02.06.20 Morning Kannada Murli Om Shanti
BapDada Madhuban
ಮಧುರ ಮಕ್ಕಳೇ - ನೀವು
ಇಡೀ ವಿಶ್ವದಲ್ಲಿ ಶಾಂತಿಯ ರಾಜ್ಯ ಸ್ಥಾಪನೆ ಮಾಡುವಂತಹ ತಂದೆಯ ಸಹಯೋಗಿಗಳಾಗಿರುವಿರಿ, ಈಗ
ನಿಮ್ಮಮುಂದೆ ಸುಖ-ಶಾಂತಿಯ ಪ್ರಪಂಚವಿದೆ.
ಪ್ರಶ್ನೆ:
ತಂದೆಯು
ಮಕ್ಕಳಿಗೆ ಏಕೆ ಓದಿಸುತ್ತಾರೆ, ವಿದ್ಯೆಯ ಸಾರವೇನಾಗಿದೆ?
ಉತ್ತರ:
ತಂದೆಯು ನೀವು ಮಕ್ಕಳನ್ನು ಸ್ವರ್ಗದ ರಾಜಕುಮಾರ, ವಿಶ್ವದ ಮಾಲೀಕರನ್ನಾಗಿ ಮಾಡಲು ಓದಿಸುತ್ತಾರೆ.
ತಂದೆಯು ಹೇಳುತ್ತಾರೆ - ಮಕ್ಕಳೇ, ಸಾರವಾಗಿದೆ - ಪ್ರಪಂಚದ ಎಲ್ಲಾ ಮಾತುಗಳನ್ನು ಬಿಟ್ಟು ಬಿಡಿ,
ನಮ್ಮ ಬಳಿ ಕೋಟಿ, ಲಕ್ಷವಿದೆ ಎಂದು ಎಂದೂ ತಿಳಿಯಬೇಡಿ. ಯಾವುದೂ ಸಹ ಕೈಗೆ ಸಿಗುವುದಿಲ್ಲ.
ಆದ್ದರಿಂದ ಚೆನ್ನಾಗಿ ಪುರುಷಾರ್ಥ ಮಾಡಿ ವಿದ್ಯೆಯ ಮೇಲೆ ಗಮನ ಕೊಡಿ.
ಗೀತೆ:
ಕೊನೆಗೂ ಆ ದಿನ
ಇಂದು ಬಂದಿತು..............
ಓಂ ಶಾಂತಿ.
ಮಕ್ಕಳು ಗೀತೆಯನ್ನು ಕೇಳಿದಿರಲ್ಲವೆ. ಅಂತೂ ಶಾಂತಿ ಸ್ಥಾಪನೆಯಾಗುವಂತಹ ಸಮಯವು ಬಂದಿತು.
ವಿಶ್ವದಲ್ಲಿ ಶಾಂತಿಯು ಹೇಗೆ ಬರುವುದು ಎಂದು ಎಲ್ಲರೂ ಹೇಳುತ್ತಾರೆ ನಂತರ ಯಾರು ಸರಿಯಾಗಿ ಸಲಹೆ
ಕೊಡುತ್ತಾರೆಯೋ ಅವರಿಗೆ ಬಹುಮಾನ ಕೊಡುತ್ತಾರೆ. ನೆಹರೂ ಸಹ ಸಲಹೆ ಕೊಡುತ್ತಿದ್ದರು. ಆದರೆ
ಶಾಂತಿಯಂತೂ ಸ್ಥಾಪನೆಯಾಗಲಿಲ್ಲ, ಕೇವಲ ಸಲಹೆಯನ್ನು ಕೊಟ್ಟುಹೋದರು. ಈಗ ನೀವು ಮಕ್ಕಳ
ಬುದ್ಧಿಯಲ್ಲಿದೆ- ಒಂದು ಸಮಯದಲ್ಲಿ ಇಡೀ ವಿಶ್ವದಲ್ಲಿ ಸುಖ-ಶಾಂತಿ-ಸಂಪತ್ತು ಇತ್ತು ಆದರೆ ಈಗಿಲ್ಲ.
ಈಗ ಪುನಃ ಬರುವುದಿದೆ. ಚಕ್ರವಂತೂ ಸುತ್ತುತ್ತಿರುತ್ತದೆಯಲ್ಲವೆ. ಇದು ಸಂಗಮಯುಗೀ ಬ್ರಾಹ್ಮಣರ
ಬುದ್ಧಿಯಲ್ಲಿದೆ. ನಿಮಗೆ ಗೊತ್ತಿದೆ- ಭಾರತವು ಪುನಃ ಚಿನ್ನದ ಸಮಾನವಾಗುತ್ತದೆ. ಭಾರತಕ್ಕೆ ಗೋಲ್ಡನ್
ಸ್ಪ್ಯಾರೋ (ಚಿನ್ನದ ಪಕ್ಷಿ) ಎನ್ನಲಾಗುತ್ತದೆ. ಕೇವಲ ಹೇಳುವ ಸಲುವಾಗಿ ಮಹಿಮೆ ಮಾಡುತ್ತಾರೆ ಆದರೆ
ನೀವೀಗ ಪ್ರತ್ಯಕ್ಷವಾಗಿ ಪುರುಷಾರ್ಥ ಮಾಡುತ್ತಿದ್ದೀರಿ. ನಿಮಗೆ ಗೊತ್ತಿದೆ, ಬಾಕಿ ಸ್ವಲ್ಪವೇ
ಸಮಯವಿದೆ, ನರಕದ ಎಲ್ಲಾ ಮಾತುಗಳನ್ನು ಮರೆತುಬಿಡಿ. ನಿಮ್ಮ ಬುದ್ಧಿಯಲ್ಲೀಗ ಸುಖದ ಪ್ರಪಂಚವು ಇದೆ.
