಲ್ಲ - ಇದನ್ನು ಬಾಪ್ದಾದಾರವರು ಒಪ್ಪುವುದಿಲ್ಲ. ಹೃದಯದವರಿಗೆ ಯಾವುದಾದರೊಂದು ಪ್ರಕಾರದಿಂದ ಟಚಿಂಗ್ ಆಗುತ್ತದೆ ಮತ್ತು ತಲುಪಿ ಬಿಡುತ್ತಾರೆ. ಪರಿಶ್ರಮದ ಹಣವಿದೆ, ಪರಿಶ್ರಮದ ಹಣವು ಪದಮದಷ್ಟು ಲಾಭವನ್ನು ಕೊಡುತ್ತದೆ. ನೆನಪು ಮಾಡುತ್ತಾ-ಮಾಡುತ್ತಾ ಸಂಪಾದಿಸುತ್ತಾರಲ್ಲವೆ. ಅಂದಾಗ ನೆನಪಿನ ಖಾತೆಯಲ್ಲಿ ಜಮಾ ಆಗಿಬಿಡುತ್ತದೆ. ಮತ್ತು ತಲುಪಿ ಬಿಡುತ್ತದೆ. ಒಳ್ಳೆಯದು - ಎಲ್ಲರೂ ತಮ್ಮ-ತಮ್ಮ ಹೆಸರು ಮತ್ತು ವಿಶೇಷತೆಯಿಂದ ಬಾಹುಗಳ ಮಾಲೆಯ ಸಹಿತವಾಗಿ ನೆನಪು-ಪ್ರೀತಿಯನ್ನು ಸ್ವೀಕಾರ ಮಾಡಿರಿ.