ಹೇಗೆ ಹಿಂದೆ ವಿದೇಶದಿಂದ ಬರುತ್ತಿದ್ದರು, ತಲುಪಲು ಇನ್ನು ಸ್ವಲ್ಪ ಸಮಯವಿದೆ ಎಂದು
ತಿಳಿಯುತ್ತಿದ್ದರು. ಹಿಂದೆ ವಿದೇಶದಿಂದ ಬರಲು ಬಹಳ ಸಮಯವು ಹಿಡಿಸುತ್ತಿತ್ತು. ಈಗಂತೂ ವಿಮಾನಗಳಲ್ಲಿ
ಬಹಳಬೇಗನೆ ತಲುಪುತ್ತಾರೆ. ಈಗ ನೀವು ಮಕ್ಕಳ ಬುದ್ಧಿಯಲ್ಲಿದೆ - ನಮ್ಮ ಸುಖದ ದಿನಗಳು ಬರಲಿವೆ,
ಇದಕ್ಕಾಗಿಯೇ ನಾವು ಪುರುಷಾರ್ಥ ಮಾಡುತ್ತಿದ್ದೇವೆ. ತಂದೆಯು ಬಹಳ ಸಹಜವಾದ ಪುರುಷಾರ್ಥವನ್ನು
ತಿಳಿಸಿದ್ದಾರೆ - ಡ್ರಾಮಾನುಸಾರ ಕಲ್ಪದ ಹಿಂದಿನಂತೆ. ಇದು ನಿಶ್ಚಿತವಾಗಿದೆ. ನೀವು
ದೇವತೆಗಳಾಗಿದ್ದಿರಿ, ದೇವತೆಗಳ ಎಷ್ಟೊಂದು ಮಂದಿರಗಳನ್ನು ಕಟ್ಟುತ್ತಿದ್ದಾರೆ. ಈ ಮಂದಿರಗಳನ್ನು
ಕಟ್ಟಿಸಿ ಏನು ಮಾಡುತ್ತಾರೆ? ಬಾಕಿ ಎಷ್ಟು ದಿನಗಳಿವೆ? ಎಂಬುದು ನೀವು ಮಕ್ಕಳಿಗೆ ಗೊತ್ತಿದೆ. ನೀವು
ಮಕ್ಕಳು ಜ್ಞಾನದ ಅಥಾರಿಟಿಯಾಗಿದ್ದೀರಿ. ಪರಮಪಿತ ಪರಮಾತ್ಮನು ಸರ್ವಶಕ್ತಿವಂತ ಆಲ್ಮೈಟಿ ಅಥಾರಿಟಿ
ಎಂದು ಹೇಳಲಾಗುತ್ತದೆ. ನೀವು ಜ್ಞಾನದ ಅಥಾರಿಟಿಯಾಗಿರುವಿರಿ. ಅವರು ಭಕ್ತಿಯ ಅಥಾರಿಟಿಯಾಗಿದ್ದಾರೆ.
ತಂದೆಗೆ ಆಲ್ಮೈಟಿ ಅಥಾರಿಟಿಯೆಂದು ಹೇಳುತ್ತಾರೆ. ನೀವು ಮಕ್ಕಳು ನಂಬರ್ವಾರ್ ಪುರುಷಾರ್ಥದನುಸಾರ
ಆಗುತ್ತಿದ್ದೀರಿ. ನಿಮಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ತಂದೆಯಿಂದ ಆಸ್ತಿಯನ್ನು
ಪಡೆಯಲು ನಾವು ಪುರುಷಾರ್ಥ ಮಾಡುತ್ತಿದ್ದೇವೆಂದು ನಿಮಗೆ ಗೊತ್ತಿದೆ. ಯಾರು ಭಕ್ತಿಯ
ಅಥಾರಿಟಿಯಿದ್ದಾರೆ ಅವರು ಎಲ್ಲರಿಗೂ ಭಕ್ತಿಯನ್ನೇ ತಿಳಿಸುತ್ತಾರೆ. ನೀವು ಜ್ಞಾನದ
ಅಥಾರಿಟಿಯಾಗಿದ್ದೀರಿ, ಜ್ಞಾನವನ್ನೇ ತಿಳಿಸುತ್ತೀರಿ. ಸತ್ಯಯುಗದಲ್ಲಿ ಭಕ್ತಿಯಿರುವುದಿಲ್ಲ, ಒಬ್ಬರೂ
ಸಹ ಪೂಜಾರಿಗಳಿರುವುದಿಲ್ಲ, ಎಲ್ಲರೂ ಪೂಜ್ಯರೇ ಆಗಿರುತ್ತಾರೆ. ಅರ್ಧಕಲ್ಪ ಪೂಜ್ಯ, ಅರ್ಧಕಲ್ಪ
ಪೂಜಾರಿ. ಭಾರತವಾಸಿಗಳೇ ಪೂಜ್ಯರಾಗಿದ್ದರು ಆಗ ಸ್ವರ್ಗವಿತ್ತು, ಈಗ ಭಾರತವು ಪೂಜಾರಿ ನರಕವಾಗಿದೆ.
ನೀವು ಮಕ್ಕಳೀಗ ಪ್ರಾಕ್ಟಿಕಲ್ ಲೈಫ್ (ಪ್ರತ್ಯಕ್ಷ ಜೀವನ) ರೂಪಿಸಿಕೊಳ್ಳುತ್ತಿದ್ದೀರಿ. ನಂಬರ್ವಾರ್
ಪುರುಷಾರ್ಥದನುಸಾರ ಎಲ್ಲರಿಗೂ ತಿಳಿಸುತ್ತೀರಿ ಮತ್ತು ವೃದ್ಧಿಯನ್ನೂ ಹೊಂದುತ್ತೀರಿ. ಡ್ರಾಮಾದಲ್ಲಿ
ಮೊದಲೇ ನೊಂದಾವಣೆಯಾಗಿದೆ. ಡ್ರಾಮಾ ನಿಮಗೆ ಪುರುಷಾರ್ಥ ಮಾಡಿಸುತ್ತದೆ, ನೀವು ಮಾಡುತ್ತೀರಿ.
ಡ್ರಾಮಾದಲ್ಲಿ ನಮ್ಮದು ಅವಿನಾಶಿ ಪಾತ್ರವಿದೆ ಎಂಬುದು ನಿಮಗೆ ಗೊತ್ತಿದೆ. ಪ್ರಪಂಚದವರಿಗೆ ಈ
ಮಾತುಗಳೇನು ಗೊತ್ತು! ನಮ್ಮದೇ ಡ್ರಾಮಾದಲ್ಲಿ ಪಾತ್ರವಿದೆ, ನಮ್ಮದು ಯಾವ ರೀತಿ ಪಾತ್ರವಿದೆ ಎಂದು
ಯಾರು ಹೇಳುತ್ತಾರೆಯೋ ಅವರೇ ತಿಳಿದುಕೊಳ್ಳುತ್ತಾರೆ. ಈ ಸೃಷ್ಟಿಚಕ್ರವು ತಿರುಗುತ್ತಲೇ ಇರುತ್ತದೆ.