ಸಿಲ್ವರ್ ಜುಬಿಲಿಯಲ್ಲಿ ಬಂದಿರುವ ಟೀಚರ್ಸ್ ಸಹೋದರಿಯರ ಪ್ರತಿ ಅವ್ಯಕ್ತ ಮಹಾವಾಕ್ಯ –

ಎಲ್ಲರೂ ಸಿಲ್ವರ್ ಜುಬಿಲಿಯನ್ನಾಚರಿಸಿದಿರಾ. ಆಗುವುದಂತು ಗೋಲ್ಡನೇಜಡ್ ಆಗಬೇಕು, ಸಿಲ್ವರ್ ಆಗಬಾರದು ಅಲ್ಲವೆ! ಗೋಲ್ಡನೇಜಡ್ ಆಗುವುದಕ್ಕಾಗಿ ಈ ವರ್ಷದಲ್ಲೇನು ಯೋಜನೆ ಮಾಡಿದ್ದೀರಿ? ಸೇವೆಯ ಯೋಜನೆಯಂತು ಮಾಡುತ್ತಲೇ ಇರುತ್ತೀರಿ ಆದರೆ ಸ್ವ ಪರಿವರ್ತನೆ ಮತ್ತು ಬೇಹದ್ದಿನ ಪರಿವರ್ತನೆ - ಅದಕ್ಕಾಗಿ ಯಾವ ಯೋಜನೆಯನ್ನು ಮಾಡಲಾಗಿದೆ? ಇದನ್ನು ಮಾಡೋಣ ಎಂದು ತಮ್ಮ-ತಮ್ಮ ಸ್ಥಾನಗಳ ಯೋಜನೆಯನ್ನು ಮಾಡುತ್ತೀರಿ. ಆದರೆ ಆದಿ ನಿಮಿತ್ತರಾಗುತ್ತೀರೆಂದರೆ ಬೇಹದ್ದಿನ ಯೋಜನೆಯವರಾಗಿದ್ದೀರಿ. ಅಂತಹವರ ಬುದ್ಧಿಯಲ್ಲಿ ಇಮರ್ಜ್ ಆಗುತ್ತದೆ - ನಾವು ಇಡೀ ವಿಶ್ವದ ಕಲ್ಯಾಣವನ್ನು ಮಾಡಬೇಕು - ಇದು ಇಮರ್ಜ್ ಆಗುತ್ತದೆಯೇ? ಅಥವಾ ತಿಳಿಯುತ್ತೀರಾ - ಇದಂತು ಯಾರ ಕೆಲವರೋ ಅವರೇ ತಿಳಿಯುತ್ತಾರೆ! ಯಾವಾಗಲಾದರೂ ಬೇಹದ್ದಿನ ವಿಚಾರವು ಬರುತ್ತದೆಯೋ ಅಥವಾ ತಮ್ಮದೇ ಸ್ಥಾನದ ವಿಚಾರವಿರುತ್ತದೆಯೇ? ಹೆಸರೇ ವಿಶ್ವ ಕಲ್ಯಾಣಕಾರಿ, ಇಂತಹ ಸ್ಥಾನದ ಕಲ್ಯಾಣಕಾರಿಯೆಂದಂತು ಹೇಳುವುದಿಲ್ಲ. ಆದರೆ ಬೆಹದ್ದಿನ ಸೇವೆಯ ಸಂಕಲ್ಪವೇನು ನಡೆಯುತ್ತದೆ? ಬೇಹದ್ದಿನ ಮಾಲೀಕರಾಗಬೇಕಲ್ಲವೆ. ರಾಜ್ಯದ ಮಾಲೀಕರಂತು ಆಗಬಾರದು. ಸೇವಾಧಾರಿ ನಿಮಿತ್ತ ಆತ್ಮರಲ್ಲಿ ಯಾವಾಗ ಈ ಸಂಕಲ್ಪದ ಉತ್ಪನ್ನವಾಗುತ್ತದೆಯೋ, ಆಗ ಆ ಪ್ರಕಂಪನವು ಅನ್ಯರಲ್ಲಿ ಉತ್ಪನ್ನವಾಗುತ್ತದೆ. ಒಂದುವೇಳೆ ತಮ್ಮಲ್ಲಿ ಈ ಪ್ರಕಂಪನ(ವಿಚಾರ)ವಿಲ್ಲವೆಂದರೆ ಅನ್ಯರಲ್ಲಿಯೂ ಬರಲು ಸಾಧ್ಯವಿಲ್ಲ. ಅಂದಾಗ ಸದಾ ಬೇಹದ್ದಿನ ಅಧಿಕಾರಿ ಎಂದು ತಿಳಿದು ಬೇಹದ್ದಿನ ಯೋಜನೆಯನ್ನು ಮಾಡಿರಿ. ಮೊದಲ ಮುಖ್ಯ ಮಾತಾಗಿದೆ – ಯಾವುದೇ ಪ್ರಕಾರದ ಅಲ್ಪಕಾಲದ ಬಂಧನದಲ್ಲಿ ಬಂಧಿಸಿಕೊಂಡಿಲ್ಲ ಅಲ್ಲವೆ! ಬಂಧನ ಮುಕ್ತರೇ ಬೇಹದ್ದಿನ ಸೇವೆಯಲ್ಲಿ ಸಫಲರಾಗುತ್ತಾರೆ. ಇಲ್ಲಿಯೇ ಈ ಪ್ರತ್ಯಕ್ಷವಾಗುತ್ತಿದೆ ಮತ್ತು ಆಗುತ್ತಿರುತ್ತದೆ. ಅಂದಾಗ ಈ ವರ್ಷದಲ್ಲಿ ಯಾವ ವಿಶೇಷತೆಯನ್ನು ತೋರಿಸುತ್ತೀರಿ? ಧೃಡ ಸಂಕಲ್ಪವಂತು