ಈ ಪ್ರಪಂಚದ ಇತಿಹಾಸ-ಭೂಗೋಳವು ನಿಮ್ಮನ್ನು ಬಿಟ್ಟರೆ ಮತ್ತ್ಯಾರಿಗೂ ಗೊತ್ತಿಲ್ಲ. ಸರ್ವ
ಶ್ರೇಷ್ಠವಾಗಿರುವವರು ಯಾರೆಂಬುದು ಪ್ರಪಂಚದಲ್ಲಿ ಯಾರಿಗೂ ಗೊತ್ತಿಲ್ಲ. ಋಷಿ-ಮುನಿಗಳು ನಮಗೆ
ಗೊತ್ತಿಲ್ಲವೆಂದರು, ನೇತಿ-ನೇತಿ ಎಂದು ಹೇಳಿದರು. ಈಗ ನೀವು ಮಕ್ಕಳಿಗೆ ಗೊತ್ತಿದೆ - ರಚಯಿತ
ತಂದೆಯಾಗಿದ್ದಾರೆ ಮತ್ತು ನಮಗೆ ಓದಿಸುತ್ತಿದ್ದಾರೆ. ಇಲ್ಲಿ ಕುಳಿತಿರುವಾಗ ಆತ್ಮಾಭಿಮಾನಿಯಾಗಿ
ಕುಳಿತಿರಬೇಕೆಂದು ತಂದೆಯು ಮತ್ತೆ-ಮತ್ತೆ ತಿಳಿಸಿದ್ದಾರೆ. ಒಬ್ಬ ತಂದೆಯೇ ರಾಜಯೋಗವನ್ನು
ಕಲಿಸುತ್ತಾರೆ ಮತ್ತು ಸೃಷ್ಟಿಯ ಇತಿಹಾಸ-ಭೂಗೋಳವನ್ನು ತಿಳಿಸುತ್ತಾರೆ. ತಂದೆಯು ಹೇಳುತ್ತಾರೆ -
ನಾನೇನು ಥಾಟ್ ರೀಡರ್ ಅಲ್ಲ, ಇಷ್ಟು ದೊಡ್ಡ ಪ್ರಪಂಚವಿದೆ, ಇದನ್ನು ಏನು ರೀಡ್ ಮಾಡಲಿ? ಸ್ವಯಂ
ತಂದೆಯೇ ತಿಳಿಸುತ್ತಾರೆ - ನಾನು ಡ್ರಾಮಾದ ನೊಂದಣಿಯನುಸಾರವೇ ನಿಮ್ಮನ್ನು ಪಾವನ ಮಾಡಲು ಬರುತ್ತೇನೆ,
ಡ್ರಾಮಾದಲ್ಲಿ ನನ್ನ ಪಾತ್ರವೇನಿದೆಯೋ ಅದನ್ನೇ ಅಭಿನಯಿಸುತ್ತೇನೆ ಉಳಿದಂತೆ ನಾನೇನು ಥಾಟ್ ರೀಡ್
ಮಾಡುವುದಿಲ್ಲ. ನಾನೇನು ಪಾತ್ರವನ್ನಭಿನಯಿಸುತ್ತೇನೆ ಮತ್ತು ನಿಮ್ಮದೇನು ಪಾತ್ರವಿದೆ ಎಂದು
ತಿಳಿಸುತ್ತೇನೆ. ನೀವು ಈ ಜ್ಞಾನವನ್ನು ಕಲಿತು ಅನ್ಯರಿಗೂ ಕಲಿಸುತ್ತೀರಿ. ನನ್ನ ಪಾತ್ರವೇ
ಪತಿತರನ್ನು ಪಾವನ ಮಾಡುವುದಾಗಿದೆ, ಇದೂ ಸಹ ನೀವು ಮಕ್ಕಳಿಗೆ ತಿಳಿದಿದೆ - ನೀವು ತಿಥಿ-ತಾರೀಖು
ಎಲ್ಲವನ್ನೂ ತಿಳಿದಿದ್ದೀರಿ. ಪ್ರಪಂಚದಲ್ಲಿ ಯಾರಿಗಾದರೂ ಗೊತ್ತಿದೆಯೇ! ನಿಮಗೆ ತಂದೆಯು
ಓದಿಸುತ್ತಿದ್ದಾರೆ ಮತ್ತು ಯಾವಾಗ ಚಕ್ರವು ಪೂರ್ಣವಾಗುತ್ತದೆಯೋ ಆಗ ಮತ್ತೆ ತಂದೆಯು ಬರುತ್ತಾರೆ. ಆ
ಸಮಯದಲ್ಲಿ ಏನು ದೃಶ್ಯ ನಡೆಯಿತೋ ಅದು ಮತ್ತೆ ಕಲ್ಪದ ನಂತರ ನಡೆಯುತ್ತದೆ. ಒಂದು ಸೆಕೆಂಡ್ ಇನ್ನೊಂದು
ಸೆಕೆಂಡಿಗೆ ಹೋಲುವುದಿಲ್ಲ.ಈ ನಾಟಕವು ಪುನರಾವರ್ತನೆಯಾಗುತ್ತಿರುತ್ತದೆ. ನೀವು ಮಕ್ಕಳಿಗೆ
ಬೇಹದ್ದಿನ ನಾಟಕವೆಂದು ಗೊತ್ತಿದೆ ಆದರೂ ಸಹ ಪದೇ-ಪದೇ ನೀವು ಮರೆಯುತ್ತೀರಿ. ತಂದೆಯು ತಿಳಿಸುತ್ತಾರೆ-
ನೀವು ಕೇವಲ ನೆನಪು ಮಾಡಿ, ನಮ್ಮ ಬಾಬಾ ತಂದೆಯಾಗಿದ್ದಾರೆ, ಶಿಕ್ಷಕನಾಗಿದ್ದಾರೆ, ಅವರೇ ಗುರುವೂ
ಆಗಿದ್ದಾರೆ. ನಿಮ್ಮ ಬುದ್ಧಿಯು ಆ ಕಡೆ ಹೋಗಬೇಕು. ಆತ್ಮವು ತಂದೆಯ ಮಹಿಮೆಯನ್ನು ಕೇಳಿ ಖುಷಿ
ಪಡುತ್ತದೆ. ಎಲ್ಲರೂ ಹೇಳುತ್ತಾರೆ - ನಮ್ಮ ಬಾಬಾ ತಂದೆಯಾಗಿದ್ದಾರೆ, ಶಿಕ್ಷಕನಾಗಿದ್ದಾರೆ, ಅವರೇ
ಸತ್ಯ-ಸತ್ಯವಾಗಿದ್ದಾರೆ. ವಿದ್ಯೆಯು ಸತ್ಯವಾಗಿದೆ ಮತ್ತು ಪೂರ್ಣವಾಗಿದೆ, ಆ ಮನುಷ್ಯರ ವಿದ್ಯೆಯಂತೂ
ಅರ್ಧಂಬರ್ಧವಿದೆ ಅಂದಾಗ ನೀವು ಮಕ್ಕಳ ಬುದ್ಧಿಯಲ್ಲಿ ಖುಷಿಯಿರಬೇಕು. ದೊಡ್ಡ ಪರೀಕ್ಷೆಯನ್ನು
ತೇರ್ಗಡೆ ಮಾಡುವವರ ಬುದ್ಧಿಯಲ್ಲಿ ಹೆಚ್ಚಿನ ಖುಷಿಯಿರುತ್ತದೆ. ನೀವು ಎಷ್ಟು ಶ್ರೇಷ್ಠ ವಿದ್ಯೆಯನ್ನು
ಓದುತ್ತೀರಿ ಅಂದಾಗ ಎಷ್ಟೊಂದು ಖುಷಿಯಿರಬೇಕು! ಭಗವಂತ ಬಾಬಾ, ಬೇಹದ್ದಿನ ತಂದೆಯು ನಮಗೆ
ಓದಿಸುತ್ತಿದ್ದಾರೆ. ನಿಮಗೆ ರೋಮಾಂಚನವಾಗಬೇಕು. ಅದೇ ಎಪಿಸೋಡ್ ಪುನರಾವರ್ತನೆಯಾಗುತ್ತಿದೆ. ಇದು
ನಿಮ್ಮ ಹೊರತು ಮತ್ತ್ಯಾರಿಗೂ ಗೊತ್ತಿಲ್ಲ. ಕಲ್ಪದ ಆಯಸ್ಸನ್ನು ದೊಡ್ಡದಾಗಿ ತೋರಿಸಿದ್ದಾರೆ. ನಿಮ್ಮ
ಬುದ್ಧಿಯಲ್ಲಿ ಈಗ 5000 ವರ್ಷಗಳ ಪೂರ್ಣ ಚಕ್ರವು ಸುತ್ತುತ್ತಿರುತ್ತದೆ. ಇದಕ್ಕೆ ಸ್ವದರ್ಶನ
ಚಕ್ರವೆನ್ನಲಾಗುತ್ತದೆ.
ಬಾಬಾ, ಅನೇಕ ಬಿರುಗಾಳಿಗಳು ಬರುತ್ತವೆ, ನಾವು ಮರೆತು ಬಿಡುತ್ತೇವೆ ಎಂದು ಮಕ್ಕಳು ಹೇಳುತ್ತಾರೆ.
ನೀವು ಯಾರನ್ನು ಮರೆಯುತ್ತೀರಿ? ಎಂದು ತಂದೆಯು ಕೇಳುತ್ತಾರೆ. ಯಾವ ತಂದೆಯು ನಿಮ್ಮನ್ನು ಡಬಲ್
ಕಿರೀಟಧಾರಿ, ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅಂತಹವರನ್ನು ಹೇಗೆ ಮರೆಯುವಿರಿ! ಬೇರೆ
ಯಾರನ್ನೂ ಮರೆಯುವುದಿಲ್ಲ ಅಲ್ಲವೆ. ಪತ್ನಿ, ಮಕ್ಕಳು, ಮೊಮ್ಮಕ್ಕಳು, ಚಿಕ್ಕಪ್ಪ, ಮಾವ, ಮಿತ್ರ
ಸಂಬಂಧಿ ಇವರೆಲ್ಲರೂ ನೆನಪಿರುತ್ತಾರೆ. ಬಾಕಿ ಈ ಮಾತನ್ನು ನೀವು ಏಕೆ ಮರೆಯುತ್ತೀರಿ! ನಿಮ್ಮದು
ನೆನಪಿನಲ್ಲಿಯೇ ಯುದ್ಧವಿದೆ, ಎಷ್ಟು ಸಾಧ್ಯವೋ ಅಷ್ಟು ನೆನಪು ಮಾಡಬೇಕಾಗಿದೆ. ಮಕ್ಕಳು ತಮ್ಮ
ಉನ್ನತಿಗಾಗಿ ಮುಂಜಾನೆಯೆದ್ದು ತಂದೆಯ ನೆನಪಿನಲ್ಲಿ ಸುತ್ತಾಡಬೇಕು. ನೀವು ಛಾವಣಿಯ ಮೇಲೆ ಅಥವಾ
ಹೊರಗಡೆ ತಣ್ಣನೆ ಗಾಳಿಯಲ್ಲಿ ನಡೆದಾಡಬೇಕು. ಇಲ್ಲಿಯೇ ಬಂದು ಕುಳಿತುಕೊಳ್ಳಬೇಕು ಎಂದೇನಿಲ್ಲ,
ಹೊರಗಡೆಯೂ ಹೋಗಬಹುದು. ಮುಂಜಾನೆಯಲ್ಲಿ ಭಯ ಪಡುವ ಮಾತೇನಿಲ್ಲ. ಹೊರಗೆ ಹೋಗಿ ನಡೆದಾಡಿ, ಪರಸ್ಪರ
ನೋಡೋಣ ತಂದೆಯನ್ನು ಹೆಚ್ಚಾಗಿ ಯಾರು ನೆನಪು ಮಾಡುತ್ತಾರೆಂದು ಮಾತನಾಡಿಕೊಳ್ಳಿ. ನಂತರ ಎಷ್ಟು ಸಮಯ
ನೆನಪು ಮಾಡಿದ್ದೀರೆಂದು ನೋಡಿಕೊಳ್ಳಬೇಕು. ಬಾಕಿ ಸಮಯ ಬುದ್ಧಿಯು ಎಲ್ಲೆಲ್ಲಿಗೆ ಹೋಯಿತು? ಇದಕ್ಕೆ
ಒಬ್ಬರಿಗೊಬ್ಬರು ಉನ್ನತಿ ಮಾಡಿಕೊಳ್ಳುವುದೆಂದು ಹೇಳಲಾಗುತ್ತದೆ. ನೋಟ್ ಮಾಡಿಕೊಳ್ಳಿ - ತಂದೆಯ
ನೆನಪು ಎಷ್ಟು ಸಮಯವಿತ್ತು? ಬ್ರಹ್ಮಾ ತಂದೆಯು ಏನು ಅಭ್ಯಾಸ ಮಾಡಿದರು ಅದನ್ನು ಹೇಳುತ್ತಾರೆ.