ಪ್ರತೀ ವರ್ಷದಲ್ಲಿಯೂ ಮಾಡುತ್ತೀರಿ. ಯಾವಾಗ ಯಾವುದೇ ಇಂತಹ ಅವಕಾಶ ಸಿಗುತ್ತದೆ, ಅದರಲ್ಲಿಯೂ ಧೃಡ ಸಂಕಲ್ಪವನ್ನಂತು ಮಾಡುತ್ತೀರಿ, ಮಾಡಿಸುತ್ತೀರಿ. ಅಂದಾಗ ಧೃಡ ಸಂಕಲ್ಪವಂತು ಸಾಮಾನ್ಯವಾಗಿ ಬಿಟ್ಟಿದೆ, ಹೇಳುವುದರಲ್ಲಿ ಧೃಡ ಸಂಕಲ್ಪವೆಂದು ಬರುತ್ತದೆ ಆದರೆ ಆಗುವುದು - ಸಂಕಲ್ಪ ಅಷ್ಟೇ. ಒಂದುವೇಳೆ ಧೃಡವಾಗಿತ್ತೆಂದರೆ ಇನ್ನೊಮ್ಮೆ ತೆಗೆದುಕೊಳ್ಳಬೇಕಾಗಿರುವುದಿಲ್ಲ. ಧೃಡ ಸಂಕಲ್ಪ - ಈ ಶಬ್ಧವೂ ಸಾಮಾನ್ಯವಾಗಿ ಬಿಟ್ಟಿದೆ. ಈಗ ಯಾವುದೇ ಕಾರ್ಯವನ್ನು ಮಾಡುತ್ತೀರೆಂದರೆ ಹೇಳುವುದಂತು ಹಾಗೆಯೇ ಇರುತ್ತದೆ - ಹೌದು, ಧೃಡ ಸಂಕಲ್ಪವನ್ನು ಮಾಡುತ್ತೇವೆ. ಆದರೆ ಅಂತಹ ಯಾವುದಾದರೂ ಹೊಸ ಸಾಧನವನ್ನು ತೆಗೆಯಿರಿ, ಅದರಿಂದ ಯೋಚಿಸುವುದು ಮತ್ತು ಮಾಡುವುದು ಸಮಾನವಾಗಿರಲಿ. ಯೋಜನೆ ಮತ್ತು ಪ್ರಾಕ್ಟಿಕಲ್ ಎರಡೂ ಜೊತೆಯಿರಲಿ. ಯೋಜನೆಯಂತು ಬಹಳಷ್ಟಿದೆ ಆದರೆ ಪ್ರಾಕ್ಟಿಕಲ್ನಲ್ಲಿ ಸಮಸ್ಯೆಗಳೂ ಬರುತ್ತವೆ, ಪರಿಶ್ರಮವೆನಿಸುತ್ತದೆ, ಎದುರಿಸಬೇಕಾಗುತ್ತದೆ, ಇದಾಗುತ್ತದೆ ಮತ್ತು ಆಗುತ್ತಿರುತ್ತದೆ. ಆದರೆ ಯಾವಾಗ ಲಕ್ಷ್ಯವಿದೆ, ಅಂದಾಗ ಪ್ರಾಕ್ಟಿಕಲ್ನಲ್ಲಿ ಸದಾ ಮುಂದುವರೆಯುತ್ತಿರುತ್ತೀರಿ. ಈಗ ಅಂತಹ ಪ್ಲಾನ್ ಮಾಡಿರಿ, ಅದರಲ್ಲಿ ಏನಾದರೂ ನವೀನತೆ ಕಾಣಿಸಲಿ. ಇಲ್ಲವೆಂದರೆ ಪ್ರತೀ ವರ್ಷದಲ್ಲಿ ಒಟ್ಟಿಗೆ ಸೇರುತ್ತೀರಿ, ಹೇಳುತ್ತೀರಿ - ಹೇಗಿತ್ತೋ ಹಾಗೆಯೇ ಇದೆ. ಒಬ್ಬರಿನ್ನೊಬ್ಬರನ್ನು ಹಾಗೆಯೇ ನೋಡುತ್ತೀರಿ. ಮನಪ್ರಿಯರಾಗುವುದಿಲ್ಲ. ಎಷ್ಟು ಬಯಸುತ್ತೀರಿ ಅಷ್ಟಾಗುವುದಿಲ್ಲ. ಅದು ಹೇಗಾಗುತ್ತದೆ? ಇದಕ್ಕಾಗಿ ಯಾರು ಅರ್ಜುನರಾಗುತ್ತಾರೆ. ಒಬ್ಬರು ನಿಮಿತ್ತರಾಗುತ್ತಾರೆಂದರೆ ಅನ್ಯರಲ್ಲಿಯೂ ಉಮ್ಮಂಗ-ಉತ್ಸಾಹವಂತು ಬಂದೇ ಬರುತ್ತದೆ. ಅಂದಾಗ ಇಷ್ಟೆಲ್ಲರೂ ಸೇರಿದ್ದೀರಿ, ಅಂತಹ ಯಾವುದಾದರೂ ಪ್ಲಾನ್ ಮಾಡಿರಿ. ಥಿಯರಿ ಪರೀಕ್ಷೆಯೂ ಆಗುತ್ತದೆ, ಪ್ರಾಕ್ಟಿಕಲ್ನ ಪರೀಕ್ಷೆಯೂ ಆಗುತ್ತದೆ. ಇದಂತು ಇದೆ - ಯಾರು ಆದಿಯಿಂದ ನಿಮಿತ್ತರಾದರು, ಅವರ ಭಾಗ್ಯವಂತು ಶ್ರೇಷ್ಠವೇ ಆಗಿದೆ. ಈಗ ಹೊಸದೇನು ಮಾಡುತ್ತೀರಿ?