ನೆನಪಿನಲ್ಲಿ ನೀವು ಒಂದು ಗಂಟೆ ನಡೆದಾಡಿದರೂ ಕಾಲು ಸುಸ್ತಾಗುವುದಿಲ್ಲ. ನೆನಪಿನಿಂದ ನಿಮ್ಮ
ಎಷ್ಟೊಂದು ಪಾಪಗಳು ನಾಶವಾಗುತ್ತವೆ. ಚಕ್ರವಂತೂ ನಿಮಗೆ ಗೊತ್ತಿದೆ. ರಾತ್ರಿ-ಹಗಲು ನಾವು ಈಗ ಮನೆಗೆ
ಹೋಗುತ್ತೇವೆಂಬುದೇ ಬುದ್ಧಿಯಲ್ಲಿರಬೇಕು. ಪುರುಷಾರ್ಥ ಮಾಡುತ್ತಾ ಇರಿ, ಕಲಿಯುಗದ ಮನುಷ್ಯರಿಗೆ ಏನೂ
ಗೊತ್ತಿಲ್ಲ - ಮುಕ್ತಿಗಾಗಿ ಎಷ್ಟು ಭಕ್ತಿ ಮಾಡುತ್ತಿರುತ್ತಾರೆ! ಅನೇಕ ಮತಗಳಿವೆ, ನೀವು
ಬ್ರಾಹ್ಮಣರದು ಏಕಮತವಾಗಿದೆ. ಬ್ರಾಹ್ಮಣರದು ಶ್ರೀಮತವಿರುತ್ತದೆ. ನೀವು ತಂದೆಯ ಮತದಂತೆ
ದೇವತೆಗಳಾಗುತ್ತೀರಿ, ದೇವತೆಗಳದೇನೂ ಶ್ರೀಮತವಿಲ್ಲ. ಶ್ರೀಮತವು ಈಗ ನೀವು ಬ್ರಾಹ್ಮಣರಿಗೆ
ಸಿಗುತ್ತದೆ. ಭಗವಂತನು ನಿರಾಕಾರನಾಗಿದ್ದಾರೆ, ನಿಮಗೆ ರಾಜಯೋಗವನ್ನು ಕಲಿಸಿ ರಾಜ್ಯಭಾಗ್ಯವನ್ನು
ಕೊಟ್ಟು ಎಷ್ಟು ಶ್ರೇಷ್ಠರು, ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ! ಭಕ್ತಿಮಾರ್ಗದಲ್ಲಿ ಎಷ್ಟೊಂದು
ವೇದಶಾಸ್ತ್ರಗಳಿವೆ, ಆದರೆ ಒಂದು ಗೀತೆ ಮಾತ್ರವೇ ಕೆಲಸಕ್ಕೆ ಬರುತ್ತದೆ. ಭಗವಂತನು ಬಂದು
ರಾಜಯೋಗವನ್ನು ಕಲಿಸುತ್ತಾರೆ. ಇದನ್ನೇ ಗೀತೆಯೆನ್ನಲಾಗುತ್ತದೆ. ಈಗ ನೀವು ತಂದೆಯಿಂದ ಓದುತ್ತೀರಿ.
ಇದರಿಂದ ಸ್ವರ್ಗದ ರಾಜ್ಯವನ್ನು ಪಡೆಯುತ್ತೀರಿ. ಯಾರು ಓದಿದರೋ ಅವರು ಪಡೆದರು, ಡ್ರಾಮಾದಲ್ಲಿ
ಪಾತ್ರವಿದೆಯಲ್ಲವೆ. ಜ್ಞಾನವನ್ನು ಹೇಳುವುದು ಒಬ್ಬ ಜ್ಞಾನ ಸಾಗರ ತಂದೆಯೊಬ್ಬರೇ ಆಗಿದ್ದಾರೆ, ಅವರು
ಡ್ರಾಮಾ ಪ್ಲಾನನುಸಾರ ಕಲಿಯುಗದ ಅಂತ್ಯ, ಸತ್ಯಯುಗದ ಆದಿಯ ಸಂಗಮದಲ್ಲಿ ಬರುತ್ತಾರೆ. ಯಾವುದೇ
ಮಾತಿನಲ್ಲಿ ಗೊಂದಲಕ್ಕೊಳಗಾಗಬೇಡಿ. ತಂದೆಯು ಇವರಲ್ಲಿ (ಬ್ರಹ್ಮಾ) ಬಂದು ಓದಿಸುತ್ತಾರೆ, ಬೇರೆ ಯಾರೂ
ಓದಿಸಲು ಸಾಧ್ಯವಿಲ್ಲ. ಈ ದಾದಾರವರೂ ಮುಂಚೆ ಯಾರಿಂದಲಾದರೂ ಓದಿದ್ದರೆ ಅನೇಕರು ಅವರಿಂದ
ಓದಿರುತ್ತಿದ್ದರು. ಈ ಎಲ್ಲಾ ಗುರು ಮುಂತಾದವರ,ಎಲ್ಲರ ಉದ್ಧಾರ ಮಾಡಲು ನಾನು ಬರುತ್ತೇನೆಂದು ತಂದೆಯು
ತಿಳಿಸುತ್ತಾರೆ. ಈಗ ನೀವು ಮಕ್ಕಳ ಗುರಿ-ಉದ್ದೇಶವು ನಿಮ್ಮ ಮುಂದೆ ಇದೆ. ನಾವೀಗ ಈ ರೀತಿಯಾಗುತ್ತೇವೆ,
ಇದೇ ನರನಿಂದ ನಾರಾಯಣನಾಗುವ ಸತ್ಯ ಕಥೆಯಾಗಿದೆ. ಇದರದು ನಂತರ ಭಕ್ತಿಮಾರ್ಗದಲ್ಲಿ ಮಹಿಮೆ
ನಡೆಯುತ್ತದೆ. ಭಕ್ತಿಮಾರ್ಗದ ಸಂಪ್ರದಾಯಗಳು ನಡೆಯುತ್ತಾ ಬರುತ್ತದೆ, ಈಗ ಈ ರಾವಣ ರಾಜ್ಯವು
ಪೂರ್ಣವಾಗುತ್ತದೆ. ನೀವೀಗ ದಸರಕ್ಕೆ ಹೋಗುವುದಿಲ್ಲ, ಅದು ಏನೆಂಬುದನ್ನು ನೀವು ತಿಳಿಸಿಕೊಡುತ್ತೀರಿ.