ಇದಕ್ಕಾಗಿ ವಿಶೇಷ ಗಮನ – ಪ್ರತೀ ಕರ್ಮವನ್ನು ಮಾಡುವುದಕ್ಕೆ ಮೊದಲು ಈ ಲಕ್ಷ್ಯವನ್ನಿಡಿ - ನಾನು ಸ್ವಯಂನ್ನು ಸಂಪನ್ನ ಮಾಡಿಕೊಂಡು ಉದಾಹರಣೆಯನ್ನಾಗಿ ಮಾಡಿಕೊಳ್ಳಬೇಕು. ಅದಾಗುವುದೇನು - ಏನೆಂದರೆ ಸಂಘಟನೆಯ ಲಾಭವೂ ಆಗುತ್ತದೆ, ನಷ್ಟವೂ ಇರುತ್ತದೆ. ಸಂಘಟನೆಯಲ್ಲಿ ಒಬ್ಬರೊನ್ನಬ್ಬರು ನೋಡಿ ಹುಡುಗಾಟಿಕೆಯಲ್ಲಿಯೂ ಬರುತ್ತದೆ ಮತ್ತು ಸಂಘಟನೆಯಲ್ಲಿ ಒಬ್ಬರಿನ್ನೊಬ್ಬರು ನೋಡಿ ಉಮ್ಮಂಗ-ಉತ್ಸಾಹವೂ ಬರುತ್ತದೆ, ಎರಡೂ ರೀತಿಯಿಂದಾಗುತ್ತದೆ. ಅಂದಾಗ ಸಂಘಟನೆಯನ್ನು ಹುಡುಗಾಟಿಕೆಯಿಂದ ನೋಡಬಾರದು. ಈಗ ಇದೊಂದು ರೀತಿಯಾಯಿತು, ಇವರೂ ಮಾಡುತ್ತಾರೆ, ಇವರೂ ಮಾಡುತ್ತಾರೆ, ನಾವೂ ಮಾಡಿದೆವೆಂದರೇನಾಯಿತು, ಹೀಗೆ ನಡೆಯುತ್ತಿರುತ್ತದೆ. ಇದು ಸಂಘಟನೆಯಲ್ಲಿ ಹುಡುಗಾಟಿಕೆಯ ನಷ್ಟವಾಗುತ್ತದೆ. ಸಂಘಟನೆಯಿಂದ ಶ್ರೇಷ್ಠವಾಗುವ ಸಹಯೋಗವನ್ನು ತೆಗೆದುಕೊಳ್ಳುವುದು ಬೇರೆ ರೀತಿಯಾಯಿತು. ಒಂದುವೇಳೆ ಈ ಲಕ್ಷ್ಯವಿದೆ - ನಾನು ಮಾಡಬೇಕು. ನಾನು ಮಾಡಿ ಅನ್ಯರಿಂದ ಮಾಡಿಸಬೇಕು. ನಂತರ ಮಾಡುವುದರಲ್ಲಿ ಉಮ್ಮಂಗ-ಉತ್ಸಾಹವಿರುತ್ತದೆ ಮತ್ತು ಮಾಡಿಸುವುದರಲ್ಲಿಯೂ ಇರುತ್ತದೆ. ಮತ್ತೆ-ಮತ್ತೆ ಈ ಲಕ್ಷ್ಯವನ್ನು ಇಮರ್ಜ್ ಮಾಡಿಕೊಳ್ಳಿರಿ. ಒಂದುವೇಳೆ ಕೇವಲ ಲಕ್ಷ್ಯವನ್ನಿಟ್ಟುಕೊಳ್ಳುತ್ತೀರೆಂದರೂ ಅದು ಮರ್ಜ್ ಆಗಿ ಬಿಡುತ್ತದೆ. ಆದ್ದರಿಂದ ಪ್ರಾಕ್ಟಿಕಲ್ ಆಗುವುದಿಲ್ಲ. ಅದಕ್ಕಾಗಿಯೇ ಲಕ್ಷ್ಯವನ್ನು ಸಮಯ-ಪ್ರತಿ ಸಮಯ ಇಮರ್ಜ್ ಮಾಡಿಕೊಳ್ಳಿರಿ. ಲಕ್ಷ್ಯ ಮತ್ತು ಲಕ್ಷಣವೂ ಸಹ ಮತ್ತೆ-ಮತ್ತೆ ಸಮಾನ ಮಾಡುತ್ತಾ ಸಾಗಿರಿ, ಮತ್ತೆ ಶಕ್ತಿಶಾಲಿಯಾಗಿ ಬಿಡುತ್ತೀರಿ. ಇಲ್ಲವೆಂದರೆ ಸಾಧಾರಣವಾಗಿ ಬಿಡುತ್ತದೆ. ಈಗ ಈ ವರ್ಷದಲ್ಲಿ ಪ್ರತಿಯೊಬ್ಬರೂ ಇದನ್ನೇ ತಿಳಿಯಿರಿ - ನಾವು ಸಿಂಪಲ್ ಮತ್ತು ಸ್ಯಾಂಪಲ್ ಆಗಬೇಕು. ಈ ಸೇವೆಯ ಪ್ರವೃತ್ತಿಯು ವೃದ್ಧಿಯನ್ನು ಹೊಂದುತ್ತಿರುತ್ತದೆ. ಆದರೆ ಈ ಪ್ರವೃತ್ತಿಯು ಉನ್ನತಿಯಲ್ಲಿ ವಿಘ್ನ ರೂಪವಾಗಬಾರದು. ಒಂದುವೇಳೆ ಉನ್ನತಿಯಲ್ಲಿ ವಿಘ್ನ ರೂಪವಾಗುತ್ತದೆಯೆಂದರೆ ಅದನ್ನು ಸೇವೆಯೆಂದು ಹೇಳುವುದಿಲ್ಲ. ಒಳ್ಳೆಯದು. ಇರುವುದಂತು ಬಹಳ ದೊಡ್ಡ ಗುಂಪು. ಯಾವಾಗ ಇಷ್ಟು ಚಿಕ್ಕದಾದ ಒಂದು ಅಣು ಬಾಂಬು ಸಹ ಕಮಾಲ್ ಮಾಡಿ ತೋರಿಸುತ್ತದೆ ಅಂದಾಗ ಇಷ್ಟೆಲ್ಲಾ ಆತ್ಮಿಕ ಬಾಂಬುಗಳು ಏನು ಮಾಡಲು ಸಾಧ್ಯವಿಲ್ಲ!! ಸ್ಟೇಜಿನಲ್ಲಂತು ಬರುವವರು ತಾವುಗಳಾಗಿದ್ದೀರಲ್ಲವೆ! ಗೋಲ್ಡನ್ ಜುಬಿಲಿಯವರಂತು ಬೆನ್ನೆಲು ಬಾಗಿ ಬಿಟ್ಟಿರಿ ಆದರೆ ಪ್ರಾಕ್ಟಿಕಲ್ನಲ್ಲಿ ಸ್ಟೇಜಿನಲ್ಲಂತು ಬರುವವರು ತಾವಾಗಿದ್ದೀರಿ. ಈಗ ಅಂತಹದ್ದೇನಾದರೂ ಮಾಡಿ ತೋರಿಸಿರಿ - ಹೇಗೆ ಗೋಲ್ಡನ್ ಜುಬಿಲಿಯ ನಿಮಿತ್ತಆತ್ಮರ ಸ್ನೇಹದ ಸಂಘಟನೆಯು ಕಾಣಿಸುತ್ತಿದೆ ಮತ್ತು ಆ ಸ್ನೇಹದ ಸಂಘಟನೆಯು ಪ್ರತ್ಯಕ್ಷ ಫಲವನ್ನು ತೋರಿಸಿತು - ಸೇವೆಯ ವೃದ್ಧಿ, ಸೇವೆಯಲ್ಲಿ ಸಫಲತೆ. ಇಂತಹದ್ದೇ ಸಂಘಟನೆಯನ್ನು ಮಾಡಿರಿ, ಅದು ಕೋಟೆಯ ರೂಪವಾಗಲಿ. ಹೇಗೆ ಗೋಲ್ಡನ್ ಜುಬಿಲಿಯವರು ನಿಮಿತ್ತವಾಗಿ ದೀದಿಯವರು-ದಾದಿಯವರು ಯಾರೆಲ್ಲರೂ ಇದ್ದಾರೆ, ಅವರ ಸ್ನೇಹ ಮತ್ತು ಸಂಘಟನೆಯ ಶಕ್ತಿಯ ಪ್ರತ್ಯಕ್ಷ ಫಲವನ್ನು ಯಾವಾಗ ತೋರಿಸಿದ್ದಾರೆ, ಅಂದಾಗ ತಾವೂ ಸಹ ಪ್ರತ್ಯಕ್ಷ ಫಲವನ್ನು ತೋರಿಸಿರಿ. ಅಂದಾಗ ಒಬ್ಬರಿನ್ನೊಬ್ಬರ ಸಮೀಪಕ್ಕೆ ಬರುವುದರಲ್ಲಿ ಸಮಾನರಾಗಬೇಕಾಗುತ್ತದೆ. ಸಂಸ್ಕಾರಗಳಂತು ಭಿನ್ನ-ಭಿನ್ನವಾದುದು ಇದೆ ಮತ್ತು ಅವಶ್ಯವಾಗಿ ಇರುತ್ತದೆ. ಈಗ ಜಗದಂಬಾರವರನ್ನು ನೋಡಿರಿ ಮತ್ತು ಬ್ರಹ್ಮಾರವರನ್ನು ನೋಡಿರಿ - ಸಂಸ್ಕಾರಗಳು ಭಿನ್ನ-ಭಿನ್ನವಾಗಿಯೇ ಇರಲಿ. ಈಗ ಯಾರೆಲ್ಲರೂ ನಿಮಿತ್ತ ದೀದಿ-ದಾದಿಯರು ಇದ್ದಾರೆ, ಸಂಸ್ಕಾರಗಳು ಒಂದೇ ರೀತಿಯಂತು ಇಲ್ಲ. ಆದರೆ ಸಂಸ್ಕಾರಗಳ ಮಿಲನ ಮಾಡಿಸುವುದು - ಸ್ನೇಹದ ಪ್ರಮಾಣವಾಗಿದೆ. ಇದನ್ನು ಯೋಚಿಸಬೇಡಿ - ಸಂಸ್ಕಾರಗಳ ಮಿಲನವಾಗುತ್ತದೆಯೆಂದರೆ ಸಂಘಟನೆಯಾಗಲಿ, ಅಲ್ಲ. ಸಂಸ್ಕಾರಗಳ ಮಿಲನ ಮಾಡಿಸುವುದರಿಂದ ಸಂಘಟನೆಯು ಶಕ್ತಿಶಾಲಿ ಆಗಿಯೇ ಬಿಡುತ್ತದೆ. ಒಳ್ಳೆಯದು - ಇದೂ ಸಹ ಆಗಿ ಬಿಡುತ್ತದೆ. ಸೇವೆ ಒಂದಿದೆ ಆದರೆ ನಿಮಿತ್ತರಾಗುವುದು, ನಿಮಿತ್ತ ಭಾವದಲ್ಲಿ ನಡೆಯುವುದೇ ವಿಶೇಷತೆಯಾಗಿದೆ. ಇದೇ ಹದ್ ತೆಗೆಯಬೇಕಲ್ಲವೆ? ಇದಕ್ಕಾಗಿ ಯೋಚಿಸಿದಿರಲ್ಲವೆ - ಎಲ್ಲರನ್ನೂ ಚೇಂಜ್ ಮಾಡಲಿ. ಒಂದು ಸೇವಾಕೇಂದ್ರದವರು ಇನ್ನೊಂದು ಸೇವಾಕೇಂದ್ರದಲ್ಲಿ ಹೋಗಬೇಕು. ಎಲ್ಲರೂ ತಯಾರಾಗಿದ್ದೀರಾ? ಆದೇಶ ಬರುತ್ತದೆ. ತಮ್ಮದಂತು ಹ್ಯಾಂಡ್ಸಪ್ ಅಲ್ಲವೆ. ಬದಲಾಗುವುದರಲ್ಲಿ ಲಾಭವೂ ಇದೆ. ಈ ವರ್ಷದಲ್ಲಿ ಈ ಹೊಸ ಮಾತನ್ನು ಮಾಡಬೇಕಲ್ಲವೆ. ನಷ್ಟಮೋಹಿಯಂತು ಆಗಲೇಬೇಕಾಗುತ್ತದೆ. ಯಾವಾಗ ತ್ಯಾಗಿ, ತಪಸ್ವಿ ಆಗಿ ಬಿಟ್ಟಿರಿ, ಅಂದಮೆಲೆ ಇದೇನು? ತ್ಯಾಗವೇ ಭಾಗ್ಯವಾಗಿದೆ. ಹಾಗಾದರೆ ಭಾಗ್ಯದ ಮುಂದೆ ಈ ತ್ಯಾಗವೇನು! ಆಫರ್ ಮಾಡುವವರಿಗೆ ಆಫ್ರೀನ್ ಸಿಕ್ಕಿ ಬಿಡುತ್ತದೆ. ಅಂದಾಗ ಎಲ್ಲರೂ ಬಹದ್ದೂರರಲ್ಲವೆ! ಬದಲಾಗುವುದು ಎಂದರೆ ಬದಲಾಗುವುದು. ಯಾರನ್ನಾದರೂ ಮಾಡಬಹುದು. ಸಾಹಸವಿದೆಯೆಂದಾಗ ದೊಡ್ಡ ಮಾತೇನು! ಒಳ್ಳೆಯದು - ಈ ವರ್ಷದಲ್ಲಿ ಈ ನವೀನತೆಯನ್ನು ಮಾಡುತ್ತೀರಿ. ಇಷ್ಟವಿದೆಯಲ್ಲವೆ! ಯಾರು ಎವರೆಡಿಯ ಪಾಠವನ್ನು ಆದಿಯಿಂದ ಓದಿದ್ದಾರೆ, ಅವರಲ್ಲಿ ಒಳಗಿಂದೊಳಗೆ ಈ ಶಕ್ತಿಯು ತುಂಬಿರುತ್ತದೆ. ಯಾವುದೇ ಆಜ್ಞೆಯನ್ನು ಪಾಲನೆ ಮಾಡುವುದರ ಬಲವು ಸ್ವತಹವಾಗಿಯೇ ಸಿಗುತ್ತದೆ, ಆದ್ದರಿಂದ ಸದಾ ಆಜ್ಞಾಕಾರಿಯಾಗುವ ಬಲವು ಸಿಕ್ಕಿದೆ. ಒಳ್ಳೆಯದು - ಸದಾ ಶ್ರೇಷ್ಠ ಭಾಗ್ಯವಿದೆ ಮತ್ತು ಭಾಗ್ಯದ ಕಾರಣ ಸಹಯೋಗವು ಪ್ರಾಪ್ತಿಯಾಗುತ್ತಾ ಇರುತ್ತದೆ. ತಿಳಿಯಿತೆ!