ಅವೆಲ್ಲಾ ಚಿಕ್ಕಮಕ್ಕಳ ಕೆಲಸವಾಗಿದೆ. ದೊಡ್ಡ-ದೊಡ್ಡ ಗಣ್ಯ ವ್ಯಕ್ತಿಗಳೂ ಸಹ ನೋಡಲು ಹೋಗುತ್ತಾರೆ.
ರಾವಣನನ್ನು ಏಕೆ ಸುಡುತ್ತಾರೆ, ಅವನು ಯಾರಾಗಿದ್ದಾನೆಂಬುದನ್ನೂ ಯಾರೂ ತಿಳಿಸಲು ಸಾಧ್ಯವಿಲ್ಲ.
ರಾವಣ ರಾಜ್ಯವಾಗಿದೆಯಲ್ಲವೆ. ದಸರಾದಲ್ಲಂತೂ ಎಷ್ಟೊಂದು ಖುಷಿಯನ್ನಾಚರಿಸುತ್ತಾರೆ ಮತ್ತು ಅದರಲ್ಲಿ
ರಾವಣನನ್ನೂ ಸುಡುತ್ತಾರೆ ಆದರೆ ದುಃಖವಂತೂ ಯಾವಾಗಲೂ ಇರುತ್ತದೆ ಎಂಬುದನ್ನು
ತಿಳಿದುಕೊಳ್ಳುವುದಿಲ್ಲ. ಈಗ ನಾವು ಎಷ್ಟು ತಿಳುವಳಿಕೆಯಿಲ್ಲದವರಾಗಿದ್ದೇವೆಂದು
ತಿಳಿದುಕೊಂಡಿದ್ದೇವೆ. ರಾವಣನು ನಮ್ಮನ್ನು ಬುದ್ಧಿಹೀನರನ್ನಾಗಿ ಮಾಡಿದನು. ಈಗ ನೀವು ಖಂಡಿತ ನಾವು
ಲಕ್ಷ್ಮೀ-ನಾರಾಯಣರಾಗುತ್ತೇವೆಂದು ತಂದೆಗೆ ಹೇಳುತ್ತೀರಿ. ನಾವಂತೂ ಕಡಿಮೆ ಪುರುಷಾರ್ಥ
ಮಾಡುವುದಿಲ್ಲ. ಇದು ಒಂದೇ ಶಾಲೆಯಾಗಿದೆ, ವಿದ್ಯೆಯು ಬಹಳ ಸಹಜವಾಗಿದೆ. ವೃದ್ಧಮಾತೆಯರು ಬೇರೇನನ್ನೂ
ನೆನಪು ಮಾಡಲು ಸಾಧ್ಯವಿಲ್ಲ ಅಂದಾಗ ತಂದೆಯನ್ನು ನೆನಪು ಮಾಡಬೇಕು. ಬಾಯಲ್ಲಿ ಹೇ ರಾಮ ಎಂದು
ಹೇಳುತ್ತೀರಲ್ಲವೆ, ತಂದೆಯು ಬಹಳ ಸಹಜವಾಗಿ ತಿಳಿಸುತ್ತಾರೆ- ನೀವು ಆತ್ಮರಾಗಿರುವಿರಿ, ಪರಮಾತ್ಮ
ತಂದೆಯನ್ನು ನೆನಪು ಮಾಡಿ ಆಗ ನಿಮ್ಮ ದೋಣಿಯು ಪಾರಾಗುತ್ತದೆ, ಎಲ್ಲಿಗೆ ಹೋಗುತ್ತೀರಿ?
ಶಾಂತಿಧಾಮ-ಸುಖಧಾಮ. ಮತ್ತೆಲ್ಲವನ್ನೂ ಮರೆತುಬಿಡಿ. ಏನೆಲ್ಲವನ್ನೂ ಕೇಳಿದ್ದೀರಿ, ಓದಿದ್ದೀರಿ
ಅದೆಲ್ಲವನ್ನೂ ಮರೆತು ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ ಆಗ ತಂದೆಯಿಂದ
ಖಂಡಿತ ಆಸ್ತಿಯು ಸಿಗುವುದು. ತಂದೆಯ ನೆನಪಿನಿಂದಲೇ ಪಾಪವು ನಾಶವಾಗುತ್ತದೆ, ಎಷ್ಟೊಂದು ಸಹಜವಾಗಿದೆ.
ಭೃಕುಟಿಯ ಮಧ್ಯದಲ್ಲಿ ನಕ್ಷತ್ರವು ಹೊಳೆಯುತ್ತಿದೆ ಎಂದು ಹೇಳುತ್ತಾರೆ ಅಂದಾಗ ಖಂಡಿತ ಆತ್ಮವು
ಎಷ್ಟೊಂದು ಸೂಕ್ಷ್ಮವಾಗಿದೆ! ವೈದ್ಯರು ಆತ್ಮವನ್ನು ನೋಡಲು ಬಹಳ ಪ್ರಯತ್ನಪಡುತ್ತಾರೆ ಆದರೆ ಅದು
ಬಹಳ ಸೂಕ್ಷ್ಮವಾಗಿದೆ. ಹಠದಿಂದ ಯಾರೂ ಸಹ ನೋಡಲು ಸಾಧ್ಯವಿಲ್ಲ. ತಂದೆಯು ಇದೇರೀತಿ
ಬಿಂದುವಾಗಿದ್ದಾರೆ, ತಂದೆಯು ಹೇಳುತ್ತಾರೆ- ಹೇಗೆ ನೀವು ಸಾಧಾರಣರಾಗಿರುವಿರೋ ನಾನೂ ಸಹ ಸಾಧಾರಣವಾಗಿ
ನಿಮಗೆ ಓದಿಸುತ್ತೇನೆ. ನಿಮಗೆ ಭಗವಂತ ಹೇಗೆ ಓದಿಸುತ್ತಾರೆಂಬುದು ಯಾರಿಗಾದರೂ ಗೊತ್ತೇ! ಕೃಷ್ಣನು
ಓದಿಸುತ್ತಿದ್ದರೆ ಇಡೀ ಅಮೇರಿಕಾ, ಜಪಾನ್ ಎಲ್ಲಾ ಕಡೆಯಿಂದಲೂ ಬರುತ್ತಿದ್ದರು. ಅವನಲ್ಲಿ ಅಷ್ಟು
ಆಕರ್ಷಣೆಯಿದೆ, ಕೃಷ್ಣನಲ್ಲಿ ಎಲ್ಲರಿಗೂ ಪ್ರೀತಿಯಿದೆ. ಈಗ ನೀವು ಮಕ್ಕಳಿಗೆ ನಾವು ಆ ರೀತಿ
ಆಗುತ್ತಿದ್ದೇವೆಂಬುದು ಗೊತ್ತಿದೆ. ಕೃಷ್ಣನು ರಾಜಕುಮಾರನಾಗಿದ್ದಾನೆ, ಕೃಷ್ಣನನ್ನು ಮಡಿಲಿಗೆ
ತೆಗೆದುಕೊಳ್ಳಲು ಬಯಸುತ್ತಾರೆ ಅಂದಮೇಲೆ ಪುರುಷಾರ್ಥ ಮಾಡಬೇಕಾಗಿದೆ. ಇದರಲ್ಲಿ ದೊಡ್ಡಮಾತೇನಿಲ್ಲ,
ತಂದೆಯು ಮಕ್ಕಳನ್ನು ಸ್ವರ್ಗದ ರಾಜಕುಮಾರ, ವಿಶ್ವದ ಮಾಲೀಕರನ್ನಾಗಿ ಮಾಡಲು ಓದಿಸುತ್ತಾರೆ.
ತಂದೆಯು ತಿಳಿಸುತ್ತಾರೆ- ಮಕ್ಕಳೇ, ವಿದ್ಯೆಯ ಸಾರವಾಗಿದೆ- ಪ್ರಪಂಚದ ಎಲ್ಲಾ ಮಾತುಗಳನ್ನು
ಬಿಟ್ಟುಬಿಡಿ, ಎಂದೂ ಸಹ ನಮ್ಮ ಬಳಿ ಕೋಟಿ ರೂಗಳಿದೆ, ಲಕ್ಷವಿದೆ ಎಂದು ತಿಳಿಯಬೇಡಿ, ಏನೂ ಸಹ ಕೈಗೆ
ಸಿಗುವುದಿಲ್ಲ ಆದ್ದರಿಂದ ಚೆನ್ನಾಗಿ ಪುರುಷಾರ್ಥ ಮಾಡಿ. ತಂದೆಯ ಬಳಿ ಬಂದಾಗ ತಂದೆಯು 8
ತಿಂಗಳಿನಿಂದ ಬರುತ್ತಿದ್ದೀರಿ ಆದರೆ ಯಾವ ತಂದೆಯು ನಿಮಗೆ ಸ್ವರ್ಗದ ರಾಜ್ಯಭಾಗ್ಯವನ್ನು
ಕೊಡುತ್ತಿದ್ದಾರೆ ಅವರೊಂದಿಗೆ ಇಷ್ಟು ಸಮಯದಿಂದಲೂ ಮಿಲನ ಮಾಡಲಿಲ್ಲವೆಂದು ದೂರುಕೊಡುತ್ತಾರೆ. ಆಗ
ಮಕ್ಕಳು ಬಾಬಾ, ಈ ರೀತಿ ಕೆಲಸವಿತ್ತು ಎಂದು ಹೇಳುತ್ತಾರೆ. ಅರೆ! ನೀವು ಶರೀರಬಿಟ್ಟರೆ ಮತ್ತೆ ಇಲ್ಲಿ
ಬರಲು ಹೇಗೆ ಸಾಧ್ಯ! ಈ ನೆಪಗಳು ಇಲ್ಲಿ ನಡೆಯುವುದಿಲ್ಲ ಎಂದು ತಂದೆಯು ತಿಳಿಸುತ್ತಾರೆ. ತಂದೆಯು
ರಾಜಯೋಗವನ್ನು ಕಲಿಸುತ್ತಿದ್ದಾರೆ ಆದರೂ ನೀವು ಕಲಿಯುವುದಿಲ್ಲ, ಯಾರು ಬಹಳ ಭಕ್ತಿಮಾಡಿರುತ್ತಾರೆಯೋ
ಅವರಿಗೆ 7 ದಿನಗಳೇನು ಒಂದುದಿನದಲ್ಲಿಯೇ ಬಾಣವು ನಾಟುತ್ತದೆ. ಸೆಕೆಂಡಿನಲ್ಲಿ ವಿಶ್ವದ
ಮಾಲೀಕರಾಗಬಹುದು. ಇವರು (ಬ್ರಹ್ಮಾ) ಸ್ವಯಂ ಅನುಭವಿ ಕುಳಿತಿದ್ದಾರೆ, ವಿನಾಶ ನೋಡಿದರು,
ಚತುರ್ಭುಜರೂಪವನ್ನು ನೋಡಿದರು ಆಗ ಓಹೋ! ನಾನೇ ವಿಶ್ವದ ಮಾಲೀಕನಾಗುತ್ತೇನೆಂದು ತಿಳಿದರು.
ಸಾಕ್ಷಾತ್ಕಾರವಾಯಿತು, ಉಮ್ಮಂಗ ಉತ್ಪನ್ನವಾಯಿತು ನಂತರ ಎಲ್ಲವನ್ನೂ ಬಿಟ್ಟುಬಿಟ್ಟರು. ಇಲ್ಲಿ ನೀವು
ಮಕ್ಕಳಿಗೆ ತಂದೆಯು ವಿಶ್ವದ ರಾಜ್ಯಭಾಗ್ಯವನ್ನು ಕೊಡಲು ಬಂದಿದ್ದಾರೆಂದು ನಿಮಗೆ ತಿಳಿದಿದೆ. ಯಾವಾಗ
ನಿಶ್ಚಯವಾಯಿತೆಂದು ತಂದೆ ಕೇಳಿದಾಗ 8 ತಿಂಗಳಾಯಿತೆಂದು ಹೇಳುತ್ತಾರೆ. ಮುಖ್ಯವಾದ ಮಾತು ನೆನಪು
ಮತ್ತು ಜ್ಞಾನವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಬಾಕಿ ಸಾಕ್ಷಾತ್ಕಾರವೇನೂ ಪ್ರಯೋಜನವಿಲ್ಲ.