2. ಸೇವೆಯು ವರ್ತಮಾನ ಮತ್ತು ಭವಿಷ್ಯವೆರಡನ್ನೂ ಶ್ರೇಷ್ಠವನ್ನಾಗಿ ಮಾಡುತ್ತದೆ. ಸೇವೆಯ ಬಲವು ಕಡಿಮೆಯೇನಲ್ಲ. ನೆನಪು ಮತ್ತು ಸೇವೆಯೆರಡರ ಬ್ಯಾಲೆನ್ಸ್ ಇರಬೇಕು. ಅದರಿಂದ ಸೇವೆಯ ಉನ್ನತಿಯ ಅನುಭವವನ್ನು ಮಾಡಿಸುತ್ತದೆ. ನೆನಪಿನಲ್ಲಿ ಸೇವೆಯನ್ನು ಮಾಡುವುದು ಸ್ವಾಭಾವಿಕವಾಗಲಿ. ಬ್ರಾಹ್ಮಣ ಜೀವನದ ಸ್ವಭಾವವೇನಾಗಿದೆ? ನೆನಪಿನಲ್ಲಿರುವುದು. ಬ್ರಾಹ್ಮಣ ಜನ್ಮ ತೆಗೆದುಕೊಳ್ಳುವುದು ಅರ್ಥಾತ್ ನೆನಪಿನ ಬಂಧನದಲ್ಲಿ ಬಂಧಿಸುವುದು. ಹೇಗೆ ಅವರು ಬ್ರಾಹ್ಮಣ ಜೀವನದಲ್ಲಿ ಏನಾದರೊಂದು ಗುರುತನ್ನು ಇಡುತ್ತಾರೆ - ಅಂದಾಗ ಈ ಬ್ರಾಹ್ಮಣ ಜೀವನದ ಚಿಹ್ನೆಯಾಗಿದೆ - ನೆನಪು. ನೆನಪಿನಲ್ಲಿರುವುದು ಸ್ವಾಭಾವಿಕವಾಗಲಿ ಆದ್ದರಿಂದ ನೆನಪು ಬೇರೆ, ಸೇವೆಯನ್ನು ಬೇರೆ, ಹೀಗಲ್ಲ. ಎರಡೂ ಒಟ್ಟಿಗೆ ಇರಲಿ. ಅಷ್ಟು ಸಮಯ ಎಲ್ಲಿದೆ, ಯಾವುದರಲ್ಲಿ ನೆನಪು ಮತ್ತು ಸೇವೆಯೆರಡನ್ನೂ ಬೇರೆ-ಬೇರೆಯಾಗಿ ಮಾಡುವುದಕ್ಕೆ ಸಮಯವೆಲ್ಲಿದೆ! ಆದ್ದರಿಂದ ನೆನಪು ಮತ್ತು ಸೇವೆಯು ಸದಾ ಜೊತೆಯಲ್ಲಿಯೇ ಇದೆ. ಇದರಲ್ಲಿಯೇ ಅನುಭವಿಯೂ ಆಗುತ್ತೀರಿ, ಸಫಲತೆಯನ್ನೂ ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಒಳ್ಳೆಯದು.