ತಂದೆಯನ್ನು ಗುರುತಿಸಿದನಂತರ ಓದಲು ಆರಂಭಿಸಿ. ಆಗ ನೀವು ಈ ರೀತಿಯಾಗುತ್ತೀರಿ. ಇದನ್ನು ಯಾರಿಗಾದರೂ
ತಿಳಿಸಲು ಜ್ಞಾನಬಿಂದುಗಳೂ ಸಹ ಸಿಗುತ್ತವೆ, ಬಹಳ ಮಧುರವಾಗಿ ತಿಳಿಸಿಕೊಡಿ. ಶಿವತಂದೆಯು
ಪತಿತ-ಪಾವನನಾಗಿದ್ದಾರೆ, ನನ್ನನ್ನು ನೆನಪು ಮಾಡಿ ಆಗ ಪಾವನರಾಗಿ, ಪಾವನಪ್ರಪಂಚದ ಮಾಲೀಕರಾಗುವಿರಿ
ಎಂದು ತಂದೆಯು ತಿಳಿಸುತ್ತಾರೆ. ಯುಕ್ತಿಯಿಂದ ತಿಳಿಸಬೇಕು. ಗಾಡ್ಫಾದರ್ ಮುಕ್ತಿದಾತನಾಗಿ ಮಧುರಮನೆಗೆ
ನಮ್ಮನ್ನು ಕರೆದುಕೊಂಡು ಹೋಗಬೇಕೆಂದು ನೀವು ಬಯಸುತ್ತೀರಿ. ಒಳ್ಳೆಯದು- ಈಗ ನಿಮ್ಮಲ್ಲಿ ಯಾವ ತುಕ್ಕು
ಹಿಡಿದಿದೆಯೋ ಅದಕ್ಕಾಗಿ ತಂದೆಯನ್ನು ನೆನಪು ಮಾಡಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಮಾತಾಪಿತಾ ಬಾಪ್ದಾದಾರವರ ನೆನಪು,
ಪ್ರೀತಿ ಹಾಗೂ ನಮಸ್ತೆ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ-
1) ಮುಂಜಾನೆ
ಎದ್ದು ನಡೆದಾಡುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಿ. ನೋಡೋಣ ಯಾರು ಹೆಚ್ಚು ಸಮಯ ತಂದೆಯ
ನೆನಪು ಮಾಡುತ್ತಾರೆ ಎಂದು ಮಧುರವಾಗಿ ಪರಸ್ಪರ ಆತ್ಮೀಯ ಸಂಭಾಷಣೆ ಮಾಡಿ ನಂತರ ಅನುಭವವನ್ನು ತಿಳಿಸಿ.
2) ತಂದೆಯನ್ನು
ಗುರುತಿಸಿದನಂತರ ಯಾವುದೇ ನೆಪಗಳನ್ನು ಹೇಳಬಾರದು, ವಿದ್ಯೆಯಲ್ಲಿ ತತ್ಪರರಾಗಿ, ಮತ್ತು ಮುರುಳಿಯನ್ನು
ಎಂದಿಗೂ ತಪ್ಪಿಸಬಾರದು.
ವರದಾನ:
ನಿಜ ಸ್ಥಿತಿಯ
ಮುಖಾಂತರ ಕರ್ಮ ಮತ್ತು ಮಾತಿನಲ್ಲಿ ಘನತೆಯನ್ನು ತೋರುವಂತಹ ಫಸ್ಟ್ ಡಿವಿಷನ್ ನ ಅಧಿಕಾರಿ ಭವ.
ನಿಜ ಸ್ಥಿತಿ ಅರ್ಥಾತ್
ತಮ್ಮ ನಿಜವಾದ ಸ್ವರೂಪದ ಸದಾ ಸ್ಮತಿ, ಯಾವುದರಿಂದ ಸ್ಥೂಲ ಮುಖ ಲಕ್ಷಣದಲ್ಲಿಯೂ ಸಹಾ ಘನತೆ
ಕಂಡುಬರುವುದು. ನಿಜ ಸ್ಥಿತಿ ಅರ್ಥಾತ್ ಒಬ್ಬ ತಂದೆಯ ವಿನಹ ಬೇರೊಬ್ಬರಿಲ್ಲ. ಈ ಸ್ಮತಿಯಿಂದ ಪ್ರತಿ
ಕರ್ಮ ಅಥವಾ ಮಾತಿನಲ್ಲಿ ಘನತೆಯು ಕಂಡುಬರುವುದು. ಯಾರೇ ಸಂಪರ್ಕದಲ್ಲಿ ಬಂದರೂ ಸಹ ಅವರಿಗೆ ಪ್ರತಿ
ಕರ್ಮದಲ್ಲಿಯೂ ತಂದೆಯ ಸಮಾನದ ಚರಿತ್ರೆಯ ಅನುಭವ ವಾಗುವುದು, ಪ್ರತಿ ಮಾತಿನಲ್ಲಿ ತಂದೆಯ ಸಮಾನ ದ
ಅಧಿಕಾರ ಮತ್ತು ಪ್ರಾಪ್ತಿಯ ಅನುಭೂತಿಯಾಗುವುದು. ಅವರ ಸಂಗ ಸತ್ಯವಾಗಿರುವ ಕಾರಣ ಪಾರಸದ ಕೆಲಸ
ಮಾಡುವುದು. ಈ ರೀತಿಯ ವಾಸ್ತವಿಕತೆಯುಳ್ಳ ರಾಯಲ್ ಆತ್ಮಗಳೇ ಫಸ್ಟ್ ಡಿವಿಷನ್ ನ
ಅಧಿಕಾರಿಗಳಾಗುತ್ತಾರೆ.
ಸ್ಲೋಗನ್:
ಶ್ರೇಷ್ಠ ಕರ್ಮದ
ಖಾತೆಯನ್ನು ಹೆಚ್ಚಿಸಿಕೊಂಡಾಗ ವಿಕರ್ಮದ ಖಾತೆ ಸಮಾಪ್ತಿಯಾಗಿ ಬಿಡುವುದು.