ವರದಾನ:  
ಕರ್ಮಗಳ ಗತಿಯನ್ನು ತಿಳಿದು ಗತಿ-ಸದ್ಗತಿಯ ನಿರ್ಣಯವನ್ನು ಮಾಡುವಂತಹ ಮಾಸ್ಟರ್ ದುಃಖಹರ್ತ-ಸುಖಕರ್ತ ಭವ.

ಈಗಿನವರೆಗೂ ತಮ್ಮ ಜೀವನದ ಕಥೆಯನ್ನು ನೋಡುವ ಮತ್ತು ತಿಳಿಸುವುದರಲ್ಲಿಯೇ ವ್ಯಸ್ತರಾಗದಿರಿ. ಆದರೆ ಪ್ರತಿಯೊಬ್ಬರ ಕರ್ಮದ ಗತಿಯನ್ನು ತಿಳಿದು ಗತಿ-ಸದ್ಗತಿಯನ್ನು ಕೊಡುವ ನಿರ್ಣಯ ಮಾಡಿರಿ. ಮಾಸ್ಟರ್ ದುಃಖಹರ್ತ-ಸುಖಕರ್ತನ ಪಾತ್ರವನ್ನಭಿನಯಿಸಿರಿ. ತಮ್ಮ ರಚನೆಯ ದುಃಖ-ಅಶಾಂತಿಯ ಸಮಸ್ಯೆಯನ್ನು ಸಮಾಪ್ತಿಗೊಳಿಸಿರಿ, ಅವರಿಗೆ ಮಹಾದಾನ ಮತ್ತು ವರದಾನ ಕೊಡಿ. ಸ್ವಯಂ ಸವಲತ್ತುಗಳನ್ನು ತೆಗೆದುಕೊಳ್ಳದಿರಿ, ಈಗಂತು ದಾತನಾಗಿ ಕೊಡಿ. ಒಂದುವೇಳೆ ಪರಿಹಾರದ ಆಧಾರದ ಮೇಲೆ ಸ್ವಯಂನ ಉನ್ನತಿ ಅಥವಾ ಸೇವೆಯಲ್ಲಿ ಅಲ್ಪಕಾಲಕ್ಕಾಗಿ ಸಫಲತೆಯು ಪ್ರಾಪ್ತಿಯಾಗಲೂ ಬಹುದು, ಆದರೂ ಸಹ ಇಂದು ಮಹಾನರಾಗಿರುತ್ತೀರಿ, ನಾಳೆ ಮಹಾನತೆಯ ಬಾಯಾರಿರುವ ಆತ್ಮರಾಗಿ ಬಿಡುತ್ತೀರಿ.

ಸ್ಲೋಗನ್:
ಅನುಭೂತಿಯಾಗದೇ ಇರುವುದು - ಯುದ್ಧದ ಸ್ಥಿತಿಯಾಗಿದೆ, ಯೋಗಿಯಾಗಿರಿ ಯೋಧರಲ್ಲ.


ಮುರಳಿ ಪ್ರಶ್ನೆಗಳು -

1. ಬಾಪದಾದಾರವರು ನೀವು ಬ್ರಾಹ್ಮಣ ಮಕ್ಕಳನ್ನು ಏನಾಗಿ ಮಾಡಲು ಬಯಸುತ್ತಾರೆ?

2. ಬಾಪದಾದಾರವರು ಮಕ್ಕಳನ್ನು ಯಾವ ಸ್ವರೂಪದಲ್ಲಿ ನೋಡಲು ಬಯಸುತ್ತಾರೆ?

3. ಯಾವುದರಲ್ಲಿ ಹಾರುವ ಕಲೆಯ ರೇಸ್ ನಮಗೆ ವಿಶೇಷ ನಂಬರ್ ತೆಗೆದುಕೊಳ್ಳುವ ವರ್ಷವಾಗಿದೆ?

4. ನಮ್ಮ ವೃತ್ತಿಯಿಂದ ದೇಶ – ವಿದೇಶದ ವಾಯುಮಂಡಲದಲ್ಲಿ ಯಾವ ಧ್ವನಿ ಮೊಳಗಬೇಕು?

5. ಸೃಷ್ಟಿ ಪರಿವರ್ತನೆ ಇಷ್ಟು ದೊಡ್ಡ ಕಾರ್ಯ ಸ್ವಲ್ಪ ಸಮಯದಲ್ಲಿ ಸಂಪನ್ನವಾಗುವುದಕ್ಕೆ, _____ ಮತ್ತು ________ ಬೇಹದ್ದಿನದಾಗಿರಬೇಕು.
ಅ. ಗತಿ ಮತ್ತು ವಿಧಿ
ಆ. ಫಲ ಮತ್ತು ನಿಷ್ಫಲ
ಇ. ದಾನಿ ಮತ್ತು ಮಹಾದಾನಿ

6. ಏನು ತಿಳಿದುಕೊಂಡು ಸದ್ಗತಿ ಕೊಡುವ ನಿರ್ಣಯ ಮಾಡಬೇಕು?
ಅ. ಮಾಯೆಯ ರೂಪವನ್ನು
ಆ. ಸಮಯದ ಮಹತ್ವವನ್ನು
ಇ. ಪ್ರತಿಯೊಂದು ಕರ್ಮದ ಗತಿಯನ್ನು

7. ತಂದೆ ಎಲ್ಲ ಮಕ್ಕಳ ಕೊರಳಲ್ಲಿ ಯಾವ ಮಾಲೆಯನ್ನು ಹಾಕುತ್ತಾರೆ.
ಅ. ರುದ್ರಮಾಲೆ
ಆ. ಬಾಹುಗಳ ಮಾಲೆ
ಇ. ವಿಷ್ಣು ಮಾಲೆ

8. ಎಲ್ಲಿ ಹೃದಯವಿರುತ್ತದೆ ಅಲ್ಲಿ _____ ಬಂದೇ ಬರುತ್ತದೆ.
ಅ. ಧನ ಆ. ಸಂಪತ್ತು ಇ. ಐಶ್ವರ್ಯ

9. ಸ್ವಯಂ ಸೌಲಭ್ಯಗಳನ್ನು ತೆಗೆದುಕೊಳ್ಳದೇ ಈಗ _______ ಕೊಡಬೇಕು.
ಅ. ವಿದಾತನಾಗಿ ಆ. ದಾತನಾಗಿ ಇ. ವರದಾತನಾಗಿ

10. ತಂದೆ ಮಕ್ಕಳಿಗೆ ಯಾವ ಪಾತ್ರ ಅಭಿನಯಿಸಲು ಹೇಳುತ್ತಿದ್ದಾರೆ.
ಅ. ಮಾಸ್ಟರ್ ದುಃಖ ಹರ್ತ ಆ. ಮುಕ್ತಿ ಜೀವನಮುಕ್ತಿದಾತನ ಇ. ಗತಿ-ಸದ್ಗತಿದಾತನ